Tourist Places
tourist places
ಜಪಾನ್ನಲ್ಲಿದೆ ‘ಡಿವೋರ್ಸ್ ಟೆಂಪಲ್’: ಗಂಡನ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಆಸರೆಯಾಗುವ 700 ವರ್ಷ ಹಳೆಯ ಕ್ಷೇತ್ರ!
ಜಪಾನ್ನ ಕಾಮಕುರಾದಲ್ಲಿರುವ ವಿಶೇಷ 'ವಿಚ್ಛೇದನ ದೇವಾಲಯ'ವು 700 ವರ್ಷಗಳ ಇತಿಹಾಸ ಹೊಂದಿದೆ. ಪುರುಷರಿಗೆ ಮಾತ್ರ ವಿಚ್ಛೇದನ ಹಕ್ಕು ಇದ್ದ ಕಾಲದಲ್ಲಿ, ಗೃಹ ಹಿಂಸೆಗೆ ಒಳಗಾದ ಮಹಿಳೆಯರಿಗೆ ಇದು ಸುರಕ್ಷಿತ ಆಶ್ರಯ, ಮಾನಸಿಕ ಶಾಂತಿ ಮತ್ತು ಕಾನೂನುಬದ್ಧ ವಿಚ್ಛೇದನ ನೀಡುವ ಕೇಂದ್ರವಾಗಿತ್ತು. ಮಹಿಳಾ ಸನ್ಯಾಸಿನಿ ಕಾಕುಸನ್ ಶಿಡೋ ಸ್ಥಾಪಿಸಿದ ಈ ದೇವಾಲಯವು ಅಸಹಾಯಕ ಮಹಿಳೆಯರಿಗೆ ಹೊಸ ಬದುಕು ನೀಡುವ ಮೂಲಕ ಸಬಲೀಕರಣದ ಸಂಕೇತವಾಗಿ ನಿಂತಿದೆ.
- Akshatha Vorkady
- Updated on: Sep 13, 2026
- 2:59 pm
ಹಿಮಾಲಯದ 12,778 ಅಡಿ ಎತ್ತರದಲ್ಲಿದೆ ವಿಶ್ವದ ಅತಿ ಎತ್ತರದ ಕೃಷ್ಣ ಮಂದಿರ: ಯುಲ್ಲಾ ಕಾಂಡದ ಪೌರಾಣಿಕ ರಹಸ್ಯ ಇಲ್ಲಿದೆ!
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡದಲ್ಲಿ ವಿಶ್ವದ ಅತಿ ಎತ್ತರದ ಶ್ರೀಕೃಷ್ಣ ದೇವಾಲಯವಿದೆ. ಸಮುದ್ರ ಮಟ್ಟದಿಂದ 12,778 ಅಡಿ ಎತ್ತರದಲ್ಲಿರುವ ಈ ದೇವಾಲಯವು ಮಹಾಭಾರತ ಕಾಲದ ನಂಬಿಕೆ, ಸಾಹಸಮಯ 12 ಕಿ.ಮೀ ಚಾರಣ ಮತ್ತು ಕಿನ್ನೌರಿ ಟೋಪಿ ಸಂಪ್ರದಾಯಗಳಿಗೆ ಹೆಸರುವಾಸಿ. ಮೋಡಗಳ ನಡುವೆ ದೈವಿಕ ಅನುಭವ ನೀಡುವ ಈ ಪುಣ್ಯಕ್ಷೇತ್ರ ಮೇ-ಅಕ್ಟೋಬರ್ನಲ್ಲಿ ಭಕ್ತರಿಗೆ ತೆರೆದಿರುತ್ತದೆ.
- Akshatha Vorkady
- Updated on: Sep 5, 2026
- 9:30 am
ಭೂಲೋಕ ವೈಕುಂಠ ಗುರುವಾಯೂರು: ಶ್ರೀಕೃಷ್ಣನ ದಿವ್ಯಕ್ಷೇತ್ರದ ಪೌರಾಣಿಕ ಕಥೆ ಇಲ್ಲಿ ತಿಳಿಯಿರಿ
ಗುರುವಾಯೂರು ಶ್ರೀಕೃಷ್ಣ ದೇವಾಲಯವು ಕೇರಳದ ಪ್ರಸಿದ್ಧ ಯಾತ್ರಾಸ್ಥಳವಾಗಿದೆ, ಇದನ್ನು ‘ಭೂಲೋಕ ವೈಕುಂಠ’ ಮತ್ತು ‘ದಕ್ಷಿಣ ದ್ವಾರಕೆ’ ಎಂದು ಕರೆಯುತ್ತಾರೆ. ಗುರುವಾಯೂರು ಹೆಸರು ಗುರು ಮತ್ತು ವಾಯು ದೇವರಿಂದ ಬಂದಿದ್ದು, ಇಲ್ಲಿ ಬಾಲಕೃಷ್ಣನನ್ನು 'ಗುರುವಾಯೂರಪ್ಪ' ಎಂದು ಪೂಜಿಸಲಾಗುತ್ತದೆ. ಭಕ್ತರಿಗೆ ಆಧ್ಯಾತ್ಮಿಕ ಶಾಂತಿ, ಇಷ್ಟಾರ್ಥ ಸಿದ್ಧಿ ಮತ್ತು ಮೋಕ್ಷ ಕರುಣಿಸುವ ಈ ದಿವ್ಯ ಕ್ಷೇತ್ರವು ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.
- Akshatha Vorkady
- Updated on: Sep 4, 2026
- 9:03 am
Tiruvannamalai: ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಾಲಯದಲ್ಲಿ ಮೊಬೈಲ್ ನಿಷೇಧ; ಸೆ.01 ರಿಂದ ಹೊಸ ನಿಯಮ ಜಾರಿ!
ತಮಿಳುನಾಡಿನ ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಾಲಯದಲ್ಲಿ ಸೆಪ್ಟೆಂಬರ್ 1 ರಿಂದ ಮೊಬೈಲ್ ಫೋನ್ಗಳ ನಿಷೇಧ ಜಾರಿಗೆ ಬರಲಿದೆ. ದೇವಾಲಯದ ಪಾವಿತ್ರ್ಯ ಕಾಪಾಡಲು, ಗರ್ಭಗುಡಿಯಲ್ಲಿ ಫೋಟೋ ಹಾಗೂ ವೀಡಿಯೋ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.
- Akshatha Vorkady
- Updated on: Aug 21, 2026
- 4:35 pm
Discover Mana: ಭಾರತದ ಮೊದಲ ಗ್ರಾಮ ‘ಮಾನಾ’; ಪಾಂಡವರು ಸ್ವರ್ಗಕ್ಕೆ ತೆರಳಿದ ಪವಿತ್ರ ಭೂಮಿಯ ರೋಚಕ ಕಥೆ!
ಮಾನಾ ಗ್ರಾಮವು ಉತ್ತರಾಖಂಡದ 'ದೇವಭೂಮಿ'ಯಲ್ಲಿರುವ ಭಾರತದ ಮೊದಲ ಹಳ್ಳಿ. ಬದರಿನಾಥ ಸಮೀಪದ ಈ ಗ್ರಾಮವು ಪಾಂಡವರ ಸ್ವರ್ಗಾರೋಹಣ ಮಾರ್ಗ, ಗುಪ್ತಗಾಮಿನಿ ಸರಸ್ವತಿ ನದಿ ಮತ್ತು ಭೀಮಪುಲ್ನಂತಹ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಹಿಮಾಲಯದ ಸುಂದರ ಮಡಿಲಿನಲ್ಲಿರುವ ಮಾನಾ, ವೈಬ್ರೆಂಟ್ ವಿಲೇಜ್ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುತ್ತದೆ. ಇದರ ವಿಶಿಷ್ಟ ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯ ಮನಸೆಳೆಯುತ್ತದೆ.
- Akshatha Vorkady
- Updated on: Aug 18, 2026
- 4:37 pm
Nag Panchami 2026: ಭಾರತದ ಅತ್ಯಂತ ಪ್ರಸಿದ್ಧ 6 ನಾಗ ದೇವಾಲಯಗಳ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ ಇಲ್ಲಿದೆ
ಭಾರತದಲ್ಲಿ ಹಾವಿನ ಆರಾಧನೆ ಪ್ರಾಚೀನ ಸಂಪ್ರದಾಯ. ಶಿವನ ಆಭರಣವಾದ ವಾಸುಕಿ, ಆದಿಶೇಷ ಸೇರಿದಂತೆ ಸರ್ಪಗಳನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ನಾಗ ಪಂಚಮಿಯಂದು ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಉಜ್ಜಯಿನಿ ನಾಗಚಂದ್ರೇಶ್ವರ, ಮನ್ನಾರಸಾಲ, ನಾಗರಕೋಯಿಲ್ ನಾಗರಾಜ, ಪ್ರಯಾಗರಾಜ್ ನಾಗವಾಸುಕಿ ಮತ್ತು ತಿರುನಾಗೇಶ್ವರಂ ಸೇರಿದಂತೆ ಭಾರತದ 6 ಪ್ರಮುಖ ನಾಗ ದೇವಾಲಯಗಳ ಪ್ರಾಮುಖ್ಯತೆ, ನಂಬಿಕೆಗಳು ಮತ್ತು ಆಚರಣೆಗಳನ್ನು ವಿವರಿಸಲಾಗಿದೆ.
- Akshatha Vorkady
- Updated on: Aug 13, 2026
- 7:46 am
ಅಮರನಾಥಕ್ಕಿಂತಲೂ ಕಠಿಣ ಶ್ರೀಖಂಡ ಮಹಾದೇವ ಯಾತ್ರೆ; 72 ಅಡಿ ಎತ್ತರದ ನೈಸರ್ಗಿಕ ಶಿವಲಿಂಗದ ವೈಶಿಷ್ಟ್ಯ ಇಲ್ಲಿ ತಿಳಿಯಿರಿ
ಸಮುದ್ರ ಮಟ್ಟದಿಂದ 18,570 ಅಡಿ ಎತ್ತರದಲ್ಲಿರುವ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪವಿತ್ರ ಶ್ರೀಖಂಡ ಮಹಾದೇವ ಯಾತ್ರೆಗಾಗಿ ಸಾವಿರಾರು ಭಕ್ತರು ಕಾಯುತ್ತಿದ್ದಾರೆ ಆದರೆ ಹವಾಮಾನ ವೈಪರೀತ್ಯ ಹಾಗೂ ಸುರಕ್ಷತಾ ಕಾರಣಗಳಿಂದಾಗಿ ಈ ವರ್ಷದ ಯಾತ್ರೆಯನ್ನು ಆಡಳಿತ ಮಂಡಳಿಯು ಮುಂದೂಡಿದೆ. ಅಮರನಾಥ ಯಾತ್ರೆಗಿಂತ ಅತ್ಯಂತ ಸವಾಲಿನದ್ದಾದ ಈ ಯಾತ್ರೆಯ ಪೌರಾಣಿಕ ಮಹತ್ವ ಹಾಗೂ ಕಠಿಣ ದಾರಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
- Akshatha Vorkady
- Updated on: Aug 4, 2026
- 3:44 pm
Gangeshwar Mahadev Temple: ಸಮುದ್ರದ ಅಲೆಗಳೇ ಶಿವನಿಗೆ ಅಭಿಷೇಕ ಮಾಡುವ ಅದ್ಭುತ ಕ್ಷೇತ್ರ; ಪಾಂಡವರು ಪ್ರತಿಷ್ಠಾಪಿಸಿದ ಪಂಚ ಶಿವಲಿಂಗಗಳ ವಿಶೇಷತೆ ಇಲ್ಲಿದೆ
ಭಾರತದ ಅನೇಕ ಪ್ರಾಚೀನ ಶಿವ ದೇವಾಲಯಗಳು ತಮ್ಮ ಪೌರಾಣಿಕ ಹಿನ್ನೆಲೆ ಮತ್ತು ಅದ್ಭುತ ವೈಶಿಷ್ಟ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಒಂದು ಗುಜರಾತ್ನ ದಿಯು ಸಮೀಪವಿರುವ ಗಂಗೇಶ್ವರ ಮಹಾದೇವ ದೇವಾಲಯ. ಇದಯ ಸಮುದ್ರದ ಅಲೆಗಳೇ ಶಿವನಿಗೆ ಅಭಿಷೇಕ ಮಾಡುವ ಅದ್ಭುತ ಕ್ಷೇತ್ರ. ಈ ದೇವಾಲಯದ ವಿಶೇಷತೆ ಏನು? ಪಾಂಡವರು ಪ್ರತಿಷ್ಠಾಪಿಸಿದ ಪಂಚ ಶಿವಲಿಂಗಗಳು ಹಾಗೂ ಈ ಕ್ಷೇತ್ರದ ಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
- Akshatha Vorkady
- Updated on: Jul 30, 2026
- 2:54 pm
Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದ ಆರು ದಿನಗಳ ಕಾಲ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯು ಶನಿವಾರದಂದು ಅಧಿಕೃತವಾಗಿ ಪುನರಾರಂಭಗೊಂಡಿದೆ. ಹವಾಮಾನ ಸುಧಾರಿಸಿ, ರಸ್ತೆ ತೆರವುಗೊಂಡ ನಂತರ ಹೊಸ ಯಾತ್ರಿಕರ ತಂಡಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಸದ್ಯ ಬಾಲ್ಟಾಲ್ ಮಾರ್ಗ ಮಾತ್ರ ತೆರೆದಿದ್ದು, 4 ಲಕ್ಷಕ್ಕೂ ಹೆಚ್ಚು ಭಕ್ತರು ಈಗಾಗಲೇ ಹಿಮಲಿಂಗ ದರ್ಶನ ಪಡೆದಿದ್ದಾರೆ. ಭದ್ರತಾ ಪಡೆಗಳ ಬೆಂಗಾವಲಿನಲ್ಲಿ ಯಾತ್ರೆ ಸುಗಮವಾಗಿ ಸಾಗುತ್ತಿದೆ.
- Akshatha Vorkady
- Updated on: Jul 25, 2026
- 10:27 am
Unique Frog Temple: ಭಾರತದ ಏಕೈಕ ‘ಕಪ್ಪೆ ದೇವಾಲಯ’; ಇಲ್ಲಿದೆ ಬಣ್ಣ ಬದಲಾಯಿಸುವ ಶಿವಲಿಂಗ!
ಉತ್ತರ ಪ್ರದೇಶದ ಲಖಿಂಪುರ್ನಲ್ಲಿ ಭಾರತದ ಏಕೈಕ ಕಪ್ಪೆ ದೇವಾಲಯವಿದೆ. ಕಪ್ಪೆಯ ಆಕಾರದಲ್ಲಿರುವ ಈ ಅಪರೂಪದ ಶಿವ ದೇವಾಲಯದಲ್ಲಿ ಬಣ್ಣ ಬದಲಿಸುವ ಶಿವಲಿಂಗ ಮತ್ತು ನಿಂತಿರುವ ನಂದಿಯ ವಿಗ್ರಹವಿದೆ. ಮಂಡೂಕ ತಂತ್ರಾಧಾರಿತ ವಾಸ್ತುಶಿಲ್ಪದಿಂದ ನಿರ್ಮಿಸಲಾದ ಈ 200 ವರ್ಷಗಳ ಹಳೆಯ ದೇವಾಲಯವು ಸಮೃದ್ಧಿಯ ಸಂಕೇತವಾಗಿದೆ. ಇದರ ವಿಶಿಷ್ಟ ಇತಿಹಾಸ, ವೈಶಿಷ್ಟ್ಯಗಳನ್ನು ಇಲ್ಲಿ ತಿಳಿಯಿರಿ.
- Akshatha Vorkady
- Updated on: Jul 19, 2026
- 8:38 am
Travel Tips: ಜುಲೈ ತಿಂಗಳಲ್ಲಿ ಭಾರತದ ಈ ಪ್ರಮುಖ ಪ್ರವಾಸಿ ತಾಣಗಳಿಗೆ ತಪ್ಪದೇ ಭೇಟಿ ನೀಡಿ
ಜುಲೈ ತಿಂಗಳ ಮಳೆಗಾಲದಲ್ಲಿ ಭಾರತದ ಸೌಂದರ್ಯವನ್ನು ಆಸ್ವಾದಿಸಲು ಸಿದ್ಧರಾಗಿ. ಈ ಲೇಖನದಲ್ಲಿ ಕೂರ್ಗ್, ಮೇಘಾಲಯ, ಲಡಾಖ್ ಸೇರಿದಂತೆ ದೇಶದ 7 ಅತ್ಯುತ್ತಮ ಪ್ರವಾಸ ತಾಣಗಳ ಬಗ್ಗೆ ವಿವರಿಸಲಾಗಿದೆ. ಹಚ್ಚ ಹಸಿರಿನ ಪ್ರಕೃತಿ, ಧುಮ್ಮಿಕ್ಕುವ ಜಲಪಾತಗಳು ಮತ್ತು ಸಾಂಸ್ಕೃತಿಕ ಹಬ್ಬಗಳ ಅನುಭವಕ್ಕಾಗಿ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸ್ಮರಣೀಯ ಮಳೆಗಾಲದ ಪ್ರಯಾಣವನ್ನು ಕೈಗೊಳ್ಳಿ. ಸುರಕ್ಷಿತ ಪ್ರವಾಸಕ್ಕೆ ಸಲಹೆಗಳನ್ನೂ ನೀಡಲಾಗಿದೆ.
- Akshatha Vorkady
- Updated on: Jul 4, 2026
- 4:56 pm
Pashupatinath Yatra: ರೈಲ್ವೆ ಇತಿಹಾಸದಲ್ಲೇ ಮೊದಲು; ನೇಪಾಳದ ಪಶುಪತಿನಾಥ ದರ್ಶನ ಭಾಗ್ಯ, 10ದಿನಗಳ ಆಧ್ಯಾತ್ಮಿಕ ಪ್ರಯಾಣ
ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಭಾರತ್ ಗೌರವ್ ಪ್ರವಾಸಿ ರೈಲು, IRCTC ಆಯೋಜಿಸಿದ ತನ್ನ ಮೊದಲ ಅಂತರಾಷ್ಟ್ರೀಯ ಯಾತ್ರೆಯನ್ನು ನೇಪಾಳಕ್ಕೆ ಆರಂಭಿಸಿದೆ. ಇಂದೋರ್ನಿಂದ ಹೊರಟ 'ಪಶುಪತಿನಾಥ ನೇಪಾಳ ದರ್ಶನ ಯಾತ್ರೆ' 9 ರಾತ್ರಿ 10 ದಿನಗಳ ಪ್ರವಾಸವಾಗಿದ್ದು, ಪಶುಪತಿನಾಥ, ಪೋಖರಾ, ಚಿತ್ವಾನ್ ಸೇರಿದಂತೆ ಪ್ರಮುಖ ಆಧ್ಯಾತ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಉತ್ತಮ ಸೌಲಭ್ಯಗಳೊಂದಿಗೆ ಇದು ಸುರಕ್ಷಿತ ಮತ್ತು ಸ್ಮರಣೀಯ ಅನುಭವವನ್ನು ನೀಡಲಿದೆ.
- Akshatha Vorkady
- Updated on: May 22, 2026
- 11:23 am