AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!

ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯಲ್ಲಿ ಇಟ್ಟ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ನಂತರ ಆತ ಬಸ್​ ಏರಿ ಗೋವಾಗೆ ಹೋಗಿದ್ದ!

ಅಪ್ಪ-ಅಮ್ಮ ಬೈದಿದ್ದಕ್ಕೆ ಮನೆಯಲ್ಲಿದ್ದ ಲಕ್ಷ ರೂ. ಕದ್ದು ಗೋವಾಗೆ ತೆರಳಿ ಪಾರ್ಟಿ ಮಾಡಿದ ಬಾಲಕ!
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Dec 29, 2020 | 5:47 PM

Share

ಮಕ್ಕಳು ಓದುವುದಿಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳಿಗೆ ಬಯ್ಯೋದು ಸಾಮಾನ್ಯ. ಪಾಲಕರು ಬೈದಿದ್ದಕ್ಕೆ ಬಹುತೇಕ ಮಕ್ಕಳು ಅತ್ತು ಸುಮ್ಮನಾಗುತ್ತಾರೆ. ಆದರೆ, ಕೆಲವರು ಮನೆ ಬಿಟ್ಟು ಹೋದ ಉದಾಹರಣೆ ಕೂಡ ಇದೆ. ಗುಜರಾತ್​​ನ ಬಾಲಕ ಕೂಡ ಪಾಲಕರು ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ಹೋಗಿದ್ದಾನೆ! ಆದ್ರೆ ಜಾಣ ಬಾಲಕ ಮನೆ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ಹಣವನ್ನು ದೋಚಿಕೊಂಡು ಗೋವಾಗೆ ಹೋಗಿದ್ದಾನೆ! ಅದೂ ಪಾರ್ಟಿ ಮಾಡಲು..

ಆ ಬಾಲಕನ ವಯಸ್ಸು ಕೇವಲ 14 ವರ್ಷ. ಆನ್​ಲೈನ್​ ಕ್ಲಾಸ್​ಗಳು ನಡೆಯುತ್ತಿದ್ದರಿಂದ 24 ಗಂಟೆ ಮನೆಯಲ್ಲೇ ಇರುತ್ತಿದ್ದ. ಹೀಗಾಗಿ, ಬೇಸರ ಬಂದಾಗ ಆಗಾಗ ಗೇಮ್​ ಆಡುತ್ತಿದ್ದ. ಇದರಿಂದ ಸಿಟ್ಟಾದ ಪಾಲಕರು ಸರಿಯಾಗಿ ಓದುವಂತೆ ಗದರಿಸುತ್ತಿದ್ದರು. ಈ ಪ್ರಕ್ರಿಯೆ ನಿತ್ಯವೂ ನಡೆದೇ ಇತ್ತು.

ಪಾಲಕರು ಪದೇಪದೇ ಬೈದಿದ್ದನ್ನು ಆತನಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಸಿಟ್ಟಾದ ಬಾಲಕ ಗೋವಾಗೆ ತೆರಳಲು ನಿರ್ಧರಿಸಿದ್ದ. ಇದಕ್ಕಾಗಿ ಮನೆಯ ಬೀರುವಿನಲ್ಲಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ಕದ್ದಿದ್ದ. ಈತ ವಡೋದರಾದಿಂದ ರೈಲ್ವೆ ಮೂಲಕ ಗೋವಾಗೆ ತೆರಳಲು ಪ್ರಯತ್ನಿಸಿದ್ದ. ಆದರೆ, ಆಧಾರ್​ ಕಾರ್ಡ್​ ಇಲ್ಲದ ಕಾರಣ ಆತನಿಗೆ ರೈಲ್ವೆ ಟಿಕೆಟ್​ ಸಿಕ್ಕಿರಲಿಲ್ಲ. ಹೀಗಾಗಿ, ಬಸ್ ಮೂಲಕ ಪುಣೆಗೆ ಹೋಗಿದ್ದ. ಅಲ್ಲಿಂದ ಗೋವಾಗೆ ಪ್ರಯಾಣಿಸಿದ್ದ.

ಗೋವಾದಲ್ಲಿ ನೈಟ್​ ಕ್ಲಬ್​ಗಳಿಗೆ ತೆರಳಿ ಹಣವನ್ನು ಉಡಾಯಿಸಿದ್ದ. ಐಷಾರಾಮಿ ಹೋಟೆಲ್​ನಲ್ಲಿ ಬಾಲಕ ಉಳಿದುಕೊಂಡಿದ್ದ. ಇನ್ನೇನು ಹಣ ಖಾಲಿ ಆಗುತ್ತದೆ ಎನ್ನುವಾಗ ಬಾಲಕ ಮರಳಿ ಪುಣೆಗೆ ಬಂದಿದ್ದ. ಈತ ಒಬ್ಬಂಟಿಯಾಗಿ ತಿರುಗಾಡುವುದನ್ನು ಕಂಡ ಪೊಲೀಸರು ಅನುಮಾನಗೊಂಡು ಆತನನ್ನು ವಿಚಾರಿಸಿದ್ದರು. ಈ ವೇಳೆ ಬಾಲಕ ನಡೆದ ಘಟನೆ ವಿವರಿಸಿದ್ದಾನೆ. ನಂತರ ಪೊಲೀಸರು ಬಾಲಕನನ್ನು ಮರಳಿ ವಡೋದರಾಗೆ ಕಳುಹಿಸಿದ್ದಾರೆ.

ಎಟಿಎಂ ಸರ್ವಿಸ್ ನೆಪದಲ್ಲಿ ATMನಿಂದ ಹಣ ಎಗರಿಸುತ್ತಿದ್ದ ಖದೀಮ ಈಗ ಖಾಕಿ ಅತಿಥಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!