Tourist Places
tourist places
Char Dham Yatra 2026: ಬದರಿನಾಥ ಧಾಮದ ಬಾಗಿಲು ಮುಕ್ತ; ಚಾರ್ಧಾಮ ಯಾತ್ರೆಗೆ ಭವ್ಯ ಚಾಲನೆ!
ಉತ್ತರಾಖಂಡದಲ್ಲಿ 2026ರ ಚಾರ್ಧಾಮ ಯಾತ್ರೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಬದರಿನಾಥ ಧಾಮದ ಬಾಗಿಲು ಅದ್ಧೂರಿಯಾಗಿ ತೆರೆಯಲ್ಪಟ್ಟಿದ್ದು, ಲಕ್ಷಾಂತರ ಭಕ್ತರ ಉತ್ಸಾಹ ಮುಗಿಲು ಮುಟ್ಟಿದೆ. ಹೂವಿನ ಅಲಂಕಾರದಿಂದ ಕಂಗೊಳಿಸಿದ ಬದ್ರಿವಿಶಾಲ್ ದರ್ಶನಕ್ಕೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಭೂಮಿಯ ವೈಕುಂಠ ಎಂದೇ ಖ್ಯಾತವಾಗಿರುವ ಈ ಪವಿತ್ರ ಕ್ಷೇತ್ರವು ಆಧ್ಯಾತ್ಮಿಕ ಮಹತ್ವದಿಂದ ಕೂಡಿದೆ.
- Akshatha Vorkady
- Updated on: Apr 23, 2026
- 1:48 pm
Hanuman Temples: ಸ್ತ್ರೀ ರೂಪದ ಹನುಮ, ತಲೆಕೆಳಗಾದ ಆಂಜನೇಯ; ಅಚ್ಚರಿ ಮೂಡಿಸುವ 5 ಅಪರೂಪದ ದೇವಾಲಯಗಳಿವು
ಭಾರತದಲ್ಲಿ ಸಾವಿರಾರು ಹನುಮ ದೇವಾಲಯಗಳಿದ್ದರೂ, ಕೆಲವು ವಿಶಿಷ್ಟ ವಿಗ್ರಹ ಶೈಲಿ, ಪೌರಾಣಿಕ ಹಿನ್ನೆಲೆಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿವೆ. ಸ್ತ್ರೀ ರೂಪ, ಮಲಗಿದ ಭಂಗಿ, ತಲೆಕೆಳಗಾದ ಆಂಜನೇಯನಂತಹ ಅಪರೂಪದ ರೂಪಗಳನ್ನು ಹೊಂದಿರುವ 5 ಪ್ರಮುಖ ದೇವಾಲಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಈ ಕ್ಷೇತ್ರಗಳು ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವ ಜೊತೆಗೆ, ಅವುಗಳ ವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ.
- Akshatha Vorkady
- Updated on: Apr 22, 2026
- 12:24 pm
TTD New Darshan Rules: ಬೇಸಿಗೆಯಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ಯಾ? ಹಾಗಿದ್ರೆ ಈ ಹೊಸ ನಿಯಮ ತಿಳಿದುಕೊಳ್ಳಿ
ಬೇಸಿಗೆ ರಜೆಯಲ್ಲಿ ತಿರುಮಲ ಭಕ್ತರ ದಟ್ಟಣೆ ಹೆಚ್ಚಿದ ಹಿನ್ನೆಲೆಯಲ್ಲಿ, ಸಾಮಾನ್ಯ ಭಕ್ತರಿಗೆ ಆದ್ಯತೆ ನೀಡಲು TTD ಮಹತ್ವದ ನಿರ್ಧಾರ ಕೈಗೊಂಡಿದೆ. ಮೇ 1 ರಿಂದ SSD ಟೋಕನ್ಗಳು ಮತ್ತು VIP ದರ್ಶನಗಳನ್ನು ರದ್ದುಗೊಳಿಸಿ, ಭಕ್ತರು 8-12 ಗಂಟೆಗಳಲ್ಲಿ ದರ್ಶನ ಪಡೆಯಲು ಅವಕಾಶ ನೀಡುವ ಯೋಜನೆಯಿದೆ. ಇದರಿಂದ ಪ್ರತಿದಿನ 80,000 ಭಕ್ತರಿಗೆ ಸುಲಭ ದರ್ಶನ ಸಾಧ್ಯವಾಗಲಿದೆ. ಬೇಸಿಗೆಯಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಇದ್ದರೆ, ಹೊರಡುವ ಮುನ್ನ ಟಿಟಿಡಿಯ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಸೂಕ್ತ.
- Akshatha Vorkady
- Updated on: Apr 14, 2026
- 5:51 pm
Maa Bagdahi Temple: ಬಡ ಕುರುಬನ ಭಕ್ತಿಗೆ ಒಲಿದ ದೇವಿ; ಕಲ್ಲುಗಳನ್ನೇ ಕಾಣಿಕೆಯಾಗಿ ಪಡೆಯುವ ವಿಶಿಷ್ಟ ಶಕ್ತಿ ಪೀಠ
ಭಾರತದಾದ್ಯಂತ ದೇವಾಲಯಗಳಲ್ಲಿ ವೈಭವದ ಅರ್ಪಣೆಗಳು ಸಾಮಾನ್ಯವಾದರೆ, ಛತ್ತೀಸ್ಗಢದ ಬಿಲಾಸ್ಪುರದಲ್ಲಿರುವ 'ಮಾ ಬಾಗದಾಯಿ' ದೇವಾಲಯವು ವಿಶಿಷ್ಟವಾಗಿದೆ. ಇಲ್ಲಿ ಭಕ್ತರು ದೇವಿಗೆ ಕೇವಲ ಐದು ಕಲ್ಲುಗಳು ಮತ್ತು ಒಂದು ಹೂವನ್ನು ಅರ್ಪಿಸುತ್ತಾರೆ. ಬಡ ಕುರುಬನ ಭಕ್ತಿ ಮತ್ತು ದೇವಿಯ ಸರಳತೆಯ ಕುರಿತಾದ ಹೃದಯಸ್ಪರ್ಶಿ ಕಥೆ ಈ ಪದ್ಧತಿಯ ಹಿಂದಿದೆ. ಮನದ ಆಸೆ ಈಡೇರಿದಾಗ ಕೃತಜ್ಞತೆ ಸಲ್ಲಿಸಲು ಕಲ್ಲುಗಳನ್ನು ಅರ್ಪಿಸುವುದು ಇಲ್ಲಿನ ನಂಬಿಕೆ.
- Akshatha Vorkady
- Updated on: Apr 8, 2026
- 1:36 pm
Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು
ಭಾರತದ ಹೊರಗೂ ಶಿವನ ಮಹಿಮೆ ಅನಂತ. ನೇಪಾಳ, ಮಲೇಷ್ಯಾ, ಶ್ರೀಲಂಕಾ, ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿರುವ ಐದು ಐತಿಹಾಸಿಕ ಶಿವಾಲಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಈ ದೇವಾಲಯಗಳು ಅದ್ಭುತ ಶಿಲ್ಪಕಲೆ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಭಾರತೀಯ ಸಂಸ್ಕೃತಿಯ ಜಾಗತಿಕ ಬೇರುಗಳನ್ನು ಸಾರುತ್ತವೆ. ನಿಮ್ಮ ವಿದೇಶಿ ಪ್ರವಾಸದಲ್ಲಿ ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ಮರೆಯಬೇಡಿ.
- Akshatha Vorkady
- Updated on: Mar 20, 2026
- 11:41 am
Kalyana Sundareswarar Temple: ದಿನಕ್ಕೆ 5 ಬಾರಿ ಬಣ್ಣ ಬದಲಾಯಿಸುವ ಶಿವಲಿಂಗ, ಈ ಅದ್ಭುತ ದೇವಸ್ಥಾನ ಎಲ್ಲಿದೆ ಗೊತ್ತಾ?
ತಂಜಾವೂರು ಜಿಲ್ಲೆಯ ನಲ್ಲೂರು ಕಲ್ಯಾಣ ಸುಂದರೇಶ್ವರ ದೇವಾಲಯವು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿನ ಅದ್ಭುತ ಶಿವಲಿಂಗವು ದಿನದಲ್ಲಿ ಐದು ಬಾರಿ ಬಣ್ಣ ಬದಲಾಯಿಸುವುದು ವಿಶೇಷ. ಚೋಳರ ಕಾಲದ ಈ ಪ್ರಾಚೀನ ದೇವಸ್ಥಾನವು ಆಧ್ಯಾತ್ಮಿಕ ಮಹತ್ವ ಪಡೆದಿದ್ದು, ತಮಿಳುನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
- Akshatha Vorkady
- Updated on: Feb 5, 2026
- 11:35 am
Null Stern Hotel: ಈ ಹೋಟೆಲ್ಗೆ ಗೋಡೆ ಇಲ್ಲ, ಛಾವಣಿಯೂ ಇಲ್ಲ, ಎಲ್ಲ ಓಪನ್; ಆದ್ರೂ ಕೂಡ ಪ್ರೇಮಿಗಳ ನೆಚ್ಚಿನ ತಾಣವಿದು
ಸ್ವಿಟ್ಜರ್ಲೆಂಡ್ನಲ್ಲಿರುವ 'ನಲ್ ಸ್ಟರ್ನ್' ಹೋಟೆಲ್ ಸಾಮಾನ್ಯ ಹೋಟೆಲ್ಗಳಂತಿಲ್ಲ. ಇಲ್ಲಿ ಗೋಡೆಗಳಿಲ್ಲ, ಛಾವಣಿಯಿಲ್ಲ. ಪರ್ವತದ ಮೇಲೆ ಕೇವಲ ಒಂದು ಹಾಸಿಗೆ ಮಾತ್ರ. ಪ್ರಕೃತಿಯ ಮಡಿಲಲ್ಲಿ ನಕ್ಷತ್ರಗಳನ್ನು ನೋಡುತ್ತಾ, ಸಂಗಾತಿಯೊಂದಿಗೆ ಏಕಾಂತ ಕಳೆಯಲು ಇದು ಹೇಳಿ ಮಾಡಿಸಿದ ತಾಣ. ಈ ವಿಶಿಷ್ಟ ಅನುಭವಕ್ಕೆ ಒಂದು ರಾತ್ರಿಗೆ 29,300 ರೂ. ಪಾವತಿಸಬೇಕು. ಇದು ಜಗತ್ತಿನ ಅತ್ಯಂತ ರೋಮ್ಯಾಂಟಿಕ್ ತಾಣಗಳಲ್ಲಿ ಒಂದಾಗಿದೆ.
- Akshatha Vorkady
- Updated on: Jan 9, 2026
- 5:45 pm
Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ
ಫ್ರಾನ್ಸ್ನ ಕ್ಯಾಪ್ ಡಿ'ಅಗ್ಡೆ ವಿಶ್ವದ ಏಕೈಕ ನಗ್ನ ನಗರ ಎಂದೇ ಹೆಸರುವಾಸಿಯಾಗಿದೆ. ಇಲ್ಲಿ ಪ್ರವಾಸಿಗರಿಗೆ ಬಟ್ಟೆ ಇಲ್ಲದೆ ತಿರುಗಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್ ಆಗಿ ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಬಟ್ಟೆ ಧರಿಸಿದರೆ ದಂಡ ಬೀಳುವ ವಿಚಿತ್ರ ನಿಯಮವೂ ಇಲ್ಲಿದೆ. ಪ್ರವಾಸಿಗರು ಇಲ್ಲಿ ಯಾವುದೇ ಬಟ್ಟೆ ಧರಿಸದೇ ಕಡಲತೀರ, ರೆಸ್ಟೋರೆಂಟ್ಗಳು, ಸೂಪರ್ಮಾರ್ಕೆಟ್ಗಳಲ್ಲಿ ಓಡಾಡುವುದನ್ನು ಕಾಣಬಹುದು.
- Akshatha Vorkady
- Updated on: Jan 7, 2026
- 5:57 pm
Magh Mela at Prayagraj: ಪ್ರಯಾಗ್ರಾಜ್ಗೆ ಮಾಘ ಮೇಳಕ್ಕೆ ಹೋಗುತ್ತಿದ್ದೀರಾ? ಹಾಗಿದ್ರೆ ಈ ಸ್ಥಳ ಮಿಸ್ ಮಾಡ್ಲೇ ಬೇಡಿ
ಪ್ರಯಾಗ್ರಾಜ್ನಲ್ಲಿ ಮಾಘ ಮೇಳ ಆರಂಭವಾಗಿದೆ. ಜನವರಿ-ಫೆಬ್ರವರಿಯಲ್ಲಿ ನಡೆಯುವ ಈ ಮೇಳದಲ್ಲಿ ಭಕ್ತರು ಕಲ್ಪವಾಸ ಮಾಡುತ್ತಾರೆ. ತಾತ್ಕಾಲಿಕ ನಗರ, ಅಖಾಡ ಭೇಟಿ ಮತ್ತು ಐತಿಹಾಸಿಕ ಸ್ಥಳಗಳ ವೀಕ್ಷಣೆಯೊಂದಿಗೆ ನೀವು ಇಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಅನನ್ಯ ಅನುಭವ ಪಡೆಯಬಹುದು. ಆದ್ದರಿಂದ ಮಾಘ ಮೇಳ ಎಂದರೇನು? ಅದರ ಮಹತ್ವ ಮತ್ತು ಪ್ರಯಾಗ್ರಾಜ್ನಲ್ಲಿ ನೋಡಲು ಯೋಗ್ಯವಾದ ಇತರ ಐತಿಹಾಸಿಕ ಸ್ಥಳಗಳ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jan 6, 2026
- 10:36 am
Guddattu Vinayaka Temple: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ
ಉಡುಪಿ ಜಿಲ್ಲೆಯ ಗುಡ್ಡಟ್ಟುವಿನಲ್ಲಿರುವ ಶ್ರೀ ವಿನಾಯಕ ದೇವಸ್ಥಾನವು ವಿಶ್ವದ ಏಕೈಕ ಜಲಾಧಿವಾಸ ಗಣಪತಿ ಕ್ಷೇತ್ರವಾಗಿದೆ. ಇಲ್ಲಿ ಗಣಪತಿಯ ಸ್ವಯಂಭೂ ವಿಗ್ರಹವು ವರ್ಷದ 365 ದಿನವೂ ಕುತ್ತಿಗೆಯವರೆಗೂ ನೀರಿನಲ್ಲಿ ಮುಳುಗಿರುತ್ತದೆ. ಜತೆಗೆ ಬಲಮುರಿ ಗಣಪತಿಯಾಗಿರುವ ಈ ದೇವಸ್ಥಾನದಲ್ಲಿ "ಆಯಿರ ಕೊಡ ಸೇವೆ" ಎಂಬ ವಿಶಿಷ್ಟ ಪೂಜೆ ನಿತ್ಯವೂ ನಡೆಯುತ್ತದೆ.
- Akshatha Vorkady
- Updated on: Jan 1, 2026
- 3:33 pm
Holidays Calendar 2026: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ
2026 ರ ಹೊಸ ವರ್ಷವು ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳೊಂದಿಗೆ ಆಗಮಿಸುತ್ತಿದೆ. ಜನವರಿ ಸೇರಿದಂತೆ ವರ್ಷವಿಡೀ ಸಿಗುವ ಲಾಂಗ್ ವೀಕೆಂಡ್ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಮತ್ತು ಪ್ರವಾಸಗಳನ್ನು ಯೋಜಿಸಲು ಈ ರಜಾ ದಿನಗಳು ಉತ್ತಮ ಅವಕಾಶವನ್ನು ನೀಡುತ್ತವೆ. ವರ್ಷದ ಎಲ್ಲಾ ದೀರ್ಘ ರಜೆಗಳನ್ನು ಇಂದೇ ಪ್ಲಾನ್ ಮಾಡಿ.
- Akshatha Vorkady
- Updated on: Jan 1, 2026
- 3:00 pm
Baijnath Mahadev Temple: ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಭಾರತದ ಏಕೈಕ ಶಿವ ದೇವಾಲಯ ಎಲ್ಲಿದೆ ಗೊತ್ತಾ?
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಬೈಜನಾಥ್ ಮಹಾದೇವ್ ದೇವಾಲಯವು ಬ್ರಿಟಿಷ್ ದಂಪತಿಯಿಂದ ಪುನರ್ನಿರ್ಮಿಸಲಾದ ಅನನ್ಯ ಇತಿಹಾಸ ಹೊಂದಿದೆ. 19ನೇ ಶತಮಾನದಲ್ಲಿ ಅಫ್ಘಾನ್ ಯುದ್ಧದಲ್ಲಿ ಪತಿಯ ಸುರಕ್ಷತೆಗಾಗಿ ಶಿವನಿಗೆ ಪ್ರಾರ್ಥಿಸಿದ ಪತ್ನಿಗೆ ಪವಾಡ ನಡೆದ ನಂತರ, ಅವರು ದೇವಾಲಯವನ್ನು ನವೀಕರಿಸಿದರು. ಈ ದೇವಾಲಯವು ಬ್ರಿಟಿಷ್ ಸೇನಾನಿ ದಂಪತಿಯ ಆಳವಾದ ಶಿವಭಕ್ತಿ ಮತ್ತು ನಂಬಿಕೆಯ ವಿಶಿಷ್ಟ ಕಥೆಯನ್ನು ಹೇಳುತ್ತದೆ.
- Akshatha Vorkady
- Updated on: Dec 26, 2025
- 10:05 am