AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹ ಹೆಚ್ಚು ಕಾಲ ಇರಿಸಲು ಸಾಧ್ಯವಿಲ್ಲ: ವೈದ್ಯರು

ದೇಹ ಕೊಳೆಯುವುದು ಸುತ್ತಲಿನ ತಾಪಮಾನ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ತಾಪಮಾನವು ತುಂಬಾ ಹೆಚ್ಚಿಲ್ಲದಿದ್ದರೆ ದೇಹಗಳು ಏಳು-ಎಂಟು ಗಂಟೆಗಳವರೆಗೆ, 12 ಗಂಟೆಗಳ ಕಾಲ ಉತ್ತಮವಾಗಿರುತ್ತವೆ.

ಒಡಿಶಾ ರೈಲು ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹ ಹೆಚ್ಚು ಕಾಲ ಇರಿಸಲು ಸಾಧ್ಯವಿಲ್ಲ: ವೈದ್ಯರು
ಒಡಿಶಾ ರೈಲು ಅಪಘಾತ
ರಶ್ಮಿ ಕಲ್ಲಕಟ್ಟ
|

Updated on: Jun 06, 2023 | 4:19 PM

Share

ದೆಹಲಿ: ಒಡಿಶಾದಲ್ಲಿ  (Odisha) ಶುಕ್ರವಾರ ಸಂಭವಿಸಿದ ರೈಲು ಅಪಘಾತದಲ್ಲಿ (Train Accident) 278 ಜನರು ಸಾವಿಗೀಡಾಗಿದ್ದು, ಇದರಲ್ಲಿ 100ಕ್ಕಿಂತಲೂ ಹೆಚ್ಚು ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆ ನಡೆದು 80 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದೆ. ಹೀಗಿರುವಾಗ ಛಿದ್ರವಾಗಿರುವ ಮೃತದೇಹಗಳನ್ನು ಅದೆಷ್ಟು ಹೊತ್ತು ಹೀಗೇ ಇರಿಸಲು ಸಾಧ್ಯ ಎಂಬುದರ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಕುಟುಂಬದವರಿಗೆ ಮೃತದೇಹಗಳನ್ನು ಪತ್ತೆ ಹಚ್ಚಲು ಸಹಾಯವಾಗುವಂತೆ ರೈಲ್ವೆ ಇಲಾಖೆ ಉಪಕ್ರಮಗಳನ್ನು ಕೈಗೊಂಡಿದೆ. ಅದೇ ವೇಳೆ ಕುಟುಂಬದವರು ಮೃತದೇಹವನ್ನು ಗುರುತಿಸುವವರೆಗೆ ಮೃತದೇಹಗಳನ್ನು ಕೊಳೆಯದಂತೆ (Embalming) ನೋಡಿಕೊಳ್ಳಲಾಗುತ್ತಿದೆ. ಡಿಎನ್‌ಎ ಹೊಂದಾಣಿಕೆಗಾಗಿ ರಕ್ತದ ಮಾದರಿಗಳನ್ನು ಸಹ ಸಂಗ್ರಹಿಸಲಾಗುತ್ತಿದೆ.

ದೆಹಲಿಯ ಪ್ರೀಮಿಯರ್ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು, ಎಂಬಾಮಿಂಗ್ ಮಾಡದ ಕಾರಣ ಹಾನಿಗೊಳಗಾದ ದೇಹಗಳನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು. 12 ಗಂಟೆಗಳೊಳಗೆ ಸರಿಯಾಗಿ ಎಂಬಾಮಿಂಗ್ ಮಾಡಿದರೆ ಮಾತ್ರ ದೇಹವನ್ನು “ವರ್ಷಗಳವರೆಗೆ” ಸಂರಕ್ಷಿಸಬಹುದು ಎಂದು ಎಐಐಎಂಎಸ್‌ನ ಅನಾಟಮಿ ವಿಭಾಗದ ಮುಖ್ಯಸ್ಥ ಶರೀಫ್ ಹೇಳಿದ್ದಾರೆ. ದೇಹ ಕೊಳೆಯುವುದು ಸುತ್ತಲಿನ ತಾಪಮಾನ ಸೇರಿದಂತೆ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ತಾಪಮಾನವು ತುಂಬಾ ಹೆಚ್ಚಿಲ್ಲದಿದ್ದರೆ ದೇಹಗಳು ಏಳು-ಎಂಟು ಗಂಟೆಗಳವರೆಗೆ, 12 ಗಂಟೆಗಳ ಕಾಲ ಉತ್ತಮವಾಗಿರುತ್ತವೆ. ಐಸ್ ಮತ್ತು ಕೋಲ್ಡ್ ಸ್ಟೋರೇಜ್ ಕೊಳೆಯುವುದನ್ನು ವಿಳಂಬಗೊಳಿಸುತ್ತದೆ ಎಂದು ಡಾ ಷರೀಫ್ ಎನ್​​ಡಿಟಿವಿಗೆ ತಿಳಿಸಿದರು.

ಶುಕ್ರವಾರ ಸಂಜೆ ಬಾಲಸೋರ್‌ನಲ್ಲಿ ನಡೆದ ಭೀಕರ ಮೂರು ರೈಲು ಅಪಘಾತದ ನಂತರ ತರಲಾದ ದೇಹಗಳ ಕೊಳೆಯುವಿಕೆಯನ್ನು ನಿಧಾನಗೊಳಿಸಲು ಭುವನೇಶ್ವರದ ಏಮ್ಸ್ ಆಸ್ಪತ್ರೆಯು ಪಾರಾದೀಪ್ ಬಂದರಿನಿಂದ ಕನಿಷ್ಠ ಐದು ಫ್ರೀಜರ್‌ಗಳನ್ನು ತರಲಾಗಿದೆ. ದುಃಖಿತ ಕುಟುಂಬಗಳು ಅಧಿಕಾರಿಗಳು ಅವರಿಗೆ ತೋರಿಸುವ ಚಿತ್ರಗಳ ಸ್ಲೈಡ್‌ಶೋನಿಂದ ಗುರುತಿಸಲಾಗದಷ್ಟು ಹಾನಿಗೊಳಗಾದ ಮೃತದೇಹಗಳನ್ನು ಗುರುತಿಸಲು ಹೆಣಗಾಡುತ್ತಿದ್ದಾರೆ.

ಸಾವು ಸಂಭವಿಸಿ 12 ಗಂಟೆ ಕಳೆದ ನಂತರ ಎಂಬಾಮಿಂಗ್ ಮಾಡಿದರೆ ಅದು ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಬೇಗನೆ ಕೊಳೆಯುತ್ತದೆ. ದೇಹವು ಹಾನಿಗೊಳಗಾದರೆ, ಅದನ್ನು ಎಂಬಾಮ್ ಮಾಡುವುದು ತುಂಬಾ ಕಷ್ಟ. ಮೃತದೇಹ ಕೆಡದಂತೆ ಅದಕ್ಕೆ ದ್ರವ ಚುಚ್ಚಬೇಕಾಗುತ್ತದೆ ಎಂದು ಡಾ ಷರೀಫ್ ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವಂತೆ ಭಾರತೀಯ ರೈಲ್ವೆ ಮನವಿ

ಸಮಯ ಮೀರಿದ ಕಾರಣ, ಮೃತರನ್ನು ಗುರುತಿಸಲು 139 ಅನ್ನು ಡಯಲ್ ಮಾಡಲು ರೈಲ್ವೆಯು ಸಂಬಂಧಿಕರಿಗೆ ಸಲಹೆ ನೀಡಿದೆ. ಭುವನೇಶ್ವರದ ಏಮ್ಸ್‌ಗೆ ಭಾನುವಾರ 123 ಮೃತದೇಹಗಳನ್ನು ತರಲಾಗಿದೆ. ಏಮ್ಸ್‌ಗೆ ಮೃತದೇಹಗಳನ್ನು ತರುವ ಹೊತ್ತಿಗೆ 30 ಗಂಟೆಗಳು ಕಳೆದಿದ್ದವು. ದೇಹಗಳು ಮತ್ತಷ್ಟು ಕೊಳೆಯುವುದನ್ನು ತಡೆಯುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ಶವಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿದೆ. ಸಮರೋಪಾದಿಯಲ್ಲಿ ಎಂಬಾಮಿಂಗ್ ಮಾಡಲಾಗಿದೆ ಎಂದು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅಶುತೋಷ್ ಬಿಸ್ವಾಸ್ ಹೇಳಿದ್ದಾರೆ.

ಶವಗಳನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಲಾಗುವುದು ಎಂದು ಡಾ ಬಿಸ್ವಾಸ್ ಹೇಳಿದ್ದಾರೆ. ಪ್ರತಿಯೊಂದು ಕಂಟೇನರ್ ನಲ್ಲಿ 30-40 ದೇಹಗಳನ್ನು ಸಂಗ್ರಹಿಸಬಹುದು. ಮೃತದೇಹಗಳನ್ನು ಸಂರಕ್ಷಿಸಲು ಹಲವಾರು ಆಸ್ಪತ್ರೆಗಳು ಮತ್ತು ವಿವಿಧ ನಗರಗಳಿಂದ ತಜ್ಞರು ಆಗಮಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?