Tourist Places
tourist places
Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ?
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಬೈಜನಾಥ್ ಮಹಾದೇವ್ ದೇವಾಲಯವು ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಅನನ್ಯ ಇತಿಹಾಸ ಹೊಂದಿದೆ. 19ನೇ ಶತಮಾನದಲ್ಲಿ ಅಫ್ಘಾನ್ ಯುದ್ಧದಲ್ಲಿ ಪತಿಯ ಸುರಕ್ಷತೆಗಾಗಿ ಶಿವನಿಗೆ ಪ್ರಾರ್ಥಿಸಿದ ಪತ್ನಿಗೆ ಪವಾಡ ನಡೆದ ನಂತರ, ಅವರು ದೇವಾಲಯವನ್ನು ನವೀಕರಿಸಿದರು. ಈ ದೇವಾಲಯವು ಬ್ರಿಟಿಷ್ ಸೇನಾನಿ ದಂಪತಿಯ ಆಳವಾದ ಶಿವಭಕ್ತಿ ಮತ್ತು ನಂಬಿಕೆಯ ವಿಶಿಷ್ಟ ಕಥೆಯನ್ನು ಹೇಳುತ್ತದೆ.
- Akshatha Vorkady
- Updated on: Dec 26, 2025
- 10:05 am
Bhu Varaha Swamy: ತಿರುಪತಿ ದೇವಸ್ಥಾನಕ್ಕೆ ಹೋಗುವ ಮುನ್ನ ಭೂ ವರಾಹ ಸ್ವಾಮಿ ದರ್ಶನ ಮಾಡಲೇಬೇಕು ಯಾಕೆ ಗೊತ್ತಾ?
ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿಯ ದರ್ಶನ ಕಡ್ಡಾಯ. ವೆಂಕಟಾಚಲ ಮಹಾತ್ಮೆಯಲ್ಲಿ ಉಲ್ಲೇಖಿಸಲಾದ ದೈವಿಕ ಒಪ್ಪಂದದ ಪ್ರಕಾರ, ಭೂಮಿಯ ಮಾಲೀಕನಾದ ಭೂವರಾಹ ಸ್ವಾಮಿಯು ವೆಂಕಟೇಶ್ವರ ಸ್ವಾಮಿಗೆ ವಾಸಿಸಲು ಜಾಗ ನೀಡಿದನು. ಆದ್ದರಿಂದಲೇ ಮೊದಲು ಭೂವರಾಹ ಸ್ವಾಮಿಯನ್ನು ದರ್ಶಿಸಿದವರಿಗೆ ಮಾತ್ರ ವೆಂಕಟೇಶ್ವರ ದರ್ಶನದ ಸಂಪೂರ್ಣ ಫಲ ಲಭಿಸುತ್ತದೆ ಎಂಬ ನಂಬಿಕೆಯಿದೆ.
- Akshatha Vorkady
- Updated on: Dec 24, 2025
- 10:54 am
Pandava Sera Valley: ಪಾಂಡವರು ತಂಗಿದ್ದ ಈ ಜಾಗದಲ್ಲಿ ಇಂದಿಗೂ ಕೂಡ ಭತ್ತ ನೈಸರ್ಗಿಕವಾಗಿ ಬೆಳೆಯುತ್ತಿವೆ!
ಪಾಂಡವ ಸೆರಾ ಕಣಿವೆ ಉತ್ತರಾಖಂಡದ ಹಿಮಾಲಯದಲ್ಲಿರುವ ಒಂದು ಸುಂದರ ಹಾಗೂ ಪೌರಾಣಿಕ ತಾಣ. ಹಿಂದೂ ಮಹಾಕಾವ್ಯಗಳ ಪ್ರಕಾರ ಪಾಂಡವರು ಇಲ್ಲಿ ತಂಗಿದ್ದರೆಂದು ಉಲ್ಲೇಖವಿದೆ. ಅದ್ಭುತ ಪ್ರಕೃತಿ ಸೌಂದರ್ಯ, ಪುರಾತನ ದೇವಾಲಯಗಳು ಮತ್ತು ಆಧ್ಯಾತ್ಮಿಕ ಮಹತ್ವದಿಂದ ಕೂಡಿದೆ. ಸಾಹಸ ಪ್ರಿಯರಿಗೆ ಟ್ರೆಕ್ಕಿಂಗ್ ಹಾಗೂ ಶಾಂತಿ ಹುಡುಕುವವರಿಗೆ ಇದು ಸೂಕ್ತ ಸ್ಥಳ. ಪ್ರತಿ ವರ್ಷ ಇಲ್ಲಿ ಭತ್ತದ ತೆನೆ ಪವಾಡವೆಂಬಂತೆ ನೈಸರ್ಗಿಕವಾಗಿ ಬೆಳೆಯುತ್ತವೆ. ಇದಕ್ಕೆ ಯಾವುದೇ ಬಿತ್ತನೆ ಅಥವಾ ಕೊಯ್ಲು ಅಗತ್ಯವಿಲ್ಲ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
- Akshatha Vorkady
- Updated on: Dec 19, 2025
- 2:52 pm
Kodungallur Bhagavathy Temple: ಕೊಡುಂಗಲ್ಲೂರು ಭಗವತಿ ದೇವಾಲಯ; ಕೇರಳದ ಪ್ರಾಚೀನ ಕಾಳಿ ಶಕ್ತಿಪೀಠ ಮತ್ತು ನಿಗೂಢತೆಯ ಬಗ್ಗೆ ಮಾಹಿತಿ ಇಲ್ಲಿದೆ
ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಕೊಡುಂಗಲ್ಲೂರು ಭಗವತಿ ದೇವಾಲಯವು ಪ್ರಾಚೀನ ಮತ್ತು ನಿಗೂಢತೆಗೆ ಹೆಸರಾಗಿದೆ. ಇಲ್ಲಿ ದೇವಿ ಕಾಳಿಯ ಉಗ್ರ ರೂಪದಲ್ಲಿ ನೆಲೆಸಿದ್ದು, ರಾಕ್ಷಸ ರುಂಡ ಹಿಡಿದಿರುವುದನ್ನು ಕಾಣಬಹುದು. ಪರಶುರಾಮ ಸ್ಥಾಪಿತವಾದ ಈ ದೇವಾಲಯದಲ್ಲಿ ಶಂಕರಾಚಾರ್ಯರು ಶ್ರೀ ಚಕ್ರಗಳನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಭರಣಿ ಹಬ್ಬ ಇಲ್ಲಿನ ಪ್ರಮುಖ ಉತ್ಸವ. ಈ ಪವಿತ್ರ ಸ್ಥಳವು ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭವ ನೀಡುತ್ತದೆ.
- Akshatha Vorkady
- Updated on: Dec 12, 2025
- 12:03 pm
Bengaluru Road Trips: ಬೆಂಗಳೂರಿನಿಂದ ರೋಡ್ ಟ್ರಿಪ್ ಹೋಗಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ
ಬೆಂಗಳೂರಿನಿಂದ ನಿಮ್ಮ ಫ್ಯಾಮಿಲಿ ಅಥವಾ ಸ್ನೇಹಿತರೊಂದಿಗೆ ರೋಡ್ ಟ್ರಿಪ್ ಹೋಗಲು ಯೋಚಿಸುತ್ತಿದ್ದೀರಾ? ಅದ್ಭುತ ಅನುಭವ ನೀಡುವ ನಂದಿಬೆಟ್ಟ, ಮೈಸೂರು, ಕೂರ್ಗ್, ಚಿಕ್ಕಮಗಳೂರು, ಊಟಿ, ವಯನಾಡ್, ಪಾಂಡಿಚೇರಿ ಸೇರಿದಂತೆ ಹಲವು ಸುಂದರ ತಾಣಗಳ ಬಗ್ಗೆ ಮಾಹಿತಿ ಇಲ್ಲಿದೆ. ವೀಕೆಂಡ್ನಲ್ಲಿ ಭೇಟಿ ನೀಡಲು ಈ ಸ್ಥಳಗಳು ಉತ್ತಮ ಆಯ್ಕೆಗಳಾಗಿವೆ.
- Akshatha Vorkady
- Updated on: Dec 11, 2025
- 5:26 pm
Pilgrimage Destinations: ಉತ್ತರ ಭಾರತದ ಅತ್ಯುತ್ತಮ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಯೋಚಿಸುತ್ತಿದ್ದೀರಾ? ಉಪಯುಕ್ತ ಮಾಹಿತಿ ಇಲ್ಲಿದೆ
ಉತ್ತರ ಭಾರತದ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳು ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಆಕರ್ಷಿಸುತ್ತಿವೆ. ಕಾಶಿ, ಅಯೋಧ್ಯೆ, ಮಥುರಾ-ವೃಂದಾವನ, ಹರಿದ್ವಾರ-ಋಷಿಕೇಶ, ವೈಷ್ಣೋ ದೇವಿ ಮತ್ತು ಅಮರನಾಥದಂತಹ ಸ್ಥಳಗಳು ಭಕ್ತಿ, ನಂಬಿಕೆ, ಶಾಂತಿ ಮತ್ತು ಅಧ್ಯಾತ್ಮಿಕ ಅನುಭವಗಳನ್ನು ನೀಡುತ್ತವೆ. ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ನೀವೂ ಯೋಚಿಸುತ್ತಿದ್ದರೆ, ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ.
- Akshatha Vorkady
- Updated on: Dec 9, 2025
- 1:44 pm
Vijaya Dashami 2025: ಭಾರತದಲ್ಲಿ ದಸರಾ ಆಚರಣೆ ಕಣ್ತುಂಬಿಸಿಕೊಳ್ಳಲು ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳು
ವಿಜಯದಶಮಿ, ದಸರಾ ಎಂದೂ ಕರೆಯಲ್ಪಡುವ ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾರುತ್ತದೆ. ಭಾರತದಾದ್ಯಂತ ಇದನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಮೈಸೂರಿನ ಭವ್ಯ ದಸರಾ, ಕೋಲ್ಕತ್ತಾದ ದುರ್ಗಾ ಪೂಜೆಯ ವೈಭವ, ದೆಹಲಿ ಮತ್ತು ಅಹಮದಾಬಾದ್ನ ರಾವಣ ದಹನ ಹಾಗೂ ಛತ್ತೀಸ್ಗಢದ ಬಸ್ತರ್ ದಸರಾ ಸೇರಿದಂತೆ, ಭಾರತದಾದ್ಯಂತ ದಸರಾ ಹಬ್ಬವನ್ನು ವಿಭಿನ್ನ ಸಂಪ್ರದಾಯ ಮತ್ತು ಶೈಲಿಯಲ್ಲಿ ಆಚರಿಸಲಾಗುತ್ತದೆ. ಈ ಸ್ಥಳಗಳು ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿ.
- Akshatha Vorkady
- Updated on: Oct 2, 2025
- 11:27 am
ಮಹಾನವಮಿ ದಿಬ್ಬದ ಮುಂದೆ ಕಾಮನಬಿಲ್ಲು: ಅಪರೂಪದ ದೃಶ್ಯಕ್ಕೆ ಪ್ರವಾಸಿಗರು ಫಿದಾ!
ವಿಜಯನಗರದ ಹೊಸಪೇಟೆ ತಾಲುಕಿನ ಹಂಪಿ ಮಹಾನವಮಿ ದಿಬ್ಬ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ದಿಬ್ಬದ ಮೇಲೆ ಕಾಮನಬಿಲ್ಲು ಕಾಣಿಸಿಕೊಂಡಿರುವುದು ಪ್ರವಾಸಿಗರಿಗೆ ಇನ್ನಷ್ಟು ಮುದ ನೀಡಿದೆ. ಈ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಪ್ರವಾಸಿಗರು ಧಾವಿಸುತ್ತಿದ್ದಾರೆ. ವೀಡಿಯೋ ಇಲ್ಲಿದೆ.
- Bhavana Hegde
- Updated on: Sep 25, 2025
- 12:22 pm
ಕರ್ನಾಟಕದಲ್ಲಿವೆ ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳು! ಅತಿ ಹೆಚ್ಚು ಯಾವ ಜಿಲ್ಲೆಯಲ್ಲಿದೆ ಗೊತ್ತಾ?
ಕರ್ನಾಟಕ ಮೊದಲಿನಿಂದಲೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇದೆ.ಕರ್ನಾಟಕ ಸುಮಾರು 1275 ಪ್ರವಾಸಿ ತಾಣಗಳನ್ನು( Tourism Destination) ಹೊಂದಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಹೋಸ ರೂಪ ನೀಡುವುದಕ್ಕಾಗಿ ಅವನ್ನು ಅಭಿವೃದ್ಧಿ ಪಡಿಸುವುದಾಗಿ ಕರ್ನಾಟಕ ಪ್ರವಾಸೊದ್ಯಮ ಸಚಿವ ಎಚ್ ಕೆ ಪಾಟಿಲ್ ಹೇಳಿದ್ದಾರೆ.
- Bhavana Hegde
- Updated on: Sep 18, 2025
- 8:52 am
Largest Ganesh Temple: ಏಷ್ಯಾದ ಅತಿದೊಡ್ಡ ಗಣಪತಿ ದೇವಾಲಯವಿದು; 56 ಅಡಿ ಎತ್ತರದ ಗಣೇಶನಿಗೆ ಇಲ್ಲಿ ವಿಶೇಷ ಪೂಜೆ
ಅಹಮದಾಬಾದ್ನ ಸಿದ್ಧಿವಿನಾಯಕ ದೇವಸ್ಥಾನವು ಏಷ್ಯಾದ ಅತಿದೊಡ್ಡ ಗಣೇಶ ದೇವಸ್ಥಾನ ಎಂದು ಹೆಸರಾಗಿದೆ. 56 ಅಡಿ ಎತ್ತರದ ಗಣೇಶನ ವಿಗ್ರಹ ಮತ್ತು 6 ಲಕ್ಷ ಚದರ ಅಡಿ ವಿಸ್ತೀರ್ಣದ ಈ ದೇವಸ್ಥಾನವು ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಗುಜರಾತ್ನ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ ಮತ್ತು ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.
- Akshatha Vorkady
- Updated on: Aug 22, 2025
- 12:06 pm
Parasailing: ಪ್ಯಾರಾಸೈಲಿಂಗ್ ಮಾಡೋ ಆಸೆ ಇದ್ಯಾ? ಭಾರತದ ಈ ಸ್ಥಳಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಆನಂದಿಸಿ
ಭಾರತದಲ್ಲಿ ಪ್ಯಾರಾಸೈಲಿಂಗ್ ಅನ್ನು ಅಗ್ಗದಲ್ಲಿ ಆನಂದಿಸಲು ಅನೇಕ ಸ್ಥಳಗಳಿವೆ. ಮನಾಲಿ, ಗೋವಾ, ಅಲಿಬಾಗ್, ಲಕ್ಷದ್ವೀಪ ಮತ್ತು ಅಂಡಮಾನ್ ದ್ವೀಪಗಳಲ್ಲಿ ಪ್ಯಾರಾಸೈಲಿಂಗ್ನ ಅನುಭವವನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು. ಪ್ರತಿ ಸ್ಥಳದ ವೈಶಿಷ್ಟ್ಯಗಳು ಮತ್ತು ಬೆಲೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಸುಂದರವಾದ ನೈಸರ್ಗಿಕ ದೃಶ್ಯಗಳನ್ನು ಕಣ್ತುಂಬಿಕೊಂಡು ಆಕಾಶದಲ್ಲಿ ಹಾರಲು ಇದು ಅದ್ಭುತ ಅವಕಾಶ.
- Akshatha Vorkady
- Updated on: Aug 6, 2025
- 3:55 pm
Varanasi Tour: ನೀವು ವಾರಣಾಸಿಗೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಹೋಗುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ನೀವು ಬನಾರಸ್ಗೆ ಹೋಗುತ್ತಿದ್ದರೆ, ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಪ್ರವಾಸದ ಆನಂದವನ್ನು ಹಾಳುಮಾಡಬಹುದು. ಆದ್ದರಿಂದ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಗಂಗಾ ಆರತಿಯನ್ನು ದೋಣಿಯಿಂದ ನೋಡುವುದು, ಗೋಡೌಲಿಯಾ ಚೌಕ್ ಬಳಿ ಹೋಟೆಲ್ ಬುಕ್ ಮಾಡುವುದು, ದೊಡ್ಡ ರೆಸ್ಟೋರೆಂಟ್ಗಳಲ್ಲಿ ಊಟ ಮಾಡುವುದು ಮತ್ತು ಆತುರದಲ್ಲಿ ಪ್ರವಾಸ ಮಾಡುವುದು ಈ ತಪ್ಪುಗಳಲ್ಲಿ ಸೇರಿವೆ.
- Akshatha Vorkady
- Updated on: Jun 20, 2025
- 8:17 am