AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಜೇರಿಯ ಶರದ್​ಚಂದ್ರಾಜಿ: ಮಹಾರಾಷ್ಟ್ರದಲ್ಲಿ ಪತ್ತೆಯಾದ ಹೊಸ ಪ್ರಭೇದದ ಗಿಡಕ್ಕೆ ಶರದ್ ಪವಾರ್ ಹೆಸರು

Argyreia Sharadchandrajii: ಕೇಂದ್ರ ಸಚಿವರಾಗಿದ್ದಾಗ ಶರದ್ ಪವಾರ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗೆ ಗೌರವಾರ್ಥ ಹೂವಿನ ಗಿಡವೊಂದಕ್ಕೆ ಆರ್ಜೇರಿಯ ಶರದ್​ಚಂದ್ರಾಜಿ ಎಂಬ ಹೆಸರು ನೀಡಲಾಗಿದೆ

ಆರ್ಜೇರಿಯ ಶರದ್​ಚಂದ್ರಾಜಿ: ಮಹಾರಾಷ್ಟ್ರದಲ್ಲಿ ಪತ್ತೆಯಾದ ಹೊಸ ಪ್ರಭೇದದ ಗಿಡಕ್ಕೆ ಶರದ್ ಪವಾರ್ ಹೆಸರು
ಶರದ್ ಪವಾರ್
ರಶ್ಮಿ ಕಲ್ಲಕಟ್ಟ
|

Updated on:Apr 02, 2021 | 11:25 AM

Share

ಮಹಾರಾಷ್ಟ್ರ: ದಕ್ಷಿಣ ಮಹಾರಾಷ್ಟ್ರದ ಕೋಲ್ಹಾಪೂರ್ ಜಿಲ್ಲೆಯಲ್ಲಿ ಇತ್ತೀಚೆಗೆ ಪತ್ತೆಯಾದ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರನ್ನು ಇಡಲಾಗಿದೆ. ಕೇಂದ್ರ ಸಚಿವರಾಗಿದ್ದಾಗ ಶರದ್ ಪವಾರ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಳಿಗೆ ಗೌರವಾರ್ಥ ಹೂವಿನ ಗಿಡವೊಂದಕ್ಕೆ ಆರ್ಜೇರಿಯ ಶರದ್​ಚಂದ್ರಾಜಿ ಎಂಬ ಹೆಸರು ನೀಡಲಾಗಿದೆ. ಹೊಸ ಗಿಡದ ಬಗ್ಗೆ ಮಾತನಾಡಿದ ಅಧ್ಯಯನಕಾರರಾದ ಪ್ರಮೋದ್. ಆರ್. ಲಾವಾಂಡ್ ಮತ್ತು ಡಾ.ವಿನೋದ್ ಬಿ ಶಿಂಪಾಲೆ, ಆ ಗಿಡವು ಆರ್ಜೇರಿಯ ಪ್ರಭೇದಕ್ಕೆ ಸೇರಿದ್ದು, ಇವು ಆಲಂಪ್ರಭು ದೇವ್ ರಾಯ್​ಗಳಲ್ಲಿ(ಪವಿತ್ರ ತೋಪು ) ಕಂಡು ಬರುತ್ತವೆ ಎಂದಿದ್ದಾರೆ. ಲಾವಾಂಡ್ ಮತ್ತು ಶಿಂಪಾಲೆ ಕೋಲ್ಹಾಪೂರ್​ನ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.

‘Argyreia sharadchandrajii (Convolvulaceae): A new species from the Western Ghats, India’ ಎಂಬ ಅಧ್ಯಯನ ವರದಿಯು ಇತ್ತೀಚೆಗೆ ಜರ್ನಲ್ ಆಫ್ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ಆಂಜಿಯೊಸ್ಪರ್ಮ್ ಟ್ಯಾಕ್ಸೊನಮಿಯಲ್ಲಿ ಪ್ರಕಟವಾಗಿದೆ.

ಆರ್ಜೇರಿಯ ಪ್ರಭೇದಕ್ಕೆ ಸೇರಿದ 40 ಉಪ ಪ್ರಭೇದಗಳು ಭಾರತದಲ್ಲಿ ಕಂಡುಬಂದಿವೆ. ಈ ಪ್ರಭೇದಗಳು ಏಷ್ಯಾದ ರಾಷ್ಟ್ರಗಳಲ್ಲಿ ಮಾತ್ರ ಕಂಡುಬರುತ್ತವೆ.  40ರ ಪೈಕಿ 17 ಪ್ರಭೇದಗಳು ಸ್ಥಳೀಯವಾಗಿ ಕಂಡುಬಂದಿದ್ದು, 18ನೇ ಪ್ರಭೇದವನ್ನು ನಾವು ರಾಮ್​ಲಿಂಗ್ ಬೆಟ್ಟದ ಆಲಂಪ್ರಭು ಪವಿತ್ರ ತೋಪುಗಳಲ್ಲಿ ಪತ್ತೆ ಹಚ್ಚಿದ್ದೇವೆ ಎಂದು ಶಿಂಪಾಲೆ ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಗಿಡವು ಜುಲೈ ಮತ್ತು ಸಪ್ಟೆಂಬರ್ ತಿಂಗಳ ಮಧ್ಯೆ ಹೂಬಿಡುತ್ತಿದ್ದು, ಡಿಸೆಂಬರ್  ತಿಂಗಳು ​ಫಲ ಬಿಡುವ ಅವಧಿಯಾಗಿದೆ. ಇವುಗಳು ತೆರೆದ ಬಯಲಿನ ಹುಲ್ಲುಗಾವಲಿನಲ್ಲಿ ಬೆಳೆಯುತ್ತಿದ್ದು, ಇತರ ಪೊದೆಗಳ ಬಳಿ ಬೇರೂರುತ್ತವೆ ಎಂದಿದ್ದಾರೆ ಶಿಂಪಾಲೆ

ಕೆಲವು ವರ್ಷಗಳ ಹಿಂದೆ ಪವಾರ್ ಅವರು ಬಾರಾಮತಿಯಲ್ಲಿನ ಹೂವಿನ ಗಿಡಗಳ ಬಗ್ಗೆ ಅಧ್ಯಯನ ವರದಿಯನ್ನು ಪ್ರಕಟಿಸಲು ಆರ್ಥಿಕ ಸಹಾಯ ಮಾಡಿದ್ದರು. ಶರದ್ ಪವಾರ್ ಅವರ ಚುನಾವಣಾ ಕ್ಷೇತ್ರವಾಗಿದೆ ಬಾರಾಮತಿ. ಹಾಗಾಗಿಯೇ ಹೊಸ ಪ್ರಭೇದದ ಹೂವಿನ ಗಿಡಕ್ಕೆ ಶರದ್ ಪವಾರ್ ಅವರ ಹೆಸರನ್ನಿರಿಸಿದ್ದೇವೆ. ಜೀವ ವೈವಿಧ್ಯಗಳಿಂದ ಸಮೃದ್ಧವಾಗಿರುವ ಕೋಲ್ಹಾಪೂರ್ ಜಿಲ್ಲೆಯ ಪಶ್ಚಿಮ ಘಟ್ಟದ ಪರಿಸರ ವಲಯಕ್ಕೆ ಶರದ್ ಪವಾರ್ ಅವರು ನೀಡಿದ ಅನನ್ಯ ಕೊಡುಗೆಗೆ ಗೌರವಾರ್ಥ ಈ ಗಿಡಕ್ಕೆ ಅವರ ಹೆಸರು ಇರಿಸಲಾಗಿದೆ ಎಂದು ಶಿಂಪಾಲೆ ಹೇಳಿದ್ದಾರೆ.

ಸಹ್ಯಾದ್ರಿ ಪರ್ವತಗಳಲ್ಲಿ ಕಂಡುಬರುವ ಸಸ್ಯವನ್ನು ಪತ್ತೆ ಹಚ್ಚಿದ್ದ ವಿನೋದ್ ಶಿಂಪಾಲ್ ಮತ್ತು ಡಾ. ಪ್ರಮೋದ್ ಲಾವಂಡ್ ಅವರು ಆ ಸಸ್ಯಕ್ಕೆ ಶರದ್ ಪವಾರ್ ಅವರ ಹೆಸರನ್ನು ಇರಿಸಿದ್ದಾರೆ. ಈ ಸಸ್ಯವನ್ನು ಈಗ ‘ಆರ್ಜೇರಿಯ ಶರದಚಂದ್ರಾಜಿ’ ಎಂದು ಕರೆಯಲಾಗುತ್ತದೆ. ಈ ಇಬ್ಬರು ಸಂಶೋಧಕರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಮಹಾರಾಷ್ಟ್ರ ತಮ್ಮದೇ ಕುಟುಂಬ ಎಂದು ಪವಾರ್ ಅವರು ಭಾವಿಸುತ್ತಾರೆ. ಅಂತಹ ಗೌರವ ಮತ್ತು ಮನ್ನಣೆ ಕುಟುಂಬದಿಂದ ಮಾತ್ರ ಬರಬಹುದು. ಇದರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಧನ್ಯವಾದಗಳು ಎಂದು ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಲೆ ಟ್ವೀಟ್ ಮಾಡಿದ್ದಾರೆ.

( Argyreia sharadchandrajii new species of flowering plant discovered in south Maharashtra Kolhapur named after Sharad Pawar)

ಇದನ್ನೂ ಓದಿ: ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್​ ಶಾ

Published On - 11:15 am, Fri, 2 April 21

ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ