AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

2014 ರ ಮೊದಲು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದ ಬಗ್ಗೆ ಬಿಜೆಪಿ ದಾಳಿ ನಡೆಸಿತು. ಅದೇ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿಯು ಭ್ರಷ್ಟಾಚಾರವನ್ನ ಮರೆಮಾಚುತ್ತಿದೆ ಎಂದು ಆರೋಪಿಸಿತು.

Rafale deal ರಾಹುಲ್ ಗಾಂಧಿ ಉತ್ತರಿಸಲಿ: ಹೊಸ ರಫೇಲ್ ವರದಿ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ರಫೇಲ್ ಜೆಟ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Nov 09, 2021 | 2:06 PM

Share

ದೆಹಲಿ: 2013 ರ ಮೊದಲು ರಫೇಲ್ ಡೀಲ್‌ನಲ್ಲಿ (Rafale deal) ಭಾಗಿಯಾಗಿರುವ ಮಧ್ಯವರ್ತಿಗೆ ಪಾವತಿಸಿದ ಕಿಕ್‌ಬ್ಯಾಕ್‌ಗಳ ಕುರಿತ ಆರೋಪ ಮತ್ತು ಸಾಕ್ಷ್ಯಾಧಾರಗಳ ಹೊರತಾಗಿಯೂ ಸಿಬಿಐ (CBI) ತನಿಖೆ ಮಾಡಲು ವಿಫಲವಾಗಿದೆ ಎಂಬ ಫ್ರೆಂಚ್ ಪೋರ್ಟಲ್ ಮೀಡಿಯಾಪಾರ್ಟ್‌ನ (French portal Mediapart) ವರದಿ ಬೆನ್ನಲ್ಲೇ ರಾಜಕೀಯ ವಾಗ್ದಾಳಿ ಶುರು ಆಗಿದೆ. 2014 ರ ಮೊದಲು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಭ್ರಷ್ಟಾಚಾರದ ಆರೋಪದ ಬಗ್ಗೆ ಬಿಜೆಪಿ ದಾಳಿ ನಡೆಸಿತು. ಅದೇ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿಯು ಭ್ರಷ್ಟಾಚಾರವನ್ನ ಮರೆಮಾಚುತ್ತಿದೆ ಎಂದು ಆರೋಪಿಸಿತು. ಐಎನ್‌ಸಿ (INC) (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ಎಂದರೆ I need Commission (ನನಗೆ ಕಮಿಷನ್ ಬೇಕು) ಎಂದರ್ಥ. ಯುಪಿಎ (UPA) ಅಧಿಕಾರಾವಧಿಯಲ್ಲಿ ಅವರು ಪ್ರತಿ ಒಪ್ಪಂದದೊಳಗೆ ಒಪ್ಪಂದ ಮಾಡಿಕೊಂಡಿದ್ದರು ಮತ್ತು ಅವರು ಇನ್ನೂ ಒಪ್ಪಂದವನ್ನು ಮಾಡಲು ಸಾಧ್ಯವಾಗಲಿಲ್ಲ ಎಂಬುದು ಉತ್ಪ್ರೇಕ್ಷೆ ಅಲ್ಲ ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕಾಂಗ್ರೆಸ್ ನ ಸಂಕ್ಷಿಪ್ತ ರೂಪವನ್ನು ಲೇವಡಿ ಮಾಡಿ ಹೇಳಿದ್ದಾರೆ.

“ಆಪರೇಷನ್ ಕವರ್-ಅಪ್‌ನ ಇತ್ತೀಚಿನ ಬಹಿರಂಗಪಡಿಸುವಿಕೆಯು ರಫೇಲ್ ಭ್ರಷ್ಟಾಚಾರವನ್ನು ಹೂಳಲು ನರೇಂದ್ರ ಮೋದಿ ಸರ್ಕಾರ-ಸಿಬಿಐ-ಜಾರಿ ನಿರ್ದೇಶನಾಲಯದ ನಡುವಿನ ಸಂಶಯಾಸ್ಪದ ಸಂಬಂಧವನ್ನು ಬಹಿರಂಗಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಮೀಡಿಯಾಪಾರ್ಟ್ ತನ್ನ ಇತ್ತೀಚಿನ ವರದಿಯಲ್ಲಿ ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಭಾರತಕ್ಕೆ 36 ರಫೇಲ್ ಫೈಟರ್ ಜೆಟ್‌ಗಳನ್ನು ಮಾರಾಟ ಮಾಡಲು ಸಹಾಯ ಮಾಡಲು ಮಧ್ಯವರ್ತಿಯೊಬ್ಬರಿಗೆ ಕನಿಷ್ಠ 7.5 ಮಿಲಿಯನ್ ಯುರೋಗಳನ್ನು (ಸುಮಾರು ₹ 650 ಮಿಲಿಯನ್) ಲಂಚವಾಗಿ ಪಾವತಿಸಿದೆ ಮತ್ತು ಭಾರತೀಯ ಏಜೆನ್ಸಿಗಳು ದಾಖಲೆಗಳಿದ್ದರೂ ಅದರ ಬಗ್ಗೆ ತನಿಖೆ ನಡೆಸಲು ವಿಫಲವಾಗಿವೆ ಎಂದು ಹೇಳಿದೆ.

₹ 59,000 ಕೋಟಿ ರಫೇಲ್ ಡೀಲ್‌ನಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಮೀಡಿಯಾಪಾರ್ಟ್, ಆಪಾದಿತ ಪಾವತಿಗಳಲ್ಲಿ ಹೆಚ್ಚಿನವು 2013 ಕ್ಕಿಂತ ಮೊದಲು ಮಾಡಲಾಗಿದೆ ಎಂದು ಹೇಳಿದೆ. ಎನ್​​ಡಿಟಿವಿ ಈ ದಾಖಲೆಗಳ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ ಮತ್ತು ಈ ಬಗ್ಗೆ ಪ್ರತಿಕ್ರಿಯೆಗಾಗಿ ಸಿಬಿಐನ್ನು ಸಂಪರ್ಕಿಸಿದೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಆಪಾದಿತ ಮಧ್ಯವರ್ತಿ ಸುಷೇನ್ ಗುಪ್ತಾ ಅವರಿಗೆ ರಹಸ್ಯ ಕಮಿಷನ್‌ಗಳನ್ನು ಪಾವತಿಸಲು ಡಸಾಲ್ಟ್‌ಗೆ ಅನುವು ಮಾಡಿಕೊಟ್ಟಿದೆ ಎಂದು ಹೇಳಲಾದ ಸುಳ್ಳು ಇನ್‌ವಾಯ್ಸ್‌ಗಳನ್ನು ಮೀಡಿಯಾಪಾರ್ಟ್ ಪ್ರಕಟಿಸಿದೆ. “ಈ ದಾಖಲೆಗಳ ಅಸ್ತಿತ್ವದ ಹೊರತಾಗಿಯೂ, ಭಾರತೀಯ ಫೆಡರಲ್ ಪೊಲೀಸರು ಈ ಸಂಬಂಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿಲ್ಲ” ಎಂದು ಪೋರ್ಟಲ್ ಹೇಳುತ್ತದೆ. ಅದರ ವರದಿಯ ಪ್ರಕಾರ, ರಫೇಲ್ ಜೆಟ್‌ಗಳ ಮಾರಾಟವನ್ನು ಸುರಕ್ಷಿತವಾಗಿರಿಸಲು ಡಸಾಲ್ಟ್ ಸುಸೇನ್ ಗುಪ್ತಾಗೆ ಕಿಕ್‌ಬ್ಯಾಕ್‌ಗಳನ್ನು ಪಾವತಿಸಿದೆ ಎಂಬುದಕ್ಕೆ ಅಕ್ಟೋಬರ್ 2018 ರಿಂದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಬಳಿ ಪುರಾವೆಗಳಿವೆ.

ಎರಡು ಏಜೆನ್ಸಿಗಳು ತನಿಖೆ ನಡೆಸುತ್ತಿರುವ ಮತ್ತೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ವಿವಿಐಪಿ ಚಾಪರ್‌ಗಳ ಪೂರೈಕೆಯನ್ನು ಒಳಗೊಂಡ ಹಗರಣದಲ್ಲಿ ಹೊರಹೊಮ್ಮಿದ ಗೌಪ್ಯ ದಾಖಲೆಗಳಲ್ಲಿ ಸಾಕ್ಷ್ಯವಿದೆ ಎಂದು ವರದಿ ಹೇಳುತ್ತದೆ.

ಇದನ್ನೂ ಓದಿ: ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ಗಳನ್ನು ಸಿಬಿಐ ತನಿಖೆ ಮಾಡದಿರಲು ನಿರ್ಧರಿಸಿದೆ ಎಂದ ಫ್ರೆಂಚ್ ಮಾಧ್ಯಮ ವರದಿ

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು