
Yash
1986ರ ಜನವರಿ 8ರಂದು ನವೀನ್ ಕುಮಾರ್ ಗೌಡ ಆಗಿ ಜನಿಸಿದ ಯಶ್, ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹತ್ವದ ಪ್ರಭಾವ ಬೀರಿದ ಪ್ರಮುಖ ಭಾರತೀಯ ನಟ. ಧಾರಾವಾಹಿಗಳಲ್ಲಿ ನಟಿಸಿದ ಅವರು ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ಹೀರೋ ಆಗಿ ಮಿಂಚಿದರು. ಅವರು ಅಭಿನಯನದ ಮೂಲಕ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದರು. ‘ಕೆಜಿಎಫ್: ಅಧ್ಯಾಯ 1’ (2018) ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದರು. ಚಿತ್ರದಲ್ಲಿ ಯಶ್ನ ಒರಟಾದ ಮತ್ತು ಮಹತ್ವಾಕಾಂಕ್ಷೆಯ ರಾಕಿಯ ಪಾತ್ರವು ಅಪಾರ ಪ್ರಶಂಸೆಯನ್ನು ಗಳಿಸಿತು. ಇದು ಅವರನ್ನು ಪ್ಯಾನ್-ಇಂಡಿಯ ಸ್ಟಾರ್ ಆಗಿ ಮಾಡಿತು. ಭಾರತೀಯ ಸಿನಿಮಾ ಜಗತ್ತಿನಲ್ಲಿ ಅವರ ಭವಿಷ್ಯದ ಯೋಜನೆಗಳನ್ನು ಕುತೂಹಲದಿಂದ ನಿರೀಕ್ಷಿಸುತ್ತಿರುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರು ರಾಧಿಕಾ ಪಂಡಿತ್ನ ವರಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
ರಾಧಿಕಾನ ಕೇರ್ ಮಾಡೋ ರೀತಿಗೆ ಯಶ್ನ ಜಂಟಲ್ಮನ್ ಎಂದು ಕರೆದ ಬಾಲಿವುಡ್ ಮಂದಿ
ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ 'ಮನದ ಕಡಲು' ಚಿತ್ರದ ಟ್ರೇಲರ್ ಲಾಂಚ್ನಲ್ಲಿ ಪಾಲ್ಗೊಂಡ ಬಳಿಕ, 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಟಾಕ್ಸಿಕ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.
- Web contact
- Updated on: Mar 25, 2025
- 11:31 am
ಯಶ್ನ ಪ್ರೀತಿಸುತ್ತಿದ್ದ ವಿಚಾರವನ್ನು ಈ ನಟಿಯರ ಬಳಿ ಹೇಳಿಕೊಂಡಿದ್ದ ರಾಧಿಕಾ ಪಂಡಿತ್
ಯಶ್ ಮತ್ತು ರಾಧಿಕಾ ಪಂಡಿಟ್ ಅವರ ಪ್ರೇಮಕಥೆಯ ರಹಸ್ಯವನ್ನು ಕನ್ನಡದ ನಟಿಯರು ಬಹಿರಂಗಪಡಿಸಿದ್ದಾರೆ. ‘ರಾಮಾಚಾರಿ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಅವರು, ರಾಧಿಕಾ ಅವರು ತಮ್ಮ ಪ್ರೇಮ ಸಂಬಂಧವನ್ನು ದೃಢೀಕರಿಸಿದ್ದನ್ನು ಹಂಚಿಕೊಂಡಿದ್ದಾರೆ. ಈ ಜೋಡಿ 2016 ರಲ್ಲಿ ವಿವಾಹವಾಯಿತು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
- Shreelaxmi H
- Updated on: Mar 25, 2025
- 8:43 am
‘ಟಾಕ್ಸಿಕ್’ ಚಿತ್ರಕ್ಕೆ ಠಕ್ಕರ್ ಕೊಡಲು ಬರ್ತಿದೆ ಮತ್ತೆರಡು ಬಿಗ್ ಬಜೆಟ್ ಸಿನಿಮಾ
ಯಶ್ ಅಭಿನಯದ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿ ಅಭಿಮಾನಿಗಳು ಸಹ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಠಕ್ಕರ್ ಕೊಡಲು ಎರಡು ಬಿಗ್ ಬಜೆಟ್ ಚಿತ್ರಗಳು ರೆಡಿ ಆಗಿವೆ. ಆ ಬಗ್ಗೆ ಇಲ್ಲಿದೆ ವಿವರ.
- Rajesh Duggumane
- Updated on: Mar 24, 2025
- 12:55 pm
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದವರು. ಅವರ ಕಾಲ್ಶೀಟ್ ಬೇಕು ಎಂದರೆ ಅಷ್ಟು ಸುಲಭದಲ್ಲಿ ಸಿಗೋದಿಲ್ಲ. ಅದೇ ರೀತಿ ಅವರು ಈವೆಂಟ್ಗಳಿಗೆ ಹೋಗೋದು ಕೂಡ ಕಡಿಮೆಯೇ. ಈಗ ಯಶ್ ಅವರ ಬಗ್ಗೆ ನಿರ್ಮಾಪಕರು ಆಡಿರೋ ಮಾತು ಗಮನ ಸೆಳೆದಿದೆ.
- Rajesh Duggumane
- Updated on: Mar 24, 2025
- 11:39 am
‘ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ?’; ವಿವರಿಸಿದ ಯಶ್
ಯಶ್ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನು ನೋಡದೆ ಇರುವಿಕೆಗೆ ಕಾರಣಗಳನ್ನು ಚರ್ಚಿಸಿ, ಉತ್ತಮ ಸಿನಿಮಾ ನಿರ್ಮಾಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹೊಸಬರಿಗೆ ಅವಕಾಶ ನೀಡುವುದು ಮತ್ತು ಉದ್ಯಮದಲ್ಲಿ ಸ್ವಾಭಿಮಾನದಿಂದ ಕೆಲಸ ಮಾಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
- Rajesh Duggumane
- Updated on: Mar 24, 2025
- 7:30 am
‘ಆ ವ್ಯಕ್ತಿಯಿಂದ ನಾನು ಇಲ್ಲಿದ್ದೇನೆ’; ಮೊದಲ ಸಿನಿಮಾ ಅವಕಾಶ ಕೊಟ್ಟ ನಿರ್ಮಾಪಕನಿಗೆ ಯಶ್ ಧನ್ಯವಾದ
ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶಸ್ಸಿನ ಹಿಂದಿರುವ ವ್ಯಕ್ತಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಮೊದಲ ಅವಕಾಶ ನೀಡಿದ ನಿರ್ಮಾಪಕರನ್ನು ಅವರು ಸ್ಮರಿಸಿದ್ದಾರೆ. 'ಮೊಗ್ಗಿನ ಮನಸು' ಚಿತ್ರದಲ್ಲಿ ಅವಕಾಶ ದೊರೆತ ರೀತಿಯನ್ನು ವಿವರಿಸಿದ್ದಾರೆ. ಧಾರಾವಾಹಿ ನಟನೆಯಿಂದ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅವರ ಪ್ರಯಾಣ ಸಾಕಷ್ಟು ಚಾಲೆಂಜಿಂಗ್ ಆಗಿತ್ತು.
- Rajesh Duggumane
- Updated on: Mar 24, 2025
- 6:52 am
‘ಟಾಕ್ಸಿಕ್’ ಬಗ್ಗೆ ಅಪ್ಡೇಟ್ ಕೊಡ್ತೀನಿ: ‘ಮನದ ಕಡಲು’ ಇವೆಂಟ್ನಲ್ಲಿ ಯಶ್ ಮಾತು
ಯೋಗರಾಜ್ ಭಟ್ ನಿರ್ದೇಶಿಸಿ, ಈ ಕೃಷ್ಣಪ್ಪ ನಿರ್ಮಾಣ ಮಾಡಿರುವ ‘ಮನದ ಕಡಲು’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಯಶ್ ಅತಿಥಿಯಾಗಿ ಆಗಮಿಸಿ, ಇಡೀ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹೊಸ ಪ್ರತಿಭೆಗಳ ಮೇಲೆ ನಿಮ್ಮ ಆರ್ಶೀವಾದ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು.
- Web contact
- Updated on: Mar 23, 2025
- 11:09 pm
ಮನದ ಕಡಲು ಇವೆಂಟ್ಗೆ ಬಂದ ಯಶ್, ಬಾಚಿ ತಬ್ಬಿದ ಮುರಳಿ ಮಾಸ್ಟರ್
Yash: ಯೋಗರಾಜ್ ಭಟ್ ನಿರ್ದೇಶನ ಮಾಡಿ, ಈ ಕೃಷ್ಣಪ್ಪ ನಿರ್ಮಾಣ ಮಾಡಿರುವ ‘ಮನದ ಕಡಲು’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಯಶ್ ಅತಿಥಿಯಾಗಿ ಬಂದಿದ್ದಾರೆ. ಯಾವ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದ ನಟ ಯಶ್ ಇಂದು ‘ಮನದ ಕಡಲು’ ಸಿನಿಮಾ ಕಾರ್ಯಕ್ರಮಕ್ಕೆ ಬಂದಿರುವುದು ಬಲು ವಿಶೇಷ. ಕಾರ್ಯಕ್ರಮಕ್ಕೆ ಬಂದ ಯಶ್ ಅನ್ನು ಮುರಳಿ ಮಾಸ್ಟರ್ ತಬ್ಬಿ ಹಿಡಿದಿದ್ದು ಹೀಗೆ...
- Manjunatha C
- Updated on: Mar 24, 2025
- 6:31 am
ಅಭಿಮಾನಿಗಳಿಗೆ ಯಶ್ನ ಹತ್ತಿರದಿಂದ ನೋಡೋ ಅವಕಾಶ; ಎಲ್ಲಿ? ಯಾವಾಗ?
ರಾಕಿಂಗ್ ಸ್ಟಾರ್ ಯಶ್ ಅವರು ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲೇ ಈ ಕಾರ್ಯಕ್ರಮ ನಡೆಯಲಿದೆ. ಯಶ್ ಅವರ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಷಯ.
- Rajesh Duggumane
- Updated on: Mar 22, 2025
- 2:22 pm
ಯಶ್ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಇದು ಕನ್ನಡ ಚಿತ್ರರಂಗದ ಹೆಮ್ಮೆ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆ.ಜೆ. ಪೆರ್ರಿ ಅವರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು ವಿಶೇಷ. ಚಿತ್ರದ ಟೀಸರ್ ಜನವರಿ 8 ರಂದು ಬಿಡುಗಡೆಯಾಗಿದೆ. ಆರಂಭದಲ್ಲಿ ಏಪ್ರಿಲ್ ನಲ್ಲಿ ಬಿಡುಗಡೆ ಎಂದು ಘೋಷಿಸಲಾಗಿತ್ತು ಆದರೆ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.
- Rajesh Duggumane
- Updated on: Mar 13, 2025
- 7:34 am