AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ. ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ. ಅಷ್ಟೇ.. ಫ್ರೆಂಡ್‌ […]

ಗೇಮ್ಸ್‌ ಚಟಕ್ಕೆ ಬಿದ್ದ ಬಾಲಕನಿಂದ ಕಿಡ್ನಾಪ್‌ ಡ್ರಾಮಾ, ಬೇಡಿಕೆ ಇಟ್ಟ ಹಣವೆಷ್ಟು ಗೊತ್ತಾ?
Guru
| Edited By: |

Updated on: Aug 18, 2020 | 1:25 PM

Share

ಬಿಹಾರ: ಆನ್‌ಲೈನ್‌ ವಿಡಿಯೋ ಗೇಮ್ಸ್‌ ಮತ್ತು ಕ್ರಿಕೆಟ್‌ ಆಟಕ್ಕೆ ಅಡಿಕ್ಟ್‌ ಆಗಿದ್ದ ಬಾಲಕನೊಬ್ಬ ಖತರ್ನಾಕ್‌ ಐಡಿಯಾ ಮಾಡಿ ಪತರ‌ಗುಟ್ಟಿದ ಪ್ರಕರಣ ಪಾಟ್ನಾದಲ್ಲಿ ನಡೆದಿದೆ.

ಹೌದು ಬಿಹಾರದ ಪಾಟ್ನಾದ 14 ವರ್ಷದ ಬಾಲಕನಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಭವಿಷ್ಯದಲ್ಲಿ ತಾನೂ ಧೋನಿ ಆಗಬೇಕು ಅಂದ್ಕೊಂಡಿದ್ದ ಅಂತಾ ಕಾಣುತ್ತೆ. ಅಷ್ಟೇ ಅಲ್ಲ ಇವನಿಗೂ ಧೋನಿ ಥರಾನೆ ವಿಡಿಯೋ ಗೇಮ್ಸ್‌ ಹುಚ್ಚು. ಆದ್ರೆ ಕೈಯಲ್ಲಿ ಹಣವಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿದಾಗಲೇ ಒಂದು ಖತರ್ನಾಕ್‌ ಐಡಿಯಾ ಹೊಳೆದಿದೆ.

ಅಷ್ಟೇ.. ಫ್ರೆಂಡ್‌ ಮೀಟ್‌ ಮಾಡಿ ಬರ್ತಿನಿ ಅಂತಾ ಹೊರಗೆ ಹೋದವನೇ ತಾಯಿಗೆ ತನ್ನನ್ನ ಯಾರೋ ಕಿಡ್ನಾಪ್‌ ಮಾಡಿದ ಹಾಗೆ ಮೆಸೇಜ್‌ ಕಳಿಸಿದ್ದಾನೆ. ಅದರಲ್ಲಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮೆಸೇಜ್‌ ನೋಡಿ ಕಂಗಾಲಾದ ವಿಧವೆ ತಾಯಿ, ತಕ್ಷಣ ಪಾತ್ರಾನಗರ ಪೊಲೀಸ್‌ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾಳೆ.

ತನಿಖೆ ಆರಂಭಿಸಿದ ಪೊಲೀಸರು ಬಾಲಕನನ್ನು ಪೂರ್ನಿಯಾದ ಬಸ್‌ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ. ವಿಚಾರಣೆ ಮಾಡಿದ ಪೊಲೀಸರಿಗೆ ಬಾಲಕ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ. ತಾಯಿ 3.5 ಲಕ್ಷ ರೂ ಲೋನ್‌ ಪಡೆದಿದ್ದು ಗೊತ್ತಾಯಿತು. ನನಗೆ ದೆಹಲಿ ಅಥವಾ ಮುಂಬೈನಲ್ಲಿ ಕ್ರಿಕೆಟ್‌ ಅಕಾಡೆಮಿ ಸೇರಲು ಹಣ ಬೇಕಾಗಿತ್ತು. ಹಾಗೇನೇ ವಿಡಿಯೋ ಗೇಮ್ಸ್‌ ಆಡಲು ಸ್ಮಾರ್ಟ್‌ ಫೋನ್‌ ಬೇಕಾಗಿತ್ತು. ಹೀಗಾಗಿ ಈ ಡ್ರಾಮಾ ಮಾಡಿದೆ ಎಂದಿದ್ದಾನೆ.

ಹುಡುಗ ಬುದ್ದಿಯ ಬಾಲಕನ ಪ್ಲಾನ್‌ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಆದ್ರೆ ಇನ್ನೂ ಚಿಕ್ಕ ಬಾಲಕ ಜೊತೆಗೆ ವಿಧವೆ ತಾಯಿ. ಹೀಗಾಗಿ ವಾರ್ನಿಂಗ್‌ ಕೊಟ್ಟು ಮನೆಗೆ ಕಳಿಸಿದ್ದಾರೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!