AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಹೊಪ್ ಶೂಟ್ಸ್​ ಪಕ್ಕಾ ಫೇಕ್​; ಸ್ಥಳಕ್ಕೆ ಹೋಗಿ ನೋಡಿದ್ರೆ 1ಕೆಜಿಗೆ 1 ಲಕ್ಷ ರೂ.ಬೆಲೆಯ ತರಕಾರಿ ಇಲ್ವೇ ಇಲ್ಲ !

ಮಾರ್ಚ್​ 31ರಂದು ಸುಪ್ರಿಯಾ ಅವರು ಮಾಡಿದ್ದ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿತ್ತು. 5000 ಬಾರಿ ರೀಟ್ವೀಟ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹಲವು ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಇದೊಂದು ಪಕ್ಕಾ ಸುಳ್ಳುಸುದ್ದಿ ಎಂಬುದೀಗ ಬಯಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ್ದ ಹೊಪ್ ಶೂಟ್ಸ್​ ಪಕ್ಕಾ ಫೇಕ್​; ಸ್ಥಳಕ್ಕೆ ಹೋಗಿ ನೋಡಿದ್ರೆ 1ಕೆಜಿಗೆ 1 ಲಕ್ಷ ರೂ.ಬೆಲೆಯ ತರಕಾರಿ ಇಲ್ವೇ ಇಲ್ಲ !
ಹಾಪ್ ಶೂಟ್ಸ್ ಬೆಳೆ ಹಾಗೂ ಅದನ್ನು ಬೆಳೆದಿದ್ದಾಗಿ ಸುದ್ದಿಯಾಗಿದ್ದ ರೈತ ಅಮರೇಶ್
Lakshmi Hegde
|

Updated on:Apr 04, 2021 | 8:24 PM

Share

ದೆಹಲಿ: ಕೆಲವು ದಿನಗಳ ಹಿಂದೆ ಬಿಹಾರದ ರೈತನೊಬ್ಬ ಹೊಪ್​ ಶೂಟ್ಸ್ ಎಂಬ ವಿಶೇಷ ಬೆಳೆಯನ್ನು ಬೆಳೆದಿದ್ದಾರೆ. ಇದು ಜಗತ್ತಿನ ಅತ್ಯಂತ ದುಬಾರಿ ತರಕಾರಿಯಾಗಿದ್ದು, 1 ಕೆಜಿಗೆ 1 ಲಕ್ಷ ರೂಪಾಯಿ ಬೆಲೆಬಾಳುತ್ತದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಬರೀ ಸಾಮಾಜಿಕ ಜಾಲತಾಣಗಳಷ್ಟೇ ಅಲ್ಲದೆ, ಪ್ರಮುಖ ಮಾಧ್ಯಮಗಳೂ ಇದನ್ನು ವರದಿ ಮಾಡಿದ್ದವು. ಅಲ್ಲದೆ, ಈ ಬೆಳೆಯನ್ನು ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್​ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಬೆಳೆದಿದ್ದಾರೆ. ಹೊಪ್​ ಶೂಟ್ಸ್​ ಬೆಳೆದ ಮೊದಲ ಭಾರತೀಯ ರೈತ ಇವರು ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮಾಡಿ, ಕೆಲವು ಫೋಟೋಗಳನ್ನೂ ಹಂಚಿಕೊಂಡಿದ್ದರು.

ಮಾರ್ಚ್​ 31ರಂದು ಸುಪ್ರಿಯಾ ಅವರು ಮಾಡಿದ್ದ ಟ್ವೀಟ್ ಸಿಕ್ಕಾಪಟೆ ವೈರಲ್ ಆಗಿತ್ತು. 5000 ಬಾರಿ ರೀಟ್ವೀಟ್ ಆಗಿತ್ತು. ಅದನ್ನೇ ಇಟ್ಟುಕೊಂಡು ಹಲವು ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಇದೊಂದು ಪಕ್ಕಾ ಸುಳ್ಳುಸುದ್ದಿ ಎಂಬುದೀಗ ಬಯಲಾಗಿದೆ. ಹಿಂದಿ ದಿನಪತ್ರಿಕೆ ದೈನಿಕ್ ಜಾಗರಣ್​ದ ತಂಡವೊಂದು ಅಮರೇಶ್​ ಸಿಂಗ್ ಅವರ ಕರಮ್​ನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ, ಅಲ್ಲಿ ಯಾವುದೇ ಹಾಪ್​ಶೂಟ್ಸ್​ ಬೆಳೆಯೂ ಕಂಡುಬಂದಿಲ್ಲ. ಈ ಬಗ್ಗೆ ಪತ್ರಿಕೆಯ ತಂಡ ಸ್ಥಳೀಯರನ್ನೂ ಮಾತನಾಡಿಸಿದೆ. ಅವರೂ ಸಹ ಇಲ್ಲಿ ಯಾರೂ ಹೊಪ್​ ಶೂಟ್ಸ್​ ತರಕಾರಿ ಬೆಳೆದಿಲ್ಲ. ಅಂಥ ಹೆಸರನ್ನು ಎಲ್ಲಿಯೂ ಕೇಳಿಯೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಅಮರೇಶ್ ಸಿಂಗ್ ಫೋನ್ ನಂಬರ್ ತೆಗೆದುಕೊಂಡು ಕರೆ ಮಾಡಿದಾಗ, ನನ್ನ ಊರು ಕರಮ್​ನಿಧಿ. ಆದರೆ ನಾನು ಹೊಪ್​ ಶೂಟ್ಸ್ ಬೆಳೆದಿದ್ದು ನಲಂದಾ ಜಿಲ್ಲೆಯಲ್ಲಿ ಎಂದು ಹೇಳಿದ್ದಾರೆ. ಪತ್ರಿಕೆಯ ಸಿಬ್ಬಂದಿ ಅಲ್ಲಿಗೂ ಹೋಗಿದ್ದಾರೆ. ಆದರೆ ಅಲ್ಲಿ ಕೂಡ ಹೊಪ್ ಶೂಟ್ಸ್​ ಕಂಡುಬಂದಿಲ್ಲ. ನಲಂದಾದಿಂದ ಅಮರೇಶ್​ಗೆ ಕರೆ ಮಾಡಿದರೆ, ತರಕಾರಿ ಬೆಳೆದಿದ್ದು ಔರಂಗಾಬಾದ್​ನಲ್ಲಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಹೊಪ್​ ಶೂಟ್ಸ್​ ಬೆಳೆಯ ಬಗ್ಗೆ ಔರಂಗಾಬಾದ್​ ಜಿಲ್ಲಾಧಿಕಾರಿ ಸೌರಭ್​ ಜೋರ್​ವಲ್​ ಅವರನ್ನು ದೈನಿಕ್ ಜಾಗರಣ್​ ಸಂಪರ್ಕಿಸಿದಾಗ, ಔರಂಗಾಬಾದ್​ನಲ್ಲಿ ಆ ಬೆಳೆಯನ್ನು ಯಾರೂ ಬೆಳೆದಿಲ್ಲ. ಅಮರೇಶ್​ ಅವರು ಕಪ್ಪು ಅಕ್ಕಿ, ಗೋಧಿಯನ್ನು ಬೆಳೆದಿದ್ದಾರೆ ಹೊರತು, ಹೊಪ್ ಶೂಟ್ಸ್​ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್​ ಮೀಡಿಯಾದಲ್ಲಿ ಫುಲ್ ಹವಾ

Published On - 8:21 pm, Sun, 4 April 21

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ