AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ: ಸಂಜಯ್ ರಾವುತ್

Sanjay Raut ನನ್ನನ್ನು ಟಾರ್ಗೆಟ್ ಮಾಡಿದ ದಿನ ಮತ್ತು ನನ್ನ ಆಪ್ತರ ಮೇಲೆ ದಾಳಿ ಮಾಡಿದಂದು ರಾತ್ರಿ ನಾನು ಅಮಿತ್ ಶಾಗೆ ಕರೆ ಮಾಡಿದೆ. ನಾನು ನಿಮಗೆ ಗೌರವ ನೀಡುತ್ತೇನೆ. ನೀವು ದೇಶದ ದೊಡ್ಡ ನಾಯಕ ಮತ್ತು ಗೃಹ ಮಂತ್ರಿ, ಆದರೆ ಏನು ನಡೆದೆದಿಯೋ ಅದು ಸರಿಯಲ್ಲ. ನಿಮಗೆ ನನ್ನೊಂದಿಗೆ ಯಾವುದೇ ದ್ವೇಷವಿದ್ದರೆ ನನ್ನನ್ನು ಗುರಿಯಾಗಿಸಿ...

ಮಹಾರಾಷ್ಟ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ: ಸಂಜಯ್ ರಾವುತ್
ಸಂಜಯ್ ರಾವುತ್
TV9 Web
| Edited By: |

Updated on:Feb 16, 2022 | 11:16 AM

Share

ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರವನ್ನು ಉರುಳಿಸಲು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ  (Uddhav Thackeray) ಸೇರಿದಂತೆ ಅದರ ನಾಯಕರು ಮತ್ತು ಅವರ ಕುಟುಂಬಗಳನ್ನು ಗುರಿಯಾಗಿಸಲು ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ (Sanjay Raut) ಮಂಗಳವಾರ ಆರೋಪಿಸಿದ್ದಾರೆ. ಮುಂಬೈನ ದಾದರ್‌ನಲ್ಲಿರುವ ಶಿವಸೇನೆ ಪ್ರಧಾನ ಕಚೇರಿಯಲ್ಲಿ ಒಂದು ಗಂಟೆಗಳ ಕಾಲ ಮಾಧ್ಯಮಗೋಷ್ಠಿ ನಡೆಸಿದ ರಾವತ್, ತನಗೆ ಸಂಬಂಧಿಸಿದ ಜನರ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿದ ಬಳಿಕ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿದೆ ಎಂದು ಹೇಳಿದ್ದಾರೆ. “ನನ್ನನ್ನು ಟಾರ್ಗೆಟ್ ಮಾಡಿದ ದಿನ ಮತ್ತು ನನ್ನ ಆಪ್ತರ ಮೇಲೆ ದಾಳಿ ಮಾಡಿದಂದು ರಾತ್ರಿ ನಾನು ಅಮಿತ್ ಶಾಗೆ ಕರೆ ಮಾಡಿದೆ. ನಾನು ನಿಮಗೆ ಗೌರವ ನೀಡುತ್ತೇನೆ. ನೀವು ದೇಶದ ದೊಡ್ಡ ನಾಯಕ ಮತ್ತು ಗೃಹ ಮಂತ್ರಿ, ಆದರೆ ಏನು ನಡೆದೆದಿಯೋ ಅದು ಸರಿಯಲ್ಲ. ನಿಮಗೆ ನನ್ನೊಂದಿಗೆ ಯಾವುದೇ ದ್ವೇಷವಿದ್ದರೆ ನನ್ನನ್ನು ಗುರಿಯಾಗಿಸಿ, ನನಗೆ ಚಿತ್ರಹಿಂಸೆ ನೀಡಿ, ಅವರು (ಕೇಂದ್ರ ಏಜೆನ್ಸಿಗಳು) ನನ್ನ ಸ್ನೇಹಿತರು ಮತ್ತು ಸಂಬಂಧಿಕರನ್ನು ಏಕೆ ಗುರಿಯಾಗಿಸುತ್ತಾರೆ? ಎಂದು ನಾನು ಕೇಳಿದ್ದೆ ಅಂದಿದ್ದಾರೆ ರಾವುತ್.

ಹಣಕಾಸು ಅಪರಾಧಗಳ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಥವಾ ಇಡಿ ತನ್ನ ಮಗಳ ಮದುವೆಯಲ್ಲಿ ಭಾಗಿಯಾದ ಹೂವಿನಂಗಡಿಯವ, ಡೆಕೋರೇಟರ್, ಬ್ಯೂಟಿಷಿಯನ್ ಮತ್ತು ಅವರ ಟೈಲರ್ ಸೇರಿದಂತೆ ಜನರನ್ನು ವಿಚಾರಣೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ತಾವು ಅಥವಾ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಶಿವಸೇನೆ, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್‌ನ ಯಾವುದೇ ಸದಸ್ಯರೂ ಇಂತಹ ತಂತ್ರಗಳಿಗೆ ಮಣಿಯುವುದಿಲ್ಲ ಎಂದು  ರಾವುತ್ ಹೇಳಿದ್ದಾರೆ.

ಕಳೆದ ತಿಂಗಳು ತಮ್ಮನ್ನು “ಕೆಲವು ಬಿಜೆಪಿ ನಾಯಕರು” ಸಂಪರ್ಕಿಸಿದ್ದು, ಅವರು ಪಕ್ಷವನ್ನು ಬದಲಾಯಿಸುವಂತೆ ಕೇಳಿಕೊಂಡರು ಮತ್ತು ಹಾಗೆ ಮಾಡದಿದ್ದಕ್ಕಾಗಿ ಅವರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು ಎಂದಿದ್ದಾರೆ ರಾವುತ್.

“20 ದಿನಗಳ ಹಿಂದೆ ಬಿಜೆಪಿಯ ಕೆಲವು ಹಿರಿಯರು ನನ್ನನ್ನು ಭೇಟಿಯಾಗಿ ನಿಷ್ಠೆಯನ್ನು ಬದಲಾಯಿಸುವಂತೆ ಕೇಳಿಕೊಂಡರು. ನಾವು ಹೇಗಾದರೂ ಈ ಸರ್ಕಾರವನ್ನು ಬೀಳಿಸಬೇಕೆಂದು ಬಯಸುತ್ತೇವೆ. ನಾವು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುತ್ತೇವೆ ಅಥವಾ ನಾವು ಶಾಸಕರ ಗುಂಪನ್ನು ಒಡೆದು ಸರ್ಕಾರ ರಚಿಸುತ್ತೇವೆ ಎಂದಿದ್ದು, ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದೆ.

ಹೀಗೆ ಬಗ್ಗದಿದ್ದರೆ ಕೇಂದ್ರ ಏಜೆನ್ಸಿಗಳು ಅವರನ್ನು “ಸರಿಪಡಿಸುತ್ತವೆ” ಎಂದು ಅವರು ಹೇಳಿದ್ದರು ಎಂದು ರಾವುತ್  ಆರೋಪಿಸಿದ್ದಾರೆ.

ಶರದ್ ಪವಾರ್ ಅವರ ಸಂಬಂಧಿಕರಿಗೆ ಹತ್ತಿರವಿರುವ ಜನರ ಮೇಲೆ ತನಿಖಾ ಸಂಸ್ಥೆ ನಡೆಸಿದ ದಾಳಿಗಳನ್ನು ಬಿಜೆಪಿ ನಾಯಕರು ಉಲ್ಲೇಖಿಸಿದ್ದಾರೆ ಎಂದು ರಾವುತ್ ಹೇಳಿದ್ದಾರೆ.

ಇದಾದ ಕೆಲವೇ ದಿನಗಳಲ್ಲಿ, ಜಾರಿ ನಿರ್ದೇಶನಾಲಯವು ತನ್ನ ಆಪ್ತರ ಮೇಲೆ “ಅತ್ಯಂತ ಕೆಟ್ಟ ರೀತಿಯಲ್ಲಿ” ಗುರಿಯಾಗಿಸಲು ಪ್ರಾರಂಭಿಸಿತು ಎಂದು ಶ ರಾವುತ್ ಹೇಳಿದರು.

“ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಲು ಕೇಂದ್ರ ಏಜೆನ್ಸಿಗಳನ್ನು ಬಳಸಲಾಗುತ್ತಿದೆ, ಆದರೆ ನಾವು ಬಗ್ಗುತ್ತೇವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಿಲ್ಲ. ನಾವು ಇದನ್ನು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರಿಂದ ಕಲಿತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರದ ವೈನ್ ಮಾರಾಟ ನೀತಿ ವಿರುದ್ಧ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ರದ್ದು

Published On - 10:39 am, Wed, 16 February 22

Follow Us
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ