AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು.

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು
ಆಧಾರ್​-ಪಾನ್​ ಲಿಂಕ್​ಗೆ ಸಂಬಂಧಿಸಿದ ಫನ್ನಿ ಪೋಸ್ಟ್​
Lakshmi Hegde
|

Updated on:Apr 01, 2021 | 7:34 PM

Share

ಆಧಾರ್​ಕಾರ್ಡ್​-ಪಾನ್​ಕಾರ್ಡ್​ ಲಿಂಕ್ ಮಾಡಿಕೊಳ್ಳಲು ಮಾರ್ಚ್​ 31 ಕೊನೇ ದಿನ ಎಂದು ಹೇಳಿತ್ತು. ಈ ದಿನಾಂಕದ ಒಳಗೆ ಆಧಾರ್​-ಪಾನ್​ ಲಿಂಕ್ ಮಾಡಿಕೊಳ್ಳದೆ ಹೋದರೆ 1000 ರೂ.ದಂಡ ತುಂಬಬೇಕಾಗುತ್ತದೆ. ಅಲ್ಲದೆ, ಪಾನ್​ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದೂ ಹೇಳಿತ್ತು. ಆಧಾರ್​-ಪಾನ್​ ಲಿಂಕ್​ನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದರಿಂದ ನಿನ್ನೆ ಅನೇಕರು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ಇ ಫೈಲಿಂಗ್​ ವೆಬ್​​ಸೈಟ್​​ಗೆ ಭೇಟಿ ಕೊಟ್ಟು, ಲಿಂಕ್​ ಮಾಡಿಕೊಳ್ಳಲು ಪ್ರಯತ್ನಿಸದ ಪರಿಣಾಮ ಹಲವು ಟೆಕ್ನಿಕಲ್​ ಸಮಸ್ಯೆಗಳು ಕಾಣಿಸಿಕೊಂಡವು.

ಇಷ್ಟು ದಿನ ಟೈಂ ಕೊಟ್ಟರೂ ಇನ್ನೂ ಅನೇಕರ ಪಾನ್​-ಆಧಾರ್ ಕಾರ್ಡ್​ಗಳು ಲಿಂಕ್ ಆಗದ ಕಾರಣ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತೆ ಅವಧಿಯನ್ನು ವಿಸ್ತರಿಸಿದೆ. ಜೂನ್​ 30ರವರೆಗೆ ಟೈಂ ಕೊಟ್ಟಿದೆ. ಅವಧಿ ವಿಸ್ತರಣೆ ಬಗ್ಗೆ ಇಂದು ಘೋಷಿಸಲಾಗಿದ್ದು, ಅದಕ್ಕೂ ಮೊದಲು ನಿನ್ನೆ ಅನೇಕರು ಪರದಾಡಿದ್ದಾರೆ. ಕೆಲವರಿಗೆ ವೆಬ್​ಸೈಟ್​ ಓಪನ್​ ಆಗಿಲ್ಲ.. ಇನ್ನೂ ಅನೇಕರಿಗೆ ಆಧಾರ್ ಲಿಂಕ್​ ಎಂಬ ಪೇಜ್​ ತೆರೆದುಕೊಂಡಿಲ್ಲ. ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ಒಂದೆಡೆ ಕೊನೇ ದಿನ ಎಂಬ ಟೆನ್ಷನ್​ ಬೇರೆ, ಇನ್ನೊಂದೆಡೆ ಪೇಜ್ ಓಪನ್ ಆಗುತ್ತಿಲ್ಲ ಎಂಬ ಆತಂಕ ಬೇರೆ.. ಒಟ್ಟಾರೆ ತುಂಬ ಜನರು ಕಂಗಾಲಾಗಿದ್ದರು. ಈ ಸಂದರ್ಭವನ್ನು ವಿವರಿಸುವ ಅನೇಕ ಮೀಮ್ಸ್​ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್​ ಆಗುತ್ತಿವೆ.

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಅದೆಷ್ಟೋ ಜನ ಅವಸರವಸರವಾಗಿ ಲಿಂಕ್​ ಮಾಡಿಸಿಕೊಂಡಿದ್ದರೂ, ಇನ್ನೂ ಅನೇಕರದ್ದು ಬಾಕಿ ಇದೆ. ಈ ಮಧ್ಯೆ ಕೆಲವು ಮೀಮ್ಸ್​ಗಳು ಗಮನಸೆಳೆಯುತ್ತಿವೆ.

ಇದನ್ನೂ ಓದಿ: ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್​ಐಟಿಯಿಂದ ತನಿಖೆ!

ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​

Published On - 7:22 pm, Thu, 1 April 21

Follow Us
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ