AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galwan Clash | ಗಾಲ್ವಾನ್ ಕಣಿವೆ ಸಂಘರ್ಷದ ವಿಡಿಯೊ ಬಿಡುಗಡೆ ಮಾಡಿದ ಚೀನಾ ಮಾಧ್ಯಮ: ಶಾಂತಿಯ ಹೊಸಿಲಲ್ಲಿ ಇದೆಂಥ ನಡೆ?

ಗಾಲ್ವಾನ್ ಕಣಿವೆಯಲ್ಲಿ ಜೂನ್ 15, 16ರಂದು ಏನೆಲ್ಲಾ ನಡೆಯಿತು ಎಂಬ ಬಗ್ಗೆ ಜಗತ್ತಿನ ಎದುರು ಬಂದಿರುವ ಮೊದಲ ವಿಡಿಯೊ ತುಣುಕು ಇದು.

Galwan Clash | ಗಾಲ್ವಾನ್ ಕಣಿವೆ ಸಂಘರ್ಷದ ವಿಡಿಯೊ ಬಿಡುಗಡೆ ಮಾಡಿದ ಚೀನಾ ಮಾಧ್ಯಮ: ಶಾಂತಿಯ ಹೊಸಿಲಲ್ಲಿ ಇದೆಂಥ ನಡೆ?
ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಸಂಘರ್ಷ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: sandhya thejappa

Updated on:Feb 20, 2021 | 9:49 AM

ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರು ಕೈಕೈ ಮಿಲಾಯಿಸುವ ವಿಡಿಯೊ ತುಣುಕನ್ನು ಚೀನಾ ಸರ್ಕಾರಿ ಸ್ವಾಮ್ಯದ ಮಾಧ್ಯಮ ಶುಕ್ರವಾರ (ಫೆ.19) ರಾತ್ರಿ ಬಿಡುಗಡೆ ಮಾಡಿದೆ. ಗಾಲ್ವಾನ್ ಕಣಿವೆಯಲ್ಲಿ ಜೂನ್ 15, 16ರಂದು ಏನೆಲ್ಲಾ ನಡೆಯಿತು ಎಂಬ ಬಗ್ಗೆ ಜಗತ್ತಿನ ಎದುರು ಬಂದಿರುವ ಮೊದಲ ವಿಡಿಯೊ ತುಣುಕು ಇದು. ಮಿಲಿಟರಿ, ರಾಜತಾಂತ್ರಿಕ ಮತ್ತು ಸರ್ಕಾರಗಳ ಮಟ್ಟದಲ್ಲಿ ಹಲವು ಬಾರಿ ಮಾತುಕತೆಗಳು ನಡೆದ ನಂತರ ಎರಡೂ ದೇಶಗಳ ಸೇನೆಗಳು ಇದೀಗ ಗಡಿಯಿಂದ  ಹಿಂದೆ ಸರಿಯುತ್ತಿವೆ. ನಾಳೆ (ಫೆ.20) ಬೆಳಿಗ್ಗೆ 10 ಗಂಟೆಗೆ ಎರಡೂ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಮಾತುಕತೆಗೆ ಸಮಯ ನಿಗದಿಯಾಗಿದೆ. ಸೇನಾ ಹಿಂತೆಗೆದ ಸಂದರ್ಭ ಮತ್ತು ಮಾತುಕತೆಯ ಮುನ್ನಾ ದಿನ ಬಿಡುಗಡೆಯಾದ ವಿಡಿಯೊ ಇದು ಎಂಬ ಕಾರಣಕ್ಕೆ ರಕ್ಷಣಾ ವಲಯದ ಗಮನ ಸೆಳೆದಿದೆ.

ಟ್ಯಾಂಕ್​, ಯುದ್ಧೋಪಕರಣಗಳು ಹಾಗೂ ಸೇನಾ ತುಕಡಿಗಳನ್ನು ಎರಡೂ ದೇಶಗಳು ಗಡಿಯಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವಾಗ ವಿಡಿಯೊ ತುಣುಕು ಬಿಡುಗಡೆ ಮಾಡಿರುವುದು ಚೀನಾ ನಾಯಕರ ಬದಲಾದ ಮನಃಸ್ಥಿತಿಯ ದ್ಯೋತಕ ಇರಬಹುದು ಎಂದು ಕೆಲ ಹಿರಿಯ ಪತ್ರಕರ್ತರು ವಿಶ್ಲೇಷಿಸಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ಮೃತಪಟ್ಟ ಯೋಧರ ನಾಲ್ವರು ಹೆಸರನ್ನು ಬಹಿರಂಗಪಡಿಸಿದ ದಿನವೇ ಚೀನಾ ಸಂಘರ್ಷದ ವಿಡಿಯೊ ತುಣುಕನ್ನೂ ಬಿಡುಗಡೆ ಮಾಡಿದೆ ಎನ್ನುವುದು ಗಮನಾರ್ಹ ಸಂಗತಿ ಎನಿಸಿದೆ.

ಅಂದು ಏನಾಗಿತ್ತು? ಕಳೆದ ವರ್ಷದ ಜೂನ್ 15, 16ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು. ಭಾರತದ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಪಾಳಯದಲ್ಲಿ 30ರಿಂದ 40 ಯೋಧರು ಸಾವನ್ನಪ್ಪಿರಬಹುದು ಎಂದು ಭಾರತ ಶಂಕಿಸಿತ್ತು. ಆದರೆ ಚೀನಾ ಸತ್ತವರ ವಿವರಗಳನ್ನು ಮುಚ್ಚಿಟ್ಟಿತ್ತು.

ಸಂಘರ್ಷದಲ್ಲಿ ಸುಮಾರು 40 ಚೀನಾ ಸೈನಿಕರು ಮೃತಪಟ್ಟಿರಬಹುದು ಎಂದು ಮೂರ್ನಾಲ್ಕು ದಿನಗಳ ಹಿಂದೆ ರಷ್ಯಾ ಪತ್ರಕರ್ತರು ಬಹಿರಂಗಪಡಿಸಿದ್ದರು. ಭಾರತೀಯ ಸೇನೆಯ ಉತ್ತರ ಕಮಾಂಡ್​ನ ಹಿರಿಯ ಅಧಿಕಾರಿಗಳೂ ಈ ವರದಿಯನ್ನು ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದರು. ರಷ್ಯಾ ಮಾಧ್ಯಮಗಳ ವರದಿಯ ಬೆನ್ನಿಗೇ ಚೀನಾ ಗಾಲ್ವಾನ್ ಸಂಘರ್ಷದ ವಿಡಿಯೊ ತುಣುಕು ಬಿಡುಗಡೆ ಮಾಡಿದೆ. ಈ ಹಿಂದೆಯೂ ಚೀನಾದ ಮಾಧ್ಯಮಗಳು ಗಾಲ್ವಾನ್ ಕಣಿವೆ ಸಂಘರ್ಷಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಪ್ರಚಾರ ಮಾಡಿದ್ದವು.

ಇದನ್ನೂ ಓದಿ: ಗಾಲ್ವಾನ್ ಸಂಘರ್ಷದಲ್ಲಿ 4 ಸೈನಿಕರ ಸಾವು, ಕೊನೆಗೂ ಒಪ್ಪಿಕೊಂಡ ಚೀನಾ ಸರ್ಕಾರ

Galwan Clash

ಗಾಲ್ವಾನ್ ಕಣಿವೆಯ ಹಿಮನದಿಯಲ್ಲಿ ಸೈನಿಕರು

ವಿಡಿಯೊದಲ್ಲಿ ಏನಿದೆ? ಚೀನಾ ಸರ್ಕಾರ ಫೆ.19ರಂದು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಕೊರೆಯುವ ಚಳಿಯಲ್ಲಿ ಎರಡೂ ಸೇನೆಗಳು ನದಿ ದಾಟುವ, ಪರಸ್ಪರ ಕೈಕೈ ಮಿಲಾಯಿಸುವ ದೃಶ್ಯಗಳಿವೆ. ಕತ್ತಲು ಆವರಿಸಿದಂತೆ ಎರಡೂ ದೇಶಗಳ ಸೈನಿಕರು ಕೈಲಿ ಉದ್ದನೆಯ ಕೋಲು, ಟಾರ್ಚ್, ಗುರಾಣಿಗಳನ್ನು ಹಿಡಿದು ಸಂಘರ್ಷಕ್ಕಿಳಿದಿದ್ದಾರೆ. ದೊಡ್ಡ ದನಿಯ ಕಿರುಚಾಟವೂ ವಿಡಿಯೊದಲ್ಲಿ ದಾಖಲಾಗಿದೆ.

ಚೀನಾ ಬಿಡುಗಡೆ ಮಾಡಿರುವ ವಿಡಿಯೊ ತುಣುಕಿನ ಚಿತ್ರಣ ಸಂಪೂರ್ಣ ಭಾರತೀಯ ಭೂಮಿಯಲ್ಲೇ ನಡೆದ ಘಟನೆಗಳನ್ನು ಒಳಗೊಂಡಿದೆ. ಚೀನಾ ತನಗೆ ಬೇಕಾದಂತೆ ವಿಡಿಯೊ ತುಣಕನ್ನು ತಿರುಚಿ-ಸೇರಿಸಿಕೊಂಡಿದೆ. ಭಾರತೀಯ ಯೋಧರನ್ನು ಕೊಲ್ಲಲೆಂದೇ ಕರೆತಂದಿದ್ದ ಚೀನಾದ ಸೇನಾ ನಾಯಿಗಳಾಗಲೀ, ಚೀನಾ ಯೋಧರು ಅಂದು ಹಿಡಿದಿದ್ದ ಮುಳ್ಳುತಂತಿ ಸುತ್ತಿದ್ದ ಉದ್ದನೇ ಬಡಿಗೆಗಳಾಗಲೀ ವಿಡಿಯೊದಲ್ಲಿ ಕಾಣಿಸದಂತೆ ಎಡಿಟ್ ಮಾಡಲಾಗಿದೆ.

ಈಗ ಏಕೆ ಬಂತು ಈ ವಿಡಿಯೊ ಮಾತುಕತೆ ಇನ್ನೇನು ಫಲಪ್ರದವಾಗುವ ಹಂತ ತಲುಪಿದಾಗ ಪ್ರತಿಬಾರಿಯೂ ಇಂಥ ವಿಡಿಯೊಗಳು ಕಾಣಿಸಿಕೊಂಡು, ಉದ್ವಿಗ್ನ ಪರಿಸ್ಥಿತಿ ಮುಂದುವರಿಕೆಯಾಗುವುದು ವಾಡಿಕೆಯೇ ಆಗಿಬಿಟ್ಟಿದೆ. ನಾಳೆ (ಫೆ.20) ಬೆಳಿಗ್ಗೆ 10 ಗಂಟೆಗೆ ಭಾರತ ಮತ್ತು ಚೀನಾದ ಉನ್ನತ ಸೇನಾಧಿಕಾರಿಗಳ ನಡುವೆ ಮಾತುಕತೆಗೆ ಸಮಯ ನಿಗದಿಯಾಗಿತ್ತು. ಎರಡೂ ದೇಶಗಳು ಗಡಿಯಲ್ಲಿ ನಿಯೋಜಿಸಿದ್ದ ಟ್ಯಾಂಕ್​ಗಳ ಸಹಿತ ಯುದ್ಧೋಪಕರಣ ಹಾಗೂ ಸೇನಾ ತುಕಡಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿವೆ. ಈ ಹಂತದಲ್ಲಿ ಚೀನಾ ವಿವಾದಾಸ್ಪದ ವಿಡಿಯೊ ಬಿಡುಗಡೆ ಮಾಡಿರುವುದು ಈ ಮಾತುಕತೆಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.

ಚೀನಾ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿರುವ ವಿಡಿಯೊ ತುಣುಕು

ಇದನ್ನೂ ಓದಿ: ಆಪರೇಷನ್ ಸ್ನೋ ಲೆಪಾರ್ಡ್; ಗಾಲ್ವಾನ್ ಕಣಿವೆ ಸಂಘರ್ಷದ ವಿವರ ಮೊದಲ ಬಾರಿಗೆ ಬಹಿರಂಗ

Published On - 10:36 pm, Fri, 19 February 21

ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್