ಅಮರಿಂದರ್​ ಸಿಂಗ್​​ ಪಾಕ್​ ಗೆಳತಿ ಅರೂಸಾ ಅಲಂಗೆ ಐಎಸ್​ಐ ಲಿಂಕ್​ ಆರೋಪ; ಫೋಟೋ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಕ್ಯಾಪ್ಟನ್​

| Updated By: Lakshmi Hegde

Updated on: Oct 23, 2021 | 10:47 AM

ಅರೂಸಾ ಅಲಂ ವೀಸಾವನ್ನು ಗುಪ್ತಚರ ದಳದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವೇ ವಿಸ್ತಾರ ಮಾಡಿತ್ತು. 2007ರಲ್ಲಿಯೇ ಈ ಬಗ್ಗೆ ಸಂಪೂರ್ಣ ವಿಚಾರಣೆಯೂ ನಡೆದಿದೆ ಎಂದೂ ಅಮರಿಂದರ್​ ಸಿಂಗ್ ಹೇಳಿದ್ದಾರೆ.

ಅಮರಿಂದರ್​ ಸಿಂಗ್​​ ಪಾಕ್​ ಗೆಳತಿ ಅರೂಸಾ ಅಲಂಗೆ ಐಎಸ್​ಐ ಲಿಂಕ್​ ಆರೋಪ; ಫೋಟೋ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಕ್ಯಾಪ್ಟನ್​
ಅರೂಸಾ ಅಲಂ ಮತ್ತು ಸೋನಿಯಾ ಗಾಂಧಿ
Follow us on

ಕಾಂಗ್ರೆಸ್​ನಿಂದ ಹೊರಬಂದಿರುವ ಪಂಜಾಬ್​ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಇದೀಗ ಒಂದು ವಿಷಯಕ್ಕೆ ಸುದ್ಧಿಯಲ್ಲಿದ್ದಾರೆ. ಅಮರಿಂದರ್​ ಸಿಂಗ್​ ಅವರ ಆಪ್ತ ಸ್ನೇಹಿತೆ, ಪಾಕಿಸ್ತಾನದ ಪತ್ರಕರ್ತೆ ಅರೂಸಾ ಅಲಂ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಪಂಜಾಬ್​​ಗೆ ಪಾಕಿಸ್ತಾನದ ಐಎಸ್​ಐ (ಇಂಟರ್​ ಸರ್ವೀಸ್​ ಇಂಟಲಿಜೆನ್ಸ್​ -ISI)ನಿಂದ ಬೆದರಿಕೆ ಇರುವುದಾಗಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಹೇಳುತ್ತಿದ್ದಾರೆ. ಇದೇ ಹೊತ್ತಲ್ಲಿ ಅವರ ಸ್ನೇಹಿತೆ, ಪಾಕಿಸ್ತಾನಿ ಪತ್ರಕರ್ತೆ ಅರೂಸಾ ಅಲಂಗೆ ಐಎಸ್​ಐ ಸಂಪರ್ಕ ಇದೆಯಾ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಪಂಜಾಬ್​ ಗೃಹ ಸಚಿವ ಸುಖ್​ಜಿಂದರ್​ ಸಿಂಗ್​ ಒತ್ತಾಯಿಸಿದ್ದಾರೆ.

ಅಂದಹಾಗೆ ಈ ಅರೂಸಾ ಅಲಂ ಪಾಕಿಸ್ತಾನದ ಪತ್ರಕರ್ತೆಯಾಗಿದ್ದು, ಅಮರಿಂದರ್​ ಸಿಂಗ್​​ರಿಗೆ ಹಳೇ ಪರಿಚಯ ಮತ್ತು ಅವರ ಆಪ್ತ ಸ್ನೇಹಿತೆಯಾಗಿದ್ದಾರೆ. 2018ರಲ್ಲಿ ಅಮರಿಂದರ್​ ಸಿಂಗ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗಲೂ ಅವರು ಬಂದಿದ್ದರು. ಆಗಲೇ ನವಜೋತ್​ ಸಿಂಗ್ ಸಿಧು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸುಖ್​ಜಿಂದರ್​ ಸಿಂಗ್ ಹೊಸದೊಂದು ವಿಷಯ ಎತ್ತಿದ್ದಾರೆ. ಅಷ್ಟೆಲ್ಲ ವರ್ಷ ಅರೂಸಾ ಇಲ್ಲಿ ಹೇಗೆ ಇದ್ದರು? ಅವರ ವೀಸಾ ಮೂರು ಬಾರಿ ಪರಿಷ್ಕೃತಗೊಂಡಿದ್ದಾದರೂ ಹೇಗೆ? ಎಂದು ಕೇಳಿದ್ದಾರೆ. ಆದರೆ ಇದನ್ನು ಅಮರಿಂದರ್​ ಸಿಂಗ್​ ತಿರಸ್ಕರಿಸಿದ್ದಾರೆ. ಇದೆಲ್ಲ ಬೇಕೆಂದು ನನ್ನ ವಿರುದ್ಧ ವೈಯಕ್ತಿಕವಾಗಿ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಅರೂಸಾ ಅಲಂ ಮತ್ತು ಸೋನಿಯಾ ಗಾಂಧಿ ಒಟ್ಟಿಗೆ ಇರುವ ಫೋಟೋವನ್ನು ಅವರ ಮಾಧ್ಯಮ ಸಲಹೆಗಾರ ರವೀನ್​ ಠಾಕೂರ್​ ಬಿಡುಗಡೆ ಮಾಡಿದ್ದಾರೆ.

ಸುಖ್​ಜಿಂದರ್​ ಸಿಂಗ್ ಆರೋಪಕ್ಕೆ ರವೀನ್ ಠಾಕೂರ್​ ಅಕೌಂಟ್​ ಮೂಲಕವೇ ಉತ್ತರ ನೀಡುತ್ತಿರುವ ಕ್ಯಾಪ್ಟನ್​ ಅಮರಿಂದರ್​ ಸಿಂಗ್​,  ನೀವೀಗ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿದ್ದೀರಿ. ಅರೂಸಾ ಅವರು ಭಾರತದಲ್ಲಿ ಅಂದಿನ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆದೇ 16 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಎನ್​ಡಿಎ ಮತ್ತು ಯುಪಿಎ ಸರ್ಕಾರಗಳೆರಡೂ ಐಎಸ್​ಐ ಜತೆ ಸಂಪರ್ಕದಲ್ಲಿದ್ದವು ಎಂದು ನೀವು ಹೇಳುತ್ತೀರಾ? ನೀವು ನನ್ನ ಕ್ಯಾಬಿನೆಟ್​​​ನಲ್ಲೂ ಇದ್ದಿರಿ. ಆಗ ಅರೂಸಾ ಬಗ್ಗೆ ಇಲ್ಲದ ಅನುಮಾನ? ದೂರುಗಳು ಈಗ್ಯಾಕೆ ಎಂದು ಸುಖ್​​ಜಿಂದರ್​​ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

ಹಾಗೇ, ಅರೂಸಾ ಅಲಂ ವೀಸಾವನ್ನು ಗುಪ್ತಚರ ದಳದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗವೇ ವಿಸ್ತಾರ ಮಾಡಿತ್ತು. 2007ರಲ್ಲಿಯೇ ಈ ಬಗ್ಗೆ ಸಂಪೂರ್ಣ ವಿಚಾರಣೆಯೂ ನಡೆದಿದೆ. ಆದರೆ ಈ ತನಿಖೆಯನ್ನು ಪಂಜಾಬ್​ ಡಿಜಿಪಿಗೆ ನೀಡಿ ಮತ್ತೆ ಇಲ್ಲಿನ ವ್ಯಕ್ತಿಸಂಪನ್ಮೂಲವನ್ನು ಹಾಳು ಮಾಡುತ್ತಿದ್ದೀರಿ. ಇದೀಗ ಹಬ್ಬದ ಸಂದರ್ಭ. ಇಲ್ಲಿನ ಡಿಜಿಪಿ ಸೇರಿ ಪೊಲೀಸ್​ ಸಿಬ್ಬಂದಿಗೆ ಕಾನೂನು-ಸುವ್ಯವಸ್ಥೆ ನಿಭಾಯಿಸುವ ಜವಾಬ್ದಾರಿ ಇರುತ್ತದೆ. ಆದರೆ ಅದನ್ನೆಲ್ಲ ಬಿಟ್ಟು ನೀವು ಅರೂಸಾ ಮತ್ತು ಐಎಸ್​ಐ ಲಿಂಕ್​ ಬಗ್ಗೆ ತನಿಖೆ ಮಾಡುವಂತೆ ಹೇಳುತ್ತಿದ್ದೀರಿ ಎಂದು ಕ್ಯಾಪ್ಟನ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಉಚಿತ ನಿವೇಶನ ವದಂತಿಗೆ ಕಿವಿಗೊಟ್ಟು ಗುಡಿಸಲು ನಿರ್ಮಿಸಿದ ಜನರಿಗೆ ಲಾಠಿ ಏಟಿನ ಬಿಸಿ

ಚಿಕ್ಕಬಳ್ಳಾಪುರ: ಭಾರಿ ಮಳೆ; ಗುಡಿಬಂಡೆ ಪಟ್ಟಣದಲ್ಲಿ ಕೆರೆಗಳಂತಾದ ರಸ್ತೆಗಳು

Published On - 10:45 am, Sat, 23 October 21