AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ.

Viral Video: ಚಾಲಾಕಿ ಹಕ್ಕಿಯ ನಾಟಕ ನೋಡಿ ಬೆಕ್ಕು ಮೂರ್ಖವಾಯ್ತು..; ಏಪ್ರಿಲ್​ ಫೂಲ್ ಡೇ ಸ್ಪೆಶಲ್ ವಿಡಿಯೋ ಇದು​
ಬೆಕ್ಕು ಮತ್ತು ಹಕ್ಕಿ
Lakshmi Hegde
|

Updated on: Apr 01, 2021 | 8:01 PM

Share

ಇಂದು ಏಪ್ರಿಲ್​ 1.. ಮೂರ್ಖರ ದಿನ. ಇಷ್ಟೊತ್ತಿಗೆ ನೀವು ಯಾರನ್ನಾದರೂ ಮೂರ್ಖರನ್ನಾಗಿ ಮಾಡಿರುತ್ತೀರಿ, ಹಾಗೇ ಯಾರಾದರೂ ನಿಮ್ಮನ್ನು ಫೂಲ್​ ಮಾಡಿರಲೂಬಹುದು. ಆದರೆ ಇಲ್ಲೊಂದು ಹಕ್ಕಿ, ಬೆಕ್ಕಿಗೆ ಅದ್ಭುತವಾಗಿ ಏಪ್ರಿಲ್​ ಫೂಲ್ ಮಾಡಿದೆ. ಈ ವಿಡಿಯೋ ನೋಡಿದರೆ ನೀವು ನಿಜಕ್ಕೂ ಹೊಟ್ಟೆ ನೋವು ಬರುವಷ್ಟು ನಗುತ್ತೀರಿ.

ವಿಡಿಯೋ ಹಳೇಯದ್ದು. ಯಾವಾಗ, ಎಲ್ಲಿ ಚಿತ್ರೀಕರಿಸಿದ್ದು ಗೊತ್ತಿಲ್ಲ. ಆದರೆ ಇಂದು ಐಎಫ್​ಎಸ್​ ಅಧಿಕಾರಿ ಸುಶಾಂತಾ ನಂದ್​ ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ಇಂದಿನ ಏಪ್ರಿಲ್​ ಫೂಲ್ ದಿನಕ್ಕೆ ಕರೆಕ್ಟ್​ ಆಗಿ ಹೊಂದಿಕೊಳ್ಳುತ್ತದೆ. ಒಂದು ಬೆಕ್ಕು ನೆಲದ ಮೇಲೆ ಮಲಗಿರುತ್ತದೆ. ಹಾಗೇ, ಹಕ್ಕಿಯೊಂದಿಗೆ ಆಟವಾಡುತ್ತಿರುತ್ತದೆ. ಆ ಹಕ್ಕಿ ಕೂಡ ಉಲ್ಟಾ ಆಗಿ ಬಿದ್ದಿದ್ದು, ಥೇಟ್​ ಸತ್ತಂತೆಯೇ ಗೋಚರಿಸುತ್ತದೆ. ಆದರೆ ಒಂದೇ ಕ್ಷಣ.. ಆ ಹಕ್ಕಿ ಪುರ್ರನೆ ಹಾರಿ ಹೋಗುತ್ತದೆ. ಬೆಕ್ಕೂ ಕೂಡ ಶಾಕ್ ಆಗುತ್ತದೆ. ಅದನ್ನು ಹಿಡಿಯಲು ಪ್ರಯತ್ನಿಸಿ, ಆಗದೆ ಸುಮ್ಮನೆ ಮಲಗುತ್ತದೆ.

ವಿಡಿಯೋ ನೋಡಲು ಪ್ರಾರಂಭಿಸಿದಾಗ ಬೆಕ್ಕಿಗೇನು, ನಿಮಗೂ ಗೊತ್ತಾಗುವುದಿಲ್ಲ ಆ ಹಕ್ಕಿ ಸತ್ತಿಲ್ಲ ಎಂದು. ಅಷ್ಟು ಚೆನ್ನಾಗಿ ಅದು ನಾಟಕವಾಡಿದ್ದು ವಿಡಿಯೋದಲ್ಲಿ ಕಾಣುತ್ತದೆ. ನೆಟ್ಟಿಗರಂತೂ ಬೆಕ್ಕನ್ನು ನೋಡಿ ಅಯ್ಯೋ ಪಾಪ ಎಂದಿದ್ದಾರೆ. ಹಾರುತ್ತಿರುವ ಹಕ್ಕಿಯನ್ನು ಹಿಡಿಯಲು ಯತ್ನಿಸಿದರೂ ಬೆಕ್ಕು ವಿಫಲವಾಗುವುದನ್ನು ನೋಡಿದ ಜನರು, ಹಕ್ಕಿ ಬೆಕ್ಕನ್ನು ಹೀಗೆ ಏಪ್ರಿಲ್ ಫೂಲ್ ಮಾಡುವುದಾ ಎಂದು ನಗುತ್ತ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಖುಷಿ ಯಾರಿಗೆ ಬೇಡ? ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಎಂಟ್ರಿಕೊಟ್ಟ ಸಿಗರೇಟ್ ಜಾಗೃತಿ​ ಜಾಹೀರಾತಿನ ಬಾಲನಟಿ

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು

Follow Us
Lakshmi Hegde
Lakshmi Hegde
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಬುಡಸಮೇತ ರಸ್ತೆ ಮೇಲೆ ಉರುಳಿಬಿದ್ದ ಬೃಹತ್​ ಮರ: ಶಂಕರಮಠ ರಸ್ತೆ ಬಂದ್!
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಶುಭ್​ಮನ್ ಗಿಲ್ ಸುನಾಮಿಗೆ ಸೃಷ್ಟಿಯಾದ ದಾಖಲೆಗಳಿವು
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆರ್ಭಟ: ಹತ್ತಾರು ಅವಾಂತರ; ಮರಗಳು ಧರೆಗೆ!
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ