AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್ ದರೋಡೆಗೆ ಬಂದ ಕಳ್ಳ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಸತ್ತ: ಯಾಕೆ, ಎಲ್ಲಿ?

ಗಾಂಧಿನಗರ: ಬ್ಯಾಂಕ್​ ದರೋಡೆ ಮಾಡಲು ಬಂದ ಕಳ್ಳ ತನ್ನ ಕೊರಳನ್ನು ತಾನೇ ಕೊಯ್ದುಕೊಂಡಿರುವ ಸ್ವಾರಸ್ಯಕರ ಸಂಗತಿ ಗುಜರಾತ್​ನ ವಡೋದರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷದ ನಿತಿನ್​ ವೋರಾ ಮೃತ ದರೋಡೆಕೋರ. ನಗರದ ಸಂಗಮ್​ ರೋಡ್​ನಲ್ಲಿರುವ ಉಜ್ಜೀವನ್​ ಸಣ್ಣ ಹಣಕಾಸು ಬ್ಯಾಂಕ್​ನ ಶಾಖೆಗೆ ಎಂಟ್ರಿ ಕೊಟ್ಟ ಕಳ್ಳ ಸೀದಾ ನುಗ್ಗಿದ್ದು ಬ್ಯಾಂಕ್​ನ ನಗದು ಸಂಗ್ರಹಿಸುವ ಸ್ಟ್ರಾಂಗ್​ ರೂಮ್​ಗೆ. ಅಲ್ಲೇ ನೋಡಿ ಅವನ ಕರಾಮತ್ತು ಶುರುವಾಗಿದ್ದು. ತನ್ನ […]

ಬ್ಯಾಂಕ್ ದರೋಡೆಗೆ ಬಂದ ಕಳ್ಳ ತನ್ನ ಕತ್ತನ್ನು ತಾನೇ ಕೊಯ್ದುಕೊಂಡು ಸತ್ತ: ಯಾಕೆ, ಎಲ್ಲಿ?
KUSHAL V
| Edited By: |

Updated on: Aug 11, 2020 | 5:11 PM

Share

ಗಾಂಧಿನಗರ: ಬ್ಯಾಂಕ್​ ದರೋಡೆ ಮಾಡಲು ಬಂದ ಕಳ್ಳ ತನ್ನ ಕೊರಳನ್ನು ತಾನೇ ಕೊಯ್ದುಕೊಂಡಿರುವ ಸ್ವಾರಸ್ಯಕರ ಸಂಗತಿ ಗುಜರಾತ್​ನ ವಡೋದರದಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷದ ನಿತಿನ್​ ವೋರಾ ಮೃತ ದರೋಡೆಕೋರ.

ನಗರದ ಸಂಗಮ್​ ರೋಡ್​ನಲ್ಲಿರುವ ಉಜ್ಜೀವನ್​ ಸಣ್ಣ ಹಣಕಾಸು ಬ್ಯಾಂಕ್​ನ ಶಾಖೆಗೆ ಎಂಟ್ರಿ ಕೊಟ್ಟ ಕಳ್ಳ ಸೀದಾ ನುಗ್ಗಿದ್ದು ಬ್ಯಾಂಕ್​ನ ನಗದು ಸಂಗ್ರಹಿಸುವ ಸ್ಟ್ರಾಂಗ್​ ರೂಮ್​ಗೆ. ಅಲ್ಲೇ ನೋಡಿ ಅವನ ಕರಾಮತ್ತು ಶುರುವಾಗಿದ್ದು. ತನ್ನ ಬ್ಯಾಗ್​ನಲ್ಲಿ ತಂದಿದ್ದ ವಿದ್ಯುತ್​ ಚಾಲಿತ ಕಟರ್​ನ ಬಳಸಿ ಸ್ಟ್ರಾಂಗ್​ ರೂಮ್​ನ ಸ್ಟೀಲ್​ ಗೋಡೆ ಭೇದಿಸಲು ಮುಂದಾದ.

ಆದರೆ, ಈ ನಡುವೆ ಕಟರ್​ನ ಕರೆಂಟ್​ ವೈಯರ್​ ಪ್ಲಗ್​ನಿಂದ ಹೊರಬಂದುಬಿಟ್ಟಿತು. ಅದನ್ನ ಸರಿ ಮಾಡೋಕೆ ನಿತಿನ್​ ಹೋಗಿದ್ದಾನೆ. ವೈಯರ್​ನ ಮತ್ತೆ ಸಾಕೆಟ್​ಗೆ ಸಿಕ್ಕಿಸಿ ಮತ್ತೆ ಸ್ಟ್ರಾಂಗ್​ ರೂಮ್​ನತ್ತ ಅದರ ಕಿರಿದಾದ ಓಣಿ ಮುಖಾಂತರ ಹೋದನಂತೆ. ಈ ವೇಳೆ ಇದಕ್ಕಿದಂತೆ ಆನ್​ ಆದ ಕಟರ್​ ಕಿರಿದಾದ ಓಣಿಯ ಗೋಡೆಗೆ ತಗಲಿ ನಿತಿನ್​ ಕೊರಳಿಗೂ ಬಡಿದಿದೆ. ಕಟರ್​ನ ರಭಸಕ್ಕೆ ಕಳ್ಳನ ಕುತ್ತಿಗೆ ಸೀಳಿ ಬಂದಿದೆ.

ಇನ್ನು ಇಡೀ ಪ್ರಕರಣವನ್ನ ಸಿಸಿಟಿವಿ ಮುಖಾಂತರ ಗಮನಿಸಿದ್ದ ಬ್ಯಾಂಕ್​ನ ಭದ್ರತಾ ಸಿಬ್ಬಂದಿ ಕೂಡಲೇ ಮ್ಯಾನೇಜರ್​ಗೆ ವಿಷಯ ತಿಳಿಸಿದರಂತೆ. ಸ್ಥಳಕ್ಕೆ ಆಗಮಿಸಿದ ಬ್ಯಾಂಕ್​ ಮ್ಯಾನೇಜರ್​ಗೆ ಕಂಡಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿತಿನ್​. ಆದ್ರೆ, ಅಷ್ಟೊತ್ತಿಗೆ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇದೀಗ, ಪೊಲೀಸರು ಮೃತ ಕಳ್ಳನ ವಿರುದ್ಧ ದೂರು ದಾಖಲಿಸಿಕೊಂಡು ಮೃತದೇಹವನ್ನ ಆತನ ಕುಟುಂಬಸ್ಥರಿಗೆ ನೀಡಿದ್ದಾರೆ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ