AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖ್ಯಮಂತ್ರಿಗಿಂತ ಅವರ ಮಗ 5 ಪಟ್ಟು ಹೆಚ್ಚು ಶ್ರೀಮಂತ !-ಯಾವ ರಾಜ್ಯ? ಆಸ್ತಿ ವಿವರದ ಮಾಹಿತಿ ಇಲ್ಲಿದೆ

ಪ್ರತಿವರ್ಷ ಕೊನೇ ದಿನ  ಸರ್ಕಾರದ ಸಂಪುಟದ ಎಲ್ಲ ಸಚಿವರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅದು ಸರ್ಕಾರಿ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಬೇಕು ಎಂದು ಈ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿತ್ತು.

ಮುಖ್ಯಮಂತ್ರಿಗಿಂತ ಅವರ ಮಗ 5 ಪಟ್ಟು ಹೆಚ್ಚು ಶ್ರೀಮಂತ !-ಯಾವ ರಾಜ್ಯ? ಆಸ್ತಿ ವಿವರದ ಮಾಹಿತಿ ಇಲ್ಲಿದೆ
ನಿಶಾಂತ್​
TV9 Web
| Edited By: |

Updated on: Jan 02, 2022 | 10:42 AM

Share

ರಾಜಕಾರಣಿಗಳೆಂದೆರೇ ಶ್ರೀಮಂತರು. ಅವರ ಮಕ್ಕಳು ಮತ್ತೂ ಶ್ರೀಮಂತರು..! ಈ ಮಾತು ಅನ್ವಯ ಆಗುವುದು ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮತ್ತು ಅವರ ಪುತ್ರನಿಗೆ. ಬಿಹಾರ ಸಿಎಂ ನಿತೀಶ್​ ಕುಮಾರ್​ಗಿಂತ ಅವರ ಪುತ್ರ 5 ಪಟ್ಟು ಹೆಚ್ಚು ಶ್ರೀಮಂತರಂತೆ. ನಿತೀಶ್​ ಕುಮಾರ್​ ಬಳಿ ಒಟ್ಟಾರೆ (ಚಿರಾಸ್ತಿ, ಸ್ಥಿರಾಸ್ಥಿ ಎಲ್ಲ ಸೇರಿ ) 75.36 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯಿದ್ದರೆ, ಅವರ ಪುತ್ರ ನಿಶಾಂತ್​ ಬಳಿ, ಈ ಮೊತ್ತದ 5 ಪಟ್ಟು ಜಾಸ್ತಿ ಆಸ್ತಿಯಿದೆ.  ಬಿಹಾರ ಸರ್ಕಾರಿ ವೆಬ್​ಸೈಟ್​​ನಲ್ಲಿ ಡಿ.31ರಂದು ಉಲ್ಲೇಖವಾದ ಆಸ್ತಿ ವಿವರದ ಅನ್ವಯ, ನಿತೀಶ್ ಕುಮಾರ್​  ಬಳಿ, 29,385 ರೂಪಾಯಿ ನಗದು ಇದೆ. ಹಾಗೇ, ಬ್ಯಾಂಕ್​ ಅಕೌಂಟ್​​ನಲ್ಲಿ 42,763 ರೂಪಾಯಿ ಇದೆ. ಆದರೆ ಅವರ ಪುತ್ರನ ಬಳಿ ಕೈಯಲ್ಲಿ 16, 549 ರೂಪಾಯಿ ಇದ್ದು, ಬ್ಯಾಂಕ್​ನಲ್ಲಿ 1.28 ಕೋಟಿ ರೂಪಾಯಿ ಎಫ್​ಡಿ ಇದೆ. 

ನಿತೀಶ್​ ಕುಮಾರ್​ ಬಳಿ 16.51 ಲಕ್ಷ ರೂಪಾಯಿ ಚರಾಸ್ತಿ ಇದ್ದು, 58.85 ಲಕ್ಷ ರೂ.ಮೌಲ್ಯ ಸ್ಥಿರಾಸ್ತಿ ಇದೆ. ಆದರೆ ಅವರ ಪುತ್ರ ಕೋಟಿ ರೂಪಾಯಿಯಲ್ಲಿ ಸಂಪಾದಿಸಿದ್ದಾರೆ. ಪುತ್ರ ನಿಶಾಂತ್​ ಚರಾಸ್ತಿ ಮೌಲ್ಯ 1.63 ಕೋಟಿ ರೂಪಾಯಿ ಹಾಗೂ ಸ್ಥಿರಾಸ್ತಿ ಮೌಲ್ಯ 1.98 ಕೋಟಿ ರೂಪಾಯಿ.  ಸಿಎಂ ನಿತೀಶ್​ ಕುಮಾರ್ ಅವರು ದೆಹಲಿಯ ದ್ವಾರಕಾದ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಮುಖ್ಯಮಂತ್ರಿಯವರು ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. ಹಾಗೇ, ಇವರ ಪುತ್ರ ನಿಶಾಂತ್​ ಕಲ್ಯಾಣ್ ಬಿಘಾ ಮತ್ತು ಹಕೀಕತ್​ಪುರದಲ್ಲಿ ಕೃಷಿ ಭೂಮಿ ಮತ್ತು ವಸತಿ ಗೃಹಗಳನ್ನು ಹೊಂದಿದ್ದಾರೆ. ಕಂಕರ್​ಬಾಗ್​​ನಲ್ಲೂ ಕೂಡ ಇವರ ಆಸ್ತಿ ಇದೆ. ಕಲ್ಯಾಣ್​ ಬಿಘಾ ನಿತೀಶ್​ ಕುಮಾರ್​ ಅವರ ಪೂರ್ವಜರು ವಾಸವಾಗಿದ್ದ ಹಳ್ಳಿ. ಇಲ್ಲಿ ನಿಶಾಂತ್​, ಕೃಷಿ ಭೂಮಿ ಮತ್ತು ಕೃಷಿ ಯೋಗ್ಯವಲ್ಲದ ಭೂಮಿಗಳನ್ನು ಹೊಂದಿದ್ದಾರೆ. ಇನ್ನು ನಿತೀಶ್​ ಕುಮಾರ್ ಅವರು 1.45 ಲಕ್ಷ ರೂಪಾಯಿ ಮೌಲ್ಯದ 13 ಹಸುಗಳು ಮತ್ತು 9 ಕರುಗಳನ್ನು ಹೊಂದಿದ್ದಾಗಿ ವೆಬ್​ಸೈಟ್​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿವರ್ಷ ಕೊನೇ ದಿನ  ಸರ್ಕಾರದ ಸಂಪುಟದ ಎಲ್ಲ ಸಚಿವರೂ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು. ಅದು ಸರ್ಕಾರಿ ವೆಬ್​ಸೈಟ್​ನಲ್ಲಿ ಉಲ್ಲೇಖವಾಗಬೇಕು ಎಂದು ಈ ಹಿಂದೆಯೇ ನಿತೀಶ್ ಕುಮಾರ್​ ಸರ್ಕಾರ ಆದೇಶ ಹೊರಡಿಸಿತ್ತು.  ಹೀಗಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸೇರಿ ಎಲ್ಲರೂ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ನಮೂದಿಸಲೇಬೇಕಾಗುತ್ತದೆ. ಇನ್ನೂ ಒಂದು ಮುಖ್ಯವಾದ ವಿಷಯವೆಂದರೆ, ನಿತೀಶ್​ ಕುಮಾರ್ ಅವರು ತಮ್ಮ ಸಂಪುಟದ ಎಲ್ಲ ಸಹೋದ್ಯೋಗಿಗಳಿಗಿಂತಲೂ ಬಡವರೇ ಆಗಿದ್ದಾರೆ.

ಇದನ್ನೂ ಓದಿ: ಹೋಮ-ಹವನ ವಿಶೇಷ ಪೂಜೆ ಮೂಲಕ ತಮ್ಮ ನೆಚ್ಚಿನ ಕೋತಿ ಚಿಂಟು 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡಿದ ಸಾ.ರಾ.ಮಹೇಶ್

Follow Us
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು