AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ

1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ, ಒಪ್ಪಂದ ಮಾಡಿಕೊಂಡಿದ್ದರು ಎಂದು ದೇವೇಂದ್ರ ಫಡ್ನವೀಸ್​ ಆರೋಪಿಸಿದರು.

ಹೇಳಿದಂತೆ ನಡೆದ ದೇವೇಂದ್ರ ಫಡ್ನವೀಸ್​; ಮುಂಬೈ ಸ್ಫೋಟದ ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರದ ಬಗ್ಗೆ ಮಾಹಿತಿ ಬಹಿರಂಗ
ದೇವೆಂದ್ರ ಫಡ್ನವೀಸ್​
TV9 Web
| Edited By: |

Updated on:Nov 09, 2021 | 3:38 PM

Share

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ದೀಪಾವಳಿಗೂ ಮೊದಲು ಒಂದು ಮಾತಾಡಿದ್ದರು. ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ಗೆ ಭೂಗತ ಲೋಕದ ಸಂಪರ್ಕವಿದೆ ಎಂಬುದನ್ನು ನಾನು ದೀಪಾವಳಿಯ ನಂತರ, ಸಾಕ್ಷಿ ಸಮೇತ ಬಹಿರಂಗಪಡಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಸುದ್ದಿಗೋಷ್ಠಿ ನಡೆಸಿ,  ನವಾಬ್​ ಮಲ್ಲಿಕ್​ಗೆ ಭೂಗತ ಜಗತ್ತಿನ ನಂಟಿದೆ ಎಂಬುದನ್ನು ಪುನರುಚ್ಚರಿಸಿದರು. ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ಪ್ರಸ್ತುತಪಡಿಸಿದ್ದಾರೆ.

ನವಾಬ್​ ಮಲ್ಲಿಕ್​ ಭೂಗತ ಜಗತ್ತಿನ ನಂಟಿನ ಕುರಿತು ದೀಪಾವಳಿ ನಂತರ ಹೇಳುತ್ತೇನೆ ಎಂದು ಹೇಳಿದ್ದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಪಡೆಯಲು ಸ್ವಲ್ಪ ಸಮಯ ಹಿಡಿಯಿತು ಎಂದು ಹೇಳಿದ ದೇವೇಂದ್ರ ಫಡ್ನವೀಸ್​, 1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟದ ಇಬ್ಬರು ಆರೋಪಿಗಳೊಂದಿಗೆ ನವಾಬ್​ ಮಲ್ಲಿಕ್​ ಆಸ್ತಿ ವ್ಯವಹಾರ, ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿದರು. ಕುರ್ಲಾದ ಎಲ್​ಬಿಎಸ್​ ರಸ್ತೆಯಲ್ಲಿ 2.8 ಎಕರೆ ವಿಸ್ತೀರ್ಣದ ಪ್ಲಾಟ್​ ಇದೆ. ಅದನ್ನು ಗೌವಾಲಾ ಕಾಂಪೌಂಡ್​ ಎಂದು ಕರೆಯಲಾಗುತ್ತದೆ. ಈ ಆಸ್ತಿಯನ್ನು ನವಾಬ್​ ಮಲ್ಲಿಕ್​ ಕುಟುಂಬಕ್ಕೆ ಸೇರಿದ  ಸಾಲಿಡಸ್​ ಇನ್ವೆಸ್ಟ್​ಮೆಂಟ್​ ಪ್ರೈವೇಟ್​ ಲಿಮಿಟೆಡ್​ ಎಂಬ ಕಂಪನಿಯ ಮೂಲಕ ಖರೀದಿಸಲಾಗಿದೆ. ಅಂದಹಾಗೆ ಈ ಆಸ್ತಿಯನ್ನು 1993ರ ಬಾಂಬೆ ಸ್ಫೋಟದ ಇಬ್ಬರು ಆರೋಪಿಗಳಾದ, ಭೂಗತ ಪಾತಕಿಗಳಾದ ಸಲೀಂ ಪಟೇಲ್​ ಮತ್ತು ಸರ್ದಾರ್ ಶಹಾಬ್​ ಅಲಿ ಖಾನ್​​ರಿಂದ ಖರೀದಿಸಲಾಗಿದೆ. ಆಸ್ತಿ ಖರೀದಿ 30 ಲಕ್ಷ ರೂ.ಗೆ ಒಪ್ಪಂದವಾಗಿತ್ತು. ಆದರೆ ಇವರು ಕೇವಲ 20 ಲಕ್ಷ ರೂ.ಪಾವತಿಸಿದ್ದಾರೆ ಎಂದು ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ನವಾಬ್​ ಮಲ್ಲಿಕ್​ ಸಚಿವರಾಗಿದ್ದಾಗಲೇ ಅಂದರೆ 2003ರಿಂದ 2005ರ ಅವಧಿಯಲ್ಲಿ ಈ ಆಸ್ತಿ ಡೀಲ್​ ಆಗಿದೆ. ಸಲೀಂ ಪಟೇಲ್​ ಯಾರೆಂದು ನವಾಬ್​ಗೆ ಗೊತ್ತಿರಬೇಕಲ್ಲ? ಸ್ಫೋಟ ಮಾಡಿದ ಆರೋಪಿಗಳಿಂದ ಭೂಮಿ ಯಾಕೆ ಖರೀದಿಸಬೇಕು? ಅವರ್ಯಾಕೆ ಮೂರು ಎಕರೆ ಪ್ಲಾಟ್​​ನ್ನು 30 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು ಎಂದು ದೇವೇಂದ್ರ ಫಡ್ನವೀಸ್​ ಪ್ರಶ್ನಿಸಿದರು. ಇದು ಭೂಗತ ಲೋಕದೊಂದಿಗೆ ನೇರವಾದ ಸಂಪರ್ಕವೇ ಆಗಿದೆ. ಆರ್​ಡಿಎಕ್ಸ್​ ತಂದು, ಸ್ಫೋಟ ಮಾಡುವವರ ಜತೆ ವ್ಯವಹಾರ ಮಾಡಿದ್ದೇಕೆ? ಇದಕ್ಕೆಲ್ಲ ನನ್ನ ಬಳಿ ಸಾಕ್ಷಿಯಿದೆ. ಇದನ್ನು ನಾನು ಸಂಬಂಧಪಟ್ಟ ಆಡಳಿತಕ್ಕೆ ಮತ್ತು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ಗೆ ಕಳಿಸುತ್ತೇನೆ ಎಂದು ಹೇಳಿದರು.

ಈ ಸಲೀಂ ಪಟೇಲ್​ ಗ್ಯಾಂಗ್​ಸ್ಟರ್​ ದಾವೂದ್ ಇಬ್ರಾಹಿಂನ ಸಹಾಯಕನೇ ಆಗಿದ್ದಾನೆ. ದಾವೂಬ್​ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕಾರ್​​ ಕಾರಿನ ಡ್ರೈವರ್ ಆಗಿದ್ದ. 1993ರ ಮುಂಬೈ ಸ್ಫೋಟದ ಮಾಸ್ಟರ್​ ಮೈಂಡ್​ ಆಗಿರುವ ದಾವೂದ್​ ಇಬ್ರಾಹಿಂ ಆಪ್ತ ಸಲೀಂ ಪಟೇಲ್​ ಕೂಡ ಭೂಗತ ಜಗತ್ತಿನಲ್ಲಿ ಇದ್ದವನೇ ಆಗಿದ್ದಾನೆ.  ಈ ಸಲೀಂ ಪಟೇಲ್​ ಮತ್ತು ಹಸೀನಾ ಇಬ್ಬರೂ ಸೇರಿ ಭೂ ಮಾಫಿಯಾ ನಡೆಸುತ್ತಿದ್ದರು. ಭೂಮಿ ಕಬಳಿಸುವುದೇ ಅವರ ಕಾಯಕವಾಗಿತ್ತು. ಪವರ್​ ಆಫ್​ ಅಟಾರ್ನಿಯ ದಾಖಲೆಗಳನ್ನೆಲ್ಲ ಸಲೀಂ ಪಟೇಲ್​ ಹೆಸರಿನಲ್ಲಿಯೇ ಮಾಡಲಾಗಿದೆ ಎಂದು ದೇವೇಂದ್ರ ಫಡ್ನವೀಸ್​ ಹೇಳಿದ್ದಾರೆ.

ಆಸ್ತಿ ಖರೀದಿ ವೇಳೆ ಪ್ರತಿ ಚದರ್ ಅಡಿಗೆ 25 ರೂಪಾಯಿಯೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ನಂತರ ಪ್ರತಿ ಚದರ್ ಅಡಿಗೆ 15 ರೂ.ನಂತೆ ಖರೀದಿ ಮಾಡಲಾಗಿದೆ. ಈ ಒಪ್ಪಂದಕ್ಕೆ ಸಹಿಹಾಕಿದವರಲ್ಲಿ ಒಬ್ಬರು ನವಾಬ್​ ಮಲ್ಲಿಕ್​ ಪುತ್ರ ಫಾರಜ್​ ಮಲ್ಲಿಕ್​ ಎಂದೂ ಫಡ್ನವೀಸ್​ ಬಹಿರಂಗಪಡಿಸಿದ್ದಾರೆ. ಮೂರು ಎಕರೆಗೆ 30 ಲಕ್ಷ ರೂ.ಎಂದು ಆಗಿದ್ದರೂ, ನಂತರ ಪಾವತಿಯಾಗಿದ್ದು ಕೇವಲ 20 ಲಕ್ಷ ರೂ. ಭೂಗತ ಪಾತಕಿಗಳ ಆಸ್ತಿ ರಕ್ಷಣೆಗಾಗಿಯಷ್ಟೇ ಈ ವ್ಯವಹಾರ ನಡೆದಿತ್ತು ಎಂದೂ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ನವಾಬ್​ ಮಲ್ಲಿಕ್​ ಪುತ್ರನ ಪ್ರತಿಕ್ರಿಯೆ ದೇವೇಂದ್ರ ಫಡ್ನವೀಸ್ ಆರೋಪಕ್ಕೆ ನವಾಬ್​ ಮಲ್ಲಿಕ್​ ಪುತ್ರ ಫಾರಜ್​ ಮಲ್ಲಿಕ್​ ಪ್ರತಿಕ್ರಿಯೆ ನೀಡಿದ್ದಾರೆ. ಸಲೀಂ ಪಟೇಲ್​ ಆಸ್ತಿಗೆ ನಾನು ಗೇಣಿದಾರನಾಗಿದ್ದೆ. ಸುಮಾರು 400 ಮಂದಿ ತೆರಿಗೆ ಪಾವತಿ ಮಾಡುತ್ತಿದ್ದರು. ಅದಕ್ಕೆಲ್ಲ ದಾಖಲೆಯಿದೆ ಮತ್ತು ಅದನ್ನು ನೋಡಿ ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯ ಮಹಾರಾಷ್ಟ್ರ ಪೊಲೀಸರಿಗೆ ಇದೆ. ನಾನೇನೂ ತಪ್ಪು ಮಾಡಿಲ್ಲ. ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಇದೆಲ್ಲ ಶುರುವಾಗಿದ್ದು ಮುಂಬೈ ಡ್ರಗ್ಸ್​ ಕೇಸ್​​ ವಿಚಾರದಲ್ಲಿ. ಈಗಾಗಲೇ ಬಂಧಿತನಾಗಿರುವ ಡ್ರಗ್​ ಪೆಡ್ಲರ್​​ನೊಬ್ಬ ದೇವೇಂದ್ರ ಫಡ್ನವೀಸ್​ ಮತ್ತು ಅವರ ಪತ್ನಿಯೊಂದಿಗೆ ನಿಂತಿರುವ ಫೋಟೋವನ್ನು ನವಾಬ್​ ಮಲ್ಲಿಕ್​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ವಾಗ್ದಾಳಿ ನಡೆಸಿದ್ದರು. ಡ್ರಗ್ಸ್​ ಸೇವನೆ, ಸಾಗಾಟಗಳೆಲ್ಲ ಹೆಚ್ಚಾಗಿದ್ದೇ ದೇವೇಂದ್ರ ಫಡ್ನವೀಸ್​ ಆಡಳಿತದಲ್ಲಿ ಎಂದು ಆರೋಪಿಸಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ದೇವೇಂದ್ರ ಫಡ್ನವೀಸ್​, ಒಂದು ಸಂಗೀತ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಫೋಟೋ ಅದು. ಹಾಗಂತ ನಮಗೆ ನಂಟಿದೆ ಎಂದು ಅರ್ಥವಲ್ಲ. ಆದರೆ ದೀಪಾವಳಿ ನಂತರ ನವಾಬ್​ ಮಲ್ಲಿಕ್​ಗೆ ಸಂಬಂಧಿಸಿದ ಬಹುದೊಡ್ಡ ವಿಷಯವನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದರು.

ಇದನ್ನೂ ಓದಿ: ಬಿಜೆಪಿ ಈಗ ಕಲಬೆರಕೆ ಪಕ್ಷ; ಒರಿಜಿನಲ್ ಬಿಜೆಪಿ ಆಗಿ ಉಳಿದಿಲ್ಲ: ಪ್ರಮೋದ್ ಮುತಾಲಿಕ್

Published On - 3:11 pm, Tue, 9 November 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ