AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tourist Places

Tourist Places

tourist places

Null Stern Hotel: ಈ ಹೋಟೆಲ್​​​ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್​; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು

ಸ್ವಿಟ್ಜರ್ಲೆಂಡ್‌ನಲ್ಲಿರುವ 'ನಲ್ ಸ್ಟರ್ನ್' ಹೋಟೆಲ್ ಸಾಮಾನ್ಯ ಹೋಟೆಲ್‌ಗಳಂತಿಲ್ಲ. ಇಲ್ಲಿ ಗೋಡೆಗಳಿಲ್ಲ, ಛಾವಣಿಯಿಲ್ಲ. ಪರ್ವತದ ಮೇಲೆ ಕೇವಲ ಒಂದು ಹಾಸಿಗೆ ಮಾತ್ರ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ನೋಡುತ್ತಾ, ಸಂಗಾತಿಯೊಂದಿಗೆ ಏಕಾಂತ ಕಳೆಯಲು ಇದು ಹೇಳಿ ಮಾಡಿಸಿದ ತಾಣ. ಈ ವಿಶಿಷ್ಟ ಅನುಭವಕ್ಕೆ ಒಂದು ರಾತ್ರಿಗೆ 29,300 ರೂ. ಪಾವತಿಸಬೇಕು. ಇದು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ತಾಣಗಳಲ್ಲಿ ಒಂದಾಗಿದೆ.

Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಫ್ರಾನ್ಸ್‌ನ ಕ್ಯಾಪ್ ಡಿ'ಅಗ್ಡೆ ವಿಶ್ವದ ಏಕೈಕ ನಗ್ನ ನಗರ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರಿಗೆ ಬಟ್ಟೆ ಇಲ್ಲದೆ ತಿರುಗಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್ ಆಗಿ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಬಟ್ಟೆ ಧರಿಸಿದರೆ ದಂಡ ಬೀಳುವ ವಿಚಿತ್ರ ನಿಯಮವೂ ಇಲ್ಲಿದೆ. ಪ್ರವಾಸಿಗರು ಇಲ್ಲಿ ಯಾವುದೇ ಬಟ್ಟೆ ಧರಿಸದೇ ಕಡಲತೀರ, ರೆಸ್ಟೋರೆಂಟ್‌ಗಳು, ಸೂಪರ್‌ಮಾರ್ಕೆಟ್‌ಗಳಲ್ಲಿ ಓಡಾಡುವುದನ್ನು ಕಾಣಬಹುದು.

Magh Mela at Prayagraj: ಪ್ರಯಾಗ್‌ರಾಜ್​ಗೆ ಮಾಘ ಮೇಳಕ್ಕೆ ಹೋಗುತ್ತಿದ್ದೀರಾ? ಹಾಗಿದ್ರೆ ಈ ಸ್ಥಳ ಮಿಸ್​ ಮಾಡ್ಲೇ ಬೇಡಿ

ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಆರಂಭವಾಗಿದೆ. ಜನವರಿ-ಫೆಬ್ರವರಿಯಲ್ಲಿ ನಡೆಯುವ ಈ ಮೇಳದಲ್ಲಿ ಭಕ್ತರು ಕಲ್ಪವಾಸ ಮಾಡುತ್ತಾರೆ. ತಾತ್ಕಾಲಿಕ ನಗರ, ಅಖಾಡ ಭೇಟಿ ಮತ್ತು ಐತಿಹಾಸಿಕ ಸ್ಥಳಗಳ ವೀಕ್ಷಣೆಯೊಂದಿಗೆ ನೀವು ಇಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಅನನ್ಯ ಅನುಭವ ಪಡೆಯಬಹುದು. ಆದ್ದರಿಂದ ಮಾಘ ಮೇಳ ಎಂದರೇನು? ಅದರ ಮಹತ್ವ ಮತ್ತು ಪ್ರಯಾಗ್ರಾಜ್‌ನಲ್ಲಿ ನೋಡಲು ಯೋಗ್ಯವಾದ ಇತರ ಐತಿಹಾಸಿಕ ಸ್ಥಳಗಳ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Guddattu Vinayaka Temple: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಉಡುಪಿ ಜಿಲ್ಲೆಯ ಗುಡ್ಡಟ್ಟುವಿನಲ್ಲಿರುವ ಶ್ರೀ ವಿನಾಯಕ ದೇವಸ್ಥಾನವು ವಿಶ್ವದ ಏಕೈಕ ಜಲಾಧಿವಾಸ ಗಣಪತಿ ಕ್ಷೇತ್ರವಾಗಿದೆ. ಇಲ್ಲಿ ಗಣಪತಿಯ ಸ್ವಯಂಭೂ ವಿಗ್ರಹವು ವರ್ಷದ 365 ದಿನವೂ ಕುತ್ತಿಗೆಯವರೆಗೂ ನೀರಿನಲ್ಲಿ ಮುಳುಗಿರುತ್ತದೆ. ಜತೆಗೆ ಬಲಮುರಿ ಗಣಪತಿಯಾಗಿರುವ ಈ ದೇವಸ್ಥಾನದಲ್ಲಿ "ಆಯಿರ ಕೊಡ ಸೇವೆ" ಎಂಬ ವಿಶಿಷ್ಟ ಪೂಜೆ ನಿತ್ಯವೂ ನಡೆಯುತ್ತದೆ.

Holidays Calendar 2026: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ

2026 ರ ಹೊಸ ವರ್ಷವು ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳೊಂದಿಗೆ ಆಗಮಿಸುತ್ತಿದೆ. ಜನವರಿ ಸೇರಿದಂತೆ ವರ್ಷವಿಡೀ ಸಿಗುವ ಲಾಂಗ್ ವೀಕೆಂಡ್​ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಮತ್ತು ಪ್ರವಾಸಗಳನ್ನು ಯೋಜಿಸಲು ಈ ರಜಾ ದಿನಗಳು ಉತ್ತಮ ಅವಕಾಶವನ್ನು ನೀಡುತ್ತವೆ. ವರ್ಷದ ಎಲ್ಲಾ ದೀರ್ಘ ರಜೆಗಳನ್ನು ಇಂದೇ ಪ್ಲಾನ್ ಮಾಡಿ.

Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ?

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಬೈಜನಾಥ್ ಮಹಾದೇವ್ ದೇವಾಲಯವು ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಅನನ್ಯ ಇತಿಹಾಸ ಹೊಂದಿದೆ. 19ನೇ ಶತಮಾನದಲ್ಲಿ ಅಫ್ಘಾನ್ ಯುದ್ಧದಲ್ಲಿ ಪತಿಯ ಸುರಕ್ಷತೆಗಾಗಿ ಶಿವನಿಗೆ ಪ್ರಾರ್ಥಿಸಿದ ಪತ್ನಿಗೆ ಪವಾಡ ನಡೆದ ನಂತರ, ಅವರು ದೇವಾಲಯವನ್ನು ನವೀಕರಿಸಿದರು. ಈ ದೇವಾಲಯವು ಬ್ರಿಟಿಷ್ ಸೇನಾನಿ ದಂಪತಿಯ ಆಳವಾದ ಶಿವಭಕ್ತಿ ಮತ್ತು ನಂಬಿಕೆಯ ವಿಶಿಷ್ಟ ಕಥೆಯನ್ನು ಹೇಳುತ್ತದೆ.

Bhu Varaha Swamy: ತಿರುಪತಿ ದೇವಸ್ಥಾನಕ್ಕೆ ಹೋಗುವ ಮುನ್ನ ಭೂ ವರಾಹ ಸ್ವಾಮಿ ದರ್ಶನ ಮಾಡಲೇಬೇಕು ಯಾಕೆ ಗೊತ್ತಾ?

ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿಯ ದರ್ಶನ ಕಡ್ಡಾಯ. ವೆಂಕಟಾಚಲ ಮಹಾತ್ಮೆಯಲ್ಲಿ ಉಲ್ಲೇಖಿಸಲಾದ ದೈವಿಕ ಒಪ್ಪಂದದ ಪ್ರಕಾರ, ಭೂಮಿಯ ಮಾಲೀಕನಾದ ಭೂವರಾಹ ಸ್ವಾಮಿಯು ವೆಂಕಟೇಶ್ವರ ಸ್ವಾಮಿಗೆ ವಾಸಿಸಲು ಜಾಗ ನೀಡಿದನು. ಆದ್ದರಿಂದಲೇ ಮೊದಲು ಭೂವರಾಹ ಸ್ವಾಮಿಯನ್ನು ದರ್ಶಿಸಿದವರಿಗೆ ಮಾತ್ರ ವೆಂಕಟೇಶ್ವರ ದರ್ಶನದ ಸಂಪೂರ್ಣ ಫಲ ಲಭಿಸುತ್ತದೆ ಎಂಬ ನಂಬಿಕೆಯಿದೆ.

Pandava Sera Valley: ಪಾಂಡವರು ತಂಗಿದ್ದ ಈ ಜಾಗದಲ್ಲಿ ಇಂದಿಗೂ ಕೂಡ ಭತ್ತ ನೈಸರ್ಗಿಕವಾಗಿ ಬೆಳೆಯುತ್ತಿವೆ!

ಪಾಂಡವ ಸೆರಾ ಕಣಿವೆ ಉತ್ತರಾಖಂಡದ ಹಿಮಾಲಯದಲ್ಲಿರುವ ಒಂದು ಸುಂದರ ಹಾಗೂ ಪೌರಾಣಿಕ ತಾಣ. ಹಿಂದೂ ಮಹಾಕಾವ್ಯಗಳ ಪ್ರಕಾರ ಪಾಂಡವರು ಇಲ್ಲಿ ತಂಗಿದ್ದರೆಂದು ಉಲ್ಲೇಖವಿದೆ. ಅದ್ಭುತ ಪ್ರಕೃತಿ ಸೌಂದರ್ಯ, ಪುರಾತನ ದೇವಾಲಯಗಳು ಮತ್ತು ಆಧ್ಯಾತ್ಮಿಕ ಮಹತ್ವದಿಂದ ಕೂಡಿದೆ. ಸಾಹಸ ಪ್ರಿಯರಿಗೆ ಟ್ರೆಕ್ಕಿಂಗ್ ಹಾಗೂ ಶಾಂತಿ ಹುಡುಕುವವರಿಗೆ ಇದು ಸೂಕ್ತ ಸ್ಥಳ. ಪ್ರತಿ ವರ್ಷ ಇಲ್ಲಿ ಭತ್ತದ ತೆನೆ ಪವಾಡವೆಂಬಂತೆ ನೈಸರ್ಗಿಕವಾಗಿ ಬೆಳೆಯುತ್ತವೆ. ಇದಕ್ಕೆ ಯಾವುದೇ ಬಿತ್ತನೆ ಅಥವಾ ಕೊಯ್ಲು ಅಗತ್ಯವಿಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

Kodungallur Bhagavathy Temple: ಕೊಡುಂಗಲ್ಲೂರು ಭಗವತಿ ದೇವಾಲಯ; ಕೇರಳದ ಪ್ರಾಚೀನ ಕಾಳಿ ಶಕ್ತಿಪೀಠ ಮತ್ತು ನಿಗೂಢತೆಯ ಬಗ್ಗೆ ಮಾಹಿತಿ ಇಲ್ಲಿದೆ

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಕೊಡುಂಗಲ್ಲೂರು ಭಗವತಿ ದೇವಾಲಯವು ಪ್ರಾಚೀನ ಮತ್ತು ನಿಗೂಢತೆಗೆ ಹೆಸರಾಗಿದೆ. ಇಲ್ಲಿ ದೇವಿ ಕಾಳಿಯ ಉಗ್ರ ರೂಪದಲ್ಲಿ ನೆಲೆಸಿದ್ದು, ರಾಕ್ಷಸ ರುಂಡ ಹಿಡಿದಿರುವುದನ್ನು ಕಾಣಬಹುದು. ಪರಶುರಾಮ ಸ್ಥಾಪಿತವಾದ ಈ ದೇವಾಲಯದಲ್ಲಿ ಶಂಕರಾಚಾರ್ಯರು ಶ್ರೀ ಚಕ್ರಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಭರಣಿ ಹಬ್ಬ ಇಲ್ಲಿನ ಪ್ರಮುಖ ಉತ್ಸವ. ಈ ಪವಿತ್ರ ಸ್ಥಳವು ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುತ್ತದೆ.

Bengaluru Road Trips: ಬೆಂಗಳೂರಿನಿಂದ ರೋಡ್ ಟ್ರಿಪ್ ಹೋಗಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ

ಬೆಂಗಳೂರಿನಿಂದ ನಿಮ್ಮ ಫ್ಯಾಮಿಲಿ ಅಥವಾ ಸ್ನೇಹಿತರೊಂದಿಗೆ ರೋಡ್ ಟ್ರಿಪ್ ಹೋಗಲು ಯೋಚಿಸುತ್ತಿದ್ದೀರಾ? ಅದ್ಭುತ ಅನುಭವ ನೀಡುವ ನಂದಿಬೆಟ್ಟ, ಮೈಸೂರು, ಕೂರ್ಗ್, ಚಿಕ್ಕಮಗಳೂರು, ಊಟಿ, ವಯನಾಡ್, ಪಾಂಡಿಚೇರಿ ಸೇರಿದಂತೆ ಹಲವು ಸುಂದರ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ. ವೀಕೆಂಡ್‌ನಲ್ಲಿ ಭೇಟಿ ನೀಡಲು ಈ ಸ್ಥಳಗಳು ಉತ್ತಮ ಆಯ್ಕೆಗಳಾಗಿವೆ.

Pilgrimage Destinations: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ

ಉತ್ತರ ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳು ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಆಕರ್ಷಿಸುತ್ತಿವೆ. ಕಾಶಿ, ಅಯೋಧ್ಯೆ, ಮಥುರಾ-ವೃಂದಾವನ, ಹರಿದ್ವಾರ-ಋಷಿಕೇಶ, ವೈಷ್ಣೋ ದೇವಿ ಮತ್ತು ಅಮರನಾಥದಂತಹ ಸ್ಥಳಗಳು ಭಕ್ತಿ, ನಂಬಿಕೆ, ಶಾಂತಿ ಮತ್ತು ಅಧ್ಯಾತ್ಮಿಕ ಅನುಭವಗಳನ್ನು ನೀಡುತ್ತವೆ. ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ನೀವೂ ಯೋಚಿಸುತ್ತಿದ್ದರೆ, ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ.

Vijaya Dashami 2025: ಭಾರತದಲ್ಲಿ ದಸರಾ ಆಚರಣೆ ಕಣ್ತುಂಬಿಸಿಕೊಳ್ಳಲು ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳು

ವಿಜಯದಶಮಿ, ದಸರಾ ಎಂದೂ ಕರೆಯಲ್ಪಡುವ ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುತ್ತದೆ. ಭಾರತದಾದ್ಯಂತ ಇದನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಮೈಸೂರಿನ ಭವ್ಯ ದಸರಾ, ಕೋಲ್ಕತ್ತಾದ ದುರ್ಗಾ ಪೂಜೆಯ ವೈಭವ, ದೆಹಲಿ ಮತ್ತು ಅಹಮದಾಬಾದ್‌ನ ರಾವಣ ದಹನ ಹಾಗೂ ಛತ್ತೀಸ್‌ಗಢದ ಬಸ್ತರ್ ದಸರಾ ಸೇರಿದಂತೆ, ಭಾರತದಾದ್ಯಂತ ದಸರಾ ಹಬ್ಬವನ್ನು ವಿಭಿನ್ನ ಸಂಪ್ರದಾಯ ಮತ್ತು ಶೈಲಿಯಲ್ಲಿ ಆಚರಿಸಲಾಗುತ್ತದೆ. ಈ ಸ್ಥಳಗಳು ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿ.