ಭಾರತಕ್ಕೆ ಬಂತಾ ಬಣ್ಣ ಬದಲಿಸಿದ ಹೆಮ್ಮಾರಿ? ಬ್ರಿಟನ್‌ನಿಂದ ಚೆನ್ನೈ, ದೆಹಲಿಗೆ ಮರಳಿದವರಿಗೆ ಕೊರೊನಾ!

ಕಳೆದ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಕೊರೊನಾವೈರಸ್​ನ ಹೊಸ ಪ್ರಬೇಧ ಇದೀಗ ದೇಶಕ್ಕೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬ್ರಿಟನ್‌ನಿಂದ ಚೆನ್ನೈಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಭಾರತಕ್ಕೆ ಬಂತಾ ಬಣ್ಣ ಬದಲಿಸಿದ ಹೆಮ್ಮಾರಿ? ಬ್ರಿಟನ್‌ನಿಂದ ಚೆನ್ನೈ, ದೆಹಲಿಗೆ ಮರಳಿದವರಿಗೆ ಕೊರೊನಾ!
ಪ್ರಾತಿನಿಧಿಕ ಚಿತ್ರ

Updated on: Dec 22, 2020 | 11:53 AM

ಚೆನ್ನೈ: ಕಳೆದ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಕೊರೊನಾ ವೈರಸ್​ನ ಹೊಸ ಪ್ರಭೇದ ಇದೀಗ ದೇಶಕ್ಕೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬ್ರಿಟನ್‌ನಿಂದ ಚೆನ್ನೈಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಬ್ರಿಟನ್‌ನಿಂದ ಮರಳಿದ್ದ ಈ ವ್ಯಕ್ತಿ ದೆಹಲಿ ಮೂಲಕ ಚೆನ್ನೈಗೆ ಆಗಮಿಸಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಚೆನ್ನೈನಿಂದ ಬ್ರಿಟನ್‌ಗೆ ತೆರಳಿದ್ದ ಸೋಂಕಿತ ಮರಳಿದ ನಂತರ RT-PCR ಟೆಸ್ಟ್‌ಗೆ ಒಳಗಾದ ಸೋಂಕು ದೃಢಪಟ್ಟಿದೆ. ಸದ್ಯ, ನಗರದ ಕಿಂಗ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ, ಸೋಂಕಿತ ಇತ್ತೀಚೆಗಷ್ಟೇ ಇಂಗ್ಲೆಂಡ್​ಗೆ​ ಹೋಗಿದ್ದರಿಂದ ಈತನಿಗೆ ಕೊರೊನಾವೈರಸ್​ನ ಹೊಸ ಪ್ರಭೇದ ತಗುಲಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.

ಇತ್ತ, ಬ್ರಿಟನ್‌ನಿಂದ ದೆಹಲಿಗೆ ಆಗಮಿಸಿದ್ದ ಐವರಿಗೆ ಸೋಂಕು ದೃಢವಾಗಿದೆ.  ಲಂಡನ್‌ನಿಂದ ಬಂದಿದ್ದ 266 ಜನ ಪೈಕಿ ಐವರಿಗೆ ಸೋಂಕು ಪತ್ತೆಯಾಗಿದೆ. ಜೊತೆಗೆ, ಲಂಡನ್‌ನಿಂದ ಕೋಲ್ಕತ್ತಾಗೆ ವಾಪಸ್​ ಆದ 6 ಜನರಿಗೆ ಕೊರೊನಾ ದೃಢವಾಗಿದೆ. ಹಾಗಾಗಿ, ಅಲ್ಲೂ ಸಹ ಹೊಸ ಪ್ರಭೇದದ ಸೋಂಕಿನ ಬಗ್ಗೆ ಆತಂಕ ಹುಟ್ಟಿದೆ.

ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಅಗತ್ಯವಿಲ್ಲ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ

Published On - 11:38 am, Tue, 22 December 20