Yash
1986ರ ಜನವರಿ 8ರಂದು ನವೀನ್ ಕುಮಾರ್ ಗೌಡ ಆಗಿ ಜನಿಸಿದ ಯಶ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹತ್ವದ ಪ್ರಭಾವ ಬೀರಿದ ಪ್ರಮುಖ ಭಾರತೀಯ ನಟ. ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದರು. ಅವರು ಅಭಿನಯನದ ಮೂಲಕ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ‘ಕೆಜಿಎಫ್: ಅಧ್ಯಾಯ 1’ (2018) ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದರು. ಚಿತ್ರದಲ್ಲಿ ಯಶ್ನ ಒರಟಾದ ಮತ್ತು ಮಹತ್ವಾಕಾಂಕ್ಷೆಯ ರಾಕಿಯ ಪಾತ್ರವು ಅಪಾರ ಪ್ರಶಂಸೆಯನ್ನು ಗಳಿಸಿತು. ಇದು ಅವರನ್ನು ಪ್ಯಾನ್-ಇಂಡಿಯ ಸ್ಟಾರ್ ಆಗಿ ಮಾಡಿತು. ಭಾರತೀಯ ಸಿನಿಮಾ ಜಗತ್ತಿನಲ್ಲಿ ಅವರ ಭವಿಷ್ಯದ ಯೋಜನೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ರಾಧಿಕಾ ಪಂಡಿತ್ನ ವರಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್ನ ಸ್ಟಾರ್ ನಟನ ಸಿನಿಮಾ
'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕ ಜೂನ್ 4ಕ್ಕೆ ಮುಂದೂಡಲಾಗಿದೆ. ಈ ನಡುವೆ ಸಲ್ಮಾನ್ ಖಾನ್ ಅಭಿನಯದ 'ಮಾತೃಭೂಮಿ' ಸಿನಿಮಾ (ಹಿಂದಿನ 'ಬ್ಯಾಟಲ್ ಆಫ್ ಗಲ್ವಾನ್') ಕೂಡ ಜೂನ್ ತಿಂಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ರೀಶೂಟ್, ಸೆನ್ಸಾರ್ ವಿಳಂಬದಿಂದ ಮೇ 15ರ ಬಿಡುಗಡೆ ಸಾಧ್ಯವಾಗಿಲ್ಲ. 'ಮಾತೃಭೂಮಿ' 'ಟಾಕ್ಸಿಕ್' ಜೊತೆ ಕ್ಲಾಶ್ ಆಗುವ ಸಾಧ್ಯತೆ ಇದೆ.
- Rajesh Duggumane
- Updated on: Apr 8, 2026
- 9:08 am
ಯಶ್ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಆಗಿದ್ದು ಆ ಒಂದು ವಿಷಯ
ರಾಕಿಂಗ್ ಸ್ಟಾರ್ ಯಶ್ ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಒಪ್ಪಿಕೊಳ್ಳಲು ಕಾರಣ ಬಹಿರಂಗವಾಗಿದೆ. ನಿರ್ದೇಶಕ ನಿತೇಶ್ ತಿವಾರಿ ರಾವಣನನ್ನು ಕೇವಲ ಕೆಟ್ಟವನಾಗಿ ತೋರಿಸದೆ, ಅವನ ಜ್ಞಾನ, ಭಕ್ತಿ ಮತ್ತು ಬಹುಮುಖಿ ಗುಣಗಳನ್ನು ಅನಾವರಣಗೊಳಿಸಿದ್ದಾರೆ. ರಣಬೀರ್ ಕಪೂರ್ ಕೂಡ ಈ ಪಾತ್ರದ ವಿಶಿಷ್ಟ ವ್ಯಾಖ್ಯಾನವನ್ನು ವಿವರಿಸಿದ್ದಾರೆ. ಅಹಂಕಾರ ಮತ್ತು ಪ್ರತೀಕಾರದ ಸಂದೇಶದೊಂದಿಗೆ, ಯಶ್ ಈ ಭಿನ್ನವಾದ ರಾವಣನ ಪಾತ್ರಕ್ಕೆ ಆಕರ್ಷಿತರಾಗಿದ್ದಾರೆ.
- Rajesh Duggumane
- Updated on: Apr 8, 2026
- 7:46 am
‘ರಾಮಾಯಣ’ ಎಐ ಎಂದವರಿಗೆ ಉತ್ತರಿಸಲು ಬಿಟಿಎಸ್ ವಿಡಿಯೋ ರಿಲೀಸ್ ಮಾಡಿದ ತಂಡ?
ಯಶ್, ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾದ ಟೀಸರ್ಗೆ ‘AI’ ಆರೋಪ ಎದುರಾಗಿದೆ. ಟೀಸರ್ ಕಳಪೆ ಗುಣಮಟ್ಟದ್ದು ಎಂದು ಕೆಲವರು ಟೀಕಿಸಿದ್ದರೆ, ಮತ್ತೆ ಕೆಲವರು ಇದು AI ನಿರ್ಮಿತ ಎಂದಿದ್ದರು. ಇದಕ್ಕೆ ಉತ್ತರವಾಗಿ ಬಿಡುಗಡೆಯಾದ ‘ಬಿಹೈಂಡ್ ದಿ ಸೀನ್’ (BTS) ವಿಡಿಯೋ ಕೂಡ AI ನಿರ್ಮಿತ ಎಂದು ಈಗ ಚರ್ಚೆ ನಡೆಯುತ್ತಿದೆ.
- Rajesh Duggumane
- Updated on: Apr 4, 2026
- 7:11 am
ದಾಖಲೆ ಬರೆಯುತ್ತಾ ‘ರಾಮಾಯಣ’? ಬರೋಬ್ಬರಿ 1000 ಕೋಟಿ ರೂಪಾಯಿಗೆ ಒಟಿಟಿ ಬೇಡಿಕೆ
‘ರಾಮಾಯಣ’ ನಿರ್ಮಾಪಕರು 700 ಕೋಟಿ ರೂಪಾಯಿ ಆಫರ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿರ ಕೋಟಿ ರೂಪಾಯಿ ಡೀಲ್ ಮೇಲೆ ಅವರು ಕಣ್ಣು ಇಟ್ಟಿರುವಂತಿದೆ. ಇದೇ ರೀತಿ ಎಸ್ಎಸ್ ರಾಜಮೌಳಿ ನಿರ್ದೇಶನದ ‘ವಾರಾಣಸಿ’ ಸಿನಿಮಾ ಕೂಡ ಒಟಿಟಿ ವ್ಯವಹಾರದ ಕಾರಣದಿಂದ ಸುದ್ದಿ ಆಗುತ್ತಿದೆ.
- Madan Kumar
- Updated on: Apr 3, 2026
- 7:23 pm
ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು
‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಾಮನಾಗಿ ರಣಬೀರ್ ಕಪೂರ್ ಅವರು ದರ್ಶನ ನೀಡಿದ್ದಾರೆ. ಅಭಿಮಾನಿಗಳು ಈ ಟೀಸರ್ ಬಗ್ಗೆ ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಟೀಸರ್ ನೋಡಿದ ಬಳಿಕ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರಿಗೆ ಇಷ್ಟವಾಗಿದೆ. ಆದರೆ ಹಲವರು ತಕರಾರು ತೆಗೆದಿದ್ದಾರೆ.
- Madan Kumar
- Updated on: Apr 2, 2026
- 3:15 pm
ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?
ರಣಬೀರ್, ಸಾಯಿ ಪಲ್ಲವಿ, ಯಶ್ ನಟನೆಯ 'ರಾಮಾಯಣ' ಟೀಸರ್ ಬಿಡುಗಡೆಯಾಗಿ ಎಲ್ಲೆಡೆ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಆದರೆ, ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳು ಮಾತ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ 'ವಾರಣಾಸಿ' ಸಿನಿಮಾ ಕೂಡ ರಾಮಾಯಣ ಆಧರಿಸಿದ್ದರಿಂದ, ಈ ಸ್ಪರ್ಧೆ ತಮ್ಮ ಸಿನಿಮಾಗೆ ಹಿನ್ನಡೆಯಾಗಬಹುದೆಂದು ಆತಂಕಗೊಂಡಿದ್ದಾರೆ.
- Rajesh Duggumane
- Updated on: Apr 2, 2026
- 3:05 pm
‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ತೆರೆಗೆ ಬರಲು ಸಜ್ಜಾಗಿದೆ. ಕಿಯಾರಾ ಅಡ್ವಾಣಿ ತಮ್ಮ ನಾಡಿಯಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿರ್ದೇಶಕಿ ಗೀತು ಮೋಹನ್ದಾಸ್ ಅವರ ವಿಶೇಷ ದೃಷ್ಟಿಗೆ ಶ್ರೇಯಸ್ಸು ನೀಡಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರದ ಸವಾಲು ಮತ್ತು ವಿಶಿಷ್ಟತೆಯನ್ನು ಕಿಯಾರಾ ವಿವರಿಸಿದ್ದಾರೆ.
- Rajesh Duggumane
- Updated on: Mar 30, 2026
- 2:57 pm
‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ
ಬಾಲಿವುಡ್ ನಟ ಇಮ್ರಾನ್ ಖಾನ್, 'KGF 2', 'ಅನಿಮಲ್' ಹಾಗೂ 'ಧುರಂಧರ್ 2' ನಂತಹ ಚಿತ್ರಗಳಲ್ಲಿನ 'ಮ್ಯಾಚೋ' ಪಾತ್ರಗಳನ್ನು ಟೀಕಿಸಿದ್ದಾರೆ. ಉದ್ದ ಕೂದಲು, ರಕ್ತಸಿಕ್ತ ಮುಖದ ಪಾತ್ರಗಳು ನನಗೆ ಇಷ್ಟವಿಲ್ಲ ಎಂದ ಇಮ್ರಾನ್, ವಿಷಕಾರಿ ಪುರುಷತ್ವ ಮತ್ತು ಸ್ತ್ರೀದ್ವೇಷದ ಪ್ರಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
- Rajesh Duggumane
- Updated on: Mar 26, 2026
- 9:00 am
‘ಟಾಕ್ಸಿಕ್’ ರಿಲೀಸ್ ಸಂದರ್ಭದಲ್ಲೇ ‘ಧುರಂಧರ್ 3’ ಸಿನಿಮಾ? ವೈರಲ್ ಪೋಸ್ಟ್ ಅಸಲಿಯತ್ತೇನು?
ಧುರಂಧರ್ 2 ಚಿತ್ರದ ಬ್ಲಾಕ್ಬಸ್ಟರ್ ಯಶಸ್ಸಿನ ನಡುವೆ, ಟಾಕ್ಸಿಕ್ ಚಿತ್ರದ ರಿಲೀಸ್ ಕುರಿತು ಚರ್ಚೆಗಳು ನಡೆದಿವೆ. 450 ಕೋಟಿ ಗಳಿಸಿದ ಧುರಂಧರ್ 2 ಎದುರು ಟಾಕ್ಸಿಕ್ ಬರಬೇಕಿತ್ತು. ಆದರೆ, ರಿಲೀಸ್ ಮುಂದೂಡಲ್ಪಟ್ಟಿದೆ. ಇದೇ ವೇಳೆ, ಧುರಂಧರ್ 3 ಜೂನ್ 14ರಂದು ಬರಲಿದೆ ಎಂಬ ಸುಳ್ಳು ಪೋಸ್ಟರ್ ವೈರಲ್ ಆಗಿದ್ದು, ಟಾಕ್ಸಿಕ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.
- Rajesh Duggumane
- Updated on: Mar 23, 2026
- 2:41 pm
‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ
ಜ್ಯೋತಿಷಿ ವೇಣು ಸ್ವಾಮಿ, ನಟ ಯಶ್ ಖಿನ್ನತೆಗೆ ಒಳಗಾಗಿದ್ದಾರೆಂದು ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ವೈರಲ್ ಆಗಿದೆ. ಈ ಹೇಳಿಕೆಗೆ ಯಶ್ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದೆಯೂ ಹಲವು ವಿವಾದಾತ್ಮಕ ಭವಿಷ್ಯಗಳನ್ನು ನುಡಿದಿದ್ದ ವೇಣು ಸ್ವಾಮಿ, ಈ ಬಾರಿ ಯಶ್ ಅವರ ಕಷ್ಟದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
- Rajesh Duggumane
- Updated on: Mar 14, 2026
- 1:06 pm
‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದೆ. ರಣಬಿರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಹಾಗೂ ಯಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಯಶ್ ರಾವಣನಾಗಿ ಭಾಗ 1 ರಲ್ಲಿ ಕಡಿಮೆ ಇದ್ದು, ಭಾಗ 2 ರಲ್ಲಿ ಹೆಚ್ಚಿನ ಸಮಯ ಕಾಣಿಸಿಕೊಳ್ಳಲಿದ್ದಾರೆ.
- Rajesh Duggumane
- Updated on: Mar 12, 2026
- 1:04 pm
‘ಟಾಕ್ಸಿಕ್’ ಎಫೆಕ್ಟ್: ರಿಲೀಸ್ ದಿನಾಂಕ ಬದಲಾಯಿಸಿಕೊಂಡ ಬಾಲಿವುಡ್ ಸ್ಟಾರ್ ಹೀರೋ
‘ಟಾಕ್ಸಿಕ್’ ಸಿನಿಮಾದ ಹವಾ ಜೋರಾಗಿದೆ. ಬಾಲಿವುಡ್ ಸಿನಿಮಾಗಳ ಮೇಲೂ ಪರಿಣಾಮ ಬೀರುತ್ತಿದೆ. ಯಶ್ ನಟನೆಯ ಈ ಸಿನಿಮಾ ಜೂನ್ 4ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಜೊತೆ ಕ್ಲ್ಯಾಶ್ ತಪ್ಪಿಸಲು ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲಾಗಿದೆ.
- Madan Kumar
- Updated on: Mar 10, 2026
- 7:27 pm