Yash
1986ರ ಜನವರಿ 8ರಂದು ನವೀನ್ ಕುಮಾರ್ ಗೌಡ ಆಗಿ ಜನಿಸಿದ ಯಶ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹತ್ವದ ಪ್ರಭಾವ ಬೀರಿದ ಪ್ರಮುಖ ಭಾರತೀಯ ನಟ. ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದರು. ಅವರು ಅಭಿನಯನದ ಮೂಲಕ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ‘ಕೆಜಿಎಫ್: ಅಧ್ಯಾಯ 1’ (2018) ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದರು. ಚಿತ್ರದಲ್ಲಿ ಯಶ್ನ ಒರಟಾದ ಮತ್ತು ಮಹತ್ವಾಕಾಂಕ್ಷೆಯ ರಾಕಿಯ ಪಾತ್ರವು ಅಪಾರ ಪ್ರಶಂಸೆಯನ್ನು ಗಳಿಸಿತು. ಇದು ಅವರನ್ನು ಪ್ಯಾನ್-ಇಂಡಿಯ ಸ್ಟಾರ್ ಆಗಿ ಮಾಡಿತು. ಭಾರತೀಯ ಸಿನಿಮಾ ಜಗತ್ತಿನಲ್ಲಿ ಅವರ ಭವಿಷ್ಯದ ಯೋಜನೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ರಾಧಿಕಾ ಪಂಡಿತ್ನ ವರಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
ಇನ್ನೂ ಹೆಚ್ಚು ಓದಿಸ್ಕ್ರೀನ್ಎಕ್ಸ್ ಫಾರ್ಮ್ಯಾಟ್ನಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಸಿನಿಮಾ ‘ರಾಮಾಯಣ’
ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಜಾಗತಿಕವಾಗಿ ತೆರೆಕಾಣಲಿರುವ ‘ರಾಮಾಯಣ’ ಸಿನಿಮಾದಿಂದ ಪ್ರೇಕ್ಷಕರಿಗೆ ಅದ್ಭುತವಾದ ಅನುಭವ ಸಿಗಲಿದೆ. ಅದಕ್ಕಾಗಿ ಮಾಮೂಲಿ ಚಿತ್ರಮಂದಿರಗಳ ಜೊತೆಗೆ ‘ಸ್ಕ್ರೀನ್ಎಕ್ಸ್’ ಮತ್ತು ‘4ಡಿಎಕ್ಸ್’ ರೂಪದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Aug 18, 2026
- 8:32 pm
‘ಟಾಕ್ಸಿಕ್’ ಸಿನಿಮಾ ಅಡ್ವಾನ್ಸ್ ಬುಕಿಂಗ್ ಬಗ್ಗೆ ಸಿಕ್ಕಿತು ದೊಡ್ಡ ಅಪ್ಡೇಟ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ ದಿನಾಂಕದ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಆಗಸ್ಟ್ 21ರಿಂದ ಎಲ್ಲಾ ಭಾಷೆಗಳಲ್ಲೂ ಮುಂಗಡ ಬುಕಿಂಗ್ ಆರಂಭವಾಗುವ ಸಾಧ್ಯತೆಯಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕಾತರ ಮತ್ತು ನಿರೀಕ್ಷೆ ಗಣನೀಯವಾಗಿ ಹೆಚ್ಚಾಗಿದೆ.
- Rajesh Duggumane
- Updated on: Aug 18, 2026
- 3:15 pm
200 ಕೋಟಿ ರೂ. ಕಡಿಮೆಯಾದ್ರೇ ಏನೂ ಫರಕ್ ಆಗಲ್ಲ; ‘ಧುರಂಧರ್ 2’ ಕ್ಲ್ಯಾಶ್ ಬಗ್ಗೆ ಯಶ್ ಮಾತು
'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾಗಳ ಬಾಕ್ಸ್ ಆಫೀಸ್ ಮುಖಾಮುಖಿ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. ತಮಗೆ 200 ಕೋಟಿ ರೂಪಾಯಿ ಕಳೆದುಕೊಳ್ಳುವ ಭಯವಿಲ್ಲ ಎಂದು ಹೇಳಿದ್ದಾರೆ. ಇದು ಕೇವಲ ಹಣದ ವಿಚಾರವಲ್ಲ, ತಮ್ಮ ಆತ್ಮಗೌರವದ ಪ್ರಶ್ನೆ ಎಂದು 'ಆಪ್ ಕೀ ಅದಾಲತ್' ಶೋನಲ್ಲಿ ಯಶ್ ಸ್ಪಷ್ಟಪಡಿಸಿದ್ದಾರೆ.
- Rajesh Duggumane
- Updated on: Aug 17, 2026
- 9:20 am
‘ಕನ್ನಡ್’ ಅಲ್ಲ ‘ಕನ್ನಡ’: ರಜತ್ ಶರ್ಮಾಗೆ ವೇದಿಕೆಯಲ್ಲೇ ಪ್ರೀತಿಯಿಂದ ತಿದ್ದಿ ಹೇಳಿದ ನಟ ಯಶ್
ರಾಷ್ಟ್ರೀಯ ವೇದಿಕೆ ‘ಆಪ್ ಕೀ ಅದಾಲತ್’ ಶೋನಲ್ಲಿ ಹಿರಿಯ ಪತ್ರಕರ್ತ ರಜತ್ ಶರ್ಮಾ ‘ಕನ್ನಡ್’ ಎಂದಾಗ, ನಟ ಯಶ್ ನಗುಮುಖದಿಂದಲೇ ‘ಅದು ಕನ್ನಡ’ ಎಂದು ಪ್ರೀತಿಯಿಂದ ತಿದ್ದಿದ್ದಾರೆ. ಭಾಷೆಯ ಉಚ್ಚಾರಣೆ ಹಾಗೂ ಗೌರವಕ್ಕೆ ಸ್ಪಂದಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ಈ ಪ್ರಸಂಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
- Rajesh Duggumane
- Updated on: Aug 17, 2026
- 7:33 am
ಕೇವಲ ಸಂಭಾವನೆ ಅಲ್ಲ, ಲಾಭದಲ್ಲೂ ಪಾಲು ಪಡೆಯುತ್ತಾರೆ ಯಶ್; ‘ಕೆಜಿಎಫ್’ಗೂ ಮೊದಲಿನಿಂದಲೇ ಈ ತಂತ್ರ
ರಾಕಿಂಗ್ ಸ್ಟಾರ್ ಯಶ್ ತಮ್ಮ ಸಂಭಾವನೆ ಮತ್ತು ಲಾಭ ಹಂಚಿಕೆ ಮಾದರಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಿರ್ಮಾಪಕರ ಜೊತೆ ಸೇರಿ ರಿಸ್ಕ್ ತೆಗೆದುಕೊಳ್ಳುವ ತಮ್ಮ ಸೂತ್ರವನ್ನು ವಿವರಿಸಿದ್ದಾರೆ. ಆರಂಭಿಕ ದಿನಗಳಲ್ಲಿ ಏಳು ಸಿನಿಮಾಗಳನ್ನು ನಿರಾಕರಿಸಿದ ರೋಚಕ ಕಥೆ ಹಾಗೂ ಟಾಕ್ಸಿಕ್ ಸಿನಿಮಾ ಬಜೆಟ್ ವಿವರ ಇಲ್ಲಿದೆ.
- Rajesh Duggumane
- Updated on: Aug 17, 2026
- 6:58 am
‘ಟಾಕ್ಸಿಕ್’ನ ಆ ದೃಶ್ಯಗಳ ನೋಡಿ ಪತ್ನಿ ರಾಧಿಕಾ ಹೇಳಿದ್ದೇನು? ಸತ್ಯ ಹೇಳಿದ ಯಶ್
Toxic movie scene: ಕುಟುಂಬವೆಲ್ಲ ಸೇರಿ ನೋಡಲಾಗದ ಸಿನಿಮಾನಲ್ಲಿ ನಟಿಸಲ್ಲ ಎಂದಿದ್ದ ಯಶ್ ಇಂಥಹಾ ದೃಶ್ಯಗಳಲ್ಲಿ ನಟಿಸಿದ್ದಾರಲ್ಲ ಎಂದು ಕೆಲವರು ಟೀಕೆ ಸಹ ಮಾಡಿದ್ದಾರೆ. ಆದರೆ ಅದಕ್ಕೆಲ್ಲ ಯಶ್ ಉತ್ತರ ಕೊಟ್ಟಾಗಿದೆ. ಇದೀಗ, ‘ಟಾಕ್ಸಿಕ್’ ಸಿನಿಮಾದ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ತಮ್ಮ ಪತ್ನಿ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಏನಿತ್ತು ಎಂದು ಪ್ರಾಮಾಣಿಕವಾಗಿ ತಿಳಿಸಿದ್ದಾರೆ.
- Manjunatha C
- Updated on: Aug 16, 2026
- 9:02 pm
ರಾಜಕೀಯಕ್ಕೆ ಎಂಟ್ರಿ, ಸುಳಿವು ಕೊಟ್ಟ ನಟ ಯಶ್
Yash about Politics: ಸಿನಿಮಾ ರಂಗದಲ್ಲಿ ಹೆಸರು ಮಾಡಿದವರ ನಿವೃತ್ತಿ ಯೋಜನೆ ರಾಜಕೀಯವೇ ಆಗಿರುತ್ತದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಬಹಳ ಸಾಮಾನ್ಯ. ಇತ್ತೀಚೆಗೆ ತಾನೆ, ಸ್ಟಾರ್ ನಟ ವಿಜಯ್ ಅವರು ತಮಿಳುನಾಡಿನ ಸಿಎಂ ಆಗುವ ಮೂಲಕ ದಕ್ಷಿಣದ ಕೆಲವು ಸ್ಟಾರ್ ನಟರುಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ಇದಕ್ಕೆ ನಟ ಯಶ್ ಸಹ ಹೊರತಲ್ಲ.
- Manjunatha C
- Updated on: Aug 16, 2026
- 9:05 pm
ಚೀನಾದಲ್ಲೂ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಫಿದಾ ಆದ ಪ್ರೇಕ್ಷಕರು
‘ರಾಮಾಯಣ: ಪಾರ್ಟ್ 1’ ಸಿನಿಮಾ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6ರಂದು ಪ್ರಪಂಚದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಜಾಗತಿಕ ವಿತರಣೆಯನ್ನು ಸೋನಿ ಪಿಕ್ಚರ್ಸ್ ಸಂಸ್ಥೆ ವಹಿಸಿಕೊಂಡಿದ್ದು, ಚೀನಾದಲ್ಲಿ ‘ರಾಮಾಯಣ: ದಿ ಲೆಜೆಂಡ್ ಆಫ್ ದಿ ಪ್ರಿನ್ಸ್’ ಎಂಬ ಹೆಸರಿನಲ್ಲಿ ಬಿಡುಗಡೆ ಆಗಲಿದೆ.
- Madan Kumar
- Updated on: Aug 16, 2026
- 2:37 pm
‘ರಾಮಾಯಣ’ ಚಿತ್ರದ 4 ಸಾವಿರ ಕೋಟಿ ರೂ. ಬಜೆಟ್ ರಹಸ್ಯ ಬಿಚ್ಚಿಟ್ಟ ಯಶ್: ಇದು ಹಾಲಿವುಡ್ ಲೆಕ್ಕಾಚಾರ
ಈವರೆಗೂ ಭಾರತೀಯ ಚಿತ್ರರಂಗ ಕಂಡುಕೇಳರಿಯದ ರೀತಿಯಲ್ಲಿ ‘ರಾಮಾಯಣ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಬಜೆಟ್ ಬರೋಬ್ಬರಿ 4 ಸಾವಿರ ಕೋಟಿ ರೂಪಾಯಿ ಎಂಬುದನ್ನು ಕೇಳಿದ ಬಳಿಕ ಹಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆ ನಟ, ಸಹ-ನಿರ್ಮಾಪಕ ಯಶ್ ಅವರು ಸ್ಪಷ್ಟನೆ ನೀಡಿದ್ದಾರೆ.
- Madan Kumar
- Updated on: Aug 16, 2026
- 1:10 pm
‘ಯಶ್ ಮಿಸ್ಟರ್ ಶೋಆಫ್’ ಎಂದಿದ್ದ ರಶ್ಮಿಕಾಗೆ ಈಗ ಪ್ರತಿಕ್ರಿಯೆ ನೀಡಿದ ರಾಕಿ ಭಾಯ್
ನಟಿ ರಶ್ಮಿಕಾ ಮಂದಣ್ಣ ಅವರು ಹಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣ ಆಗಿತ್ತು. ಯಶ್ ಅವರನ್ನು ಮಿಸ್ಟರ್ ಶೋ ಆಫ್ ಎಂದು ರಶ್ಮಿಕಾ ಕರೆದಿದ್ದರು. ಅದಕ್ಕೆ ಯಶ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ಬಗ್ಗೆ ಇಷ್ಟು ವರ್ಷಗಳ ಬಳಿಕ ಯಶ್ ಅವರು ಮೌನ ಮುರಿದಿದ್ದಾರೆ.
- Madan Kumar
- Updated on: Aug 16, 2026
- 2:33 pm
ನಿರ್ದೇಶಕಿ ಜೊತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಯಶ್ ಬಿಚ್ಚು ಮಾತು
Toxic movie: ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ದಾಸ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೀತೂ ಮೋಹನ್ದಾಸ್, ಯಶ್ ಅವರ ಬಗ್ಗೆ ಬಹಳ ಪ್ರೀತಿ, ಗೌರವದಿಂದ ಮಾತನಾಡಿ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಆದರೆ ಇದೀಗ ನಟ ಯಶ್, ತಮ್ಮ ಹಾಗೂ ಗೀತೂ ಮೋಹನ್ದಾಸ್ ನಡುವೆ ಮೂಡಿದ್ದ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ್ದಾರೆ.
- Manjunatha C
- Updated on: Aug 15, 2026
- 7:30 pm
‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ? ಕೊನೆಗೂ ಮೌನ ಮುರಿದ ನಟ ಯಶ್
'ಕೆಜಿಎಫ್ 2' ಸಕ್ಸಸ್ ನಂತರ 'ಕೆಜಿಎಫ್ 3' ಮಾಡದೆ ಹೊಸ ಸಿನಿಮಾ ಮಾಡುವ ರಿಸ್ಕ್ ತಗೊಂಡಿದ್ದೇಕೆ ಎಂಬ ಪ್ರಶ್ನೆಗೆ ನಟ ಯಶ್ 'ಆಪ್ ಕಿ ಅದಾಲತ್' ಶೋನಲ್ಲಿ ಉತ್ತರಿಸಿದ್ದಾರೆ. 'ಮನೆ ಬಿಟ್ಟು ಬಂದದ್ದಕ್ಕಿಂತ ದೊಡ್ಡ ರಿಸ್ಕ್ ಬೇರೊಂದಿಲ್ಲ, ನನಗೆ ರಿಸ್ಕ್ ತಗೊಂಡು ಬಾಯುವುದು ಇಷ್ಟ' ಎಂದು ಯಶ್ ಹೇಳಿದ್ದಾರೆ.
- Rajesh Duggumane
- Updated on: Aug 15, 2026
- 1:10 pm