ಕಾಂಗ್ರೆಸ್ ನಾಯಕತ್ವ ದೈವಿಕ ಹಕ್ಕು ಅಲ್ಲ: ರಾಹುಲ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

Prashant Kishor ಇತ್ತೀಚಿಗೆ ಕಾಂಗ್ರೆಸ್‌ನಿಂದ ಹಿರಿಯ ನಾಯಕರು ತೊರೆಯುವಂತೆ ಪ್ರಶಾಂತ್ ಕಿಶೋರ್ ಅವರೇ ತಂತ್ರ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕತ್ವ ದೈವಿಕ ಹಕ್ಕು ಅಲ್ಲ: ರಾಹುಲ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ
ಪ್ರಶಾಂತ್ ಕಿಶೋರ್
Edited By:

Updated on: Dec 02, 2021 | 2:47 PM

ದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor), ಕಳೆದ 10 ವರ್ಷಗಳಲ್ಲಿ ಪಕ್ಷವು ಶೇ 90 ಕ್ಕಿಂತ ಹೆಚ್ಚು ಚುನಾವಣೆಗಳನ್ನು ಕಳೆದುಕೊಂಡಿರುವಾಗ ಕಾಂಗ್ರೆಸ್ ನಾಯಕತ್ವವು ವ್ಯಕ್ತಿಯ ದೈವಿಕ ಹಕ್ಕುಅಲ್ಲ ಎಂದು ಹೇಳಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಪ್ರಶಾಂತ್ ಕಿಶೋರ್ ಹಿಂದೆ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ಆದಾಗ್ಯೂ, ದೇಶದ ಪ್ರಸ್ತುತ ರಾಜಕೀಯದಲ್ಲಿ ಪಕ್ಷದ ಮಹತ್ವವನ್ನು ತಳ್ಳಿಹಾಕಲಿಲ್ಲ. “ಕಾಂಗ್ರೆಸ್ ಪ್ರತಿನಿಧಿಸುವ ಕಲ್ಪನೆ ಮತ್ತು ಸ್ಥಳವು ಪ್ರಬಲ ವಿರೋಧಕ್ಕೆ ಅತ್ಯಗತ್ಯ” ಎಂದು ಕಿಶೋರ್ ಟ್ವೀಟ್ ಮಾಡಿದ್ದಾರೆ. ಅದೇ ವೇಳೆ “ಪ್ರತಿಪಕ್ಷದ ನಾಯಕತ್ವವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಲಿ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್‌ನಿಂದ ಹಿರಿಯ ನಾಯಕರು ತೊರೆಯುವಂತೆ ಪ್ರಶಾಂತ್ ಕಿಶೋರ್ ಅವರೇ ತಂತ್ರ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಅವರು ಇತ್ತೀಚೆಗೆ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸುತ್ತಿದ್ದಾರೆ. ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ಟೆನಿ ಅವರ ಕಾರಿನಿಂದ ಪ್ರತಿಭಟನಾ ನಿರತ ರೈತರನ್ನು ಹೊಡೆದುರುಳಿಸಿದ ಲಖಿಂಪುರ ಖೇರಿ ಘಟನೆಯ ನಂತರ, ಲಖಿಂಪುರ ಖೇರಿ ಘಟನೆಯ ಮೇಲೆ ಕಾಂಗ್ರೆಸ್ ರಾತ್ರೋರಾತ್ರಿ ನೆಲೆಗಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.


ಲಖಿಂಪುರಖೇರಿ ಘಟನೆಯ ಆಧಾರದ ಮೇಲೆ ಗ್ರ್ಯಾಂಡ್ ಓಲ್ಡ್ ಪಾರ್ಟಿ ನೇತೃತ್ವದ ವಿರೋಧದ ತ್ವರಿತ, ಸ್ವಯಂಪ್ರೇರಿತ ಪುನರುಜ್ಜೀವನಕ್ಕಾಗಿ ಜನರು ತಮ್ಮನ್ನು ತಾವು ದೊಡ್ಡ ನಿರಾಶೆಗೆ ಹೊಂದಿಸಿಕೊಳ್ಳುತ್ತಿದ್ದಾರೆ. ದುರದೃಷ್ಟವಶಾತ್, ಗ್ರ್ಯಾಂಡ್ ಓಲ್ಡ್ ಪಾರ್ಟಿಯಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳು ಮತ್ತು ರಚನಾತ್ಮಕ ದೌರ್ಬಲ್ಯಗಳಿಗೆ ಯಾವುದೇ ತ್ವರಿತ ಪರಿಹಾರಗಳಿಲ್ಲ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯುಪಿಎ ಅಸ್ತಿತ್ವವನ್ನು ಪ್ರಶ್ನಿಸಿದ ಒಂದು ದಿನದ ನಂತರ ಕಾಂಗ್ರೆಸ್‌ನ ಮೇಲಿನ ಟೀಕೆಗಳು ಅಧಿಕಾರದ ವಲಯದಲ್ಲಿ ಕೋಲಾಹಲವನ್ನು ಸೃಷ್ಟಿಸಿವೆ. “ಈಗಿರುವ ಫ್ಯಾಸಿಸಂ ವಿರುದ್ಧ ಯಾರೂ ಹೋರಾಡದಂತೆ ದೃಢವಾದ ಪರ್ಯಾಯ ಮಾರ್ಗವನ್ನು ರೂಪಿಸಬೇಕು. ಶರದ್ ಜೀ ಅವರು ಅತ್ಯಂತ ಹಿರಿಯ ನಾಯಕ ಮತ್ತು ನಾನು ನಮ್ಮ ರಾಜಕೀಯ ಪಕ್ಷಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಶರದ್ ಜೀ ಏನು ಹೇಳಿದರೂ ನಾನು ಒಪ್ಪುತ್ತೇನೆ. ಅಲ್ಲಿ ಯುಪಿಎ ಇಲ್ಲ” ಎಂದು ಮಮತಾ ಬ್ಯಾನರ್ಜಿ ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಅವರಿಂದ ಸಲಹೆ ಪಡೆದಿರುವ ಮಮತಾ ಬ್ಯಾನರ್ಜಿ, ರಾಜಕೀಯದಲ್ಲಿ ನಿರಂತರವಾಗಿರಬೇಕು ಎಂದು ರಾಹುಲ್ ಗಾಂಧಿ ವಿರುದ್ಧ ಬುಧವಾರ ವ್ಯಂಗ್ಯವಾಡಿದ್ದಾರೆ. “ನೀವು ಹೆಚ್ಚಿನ ಸಮಯ ವಿದೇಶದಲ್ಲಿರಲು ಸಾಧ್ಯವಿಲ್ಲ,” ಎಂದು ಮಮತಾ ಪರೋಕ್ಷವಾಗಿ ಟೀಕೆ ಮಾಡಿದ್ದರು.

ಇದನ್ನೂ ಓದಿ: Video: ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ, ಕುಳಿತ ಮಮತಾ ಬ್ಯಾನರ್ಜಿ; ಇಂಥ ನಡವಳಿಕೆ ನಾಚಿಕೆ ಗೇಡು ಎಂದ ತೇಜಸ್ವಿ ಸೂರ್ಯ