AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ. ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ. ಅಷ್ಟೇ.. ಫ್ರೆಂಡ್‌ […]

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?
Guru
| Updated By: ಸಾಧು ಶ್ರೀನಾಥ್​|

Updated on: Aug 18, 2020 | 1:25 PM

Share

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.

ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ.

ಅಷ್ಟೇ.. ಫ್ರೆಂಡ್‌ ಮೀಟ್‌ ಮಾಡಿ ಬರ್ತಿನಿ ಅಂತಾ ಹೊರಗೆ ಹೋದವನೇ ತಾಯಿಗೆ ತನ್ನನ್ನ ಯಾರೋ ಕಿಡ್ನಾಪ್‌ ಮಾಡಿದ ಹಾಗೆ ಮೆಸೇಜ್‌ ಕಳಿಸಿದ್ದಾನೆ. ಅದರಲ್ಲಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೆಸೇಜ್‌ ನೋಡಿ ಕಂಗಾಲಾದ ವಿಧವೆ ತಾಯಿ, ತಕ್ಷಣ ಪಾತ್ರಾನಗರ ಪೊಲೀಸ್‌ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾಳೆ.

ತನಿಖೆ ಆರಂಭಿಸಿದ ಪೊಲೀಸರು ಬಾಲಕನನ್ನು ಪೂರ್ನಿಯಾದ ಬಸ್‌ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ವಿಚಾರಣೆ ಮಾಡಿದ ಪೊಲೀಸರಿಗೆ ಬಾಲಕ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ. ತಾಯಿ 3.5 ಲಕ್ಷ ರೂ ಲೋನ್‌ ಪಡೆದಿದ್ದು ಗೊತ್ತಾಯಿತು. ನನಗೆ ದೆಹಲಿ ಅಥವಾ ಮುಂಬೈನಲ್ಲಿ ಕ್ರಿಕೆಟ್‌ ಅಕಾಡೆಮಿ ಸೇರಲು ಹಣ ಬೇಕಾಗಿತ್ತು. ಹಾಗೇನೇ ವಿಡಿಯೋ ಗೇಮ್ಸ್‌ ಆಡಲು ಸ್ಮಾರ್ಟ್‌ ಫೋನ್‌ ಬೇಕಾಗಿತ್ತು. ಹೀಗಾಗಿ ಈ ಡ್ರಾಮಾ ಮಾಡಿದೆ ಎಂದಿದ್ದಾನೆ.

ಹುಡುಗ ಬುದ್ದಿಯ ಬಾಲಕನ ಪ್ಲಾನ್‌ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಆದ್ರೆ ಇನ್ನೂ ಚಿಕ್ಕ ಬಾಲಕ ಜೊತೆಗೆ ವಿಧವೆ ತಾಯಿ. ಹೀಗಾಗಿ ವಾರ್ನಿಂಗ್‌ ಕೊಟ್ಟು ಮನೆಗೆ ಕಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!