AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂಟ್ಯೂಬ್​ ವಿಡಿಯೋ ನೋಡಿ ಕೂದಲು ನೇರ ಮಾಡಲು ಹೋಗಿ ದುರಂತ ಸಾವು ಕಂಡ ಬಾಲಕ !

ಈ ದುರಂತ ನಡೆದಿದ್ದು ಕೇರಳದ ತಿರುವನಂತಪುರಂ ಬಳಿಯ ವೆಂಗನೂರು ಎಂಬಲ್ಲಿ. ಸ್ಪಿರಿಟ್ ಹಾಗೂ ಬೆಂಕಿ ಉಪಯೋಗಿಸಿ ಕೂದಲನ್ನು ನೇರ ಮಾಡುವುದುನ್ನು ಯೂಟ್ಯೂಬ್​​ನಲ್ಲಿ ನೋಡಿದ್ದ ಬಾಲಕ ಶಿವನಾರಾಯಣ್​, ತಾನೂ ಅದೇ ರೀತಿ ಮಾಡಲು ಮುಂದಾದ.

ಯೂಟ್ಯೂಬ್​ ವಿಡಿಯೋ ನೋಡಿ ಕೂದಲು ನೇರ ಮಾಡಲು ಹೋಗಿ ದುರಂತ ಸಾವು ಕಂಡ ಬಾಲಕ !
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 25, 2021 | 1:21 PM

Share

ತಿರುವನಂತಪುರಂ: ಸೋಷಿಯಲ್​ ಮೀಡಿಯಾಗಳಲ್ಲಿ ತರಹೇವಾರಿ ವಿಡಿಯೋಗಳು ಹರಿದಾಡುತ್ತವೆ. ಅದರಲ್ಲಿ ಇತ್ತೀಚೆಗೆ ಸ್ಪಿರಿಟ್​ ಹಾಗೂ ಬೆಂಕಿಯನ್ನು ಬಳಸಿ ಕೂದಲು ನೇರ ಮಾಡಿಕೊಳ್ಳುವ ( hair straightening) ವಿಡಿಯೋವೊಂದು ಯೂಟ್ಯೂಬ್​, ಫೇಸ್​ಬುಕ್​ ಸೇರಿ ಹಲವು ಕಡೆಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ಅದನ್ನು ನೋಡಿದ 12 ವರ್ಷದ ಬಾಲಕನೊಬ್ಬ ಹಾಗೇ, ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.

ಈ ದುರಂತ ನಡೆದಿದ್ದು ಕೇರಳದ ತಿರುವನಂತಪುರಂ ಬಳಿಯ ವೆಂಗನೂರು ಎಂಬಲ್ಲಿ. ಸ್ಪಿರಿಟ್ ಹಾಗೂ ಬೆಂಕಿ ಉಪಯೋಗಿಸಿ ಕೂದಲನ್ನು ನೇರ ಮಾಡುವುದುನ್ನು ಯೂಟ್ಯೂಬ್​​ನಲ್ಲಿ ನೋಡಿದ್ದ ಬಾಲಕ ಶಿವನಾರಾಯಣ್​, ತಾನೂ ಅದೇ ರೀತಿ ಮಾಡಲು ಮುಂದಾದ. ಮನೆಯಲ್ಲಿ ಅಜ್ಜಿಯನ್ನು ಬಿಟ್ಟು ಇನ್ಯಾರೂ ಇಲ್ಲದ ವೇಳೆ ಬಾತ್​​ರೂಂಗೆ ಹೋದ ಈತ ಸ್ಪಿರಿಟ್​ ಬದಲು ಕೂದಲಿಗೆ ಸೀಮೆ ಎಣ್ಣೆ ಲೇಪಿಸಿದ್ದ. ನಂತರ ಬೆಂಕಿ ಕಡ್ಡಿ ಗೀರಿದ್ದ. ಇದರಿಂದ ಒಮ್ಮೆಲೇ ಹೊತ್ತಿಕೊಂಡ ಬೆಂಕಿಯಿಂದ ಬಾಲಕ ತೀವ್ರವಾಗಿ ಗಾಯಗೊಂಡಿದ್ದ.

ಅದಾದ ಬಳಿಕ ನೆರೆಮನೆಯವರೆಲ್ಲ ಸೇರಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಗೆ ಕರೆದುಕೊಂಡು ಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾನೆ. ಇನ್ನು ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಸಾವಿನ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಈತ ಸೋಷಿಯಲ್ ಮೀಡಿಯಾಗಳಿಗೆ ತುಂಬ ಅಡಿಕ್ಟ್​ ಆಗಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2021: ಆರ್​ಸಿಬಿ ರಣತಂತ್ರ! ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಹರಾಜಿಗೂ ಮುನ್ನವೇ ತೀರ್ಮಾನಿಸಿದ್ದೇವು

ಮಹಿಳೆಯರ ಪಾಲಿಗೆ ಸಿಹಿಸುದ್ದಿ ನೀಡಿದ ಸುಪ್ರೀಂಕೋರ್ಟ್; ದೈಹಿಕ ಸಾಮರ್ಥ್ಯ ಆಧರಿತ ಕೆಲಸಗಳಲ್ಲಿ ನಿವೃತ್ತಿ ವಯಸ್ಸಿನವರೆಗೂ ಮುಂದುವರೆಯಲು ಅವಕಾಶ

Health Tips: ತುಂಬ ಒತ್ತಡದಿಂದ ಬಳಲುತ್ತಿದ್ದೀರಾ.. ನಿದ್ದೆಯೂ ಬರುತ್ತಿಲ್ಲವಾ?- ಅಶ್ವಗಂಧ ಬಳಕೆ ಮಾಡಿ ನೋಡಿ..

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?