AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೂ ನಾಟಕ !- ವೈರಲ್​ ಆದ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗುರುತಿಸಿ, ತೋರಿಸಿದ ಕಾಂಗ್ರೆಸ್​

ಪ್ರತಿಪಕ್ಷ ಕಾಂಗ್ರೆಸ್​ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್​​ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್​ ಅಲ್ಲ. ಪಕ್ಕಾ ಪೋಸ್​ ಎಂದು ಹೇಳಿದೆ.

ಇದೂ ನಾಟಕ !- ವೈರಲ್​ ಆದ ಎರಡು ಫೋಟೋಗಳಲ್ಲಿ ವ್ಯತ್ಯಾಸ ಗುರುತಿಸಿ, ತೋರಿಸಿದ ಕಾಂಗ್ರೆಸ್​
ವೈರಲ್ ಆದ ಫೋಟೋಗಳು
TV9 Web
| Updated By: Lakshmi Hegde|

Updated on: Nov 22, 2021 | 9:37 PM

Share

ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜತೆಗಿರುವ ಎರಡು ಫೋಟೋಗಳು ನಿನ್ನೆಯಿಂದ ವೈರಲ್​ ಆಗುತ್ತಿವೆ. ಈ ಫೋಟೋವನ್ನು ನೋಡಿ ಅನೇಕರು ಮೆಚ್ಚಿಕೊಂಡಿದ್ದರೆ, ಪ್ರತಿಪಕ್ಷಗಳೂ ಸೇರಿ ಹಲವರು ವ್ಯಂಗ್ಯವಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಲಖನೌಗೆ ಭೇಟಿ ಕೊಟ್ಟಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಯೋಗಿ ಆದಿತ್ಯನಾಥ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್​ ಇಬ್ಬರೂ ಆಳವಾದ ಚರ್ಚೆಯಲ್ಲಿ ತೊಡಗಿರುವ ಫೋಟೋಗಳು ಇವಾಗಿದ್ದು, ಮೋದಿಯವರು ಯೋಗಿಯವರ ಹೆಗಲ ಮೇಲೆ ಕೈಹಾಕಿದ್ದಾರೆ. ಹಾಗಾಗಿ ಇವು ವಿಶೇಷ ಫೋಟೋಗಳು ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.

ಆದರೆ ಪ್ರತಿಪಕ್ಷ ಕಾಂಗ್ರೆಸ್​ ಇಲ್ಲಿಯೂ ವ್ಯಂಗ್ಯವಾಡಿದೆ. ಕ್ಯಾಂಡಿಡ್​​ನಂತೆ ಕಾಣುವ ಈ ಫೋಟೋಗಳು ಖಂಡಿತ ಕ್ಯಾಂಡಿಡ್​ ಅಲ್ಲ. ಪಕ್ಕಾ ಪೋಸ್​ ಎಂದು ಹೇಳಿದೆ. ಕೆಲವು ಕಾಂಗ್ರೆಸ್​ ನಾಯಕರು ತಮ್ಮ ಟ್ವಿಟರ್​ನಲ್ಲಿ ಎರಡೂ ಫೋಟೋಗಳನ್ನು ಶೇರ್ ಮಾಡಿಕೊಂಡು ಇವೆರಡೂ ಫೋಟೋಗಳ ಮಧ್ಯೆ ಇರುವ ವ್ಯತ್ಯಾಸವನ್ನೂ ತೋರಿಸಿದ್ದಾರೆ. ಎರಡೂ ಫೋಟೋಗಳು ಒಂದೇ ಬಾರಿ ತೆಗೆದಿದ್ದಾದರೆ, ಕ್ಯಾಂಡಿಡ್​ ಆಗಿದ್ದರೆ ಹೀಗೇಕೆ ವಿಭಿನ್ನತೆ ಗೋಚರಿಸುತ್ತಿತ್ತು? ಪ್ರಧಾನಿ ಮೋದಿಯವರ ಉಡುಪಿನಲ್ಲೇಕೆ ಬದಲಾವಣೆ ಆಗುತ್ತಿತ್ತು ಎಂಬುದು ಕಾಂಗ್ರೆಸ್ಸಿಗರ ಪ್ರಶ್ನೆ.

ಈ ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಆದರೆ ಒಂದು ಫೋಟೋದಲ್ಲಿ ಪ್ರಧಾನಿ ಮೋದಿಯವರು ಹೆಗಲಿಗೆ ಅಂಗೋಚಾ ಹೊದ್ದಿದ್ದಾರೆ. ಇನ್ನೊಂದರಲ್ಲಿ ಶಾಲು ಹಾಕಿಕೊಂಡಿದ್ದಾರೆ. ಎದುರಿನಿಂದ ತೆಗೆದ ಫೋಟೋದಲ್ಲಿ ಮೋದಿಯವರ ಮುಖದಲ್ಲಿ ಕಿರಿಕಿರಿ ಮತ್ತು ಭಯ ಎದ್ದು ಕಾಣುತ್ತಿದೆ. ಈ ಫೋಟೋದಿಂದ ಯೋಗಿಯವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶಿರಂತೆ ಹೇಳಿದ್ದಾರೆ.

ಇನ್ನು ಯುತ್​ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಕೂಡ ಎರಡೂ ಫೋಟೋ ಶೇರ್ ಮಾಡಿಕೊಂಡು ವ್ಯತ್ಯಾಸ ಗುರುತಿಸಿ ಎಂದು ಮಾರ್ಕ್ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಮೋದಿ ಜೀ-ಯೋಗಿ ಜೀ: ಅಪರೂಪದ ಫೋಟೋ ಶೇರ್​ ಮಾಡಿಕೊಂಡು ಸಣ್ಣ ಕವನವನ್ನೇ ಬರೆದ ಉತ್ತರಪ್ರದೇಶ ಸಿಎಂ

ಕೇರಳದಲ್ಲಿ ಹಲಾಲ್ ಆಹಾರಗಳನ್ನು ನಿಷೇಧಿಸುವಂತೆ ಬಿಜೆಪಿ ನಾಯಕರ ಆಗ್ರಹ; ಅದು ಉಗ್ರಗಾಮಿಗಳ ಅಸ್ತ್ರವೆಂದ ಪಕ್ಷ

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್