Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಬಿದ್ರೆಯ ಪೇಪರ್‌ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ

ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ ಹಾಗೂ ಹಾಲು ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಬಡ ಜೀವವದು. ಮೂಡಬಿದ್ರೆ ಪರಿಸರದಲ್ಲಿ ಪೇಪರ್‌ ರಾಜಣ್ಣ ಎಂದೇ ಚಿರಪರಿಚಿತರಾದ ಇವರು ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಪೇಪರ್‌ ಮಾರಿ ಬಂದ ಹಣದಿಂದ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಇವರಿಗೆ ಪುಟ್ಟ ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.

ಮೂಡಬಿದ್ರೆಯ ಪೇಪರ್‌ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ
ಪೇಪರ್‌ ರಾಜಣ್ಣ
Follow us
ಮಾಲಾಶ್ರೀ ಅಂಚನ್​
| Updated By: ಡಾ. ಭಾಸ್ಕರ ಹೆಗಡೆ

Updated on:Mar 28, 2025 | 10:18 AM

ಮೂಡಬಿದ್ರೆ, ಮಾ. 28: ಕಷ್ಟ ಬಂದರೆ ಸಾಕು ಬದುಕೇ (life) ಮುಗಿದು ಹೋಯಿತು ಅಂದುಕೊಳ್ಳುವವರ ಮಧ್ಯೆ ಕಷ್ಟವನ್ನು ಮೆಟ್ಟಿ ನಿಂತು ಜೀವನ ಸಾಗಿಸುತ್ತಿರುವವರು ಹಲವರಿದ್ದಾರೆ. ಅದೇ ರೀತಿ ಎಂತಹದ್ದೇ ಸಮಸ್ಯೆ (problems) ಬಂದರು ಅದನ್ನು ಮೆಟ್ಟಿ ನಿಂತು ಮುನ್ನಡೆಯಲೇಬೇಕು, ಜೀವನವೆಂಬ ದೋಣಿಯನ್ನು ಸಾಗಿಸಲೇಬೇಕು ಎಂಬುದನ್ನು ತೋರಿಸಿಕೊಟ್ಟವರು ಮೂಡಬಿದ್ರೆಯ (Moodabidri) ರಾಜಣ್ಣ. ಮೂಡಬಿದ್ರೆಯ ಪರಿಸರದಲ್ಲಿ ಪೇಪರ್‌ ರಾಜಣ್ಣ (Paper Rajanna) ಎಂದೇ ಮನೆ ಮಾತಾಗಿರುವ ಇವರು ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ (news paper) , ಹಾಲು ಮಾರಿ ಸ್ವಾವಲಂಬಿ (self-reliant) ಬದುಕನ್ನು ನಡೆಸುತ್ತಿದ್ದಾರೆ. ಪತ್ನಿ ಮತ್ತು ತಾಯಿಯನ್ನು ಕಳೆದುಕೊಂಡು ಪ್ರಸ್ತುತ ಹಳೆಯ ಮನೆಯೊಂದರಲ್ಲಿ ಒಂಟಿ ಬದುಕನ್ನು ನಡೆಸುತ್ತಿರುವ ಇವರಿಗೆ ಒಂದು ಪುಟ್ಟ ಮನೆಯನ್ನು ಕಟ್ಟುವ ಆಸೆಯಂತೆ. ಸ್ವಾವಲಂಬಿ ಜೀವನವನ್ನು ನಡೆಸುತ್ತಾ ಮಾದರಿಯಾಗಿರುವ ಇವರ ಈ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.

ವಿ.ಜೆ ಮಧುರಾಜ್‌ ಎಂಬವರು ಪೇಪರ್‌ ರಾಜಣ್ಣ ಅವರ ಸ್ವಾವಲಂಬಿ ಬದುಕಿಕ ಕಥೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 52 ವರ್ಷಗಳಿಂದಲೂ ಸೈಕಲ್‌ನಲ್ಲಿಯೇ ಹೋಗುತ್ತಾ ಮೂಡಬಿದ್ರೆಯ ಪರಿಸರದಲ್ಲಿ ಪೇಪರ್‌ ಮತ್ತು ಹಾಲು ಮಾರುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪೇಪರ್‌ ರಾಜಣ್ಣ. ಒಂದು ದಿನ ಪ್ರತಿಕೆ ಮಾರಾಟ ಮಾಡಿದರೆ ಅವರಿಗೆ ಸಿಗುವುದು ಬರೀ ಒಂದು ರೂಪಾಯಿ. ಆ ಒಂದೊಂದು ರೂಪಾಯಿ ಹಣವನ್ನು ಕೂಡಿಟ್ಟು ಇಂದಿಗೂ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ರಾಜಣ್ಣ. ಎರಡು ವರ್ಷಗಳ ಹಿಂದೆ ತಾಯಿಯನ್ನು ಹಾಗೂ 10 ತಿಂಗಳ ಹಿಂದೆ ಹೆಂಡತಿಯನ್ನು ಕಳೆದುಕೊಂಡು ರಾಶಿ ರಾಶಿ ನೋವನ್ನು ಮನದಲ್ಲಿಟ್ಟುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿರುವ ರಾಜಣ್ಣ ಜನರೊಂದಿಗೆ ಯಾವಾಗಲೂ ನುಗುಮೊಗದಿಂದಲೇ ಸಂವಹನ ನಡೆಸುತ್ತಾರೆ. ಇವರ ಈ ಬದುಕಿನ ಕಥೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಸದ್ಯ ಸುಮಾರು 65 ವರ್ಷಗಳಷ್ಟು ಹಳೆಯ ಮನೆಯಲ್ಲಿ ವಾಸವಿರುವ ರಾಜಣ್ಣನಿಗೆ ಒಂದು ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸನ್ನು ನನಸಾಗಿಸಲು ಬೇಕಿದೆ ಎಲ್ಲರ ಸಹಾಯ.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಕುಬ್ಜ ಮೇಕೆ

ವಿಡಿಯೋ ಇಲ್ಲಿದೆ ನೋಡಿ:

ರಾಜಣ್ಣನ ಸ್ವಾವಲಂಬಿ ಬದುಕಿನ ಮನ ಮುಟ್ಟುವ ಕಥೆಯನ್ನು ಸೊಲ್ಮೆ (solme_tulu) ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಶೇರ್‌ ಮಾಡಲಾಗಿದೆ. ಜೊತೆಗೆ ರಾಜಣ್ಣ ಅವರ ಬ್ಯಾಂಕ್‌ ಡಿಟೇಲ್ಸ್‌ನ್ನು ಕೂಡಾ ಶೇರ್‌ ಮಾಡಲಾಗಿದ್ದು, ನೀವು ಕೂಡಾ ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Fri, 28 March 25

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್