AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲ್ಮೆಟ್​ ಹಾಕಿಲ್ಲ ಅಂತಾ.. ಬೈಕ್​ ಸವಾರನ ಹಣೆಗೆ Key ಯಿಂದ ಇರಿದೇಬಿಟ್ಟ ಖಾಕಿ!

ಡೆಹ್ರಾಡೂನ್​: ಹೆಲ್ಮೆಟ್​ ಧರಿಸದ ಬೈಕ್​ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್​ನ ಉಧಮ್​ ಸಿಂಗ್​ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೈಕ್​ಗೆ ಪೆಟ್ರೋಲ್​ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್​ಪಾಯಿಂಟ್​ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್​ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್​ ಬೀಗದ […]

ಹೆಲ್ಮೆಟ್​ ಹಾಕಿಲ್ಲ ಅಂತಾ.. ಬೈಕ್​ ಸವಾರನ ಹಣೆಗೆ Key ಯಿಂದ ಇರಿದೇಬಿಟ್ಟ ಖಾಕಿ!
KUSHAL V
| Edited By: |

Updated on:Jul 29, 2020 | 1:45 PM

Share

ಡೆಹ್ರಾಡೂನ್​: ಹೆಲ್ಮೆಟ್​ ಧರಿಸದ ಬೈಕ್​ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್​ನ ಉಧಮ್​ ಸಿಂಗ್​ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬೈಕ್​ಗೆ ಪೆಟ್ರೋಲ್​ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್​ಪಾಯಿಂಟ್​ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್​ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್​ ಬೀಗದ ಕೈಯನ್ನ ಕಸಿದು ಆತನ ಹಣೆಗೆ ಇರಿದುಬಿಟ್ಟರಂತೆ.

ಮೂವರು ಪೊಲೀಸರನ್ನ ಅಮಾನತು ಕೊನೆಗೆ, ಇರಿತದಿಂದ ತೀವ್ರ ರಕ್ತಸ್ರಾವವಾದ ಯುವಕನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಪೊಲೀಸರ ವಿರುದ್ಧ ಪ್ರತಿಭಟನೆಗೂ ಇಳಿದಿದ್ದಾರೆ. ಸ್ಥಳೀಯ ಶಾಸಕ ರಾಜ್​ಕುಮಾರ್​ ಠುಕ್ರಾಲ್​ ಮಧ್ಯ ಪ್ರವೇಶಿಸಿದ ಮೇಲೆ ಪ್ರತಿಭಟನೆಯನ್ನ ಕೈಬಿಡಲಾಯ್ತು.

ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಪೊಲೀಸರನ್ನ ಅಮಾನತ್ತು ಮಾಡಲಾಗಿದೆ. ಜೊತೆಗೆ, ತನಿಖೆಗೆ ಕೂಡ ಆದೇಶ ನೀಡಲಾಗಿದೆ.

Published On - 2:14 pm, Tue, 28 July 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ