AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಡಬಿದ್ರೆಯ ಪೇಪರ್‌ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ

ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ ಹಾಗೂ ಹಾಲು ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಬಡ ಜೀವವದು. ಮೂಡಬಿದ್ರೆ ಪರಿಸರದಲ್ಲಿ ಪೇಪರ್‌ ರಾಜಣ್ಣ ಎಂದೇ ಚಿರಪರಿಚಿತರಾದ ಇವರು ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಪೇಪರ್‌ ಮಾರಿ ಬಂದ ಹಣದಿಂದ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಇವರಿಗೆ ಪುಟ್ಟ ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.

ಮೂಡಬಿದ್ರೆಯ ಪೇಪರ್‌ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ
ಪೇಪರ್‌ ರಾಜಣ್ಣ
ಮಾಲಾಶ್ರೀ ಅಂಚನ್​
| Edited By: |

Updated on:Mar 28, 2025 | 10:18 AM

Share

ಮೂಡಬಿದ್ರೆ, ಮಾ. 28: ಕಷ್ಟ ಬಂದರೆ ಸಾಕು ಬದುಕೇ (life) ಮುಗಿದು ಹೋಯಿತು ಅಂದುಕೊಳ್ಳುವವರ ಮಧ್ಯೆ ಕಷ್ಟವನ್ನು ಮೆಟ್ಟಿ ನಿಂತು ಜೀವನ ಸಾಗಿಸುತ್ತಿರುವವರು ಹಲವರಿದ್ದಾರೆ. ಅದೇ ರೀತಿ ಎಂತಹದ್ದೇ ಸಮಸ್ಯೆ (problems) ಬಂದರು ಅದನ್ನು ಮೆಟ್ಟಿ ನಿಂತು ಮುನ್ನಡೆಯಲೇಬೇಕು, ಜೀವನವೆಂಬ ದೋಣಿಯನ್ನು ಸಾಗಿಸಲೇಬೇಕು ಎಂಬುದನ್ನು ತೋರಿಸಿಕೊಟ್ಟವರು ಮೂಡಬಿದ್ರೆಯ (Moodabidri) ರಾಜಣ್ಣ. ಮೂಡಬಿದ್ರೆಯ ಪರಿಸರದಲ್ಲಿ ಪೇಪರ್‌ ರಾಜಣ್ಣ (Paper Rajanna) ಎಂದೇ ಮನೆ ಮಾತಾಗಿರುವ ಇವರು ಸುಮಾರು 52 ವರ್ಷಗಳಿಂದ ದಿನ ಪತ್ರಿಕೆ (news paper) , ಹಾಲು ಮಾರಿ ಸ್ವಾವಲಂಬಿ (self-reliant) ಬದುಕನ್ನು ನಡೆಸುತ್ತಿದ್ದಾರೆ. ಪತ್ನಿ ಮತ್ತು ತಾಯಿಯನ್ನು ಕಳೆದುಕೊಂಡು ಪ್ರಸ್ತುತ ಹಳೆಯ ಮನೆಯೊಂದರಲ್ಲಿ ಒಂಟಿ ಬದುಕನ್ನು ನಡೆಸುತ್ತಿರುವ ಇವರಿಗೆ ಒಂದು ಪುಟ್ಟ ಮನೆಯನ್ನು ಕಟ್ಟುವ ಆಸೆಯಂತೆ. ಸ್ವಾವಲಂಬಿ ಜೀವನವನ್ನು ನಡೆಸುತ್ತಾ ಮಾದರಿಯಾಗಿರುವ ಇವರ ಈ ಕನಸು ನನಸಾಗಲು ಬೇಕಿದೆ ಸಹಾಯ ಹಸ್ತ.

ವಿ.ಜೆ ಮಧುರಾಜ್‌ ಎಂಬವರು ಪೇಪರ್‌ ರಾಜಣ್ಣ ಅವರ ಸ್ವಾವಲಂಬಿ ಬದುಕಿಕ ಕಥೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 52 ವರ್ಷಗಳಿಂದಲೂ ಸೈಕಲ್‌ನಲ್ಲಿಯೇ ಹೋಗುತ್ತಾ ಮೂಡಬಿದ್ರೆಯ ಪರಿಸರದಲ್ಲಿ ಪೇಪರ್‌ ಮತ್ತು ಹಾಲು ಮಾರುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪೇಪರ್‌ ರಾಜಣ್ಣ. ಒಂದು ದಿನ ಪ್ರತಿಕೆ ಮಾರಾಟ ಮಾಡಿದರೆ ಅವರಿಗೆ ಸಿಗುವುದು ಬರೀ ಒಂದು ರೂಪಾಯಿ. ಆ ಒಂದೊಂದು ರೂಪಾಯಿ ಹಣವನ್ನು ಕೂಡಿಟ್ಟು ಇಂದಿಗೂ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ರಾಜಣ್ಣ. ಎರಡು ವರ್ಷಗಳ ಹಿಂದೆ ತಾಯಿಯನ್ನು ಹಾಗೂ 10 ತಿಂಗಳ ಹಿಂದೆ ಹೆಂಡತಿಯನ್ನು ಕಳೆದುಕೊಂಡು ರಾಶಿ ರಾಶಿ ನೋವನ್ನು ಮನದಲ್ಲಿಟ್ಟುಕೊಂಡು ಒಬ್ಬಂಟಿ ಜೀವನ ಸಾಗಿಸುತ್ತಿರುವ ರಾಜಣ್ಣ ಜನರೊಂದಿಗೆ ಯಾವಾಗಲೂ ನುಗುಮೊಗದಿಂದಲೇ ಸಂವಹನ ನಡೆಸುತ್ತಾರೆ. ಇವರ ಈ ಬದುಕಿನ ಕಥೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಸದ್ಯ ಸುಮಾರು 65 ವರ್ಷಗಳಷ್ಟು ಹಳೆಯ ಮನೆಯಲ್ಲಿ ವಾಸವಿರುವ ರಾಜಣ್ಣನಿಗೆ ಒಂದು ಮನೆ ಕಟ್ಟುವ ಆಸೆಯಂತೆ. ಇವರ ಈ ಪುಟ್ಟ ಕನಸನ್ನು ನನಸಾಗಿಸಲು ಬೇಕಿದೆ ಎಲ್ಲರ ಸಹಾಯ.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಕುಬ್ಜ ಮೇಕೆ

ವಿಡಿಯೋ ಇಲ್ಲಿದೆ ನೋಡಿ:

ರಾಜಣ್ಣನ ಸ್ವಾವಲಂಬಿ ಬದುಕಿನ ಮನ ಮುಟ್ಟುವ ಕಥೆಯನ್ನು ಸೊಲ್ಮೆ (solme_tulu) ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಶೇರ್‌ ಮಾಡಲಾಗಿದೆ. ಜೊತೆಗೆ ರಾಜಣ್ಣ ಅವರ ಬ್ಯಾಂಕ್‌ ಡಿಟೇಲ್ಸ್‌ನ್ನು ಕೂಡಾ ಶೇರ್‌ ಮಾಡಲಾಗಿದ್ದು, ನೀವು ಕೂಡಾ ನಿಮ್ಮ ಕೈಲಾದಷ್ಟು ಸಹಾಯ ಮಾಡಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:56 am, Fri, 28 March 25

Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್