AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿಯವರ ಭಾಷಣಗಳ ಸಂಕಲನ ‘ಸಬ್​​​ ಕಾ ಸಾಥ್, ಸಬ್​​​ ಕಾ ವಿಕಾಸ್, ಸಬ್​​​ ಕಾ ವಿಶ್ವಾಸ್’ ಸಂಚಿಕೆ 2 ಮತ್ತು 3 ಬಿಡುಗಡೆ

ಯುವಕರು ಮತ್ತು ಸಂಶೋಧಕರು ಈ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಎಂದು ಸಚಿವರು ಒತ್ತಾಯಿಸಿದರು. ಇವುಗಳಲ್ಲಿ ತಿಳಿದುಕೊಳ್ಳುವುದು ಮತ್ತು ಕಲಿಯುವುದು ಬಹಳಷ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಸಿದ ಗಮನಾರ್ಹ ಸಾಧನೆಯನ್ನು ಠಾಕೂರ್ ಶ್ಲಾಘಿಸಿದ್ದಾರೆ

ಮೋದಿಯವರ ಭಾಷಣಗಳ ಸಂಕಲನ 'ಸಬ್​​​ ಕಾ ಸಾಥ್, ಸಬ್​​​ ಕಾ ವಿಕಾಸ್, ಸಬ್​​​ ಕಾ ವಿಶ್ವಾಸ್' ಸಂಚಿಕೆ 2 ಮತ್ತು 3 ಬಿಡುಗಡೆ
ಪುಸ್ತಕ ಲೋಕಾರ್ಪಣೆ ಮಾಡಿದ ಅನುರಾಗ್ ಠಾಕೂರ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 26, 2023 | 5:42 PM

ದೆಹಲಿ ಆಗಸ್ಟ್ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾಡಿದ ಭಾಷಣಗಳ ಸಂಗ್ರಹವಾದ ಸಬ್​​​ ಕಾ ಸಾಥ್, ಸಬ್​​​ ಕಾ ವಿಕಾಸ್, ಸಬ್​​​ ಕಾ ವಿಶ್ವಾಸ್’ (Sabka Saath, Sabka Vikas, Sabka Vishwas) ಪುಸ್ತಕದ ಎರಡು ಮತ್ತು ಮೂರನೇ ಸಂಚಿಕೆಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಮತ್ತು ಮಧ್ಯಪ್ರದೇಶದ ಮುಖ್ಯಮತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಿಡುಗಡೆ ಮಾಡಿದರು. ಜೂನ್ 2020 ರಿಂದ ಮೇ 2021 ರವರೆಗೆ ಮತ್ತು ಜೂನ್ 2021 ರಿಂದ ಮೇ 2022 ರವರೆಗೆ ಅವರ ಯಶಸ್ವಿ ಎರಡನೇ ಅವಧಿಯ ಸಮಯದಲ್ಲಿ ಮಾಡಿದ ಭಾಷಣಗಳ ಸಂಗ್ರಹ ಇದಾಗಿದೆ. ಶನಿವಾರ ಭೋಪಾಲ್‌ನ ಕುಶಾಭವ್ ಠಾಕ್ರೆ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಪುಸ್ತಕ ಲೋಕಾರ್ಪಣೆ ಆಗಿದ್ದು ಈ ಪುಸ್ತಕಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು ಸಂಕಲನ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣಗಳು ನಿರಂತರವಾಗಿ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರ. ಅವರ ಪ್ರತಿಯೊಂದು ಭಾಷಣವು ಕಲಿಯಬೇಕಾದ ಅಮೂಲ್ಯವಾದ ಪಾಠಗಳನ್ನು ಒಳಗೊಂಡಿದೆ. ಒಳನೋಟವುಳ್ಳ ವಿಷಯಗಳ ಸಮೃದ್ಧಿಯಿಂದಾಗಿ ಪುಸ್ತಕವನ್ನು ರಚಿಸಲು ಅವುಗಳಲ್ಲಿ ಭಾಷಣಗಳನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆ.

ಈ ಪುಸ್ತಕದ ಒಂದು ಸಂಚಿಕೆಯಲ್ಲಿ 86 ಸ್ಪೂರ್ತಿದಾಯಕ ಭಾಷಣಗಳನ್ನು ಮತ್ತು ಇನ್ನೊಂದು ಸಂಚಿಕೆಯಲ್ಲಿ80 ಸ್ಪೂರ್ತಿದಾಯಕ ಭಾಷಣಗಳು ಇವೆ. ಪ್ರಧಾನಿ ನರೇಂದ್ರ ಮೋದಿಯವರ ಆಯ್ದ ಭಾಷಣಗಳನ್ನು ಹಲವು ಪ್ರಮುಖ ವಿಷಯಗಳ ಮೇಲೆ ಸಂಕಲಿಸಲಾಗಿದೆ. ಸ್ಟಾರ್ಟ್‌ಅಪ್ ಇಂಡಿಯಾ, ಉತ್ತಮ ಆಡಳಿತ, ಮಹಿಳಾ ಸಬಲೀಕರಣ, ರಾಷ್ಟ್ರ ಶಕ್ತಿ, ಸ್ವಾವಲಂಬಿ ಭಾರತ, ಜೈ ವಿಜ್ಞಾನ, ಜೈ ಕಿಸಾನ್ ಮುಂತಾದ ವಿಷಯಗಳ ಕುರಿತು ಸಾಮಾನ್ಯ ನಾಗರಿಕರನ್ನು ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣಗಳು ಇದರಲ್ಲಿವೆ.

ಯುವಕರು ಮತ್ತು ಸಂಶೋಧಕರು ಈ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಎಂದು ಸಚಿವರು ಒತ್ತಾಯಿಸಿದರು. ಇವುಗಳಲ್ಲಿ ತಿಳಿದುಕೊಳ್ಳುವುದು ಮತ್ತು ಕಲಿಯುವುದು ಬಹಳಷ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಸಿದ ಗಮನಾರ್ಹ ಸಾಧನೆಯನ್ನು ಠಾಕೂರ್ ಶ್ಲಾಘಿಸಿದ್ದಾರೆ

UPI ಮತ್ತು BHIM ಅಪ್ಲಿಕೇಶನ್‌ಗಳಂತಹ ಅಪ್ಲಿಕೇಶನ್‌ಗಳನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಡಿಜಿಟಲ್ ಪಾವತಿಗಳ ಜಗತ್ತಿನಲ್ಲಿ ಈಗ ಗರಿಷ್ಠ ವಹಿವಾಟಿನ ಶೇಕಡಾ 46 ರಷ್ಟು ಭಾರತದಲ್ಲಿ ನಡೆಯುತ್ತದೆ ಎಂದು ಹೇಳಿದರು. ಹಿಂದಿನದಕ್ಕೆ ಹೋಲಿಸಿದರೆ, 45 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇದೀಗ ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ಫಲಾನುಭವಿಗಳನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ ಎಂದು ಅವರು ಗಮನಿಸಿದರು.

ಯುವಕರ ಪ್ರಮುಖ ಪಾತ್ರ ಬಗ್ಗೆ ಮಾತನಾಡಿದ ಠಾಕೂರ್, ಭಾರತದ ಯುವಕರು ಈಗ ಉದ್ಯೋಗ ನೀಡುವವರಾಗಿದ್ದಾರೆ ಎಂದು ಹೇಳಿದರು. ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿವೆ. ವಿಶ್ವದಲ್ಲೇ ಅತ್ಯಂತ ಅಗ್ಗದ ಡೇಟಾ ಈಗ ಭಾರತದಲ್ಲಿ ಲಭ್ಯವಿದೆ. ದೇಶ ತನ್ನದೇ ಆದ 5G ತಂತ್ರಜ್ಞಾನವನ್ನು ಮಾಡಿದ. ಭವಿಷ್ಯದಲ್ಲಿ 6G ತಂತ್ರಜ್ಞಾನವನ್ನು ಮಾಡಲು ಹೊರಟಿದೆ. 75ನೇ ವರ್ಷದ ಅಮೃತ ಮಹೋತ್ಸವದಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದರು.

ಇದನ್ನೂ ಓದಿ: PM Modi in ISRO, Bengaluru: ವಿಜ್ಞಾನಿಗಳನ್ನು ಅಭಿನಂದಿಸುವ ಮೊದಲು ಪ್ರಧಾನಿ ಮೋದಿ ‘ಜೈ ವಿಗ್ಯಾನ್ ಜೈ ಅನುಸಂಧಾನ’ ಘೋಷವಾಕ್ಯ ದೇಶಕ್ಕೆ ನೀಡಿದರು!

ಮಧ್ಯಪ್ರದೇಶ ರಾಜ್ಯದ ಪ್ರಗತಿಯನ್ನು ಶ್ಲಾಘಿಸಿದ ಅವರುಈ ಹಿಂದೆ ಮಧ್ಯಪ್ರದೇಶವನ್ನು ಬಿಮಾರು ಎಂದು ಕರೆಯಲಾಗುತ್ತಿತ್ತು, ಆದರೆ ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯವು ದೇಶದ ಪ್ರಮುಖ ಮತ್ತು ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಠಾಕೂರ್ ವ್ಯಕ್ತಪಡಿಸಿದರು.

ಮಾತೃಭಾಷೆಯ ಶಿಕ್ಷಣದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದು, ಮಧ್ಯಪ್ರದೇಶದಲ್ಲಿ ಮಾತ್ರ ಹಿಂದಿಯಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪಠ್ಯಕ್ರಮ ಸಿದ್ಧಪಡಿಸಲಾಗಿದೆ ಎಂದರು. ಸೀಖೋ ಕಾಮಾವೋ ಯೋಜನೆ ಒಂದು ವಿಶಿಷ್ಟ ಯೋಜನೆಯಾಗಿದ್ದು, ಇಲ್ಲಿಯವರೆಗೆ 86 ಸಾವಿರಕ್ಕೂ ಹೆಚ್ಚು ನೋಂದಣಿಗಳನ್ನು ಮಾಡಲಾಗಿದೆ. ಮಧ್ಯಪ್ರದೇಶವು ಖೇಲೋ ಇಂಡಿಯಾ ಯೂತ್ ಗೇಮ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಭಾಷಣ ಮಾಡಿದ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಪುಸ್ತಕವನ್ನು ಓದುವಂತೆ ಯುವಜನರಲ್ಲಿ ಮನವಿ ಮಾಡಿದರು. ಇದು ಅಮೂಲ್ಯವಾದ ನಿಧಿ ಮತ್ತು ಬುದ್ಧಿವಂತಿಕೆಯ ಮುತ್ತುಗಳು ಅದರಲ್ಲಿ ಕಂಡುಬರುತ್ತವೆ.

ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ವೇದಿಕೆಯನ್ನು ನೀಡುವ ಸಾಮಾನ್ಯ ನಾಗರಿಕರ ಧ್ವನಿಯಾಗಿದೆ. ನರೇಂದ್ರ ಮೋದಿ ಅವರನ್ನು ದೂರದೃಷ್ಟಿಯ ಪ್ರಧಾನಮಂತ್ರಿ ಎಂದು ವಿವರಿಸುವ ಈ ಪುಸ್ತಕವನ್ನು ಖಂಡಿತವಾಗಿ ಓದಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ
ಕ್ರೆಡಿಟ್​​ ತೆಗೆದುಕೊಳ್ಳುವ ಚಟ ನಿಮಗೆ: ಡಿಕೆಶಿ​​ ವಿರುದ್ಧ ಜೋಶಿ ಕಿಡಿ