AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು.

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು
ಆಧಾರ್​-ಪಾನ್​ ಲಿಂಕ್​ಗೆ ಸಂಬಂಧಿಸಿದ ಫನ್ನಿ ಪೋಸ್ಟ್​
Lakshmi Hegde
|

Updated on:Apr 01, 2021 | 7:34 PM

Share

ಆಧಾರ್​ಕಾರ್ಡ್​-ಪಾನ್​ಕಾರ್ಡ್​ ಲಿಂಕ್ ಮಾಡಿಕೊಳ್ಳಲು ಮಾರ್ಚ್​ 31 ಕೊನೇ ದಿನ ಎಂದು ಹೇಳಿತ್ತು. ಈ ದಿನಾಂಕದ ಒಳಗೆ ಆಧಾರ್​-ಪಾನ್​ ಲಿಂಕ್ ಮಾಡಿಕೊಳ್ಳದೆ ಹೋದರೆ 1000 ರೂ.ದಂಡ ತುಂಬಬೇಕಾಗುತ್ತದೆ. ಅಲ್ಲದೆ, ಪಾನ್​ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದೂ ಹೇಳಿತ್ತು. ಆಧಾರ್​-ಪಾನ್​ ಲಿಂಕ್​ನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದರಿಂದ ನಿನ್ನೆ ಅನೇಕರು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ಇ ಫೈಲಿಂಗ್​ ವೆಬ್​​ಸೈಟ್​​ಗೆ ಭೇಟಿ ಕೊಟ್ಟು, ಲಿಂಕ್​ ಮಾಡಿಕೊಳ್ಳಲು ಪ್ರಯತ್ನಿಸದ ಪರಿಣಾಮ ಹಲವು ಟೆಕ್ನಿಕಲ್​ ಸಮಸ್ಯೆಗಳು ಕಾಣಿಸಿಕೊಂಡವು.

ಇಷ್ಟು ದಿನ ಟೈಂ ಕೊಟ್ಟರೂ ಇನ್ನೂ ಅನೇಕರ ಪಾನ್​-ಆಧಾರ್ ಕಾರ್ಡ್​ಗಳು ಲಿಂಕ್ ಆಗದ ಕಾರಣ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತೆ ಅವಧಿಯನ್ನು ವಿಸ್ತರಿಸಿದೆ. ಜೂನ್​ 30ರವರೆಗೆ ಟೈಂ ಕೊಟ್ಟಿದೆ. ಅವಧಿ ವಿಸ್ತರಣೆ ಬಗ್ಗೆ ಇಂದು ಘೋಷಿಸಲಾಗಿದ್ದು, ಅದಕ್ಕೂ ಮೊದಲು ನಿನ್ನೆ ಅನೇಕರು ಪರದಾಡಿದ್ದಾರೆ. ಕೆಲವರಿಗೆ ವೆಬ್​ಸೈಟ್​ ಓಪನ್​ ಆಗಿಲ್ಲ.. ಇನ್ನೂ ಅನೇಕರಿಗೆ ಆಧಾರ್ ಲಿಂಕ್​ ಎಂಬ ಪೇಜ್​ ತೆರೆದುಕೊಂಡಿಲ್ಲ. ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ಒಂದೆಡೆ ಕೊನೇ ದಿನ ಎಂಬ ಟೆನ್ಷನ್​ ಬೇರೆ, ಇನ್ನೊಂದೆಡೆ ಪೇಜ್ ಓಪನ್ ಆಗುತ್ತಿಲ್ಲ ಎಂಬ ಆತಂಕ ಬೇರೆ.. ಒಟ್ಟಾರೆ ತುಂಬ ಜನರು ಕಂಗಾಲಾಗಿದ್ದರು. ಈ ಸಂದರ್ಭವನ್ನು ವಿವರಿಸುವ ಅನೇಕ ಮೀಮ್ಸ್​ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್​ ಆಗುತ್ತಿವೆ.

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಅದೆಷ್ಟೋ ಜನ ಅವಸರವಸರವಾಗಿ ಲಿಂಕ್​ ಮಾಡಿಸಿಕೊಂಡಿದ್ದರೂ, ಇನ್ನೂ ಅನೇಕರದ್ದು ಬಾಕಿ ಇದೆ. ಈ ಮಧ್ಯೆ ಕೆಲವು ಮೀಮ್ಸ್​ಗಳು ಗಮನಸೆಳೆಯುತ್ತಿವೆ.

ಇದನ್ನೂ ಓದಿ: ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್​ಐಟಿಯಿಂದ ತನಿಖೆ!

ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​

Published On - 7:22 pm, Thu, 1 April 21

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು