AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್

ಮನೆಯ ಸುತ್ತಲಿನ ಗಿಡ ಮರಗಳ ತರಗಲೆಗಳನ್ನು ಬಳಸಿ, ಸಾವಯವ ಗೊಬ್ಬರ ತಯಾರಿಸಿದ್ದು, ಪೂರ್ತಿ ತರಕಾರಿ ಕೃಷಿಯನ್ನು ಸಾವಯವ ‌ರೀತಿಯಲ್ಲಿ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಉಡುಪಿ ಜಿಲ್ಲಾಧಿಕಾರಿಯ ಕೃಷಿ ಆಸಕ್ತಿ; ಮನೆಯ ಪಕ್ಕದಲ್ಲೇ ತರಕಾರಿ ಬೆಳೆದು ಇತರರಿಗೆ ಮಾದರಿಯಾದ ಜಿ. ಜಗದೀಶ್
ಕೃಷಿ ಕಾರ್ಯದಲ್ಲಿ ತೊಡಗಿರುವ ಉಡುಪಿ ಜಿಲ್ಲಾಧಿಕಾರಿ
preethi shettigar
| Updated By: ganapathi bhat|

Updated on: Mar 28, 2021 | 10:05 PM

Share

ಉಡುಪಿ: ವೃತ್ತಿಯಲ್ಲಿ ಜಿಲ್ಲಾಧಿಕಾರಿಯಾಗಿದ್ದರು, ಪ್ರವೃತ್ತಿಯಾಗಿ ಕೃಷಿ ಮಾಡುವುದರಲ್ಲಿ ಮುಂದಾಗಿರುವ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯ ಉತ್ಸಾಹ ನಿಜಕ್ಕೂ ಇತರರಿಗೆ ಮಾದರಿ. ತಾನೋರ್ವ ಐಎಎಸ್ ಅಧಿಕಾರಿ ಎಂದು ಹಮ್ಮು ಬಿಮ್ಮಿಲ್ಲದೇ ತನ್ನ ಬಂಗ್ಲೆಯ ಸುತ್ತಲೂ ಸಾವಯವ ತರಕಾರಿ ಕೃಷಿ ಮಡುತ್ತಿದ್ದಾರೆ ಕೃಷ್ಣನೂರಿನ ಜಿಲ್ಲಾಧಿಕಾರಿಗಳು.

ಒಬ್ಬ ರೈತ ಯಾವ ರೀತಿ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಾರೋ ಹಾಗೇ ಟಿ ಶರ್ಟ್ ಧರಿಸಿ, ಲುಂಗಿ ಕಟ್ಕೊಂಡು, ತರಕಾರಿ ಗಿಡದ ಮಧ್ಯೆ ಕಳೆ ಕೀಳುತ್ತಾ, ನೀರು ಹಾಯಿಸುತ್ತಾ ಇರುವ ಈ ವ್ಯಕ್ತಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ್. ಕಚೇರಿಯ ಒತ್ತಡದ ಕೆಲಸದ ನಡುವೆಯೇ ತರಕಾರಿ ಕೃಷಿ ಮಾಡುವುದು ಎಂದರೆ ಇವರಿಗೆ ಪಂಚ ಪ್ರಾಣ.

ಹೀಗಾಗಿ ತಮ್ಮ ಬಂಗ್ಲೆ ಸುತ್ತಲೂ ಇವರು ಹೂವಿನ ಗಿಡಗಳ ಮಧ್ಯೆಯೇ ತೊಂಡೆ, ಬೆಂಡೆ, ಟೊಮೆಟೊ, ಬಸಲೆ, ಮಟ್ಟು ಗುಳ್ಳ ಹೀಗೆ ನಾನಾ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಮನೆಯ ಸುತ್ತಲಿನ ಗಿಡ ಮರಗಳ ತರಗಲೆಗಳನ್ನು ಬಳಸಿ, ಸಾವಯವ ಗೊಬ್ಬರ ತಯಾರಿಸಿದ್ದು, ಪೂರ್ತಿ ತರಕಾರಿ ಕೃಷಿಯನ್ನು ಸಾವಯವ ‌ರೀತಿಯಲ್ಲಿ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

DC AGRICULTURE

ಗೀಡಗಳಿಗೆ ನೀರು ಹಾಕುತ್ತಿರುವ ಜಿಲ್ಲಾಧಿಕಾರಿ ಜಿ. ಜಗದೀಶ್

ಕೃಷಿ ಕುಟುಂಬದಿಂದ ಬಂದ ಇವರು ಶಾಲಾ ದಿನಗಳಲ್ಲಿ ಕೃಷಿ ಕೆಲಸಗಳನ್ನು ಮುಗಿಸಿ ಶಾಲೆಗೆ ತೆರಳುತ್ತಿದ್ದರಂತೆ. ಹೀಗಾಗಿ ಬಾಲ್ಯದಿಂದಲೂ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಕೃಷಿ ಎಂದರೆ ಇಷ್ಟ. ಉಡುಪಿಗೆ ಬಂದಾಗಿನಿಂದ ಬಂಗ್ಲೆ ಸುತ್ತ ತರಕಾರಿ ಕೃಷಿ ಮಾಡುತ್ತಿರುವ ಇವರು, ಮಾವು, ಚಿಕ್ಕು, ಹಲಸು ಹೀಗೆ ಹಲವು ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಇಷ್ಟೇ ಅಲ್ಲದೇ ಎರಡು ಜೇನುಗೂಡುಗಳನ್ನು ಇಟ್ಟು ಜೇನು ಕೃಷಿಯನ್ನು ಮಾಡುತ್ತಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಕೃಷಿ ಕಾರ್ಯದಲ್ಲಿ ಜಿಲ್ಲಾಧಿಕಾರಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

DC AGRICULTURE

ಬೆಂಡೆ ಗೀಡ

ಒತ್ತಡದ ಕೆಲಸದ ರಿಲ್ಯಾಕ್ಸ್​ಗೆ ಇದು ಸಹಕಾರಿ. ಜೊತೆಗೆ ಮನೆಗೆ ಬೇಕಾದ ಪೌಷ್ಟಿಕಾಂಶ ತರಕಾರಿ ಇಲ್ಲೇ ಸಿಕ್ಕಂತಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕಲಬೆರಕೆ ಜೇನು ಸೇವನೆ ಬದಲು ನಾವೇ ತಯಾರಿಸಿದ ಜೇನು ಉತ್ತಮ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

DC AGRICULTURE

ಡಿಸಿ ಮನೆಯ ಪಕ್ಕದಲ್ಲಿಯೇ ತರಕಾರಿ ಬೆಳೆದಿದ್ದಾರೆ

ಒಟ್ಟಿನಲ್ಲಿ ಹಳ್ಳಿ ಮಂದಿಯೇ ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರುವ ಈ ಕಾಲಘಟ್ಟದಲ್ಲಿ ಡಿಸಿಯವರ ಕೃಷಿ ಪ್ರೀತಿ ಮೆಚ್ಚುವಂತದ್ದು. ವೈಟ್ ಕಾಲರ್ ಕೆಲಸ ಬೇಕು ಎಂದು ಕೃಷಿಯನ್ನು ಕೀಳಾಗಿ ಕಾಣುವವರಿಗೆ ಜಿಲ್ಲಾಧಿಕಾರಿಯ ಈ ಕಾರ್ಯ ನಿಜಕ್ಕೂ ಮಾದರಿಯಾಗಲಿದೆ.

ಇದನ್ನೂ ಓದಿ:

ಪರಿಸರ ಕಾಳಜಿಯಿಂದ ಇತರರಿಗೆ ಮಾದರಿಯಾದ ವಿಜಯಪುರದ ಯುವಕರು

Mann Ki Baat: ಜೇನುಕೃಷಿಯನ್ನು ಆದಾಯದ ಮಾರ್ಗವಾಗಿ ರೈತರು ಸದುಪಯೋಗಪಡಿಸಿಕೊಳ್ಳಬೇಕು; ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!