AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್​ ಮೀಡಿಯಾದಲ್ಲಿ ಫುಲ್ ಹವಾ

Hop Shoots Crop: ಬಿಹಾರದ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಈ ಬೆಳೆಯನ್ನು ಒಂದು ಕೆಜಿಗೆ ₹ 1 ಲಕ್ಷದಂತೆ ಮಾರಾಟ ಮಾಡುತ್ತಿದ್ದಾರೆ. ಈ ಬೆಳೆಯ ಹೆಸರು ‘ಹೊಪ್ ಶೂಟ್ಸ್​’. ಇದು ವಿಶ್ವದ ಅತಿದುಬಾರಿ ಬೆಳೆ ಎನಿಸಿಕೊಂಡಿದೆ.

ಬಿಹಾರದ ರೈತ ಬೆಳೆದ ಈ ಬೆಳೆ 1 ಕೆಜಿಗೆ 1 ಲಕ್ಷ ರೂಪಾಯಿ: ಸೋಷಿಯಲ್​ ಮೀಡಿಯಾದಲ್ಲಿ ಫುಲ್ ಹವಾ
ಹೊಪ್ ಶೂಟ್ಸ್​ ಬೆಳೆದಿರುವ ಬಿಹಾರದ ರೈತ ಅಮರೇಶ್ ಸಿಂಗ್
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on: Apr 02, 2021 | 6:49 AM

Share

ಬಿಹಾರದ ರೈತರೊಬ್ಬರು ತಮ್ಮ ಹೊಲದಲ್ಲಿ ಬೆಳೆದ ಈ ಬೆಳೆಯನ್ನು ಒಂದು ಕೆಜಿಗೆ ₹ 1 ಲಕ್ಷದಂತೆ ಮಾರಾಟ ಮಾಡುತ್ತಿದ್ದಾರೆ. ರೈತ ಅಮರೇಶ್ ಸಿಂಗ್ ಬೆಳೆದ ಈ ಬೆಳೆಯ ಹೆಸರು ‘ಹೊಪ್ ಶೂಟ್ಸ್​’ (Hop Shoots). ಇದು ವಿಶ್ವದ ಅತಿ ದುಬಾರಿ ಬೆಳೆ ಎನಿಸಿಕೊಂಡಿದೆ. ಈ ಬೆಳೆಯ ಬಗ್ಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ರಾಷ್ಟ್ರೀಯ ಮಾಧ್ಯಮದಲ್ಲಿ ಪ್ರಕಟವಾಗಿದ್ದ ಸುದ್ದಿಯ ಜೊತೆಗೆ ಕೆಲ ಫೋಟೊಗಳನ್ನೂ ಟ್ವೀಟ್ ಮಾಡಿದ್ದಾರೆ. ಈ ಬೆಳೆಯು ಭಾರತೀಯ ರೈತರ ಪರಿಸ್ಥಿತಿಯನ್ನು ಬದಲಿಸಬಲ್ಲದು ಎಂದಿದ್ದಾರೆ ಅವರು. ಈ ಟ್ವೀಟ್ ವೈರಲ್ ಆಗಿದೆ. 5000 ಮಂದಿ ರೀಟ್ವೀಟ್ ಮಾಡಿದ್ದು, 23.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 

ಬಿಹಾರದ ಔರಂಗಾಬಾದ್ ಜಿಲ್ಲೆ ಕರಮ್​ನಿಧಿ ಗ್ರಾಮದ 38 ವರ್ಷದ ರೈತ ಅಮರೇಶ್ ಸಿಂಗ್ ಭಾರತದಲ್ಲಿ ಈ ರಿಸ್ಕ್ ತೆಗೆದುಕೊಂಡಿದ್ದಾರೆ.  ಅವರು ಮೊದಲು ವಾರಣಾಸಿಯ ಭಾರತೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯಿಂದ ಸಸಿಗಳನ್ನು ತಂದರು. ಸಂಶೋಧನಾ ಸಂಸ್ಥೆಯು ಬೆಳೆಯನ್ನು ಪರಿಚಯಿಸುವವರೆಗೆ ಹೊಪ್ ಶೂಟ್ಸ್​ ಹೆಸರನ್ನು ಭಾರತದಲ್ಲಿ ಹೆಚ್ಚಿನ ಜನರು ತಿಳಿದಿರಲೇ ಇಲ್ಲ. ಈ ಬೆಳೆ ಬೇಕು ಎಂದಾದರೆ ವಿದೇಶಗಳಿಂದ ತರಿಸಿಕೊಳ್ಳಬೇಕಾಗಿತ್ತು. ಸಾಗಾಟ ವೆಚ್ಚವೂ ಹೆಚ್ಚಾಗುತ್ತಿತ್ತು. ಅಷ್ಟೇ ಅಲ್ಲ, ಆರ್ಡರ್ ಮಾಡಿದವರು ದೀರ್ಘಕಾಲ ಕಾಯಬೇಕಿತ್ತು.

ಇದೀಗ ಹೊಪ್ ಶೂಟ್ಸ್​ ಬೆಳೆ ಬೆಳೆಯಲು ಉತ್ತೇಜನ ಸಿಗುತ್ತಿದೆ. ಇದು ರೈತರ ಆರ್ಥಿಕ ಸ್ವಾವಲಂಬನೆಗೂ ಸಹಕಾರಿ ಆಗಬಲ್ಲದು. ಹೊಪ್ಸ್​ ಗಿಡದ ಎಲ್ಲ ಭಾಗಗಳೂ ಉಪಯುಕ್ತ. ಆದರೆ ಹೂಗಳಿಗೆ ವಿಶೇಷ ಬೇಡಿಕೆಯಿದೆ. ಹೊಪ್ ಗಿಡದ ವೈಜ್ಞಾನಿಕ ಹೆಸರು ಹ್ಯುಮ್ಯುಲಸ್ ಲುಪ್ಯುಲಸ್ (Humulus Lupulus). ಇದು ಹೂಬಿಡುವ ಕೆನ್ನಬಸಿಯಾ ಕುಟುಂಬಕ್ಕೆ ಸೇರಿದ ಗಿಡವಾಗಿದೆ.

Hop-Shoots

ಹೊಪ್ ಶೂಟ್ಸ್​ ಬೆಳೆ

ಅದೆಲ್ಲಾ ಸರಿ, ಈ ಗಿಡದ ಉತ್ಪನ್ನಗಳಿಗೇಕೆ ಇಷ್ಟೊಂದು ಬೆಲೆ ಅಂದ್ರಾ? ಈ ಗಿಡದ ಪ್ರತಿಯೊಂದು ಭಾಗವೂ ಉಪಯುಕ್ತ ಎಂದು ಅಧ್ಯಯನಗಳು ಹೇಳುತ್ತವೆ. ಹಣ್ಣು, ಹೂ, ಕಾಂಡಗಳು ಹಲವು ರೀತಿಯ ಉಪಯೋಗ ಹೊಂದಿವೆ. ಬಿಯರ್ ಉದ್ಯಮದಲ್ಲಿ ಈ ಗಿಡದ ಕೆಲ ಭಾಗಗಳನ್ನು ಸ್ಥಿರೀಕರಣಕ್ಕಾಗಿ (stability agent) ಬಳಸುತ್ತಾರೆ. ಕ್ಷಯರೋಗ ಬಾರದಂತೆ ತಡೆಯುವ ಶಕ್ತಿಯೂ ಈ ಗಿಡಕ್ಕಿದೆ. ಈ ಗಿಡದಲ್ಲಿರುವ ಆಂಟಿಯಾಕ್ಸಿಡೆಂಟ್ಸ್​ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಇದರ ಚಿಗುರು ಸೇವಿಸುವುದರಿಂದ ಅತಿಕೋಪ, ಉದ್ವಿಗ್ನ ಮನಃಸ್ಥಿತಿ, ನಿದ್ರಾಹೀನತೆ ಮತ್ತು ಖಿನ್ನತೆಯನ್ನು ಹೋಗಲಾಡಿಸುತ್ತದೆ ಎಂದು ಹೇಳುತ್ತಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಅವರ ಟ್ವೀಟ್​ಗೆ ಉತ್ತರಿಸಿರುವ ಹಲವರು, ಈ ಬೆಳೆಗೆ ಅಷ್ಟೊಂದು ಬೆಲೆಯಿಲ್ಲ ಎಂದು ವಾದಿಸಿದ್ದಾರೆ. ಕೆಲವರು ಹೊಪ್ಸ್​ ಬೆಳೆಯಿಂದ ದೂರ ಸರಿಯಲು ನಿರ್ಧರಿಸಿದ ರೈತರ ಬಗ್ಗೆ ‘ದಿ ಟ್ರಿಬ್ಯೂನ್’ ದಿನಪತ್ರಿಕೆ ಪ್ರಕಟಿಸಿರುವ ವರದಿಯ ಲಿಂಕ್ ಹಂಚಿಕೊಂಡಿದ್ದಾರೆ.

ಈ ಅಭಿಪ್ರಾಯವನ್ನು ನಿರಾಕರಿಸಿ ವಾದಕ್ಕಿಳಿದಿರುವ ಕೆಲವರು, ಯಾವುದೇ ಮದ್ಯ ಮಾರಾಟ ಕಂಪನಿಯನ್ನು ಕೇಳಿನೋಡಿ, ಹೊಪ್ಸ್​ ಬೆಳೆಗೆ ಚಿನ್ನದ ಬೆಲೆ ಕೊಡುತ್ತಾರೆ. ಹಲವು ತಂಪುಪಾನೀಯಗಳ ಸುಗಂಧ ಮತ್ತು ರುಚಿಗೆ ಹೊಪ್ಸ್​ನ ಉಪ ಉತ್ಪನ್ನಗಳು ಬಳಕೆಯಾಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್

ಬಾಗಲಕೋಟೆಯಲ್ಲಿ ದೇಶದ ಅತಿದೊಡ್ಡ ಮಾಸ್ಕ್ ಅನಾವರಣ; ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ವೇಳೆ ಬೆಂಗಳೂರಿನ ಅಮ್ಮ ಫೌಂಡೇಶನ್​ನಿಂದ ಅಭಿಯಾನ

Follow Us
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಉಚಿತ ಗ್ಯಾರಂಟಿಗೆ ‘ಕೈ’ ಶಾಸಕರಿಂದಲೇ ಮತ್ತೆ ಅಪಸ್ವರ
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ಬಬಲಾದಿ ಮಠದ ಕಾಲಜ್ಞಾನ ನಿಜವಾಯಿತೇ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
2ನೇ ಇನ್ನಿಂಗ್ಸ್​ಗೂ ಮುನ್ನ ಮಾರಿಕಾಂಬಾ ದರ್ಶನ ಪಡೆದ ಅನಂತ್ ಕುಮಾರ್ ಹೆಗಡೆ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ
ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ