AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬಿಪಿನ್​ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್​; ನ್ಯೂ ಇಯರ್​ ಪಾರ್ಟಿಯ ಸಂಭ್ರಮ ಇದಾಗಿತ್ತು

ಬಿಪಿನ್​ ರಾವತ್​ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು.

Video: ಬಿಪಿನ್​ ರಾವತ್ ಚಿಕ್ಕ ಹುಡುಗನಂತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದ ವಿಡಿಯೋ ವೈರಲ್​; ನ್ಯೂ ಇಯರ್​ ಪಾರ್ಟಿಯ ಸಂಭ್ರಮ ಇದಾಗಿತ್ತು
ಬಿಪಿನ್​ ರಾವತ್​
TV9 Web
| Edited By: |

Updated on:Dec 09, 2021 | 11:57 AM

Share

ಭಾರತದ ಮೊದಲ ಸಿಡಿಎಸ್​ (Chief Defence Staff -CDS) ಬಿಪಿನ್​ ರಾವತ್​ ನಿನ್ನೆ ತಮಿಳುನಾಡಿನ ಕೂನೂರ್​​ನಲ್ಲಿ ನಡೆದ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟಿದ್ದಾರೆ. ಅವರ ಪತ್ನಿ ಮಧುಲಿಕಾ ರಾವತ್​ ಮತ್ತಿತರ ಸೇನಾಧಿಕಾರಿಗಳು ಸೇರಿ ಒಟ್ಟು 13 ಮಂದಿ ದುರ್ಮರಣಕ್ಕೀಡಾದ ಬಹುದೊಡ್ಡ ದುರಂತ ಇದು. ಬಿಪಿನ್​ ರಾವತ್​ ಮತ್ತು ಇತರರ ಸಾವಿಗೆ ಇಡೀ ದೇಶ ದುಃಖ ವ್ಯಕ್ತಪಡಿಸುತ್ತಿದೆ. ಅವರ ಹಳೇ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿವೆ. ಅದರಲ್ಲೂ ಬಿಪಿನ್​ ರಾವತ್​ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದು ಕಳೆದ ಹೊಸವರ್ಷದ ಪಾರ್ಟಿಯದ್ದು ಎಂದು ಹೇಳಲಾಗಿದ್ದು, ಲಖನೌನಲ್ಲಿ ಗೊರ್ಖಾ ರೆಜಿಮೆಂಟ್​​ನ ಸಹೋದ್ಯೋಗಿಗಳೊಂದಿಗೆ ರಾವತ್​ ನೃತ್ಯ ಮಾಡಿದ್ದು. 

ಬಿಪಿನ್​ ರಾವತ್​ ಮೃತಪಟ್ಟ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಇದರಲ್ಲಿ ರಾವತ್ ಅವರೊಂದಿಗೆ ನೃತ್ಯ ಮಾಡಿದ ಸೇನಾ ಸಿಬ್ಬಂದಿಯ ಕುಟುಂಬದವರೂ ಪಾಲ್ಗೊಂಡಿದ್ದರು. ಅವರಂದು ನೇಪಾಳಿ ಸಿನಿಮಾ ಗೋರ್ಖಾ ಪಲ್ಟನ್​​ದ ಹಾಡಿಗೆ ತುಂಬ ಖುಷಿಯಾಗಿ, ನಗುನಗುತ್ತ ನೃತ್ಯ ಮಾಡಿದ್ದನ್ನು ಈ ವಿಡಿಯೋದಲ್ಲಿ ಕಾಣಬಹುದು. 2010ರಲ್ಲಿ ಬಿಡುಗಡೆಯಾಗಿದ್ದ ಗೋರ್ಖಾ ಪಲ್ಟನ್​ ಸಿನಿಮಾದ ಟೈಟಲ್​ ಸಾಂಗ್ ಆದ ಇದನ್ನು ಪ್ರಶಾಂತ್ ತಮಂಗ್ ಹಾಡಿದ್ದಾರೆ. ಅಂದಹಾಗೆ ಇದು ಗೋರ್ಖಾ ರೆಜಿಮೆಂಟ್ ಕುರಿತಾದ ಸಿನಿಮಾವೇ ಆಗಿತ್ತು.

ಬಿಪಿನ್​ ರಾವತ್ ಅವರು 11 ಗೋರ್ಖಾ ರೈಫಲ್ಸ್​ನ 5ನೇ ಬೆಟಾಲಿಯನ್​​ನವರಾಗಿದ್ದಾರೆ. ಅವರ ತಂದೆಯೂ ಕೂಡ ಲೆಫ್ಟಿನೆಂಟ್​ ಜನರಲ್​ ಆಗಿದ್ದವರು ಮತ್ತು ಇದೇ ಘಟಕದಲ್ಲಿ ಇದ್ದವರು. ಸೇನೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ 2019ರ ಡಿಸೆಂಬರ್​ 31ರಿಂದ ಭಾರತದ ಮೊದಲ ಸಿಡಿಎಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ತಮಿಳುನಾಡಿನ ವೆಲ್ಲಿಂಗ್ಟನ್​​ಗೆ ಸೇನಾ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ, ಅದು ಕೂನೂರು ಬಳಿ ಪತನಗೊಂಡು ಮರಣ ಹೊಂದಿದ್ದಾರೆ.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವಿಗೀಡಾದ ಅಧಿಕಾರಿ ಕೇರಳದಲ್ಲಿ 2018ರ ಪ್ರವಾಹ ವೇಳೆ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

Published On - 11:52 am, Thu, 9 December 21

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್