AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯಲ್ಲಿ ಇಟ್ಟ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ನಂತರ ಆತ ಬಸ್​ ಏರಿ ಗೋವಾಗೆ ಹೋಗಿದ್ದ!

ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​|

Updated on: Dec 29, 2020 | 5:47 PM

Share

ಮಕ್ಕಳು ಓದುವುದಿಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಬಯ್ಯೋದು ಸಾಮಾನ್ಯ. ಪಾಲಕರು ಬೈದಿದ್ದಕ್ಕೆ ಬಹುತೇಕ ಮಕ್ಕಳು ಅತ್ತು ಸುಮ್ಮನಾಗುತ್ತಾರೆ. ಆದರೆ, ಕೆಲವರು ಮನೆ ಬಿಟ್ಟು ಹೋದ ಉದಾಹರಣೆ ಕೂಡ ಇದೆ. ಗುಜರಾತ್​​ನ ಬಾಲಕ ಕೂಡ ಪಾಲಕರು ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದಾನೆ! ಆದ್ರೆ ಜಾಣ ಬಾಲಕ ಮನೆ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ಹಣವನ್ನು ದೋಚಿಕೊಂಡು ಗೋವಾಗೆ ಹೋಗಿದ್ದಾನೆ! ಅದೂ ಪಾರ್ಟಿ ಮಾಡಲು..

ಆ ಬಾಲಕನ ವಯಸ್ಸು ಕೇವಲ 14 ವರ್ಷ. ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿದ್ದರಿಂದ 24 ಗಂಟೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ, ಬೇಸರ ಬಂದಾಗ ಆಗಾಗ ಗೇಮ್​ ಆಡುತ್ತಿದ್ದ. ಇದರಿಂದ ಸಿಟ್ಟಾದ ಪಾಲಕರು ಸರಿಯಾಗಿ ಓದುವಂತೆ ಗದರಿಸುತ್ತಿದ್ದರು. ಈ ಪ್ರಕ್ರಿಯೆ ನಿತ್ಯವೂ ನಡೆದೇ ಇತ್ತು.

ಪಾಲಕರು ಪದೇಪದೇ ಬೈದಿದ್ದನ್ನು ಆತನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯ ಬೀರುವಿನಲ್ಲಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ಈತ ವಡೋದರಾದಿಂದ ರೈಲ್ವೆ ಮೂಲಕ ಗೋವಾಗೆ ತೆರಳಲು ಪ್ರಯತ್ನಿಸಿದ್ದ. ಆದರೆ, ಆಧಾರ್​ ಕಾರ್ಡ್​ ಇಲ್ಲದ ಕಾರಣ ಆತನಿಗೆ ರೈಲ್ವೆ ಟಿಕೆಟ್​ ಸಿಕ್ಕಿರಲಿಲ್ಲ. ಹೀಗಾಗಿ, ಬಸ್ ಮೂಲಕ ಪುಣೆಗೆ ಹೋಗಿದ್ದ. ಅಲ್ಲಿಂದ ಗೋವಾಗೆ ಪ್ರಯಾಣಿಸಿದ್ದ.

ಗೋವಾದಲ್ಲಿ ನೈಟ್​ ಕ್ಲಬ್​ಗಳಿಗೆ ತೆರಳಿ ಹಣವನ್ನು ಉಡಾಯಿಸಿದ್ದ. ಐಷಾರಾಮಿ ಹೋಟೆಲ್​ನಲ್ಲಿ ಬಾಲಕ ಉಳಿದುಕೊಂಡಿದ್ದ. ಇನ್ನೇನು ಹಣ ಖಾಲಿ ಆಗುತ್ತದೆ ಎನ್ನುವಾಗ ಬಾಲಕ ಮರಳಿ ಪುಣೆಗೆ ಬಂದಿದ್ದ. ಈತ ಒಬ್ಬಂಟಿಯಾಗಿ ತಿರುಗಾಡುವುದನ್ನು ಕಂಡ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಿಸಿದ್ದರು. ಈ ವೇಳೆ ಬಾಲಕ ನಡೆದ ಘಟನೆ ವಿವರಿಸಿದ್ದಾನೆ. ನಂತರ ಪೊಲೀಸರು ಬಾಲಕನನ್ನು ಮರಳಿ ವಡೋದರಾಗೆ ಕಳುಹಿಸಿದ್ದಾರೆ.

ಎಟಿಎಂ ಸರ್ವಿಸ್ ನೆಪದಲ್ಲಿ ATMನಿಂದ ಹಣ ಎಗರಿಸುತ್ತಿದ್ದ ಖದೀಮ ಈಗ ಖಾಕಿ ಅತಿಥಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ