AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು.

ಒಳ್ಳೇ ಸುದ್ದಿ | ಓದುವ ಕನಸಿಗೆ ಆಸರೆ; ಎತ್ತಿನಗಾಡಿ ಏರಿ ಚೆನ್ನೈಗೆ ಬಂದವಳ ವಿಮಾನ ಹತ್ತಿಸಿದರು
ರಾಜೇಶ್ ದುಗ್ಗುಮನೆ
| Edited By: |

Updated on: Dec 23, 2020 | 6:32 AM

Share

ಚೆನ್ನೈ: ನಾವು ನಿಜವಾಗಲೂ ಏನನ್ನಾದರೂ ಬಯಸಿದರೆ ಜಗತ್ತೇ ಅದಕ್ಕೆ ಸಂಚು ರೂಪಿಸುತ್ತೆದೆಯಂತೆ. ಹೀಗೊಂದು ಮಾತು ಚಾಲ್ತಿಯಲ್ಲಿದೆ. ಚೆನ್ನೈ ವಿದ್ಯಾರ್ಥಿನಿಯೊಬ್ಬಳ ಬಾಳಿನಲ್ಲಿ ಇದು ಅಕ್ಷರಶಃ ನಿಜವಾಗಿದೆ. ಆಕೆ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಈ ವಿಶೇಷ ಕಥೆಯ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈ ಸಮೀಪದಲ್ಲಿರುವ ಹಳ್ಳಿಯಿಂದ ಬಾಲಕಿಯೊಬ್ಬಳು ಬಿ.ಎಸ್​​ಸಿ ಅಗ್ರಿಕಲ್ಚರ್​ ಕೋರ್ಸ್​​ ಕೌನ್ಸೆಲಿಂಗ್​ನಲ್ಲಿ ಪಾಲ್ಗೊಳ್ಳುವವರಿದ್ದರು. ಚೆನ್ನೈನಲ್ಲೇ ಕೌನ್ಸಲಿಂಗ್​ ನಡೆಯುತ್ತಿತ್ತು. ಹೀಗಾಗಿ ಅನಕ್ಷರಸ್ಥೆ ತಾಯಿ ಜೊತೆ ಮಗಳು ಚೆನ್ನೈನ ಅಣ್ಣಾ ಕೃಷಿ ವಿಶ್ವವಿದ್ಯಾಲಯಕ್ಕೆ ಎತ್ತಿನ ಗಾಡಿಯಲ್ಲಿ ಬಂದಿದ್ದರು. ಅಲ್ಲಿಗೆ ಬಂದಾಗ ಆಕೆಗೆ ಶಾಕಿಂಗ್​ ಸುದ್ದಿ ಒಂದು ಕಾದಿತ್ತು. ಕೌನ್ಸೆಲಿಂಗ್ ಇರುವುದು ಚನ್ನೈನಲ್ಲಿ ಅಲ್ಲ- ಕೊಯಮತ್ತೂರಿನಲ್ಲಿ ಎನ್ನುವ ವಿಚಾರ ಅಲ್ಲಿಗೆ ಬಂದ ಮೇಲೆ ತಿಳಿದಿತ್ತು. ಯಾರೋ ನೀಡಿದ ತಪ್ಪು ಮಾಹಿತಿಯಿಂದ ವಿದ್ಯಾರ್ಥಿನಿ ಸಂಕಷ್ಟಕ್ಕೆ ಈಡಾಗಿದ್ದರು.

ಅಲ್ಲಿಗೆ ಮುಂಜಾನೆ ವಾಕಿಂಗ್​ಗೆ ಬರುತ್ತಿದ್ದ ಕೆಲವರು ಆತಂಕದಲ್ಲಿರುವ ತಾಯಿ ಮಗಳನ್ನು ಗಮನಿಸಿದ್ದಾರೆ. ಸಮಸ್ಯೆ ಏನು ಎಂದು ಕೇಳಿದ್ದಾರೆ. ಆಗ ನಡೆದ ಘಟನೆ ಬಗ್ಗೆ ಅವರು ಅಲ್ಲಿಯವರಿಗೆ ವಿವರಿಸಿದ್ದಾರೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಲು 9 ಗಂಟೆ ಬೇಕು. ಮುಂಜಾನೆ ಹೊರಟರೂ ಕೌನ್ಸಲಿಂಗ್​ ತಲುಪೋದು ಅಸಾಧ್ಯ. ತಾಯಿ-ಮಗಳ ಸ್ಥಿತಿ ನೋಡಿ ಅಲ್ಲಿಯವರು ಮರುಕ ವ್ಯಕ್ತಪಡಿಸಿದ್ದರು.

ಆಗ ನಡೆಯಿತು ಪವಾಡ

ನಿತ್ಯ ಆ ಭಾಗಕ್ಕೆ ವಾಕಿಂಗ್​ ಬರುವವರು ಒಂದು ತಂಡ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನ ಅದೃಷ್ಟ ಎಂಬಂತೆ ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರ ಪರಿಚಯವಿದ್ದ ಒಬ್ಬರು ಆ ತಂಡದಲ್ಲಿದ್ದರು. ಕೊಯಮತ್ತೂರು ಸೆಂಟರ್​​ನ ಮುಖ್ಯಸ್ಥರರಿಗೆ ಫೋನ್ ಮಾಡಿ ಹುಡುಗಿ ಬರುವುದು ತಡವಾಗುತ್ತದೆ ಎಂದು ತಿಳಿಸಲಾಗಿತ್ತು. ಅವರಿಗೆ ಪ್ರತ್ಯೇಕ ಸಮಯ ಕೊಡಿ ಎಂದು ಕೋರಲಾಗಿತ್ತು. ಕೌನ್ಸಿಲರ್ ಕೂಡ ಇದಕ್ಕೆ ಒಪ್ಪಿದ್ದರು.

ವಾಕಿಂಗ್​ ಬಂದವರಲ್ಲೇ ಒಬ್ಬರು ವಿಮಾನ ನಿಲ್ದಾಣಕ್ಕೆ ತೆರಳಲು ಕಾರ್​ ಕಳುಹಿಸಿದ್ದರು. ಮತ್ತೊಬ್ಬರು ವಿಮಾನ ಟಿಕೆಟ್​ ಬುಕ್​ ಮಾಡಿಕೊಟ್ಟರು. ವಿಮಾನ ನಿಲ್ದಾಣದಿಂದ ಕ್ಯಾಂಪಸ್ಸಿಗೆ ಹೋಗಲು ಕಾರನ್ನು ಮತ್ತೊಬ್ಬರು ವ್ಯವಸ್ಥೆ ಮಾಡಿದ್ದರು. ಅಂತೂ ಆ ವಿದ್ಯಾರ್ಥಿನಿ ಕೌನ್ಸಿಲಿಂಗ್​ಗೆ ಹಾಜರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿ ಆ ಹುಡುಗಿಗೆ BSC ಅಗ್ರಿಕಲ್ಚರ್​ ಸೀಟು ಸಿಕ್ಕಿದೆ.

Delhi Chalo ರೈತರಿಗೆ ದಿಲ್ಜಿತ್ ದೊಸಾಂಜ್ ಸಹಾಯ: 1 ಕೋಟಿ ದಾನ ನೀಡಿದ್ರೂ ಪ್ರಚಾರ ಬಯಸದ ನಟ

ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್