AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ. ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ. ಅಷ್ಟೇ.. ಫ್ರೆಂಡ್‌ […]

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?
Guru
| Edited By: |

Updated on: Aug 18, 2020 | 1:25 PM

Share

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.

ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ.

ಅಷ್ಟೇ.. ಫ್ರೆಂಡ್‌ ಮೀಟ್‌ ಮಾಡಿ ಬರ್ತಿನಿ ಅಂತಾ ಹೊರಗೆ ಹೋದವನೇ ತಾಯಿಗೆ ತನ್ನನ್ನ ಯಾರೋ ಕಿಡ್ನಾಪ್‌ ಮಾಡಿದ ಹಾಗೆ ಮೆಸೇಜ್‌ ಕಳಿಸಿದ್ದಾನೆ. ಅದರಲ್ಲಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೆಸೇಜ್‌ ನೋಡಿ ಕಂಗಾಲಾದ ವಿಧವೆ ತಾಯಿ, ತಕ್ಷಣ ಪಾತ್ರಾನಗರ ಪೊಲೀಸ್‌ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾಳೆ.

ತನಿಖೆ ಆರಂಭಿಸಿದ ಪೊಲೀಸರು ಬಾಲಕನನ್ನು ಪೂರ್ನಿಯಾದ ಬಸ್‌ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ವಿಚಾರಣೆ ಮಾಡಿದ ಪೊಲೀಸರಿಗೆ ಬಾಲಕ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ. ತಾಯಿ 3.5 ಲಕ್ಷ ರೂ ಲೋನ್‌ ಪಡೆದಿದ್ದು ಗೊತ್ತಾಯಿತು. ನನಗೆ ದೆಹಲಿ ಅಥವಾ ಮುಂಬೈನಲ್ಲಿ ಕ್ರಿಕೆಟ್‌ ಅಕಾಡೆಮಿ ಸೇರಲು ಹಣ ಬೇಕಾಗಿತ್ತು. ಹಾಗೇನೇ ವಿಡಿಯೋ ಗೇಮ್ಸ್‌ ಆಡಲು ಸ್ಮಾರ್ಟ್‌ ಫೋನ್‌ ಬೇಕಾಗಿತ್ತು. ಹೀಗಾಗಿ ಈ ಡ್ರಾಮಾ ಮಾಡಿದೆ ಎಂದಿದ್ದಾನೆ.

ಹುಡುಗ ಬುದ್ದಿಯ ಬಾಲಕನ ಪ್ಲಾನ್‌ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಆದ್ರೆ ಇನ್ನೂ ಚಿಕ್ಕ ಬಾಲಕ ಜೊತೆಗೆ ವಿಧವೆ ತಾಯಿ. ಹೀಗಾಗಿ ವಾರ್ನಿಂಗ್‌ ಕೊಟ್ಟು ಮನೆಗೆ ಕಳಿಸಿದ್ದಾರೆ.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ