AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash

Yash

1986ರ ಜನವರಿ 8ರಂದು ನವೀನ್ ಕುಮಾರ್ ಗೌಡ ಆಗಿ ಜನಿಸಿದ ಯಶ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹತ್ವದ ಪ್ರಭಾವ ಬೀರಿದ ಪ್ರಮುಖ ಭಾರತೀಯ ನಟ. ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದರು. ಅವರು ಅಭಿನಯನದ ಮೂಲಕ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ‘ಕೆಜಿಎಫ್: ಅಧ್ಯಾಯ 1’ (2018) ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದರು. ಚಿತ್ರದಲ್ಲಿ ಯಶ್‌ನ ಒರಟಾದ ಮತ್ತು ಮಹತ್ವಾಕಾಂಕ್ಷೆಯ ರಾಕಿಯ ಪಾತ್ರವು ಅಪಾರ ಪ್ರಶಂಸೆಯನ್ನು ಗಳಿಸಿತು. ಇದು ಅವರನ್ನು ಪ್ಯಾನ್-ಇಂಡಿಯ ಸ್ಟಾರ್ ಆಗಿ ಮಾಡಿತು. ಭಾರತೀಯ ಸಿನಿಮಾ ಜಗತ್ತಿನಲ್ಲಿ ಅವರ ಭವಿಷ್ಯದ ಯೋಜನೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ರಾಧಿಕಾ ಪಂಡಿತ್ನ ವರಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.

ಇನ್ನೂ ಹೆಚ್ಚು ಓದಿ

ಸದ್ದಿಲ್ಲದೆ ಪೂರ್ಣಗೊಂಡಿತು ‘ಟಾಕ್ಸಿಕ್’ ಶೂಟ್? ಮುಂದಿರೋ ಪ್ಲ್ಯಾನ್​​ಗಳೇನು?

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ಸದ್ದಿಲ್ಲದೆ ಪೂರ್ಣಗೊಂಡಿದೆ. ಈ ಕುರಿತು ಹರಡಿದ್ದ ಗಾಸಿಪ್‌ಗಳಿಗೆ ತೆರೆ ಬಿದ್ದಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮಾರ್ಚ್ 19ರಂದು ಬಿಡುಗಡೆಯಾಗಲಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾಕ್ಕಾಗಿ ಮೂರೂವರೆ ತಿಂಗಳ ಮೊದಲೇ ತಂಡ ಭರ್ಜರಿ ಪ್ರಚಾರಕ್ಕೆ ಸಿದ್ಧವಾಗಿದೆ. ಜನವರಿ 8ರಂದು ಯಶ್ ಜನ್ಮದಿನದಂದು ಟೀಸರ್ ಬಿಡುಗಡೆಯ ನಿರೀಕ್ಷೆಯಿದೆ.

‘ಟಾಕ್ಸಿಕ್’ ಮ್ಯೂಸಿಕ್; ಅನಿರುದ್ಧ್ ರವಿಚಂದರ್​ ಹೊರಗಿಟ್ಟು ಕನ್ನಡಿಗನಿಗೆ ಅವಕಾಶ ಕೊಟ್ಟ ಯಶ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಕನ್ನಡಿಗರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅನಿರುದ್ಧ್ ರವಿಚಂದರ್ ಹೆಸರು ಕೇಳಿಬಂದಿದ್ದರೂ, ಅಂತಿಮವಾಗಿ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು ಅವರನ್ನೇ ತಂಡ ಆಯ್ಕೆ ಮಾಡಿದೆ. ಮಲಯಾಳಂನ ಗೀತು ಮೋಹನ್​ದಾಸ್ ನಿರ್ದೇಶನದ ಈ ಚಿತ್ರ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಮೂಡಿಬರಲಿದ್ದು, ಹಾಲಿವುಡ್ ಮಟ್ಟದ ಮೇಕಿಂಗ್‌ಗೆ ಸಿದ್ಧತೆ ನಡೆದಿದೆ.

‘ಟಾಕ್ಸಿಕ್’ ಎದುರು ಬರಲಿದೆ ಸಲ್ಮಾನ್ ಸಿನಿಮಾ; ಶಾರುಖ್​​ಗೆ ಆದ ಗತಿ ನೆನಪಿಸಿದ ಫ್ಯಾನ್ಸ್

ಯಶ್ ಅವರು'ಕೆಜಿಎಫ್ 2' ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಅವರ ಮುಂದಿನ ಸಿನಿಮಾ'ಟಾಕ್ಸಿಕ್' ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಾಲ್ವಾನ್' ಜೊತೆ ಸ್ಪರ್ಧೆಗೆ ಸಿದ್ಧವಾಗಿದೆ. ಹಿಂದಿನ 'ಕೆಜಿಎಫ್' ಸಿನಿಮಾಗಳು ಬಾಲಿವುಡ್ ಚಿತ್ರಗಳನ್ನು ಮೀರಿಸಿದಂತೆ, ಈ ಬಾರಿಯೂ ಯಶ್ ಸವಾಲೆಸೆಯಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ಎಲ್ಲೂ ಹೇಳಬೇಡ ಎಂದು ಪುತ್ರನಿಗೆ ಹಣ ಸಹಾಯ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ ಖಳನಟ ಹರೀಶ್ ರಾಯ್ ಅವರು ಗುರುವಾರ ನಿಧನರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹರೀಶ್ ಅವರ ಮಕ್ಕಳಿಗೆ ಯಶ್​​ ಧೈರ್ಯ ತುಂಬಿದ್ದಾರೆ. ಕಿರಿಯ ಪುತ್ರನನ್ನು ಕರೆದು ಆರ್ಥಿಕ ನೆರವು ನೀಡಿದ್ದಾರೆ. ವಿಡಿಯೋ ನೋಡಿ.

‘ಸೀನಿಯರ್ ಹೀರೋಗಳೇ ಹಾಗೆ ನಡೆದುಕೊಂಡಾಗ’; ಯಶ್ ಹಳೆಯ ವಿಡಿಯೋ ವೈರಲ್

ಪುನೀತ್ ರಾಜ್​ಕುಮಾರ್ ನಿಧನ ಹೊಂದುವುದಕ್ಕೂ ಕೆಲವೇ ದಿನ ಮೊದಲು ಯಶ್ ಹಾಗೂ ಪುನೀತ್ ಭೇಟಿ ಆಗಿದ್ದರು. ‘ಭಜರಂಗಿ 2’ ವೇದಿಕೆ ಮೇಲೆ ಯಶ್, ಶಿವಣ್ಣ ಹಾಗೂ ಪುನೀತ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಈ ವೇದಿಕೆ ಮೇಲೆ ಪುನೀತ್ ಅವರನ್ನು ಹೊಗಳುವ ಕೆಲಸವನ್ನು ಯಶ್ ಅವರು ಮಾಡಿದ್ದರು.

ಯಶ್​ಗೆ ಹೆದರಿದ ಬನ್ಸಾಲಿ; ‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19, 2026 ರಂದು ತೆರೆಗೆ ಬರಲು ಸಿದ್ಧವಾಗಿದೆ. ಹೀಗಾಗಿ, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ 'ಲವ್ ಆ್ಯಂಡ್ ವಾರ್' ಚಿತ್ರವನ್ನು ಮುಂದೂಡಲು ಆಲೋಚಿಸುತ್ತಿದ್ದಾರೆ. ಹಿಂದಿನ 'ಕೆಜಿಎಫ್' ಚಿತ್ರಗಳ ಎದುರು ಬಂದ ಸಿನಿಮಾಗಳು ಸೋತಿದ್ದವು. 'ಟಾಕ್ಸಿಕ್' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಹೇಗಿತ್ತು ನೋಡಿ ಯಶ್ ಮಗ ಯಥರ್ವ್ ಬರ್ತ್​ಡೇ ಸೆಲೆಬ್ರೇಷನ್; ಇಲ್ಲಿದೆ ವಿಡಿಯೋ

Yatharv Birthday Celebration video: ಯಶ್ ಅವರ ಮಗ ಯಥರ್ವ್ ಅವರಿಗೆ ಅಕ್ಟೋಬರ್ 30 ಜನ್ಮದಿನ. ಈ ವೇಳೆ ಅದ್ದೂರಿಯಾಗಿ ಸೆಲೆಬ್ರೇಷನ್​ಗಳು ನಡೆದವು. ಆ ಸಂದರ್ಭದ ವಿಡಿಯೋನ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದನ್ನು ಕಾಣಬಹುದು. ಆ ಬಗ್ಗೆ ಇಲ್ಲಿದೆ ವಿವರ.

‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ತಮ್ಮ ಕನ್ನಡ ಪ್ರೀತಿ ಸ್ಪಷ್ಟಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದಂದು 'ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ' ಎಂದು ಟ್ವೀಟ್ ಮಾಡುವ ಮೂಲಕ ಕನ್ನಡ ಪ್ರೀತಿ ತೋರಿಸಿದ್ದಾರೆ. ಅಲ್ಲದೆ, ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಕುರಿತಾದ ಎಲ್ಲಾ ವದಂತಿಗಳನ್ನು ನಿರ್ಮಾಪಕರು ತಳ್ಳಿ ಹಾಕಿದ್ದು, ಸಿನಿಮಾ ಯುಗಾದಿಗೆ ತೆರೆಗೆ ಬರಲಿದೆ.

ಯಶ್ ನಟನೆಯ ‘ಟಾಕ್ಸಿಕ್’ ಬಗ್ಗೆ ಹರಿದಾಡಿದ ವದಂತಿಗೆ ನಿರ್ಮಾಪಕರಿಂದಲೇ ಸಿಕ್ತು ಸ್ಪಷ್ಟನೆ

ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಗ್ಗೆ ಹರಿದಾಡಿದ ಸುಳ್ಳು ಸುದ್ದಿಗೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡದ ಅತೃಪ್ತಿ, ಬಿಡುಗಡೆ ವಿಳಂಬದ ವದಂತಿಗಳನ್ನು ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ಸ್ ಸ್ಪಷ್ಟಪಡಿಸಿದೆ. ತರುಣ್ ಆದರ್ಶ್ ಟ್ವೀಟ್ ಮೂಲಕ ಮಾರ್ಚ್ 19ರಂದು ಚಿತ್ರ ನಿಗದಿತ ದಿನಾಂಕದಂದೇ ಬರಲಿದೆ ಎಂದು ಖಚಿತಪಡಿಸಲಾಗಿದೆ.

ಛಾಯಾಗ್ರಾಹಕ ಭುವನ್ ಗೌಡ ಮದುವೆಯಲ್ಲಿ ಹ್ಯಾಂಡ್ಸಮ್ ಹಂಕ್ ರೀತಿ ಕಾಣಿಸಿಕೊಂಡ ಯಶ್

Yash In Bhuvan Wedding: ಯಶ್ ಅವರು ಛಾಯಾಗ್ರಾಹಕ ಭುವನ್ ಗೌಡ ಅವರ ಮದುವೆಗೆ ಹಾಜರಿ ಹಾಕಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ‘ಫೋಕಸ್ ಫೋಟೋಗ್ರಫಿ’ ಅವರು ಸೆರೆ ಹಿಡಿದ ಕೆಲವು ಫೋಟೋಗಳು ಹಾಗೂ ಅಭಿಮಾನಿಗಳು ಹಂಚಿಕೊಂಡ ಕೆಲವು ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ