AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು
ರಾಜೇಶ್ ದುಗ್ಗುಮನೆ
| Edited By: |

Updated on: Dec 23, 2020 | 6:32 AM

Share

ಚೆನ್ನೈ: ನಾವು ನಿಜವಾಗಲೂ ಏನನ್ನಾದರೂ ಬಯಸಿದರೆ ಜಗತ್ತೇ ಅದಕ್ಕೆ ಸಂಚು ರೂಪಿಸುತ್ತೆದೆಯಂತೆ. ಹೀಗೊಂದು ಮಾತು ಚಾಲ್ತಿಯಲ್ಲಿದೆ. ಚೆನ್ನೈ ವಿದ್ಯಾರ್ಥಿನಿಯೊಬ್ಬಳ ಬಾಳಿನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಆಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ವಿಶೇಷ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು. ಕೌನ್ಸೆಲಿಂಗ್ ಇರುವುದು ಚನ್ನೈನಲ್ಲಿ ಅಲ್ಲ- ಕೊಯಮತ್ತೂರಿನಲ್ಲಿ ಎನ್ನುವ ವಿಚಾರ ಅಲ್ಲಿಗೆ ಬಂದ ಮೇಲೆ ತಿಳಿದಿತ್ತು. ಯಾರೋ ನೀಡಿದ ತಪ್ಪು ಮಾಹಿತಿಯಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಈಡಾಗಿದ್ದರು.

ಅಲ್ಲಿಗೆ ಮುಂಜಾನೆ ವಾಕಿಂಗ್​ಗೆ ಬರುತ್ತಿದ್ದ ಕೆಲವರು ಆತಂಕದಲ್ಲಿರುವ ತಾಯಿ ಮಗಳನ್ನು ಗಮನಿಸಿದ್ದಾರೆ. ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ನಡೆದ ಘಟನೆ ಬಗ್ಗೆ ಅವರು ಅಲ್ಲಿಯವರಿಗೆ ವಿವರಿಸಿದ್ದಾರೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಲು 9 ಗಂಟೆ ಬೇಕು. ಮುಂಜಾನೆ ಹೊರಟರೂ ಕೌನ್ಸಲಿಂಗ್​ ತಲುಪೋದು ಅಸಾಧ್ಯ. ತಾಯಿ-ಮಗಳ ಸ್ಥಿತಿ ನೋಡಿ ಅಲ್ಲಿಯವರು ಮರುಕ ವ್ಯಕ್ತಪಡಿಸಿದ್ದರು.

ಆಗ ನಡೆಯಿತು ಪವಾಡ

ನಿತ್ಯ ಆ ಭಾಗಕ್ಕೆ ವಾಕಿಂಗ್​ ಬರುವವರು ಒಂದು ತಂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನ ಅದೃಷ್ಟ ಎಂಬಂತೆ ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರ ಪರಿಚಯವಿದ್ದ ಒಬ್ಬರು ಆ ತಂಡದಲ್ಲಿದ್ದರು. ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರರಿಗೆ ಫೋನ್ ಮಾಡಿ ಹುಡುಗಿ ಬರುವುದು ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಅವರಿಗೆ ಪ್ರತ್ಯೇಕ ಸಮಯ ಕೊಡಿ ಎಂದು ಕೋರಲಾಗಿತ್ತು. ಕೌನ್ಸಿಲರ್ ಕೂಡ ಇದಕ್ಕೆ ಒಪ್ಪಿದ್ದರು.

ವಾಕಿಂಗ್​ ಬಂದವರಲ್ಲೇ ಒಬ್ಬರು ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್​ ಕಳುಹಿಸಿದ್ದರು. ಮತ್ತೊಬ್ಬರು ವಿಮಾನ ಟಿಕೆಟ್​ ಬುಕ್​ ಮಾಡಿಕೊಟ್ಟರು. ವಿಮಾನ ನಿಲ್ದಾಣದಿಂದ ಕ್ಯಾಂಪಸ್ಸಿಗೆ ಹೋಗಲು ಕಾರನ್ನು ಮತ್ತೊಬ್ಬರು ವ್ಯವಸ್ಥೆ ಮಾಡಿದ್ದರು. ಅಂತೂ ಆ ವಿದ್ಯಾರ್ಥಿನಿ ಕೌನ್ಸಿಲಿಂಗ್​ಗೆ ಹಾಜರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಆ ಹುಡುಗಿಗೆ BSC ಅಗ್ರಿಕಲ್ಚರ್​ ಸೀಟು ಸಿಕ್ಕಿದೆ.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?