AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್​ಲಾಕ್​ ಮಾಡುವುದಕ್ಕೆ ಮೊದಲು ಇರಲಿ ಎಚ್ಚರ..ಕೊರೊನಾ ಇನ್ನೂ ನಿರ್ಮೂಲನಗೊಂಡಿಲ್ಲ: ತಜ್ಞರಿಂದ ಎಚ್ಚರಿಕೆ

ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದ್ದಂತೆ, ಹಲವು ರಾಜ್ಯಗಲ್ಲಿ ಲಾಕ್​ಡೌನ್​, ಕರ್ಫ್ಯೂ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಟಾಸ್ಕ್​ಫೋರ್ಸ್​ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಮ್ಮೆಲೆ ಅನ್​ಲಾಕ್​ ಮಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹಾಗೇ, ಜನರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ತಮ್ಮ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ತಿಳಿಯಬೇಕು. ಅನ್​ಲಾಕ್​ ಆದ ತಕ್ಷಣ ಮತ್ತೆ ನಿರ್ಲಕ್ಷ್ಯ ತೋರಬಾರದು ಎಂದೂ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ […]

ಅನ್​ಲಾಕ್​ ಮಾಡುವುದಕ್ಕೆ ಮೊದಲು ಇರಲಿ ಎಚ್ಚರ..ಕೊರೊನಾ ಇನ್ನೂ ನಿರ್ಮೂಲನಗೊಂಡಿಲ್ಲ: ತಜ್ಞರಿಂದ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on: Jun 14, 2021 | 8:00 AM

Share

ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದ್ದಂತೆ, ಹಲವು ರಾಜ್ಯಗಲ್ಲಿ ಲಾಕ್​ಡೌನ್​, ಕರ್ಫ್ಯೂ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಟಾಸ್ಕ್​ಫೋರ್ಸ್​ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಮ್ಮೆಲೆ ಅನ್​ಲಾಕ್​ ಮಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹಾಗೇ, ಜನರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ತಮ್ಮ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ತಿಳಿಯಬೇಕು. ಅನ್​ಲಾಕ್​ ಆದ ತಕ್ಷಣ ಮತ್ತೆ ನಿರ್ಲಕ್ಷ್ಯ ತೋರಬಾರದು ಎಂದೂ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದೆಹಲಿ ಏಮ್ಸ್​ (AIIMS) ಆಸ್ಪತ್ರೆಯ ಮೆಡಿಸಿನ್​ ಡಿಪಾರ್ಟ್​​ಮೆಂಟ್​​ನ ಮುಖ್ಯಸ್ಥ ಡಾ. ನವೀತ್ ವಿಗ್​​, ಕೊವಿಡ್​ 19 ಸೋಂಕನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಶ್ರದ್ಧೆಯಿಂದ ಶ್ರಮವಹಿಸಬೇಕು ಎಂದಿದ್ದಾರೆ. ತುಂಬ ನಿಧಾನವಾಗಿ ಅನ್​​ಲಾಕ್​ ಪ್ರಕ್ರಿಯೆ ಮಾಡಬೇಕು. ಅದರಲ್ಲೂ ಹಾಟ್​ಸ್ಫಾಟ್​​ಗಳ ಬಗ್ಗೆ ಮತ್ತಷ್ಟು ನಿಗಾ ವಹಿಸಬೇಕು. ಪ್ರತಿಯೊಬ್ಬರೂ ವೈಯಕ್ತಿಕ, ಕೌಟುಂಬಿಕ ಸುರಕ್ಷತೆಯ ಬಗ್ಗೆ ಗಮನಕೊಡಬೇಕು. ಕೊವಿಡ್​ 19 ಸೋಂಕು ಇನ್ನೂ ನಿರ್ಮೂಲನ ಗೊಂಡಿಲ್ಲ. ದೇಶದಲ್ಲಿ ಇನ್ನೂ 10 ಸಾವಿರ ಸಕ್ರಿಯ ಪ್ರಕರಣಗಳು ಇವೆ ಎಂದು ಎಚ್ಚರಿಸಿದ್ದಾರೆ.

ಅನ್​ಲಾಕ್ ಮಾಡುವಾಗ ಸ್ಥಳೀಯವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವೆಲ್ಲ ಪ್ರದೇಶಗಳು, ನಗರಗಳು ಕೊರೊನಾ ಹಾಟ್​ಸ್ಫಾಟ್​ ಎನ್ನಿಸಿಕೊಂಡಿವೆಯೋ ಅಲ್ಲೆಲ್ಲ ಲಾಕ್​ಡೌನ್​ ಮುಂದುವರಿಸಬೇಕು. ಹಾಗೇ, ಕೊರೊನಾ ಮೂರನೇ ಅಲೆ ಬಗ್ಗೆ ಯಾರೂ ಗಾಬರಿ ಪಡುವುದು, ಭಯಗೊಳ್ಳುವ ಅಗತ್ಯವಿಲ್ಲ ಎಂದು ಡಾ. ನವೀತ್​ ವಿಗ್​ ಹೇಳಿದ್ದಾರೆ. ಕೊರೊನಾ ಶುರುವಾದ ಮೇಲೆ ಅನೇಕ ಅಧ್ಯಯನಗಳು ಹೊರಬೀಳುತ್ತಿವೆ. ಜನರು ಲಸಿಕೆ ಪಡೆದರೆ ಮಾತ್ರ ಕೊರೊನಾದಿಂದ ಪಾರಾಗಬಹುದೆಂದೇ ಎಲ್ಲ ಅಧ್ಯಯನಗಳೂ ಹೇಳುತ್ತಿವೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಲಸಿಕೆಯೊಂದೇ ಮಾರ್ಗ. ಕೊರೊನಾ ವ್ಯಾಕ್ಸಿನ್​ ಪಡೆದವರಿಗೆ ಸೋಂಕಿನ ಅಪಾಯ ಇರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್​ ಮಾಡಿದ್ದ ಸುಶಾಂತ್​?

ದೆಹಲಿಯಲ್ಲಿ ರಸ್ತೆ ಮಧ್ಯೆ ಮಹಿಳೆಯಿಂದ ಸರ ದೋಚಿ, ಕೊಂದು ಪರಾರಿ
ದೆಹಲಿಯಲ್ಲಿ ರಸ್ತೆ ಮಧ್ಯೆ ಮಹಿಳೆಯಿಂದ ಸರ ದೋಚಿ, ಕೊಂದು ಪರಾರಿ
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್