AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ

ಹಳ್ಳಿಗಳಲ್ಲಿ ಕೊವಿಡ್​ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಇತ್ತೀಚೆಗಷ್ಟೇ ಗುಜರಾತ್ ಸರ್ಕಾರ ಅನುಮತಿ ನೀಡಿದೆ.

ಗೋಶಾಲೆಯಲ್ಲಿಯೇ ಕೊವಿಡ್​ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 09, 2021 | 11:19 AM

Share

ಗೋಮೂತ್ರ ಸೇವನೆಯಿಂದ ಕೊರೊನಾದಿಂದ ಪಾರಾಗಬಹುದು ಎಂದು ಇತ್ತೀಚೆಗಷ್ಟೇ ಬಿಜೆಪಿ ಶಾಸಕರೊಬ್ಬರು ಹೇಳಿದ್ದರು. ಇದೊಂದು ಅಭಿಪ್ರಾಯ ಕೊರೊನಾ ಕಾಲಿಟ್ಟಾಗಿನಿಂದಲೂ ಆಗಾಗ ವ್ಯಕ್ತವಾಗುತ್ತಲೇ ಇದೆ. ಆದರೆ ಗುಜರಾತ್​ನ ಬನಸ್ಕಾಂತ ಜಿಲ್ಲೆಯ ಟೆಟೋಡಾ ಗ್ರಾಮದಲ್ಲಿರುವ ರಾಜಾರಾಮ ಗೋಶಾಲಾ ಆಶ್ರಮದಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ. ಇಲ್ಲಿ ಗೋ ಶಾಲೆಯಲ್ಲಿಯೇ ಕೊವಿಡ್ 19 ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ರೋಗಿಗಳಿಗೆ ಗೋಮೂತ್ರ, ಗೋವಿನ ಹಾಲನ್ನು ಬಳಸಿ ತಯಾರಿಸಿದ ಮಾತ್ರೆಗಳನ್ನೇ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿನ ರೋಗಿಗಳು ಅಲೋಪಥಿಕ್​ ಔಷಧಗಳನ್ನು ಬಳಸುತ್ತಿಲ್ಲ. ಈ ರಾಜಾರಾಮ ಗೋಶಾಲಾ ಆಶ್ರಮ, ಗುಜರಾತ್​ನ ಗೋಧಾಮ ಮಹಾತೀರ್ಥ ಪಾತ್ಮೇಡಾದ ಒಂದು ಶಾಖೆಯಾಗಿದೆ.

ಈ ಕೊವಿಡ್​ ಕಾಳಜಿ ಕೇಂದ್ರದ ಹೆಸರು ವೇದಲಕ್ಷಣ ಪಂಚಗವ್ಯ ಆಯುರ್ವೇದ ಕೊವಿಡ್ ಐಸೋಲೇಶನ್ ಕೇಂದ್ರ. ಮೇ 5ರಂದು ನಿರ್ಮಾಣವಾದ ಈ ಕೊವಿಡ್​ ಕೇಂದ್ರದಲ್ಲಿ ಸದ್ಯ 7 ಕೊವಿಡ್​ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವಿಲ್ಲಿ ಕೊವಿಡ್ 19 ರೋಗಿಗಳಿಗೆ ಹಸುವಿನ ಹಾಲು, ತುಪ್ಪ, ಮೂತ್ರದಿಂದ ತಯಾರಿಸಲಾದ ಎಂಟು ರೀತಿಯ ಆಯುರ್ವೇದಿಕ್ ಮಾತ್ರೆಗಳನ್ನು ನೀಡುತ್ತಿದ್ದೇವೆ ಎಂದು ಗೋಧಾಮ ಮಹಾತೀರ್ಥ ಪಾತ್ಮೇಡಾದ ಬನಸ್ಕಾಂತ ಜಿಲ್ಲೆ ಶಾಖೆಯ ಟ್ರಸ್ಟೀ ಮೋಹನ್​ ಜಾಧವ್ ತಿಳಿಸಿದ್ದಾರೆ.

ಕೊವಿಡ್ 19 ಲಕ್ಷಣ ಇರುವವರಿಗೆ ನಾವು ಪ್ರಾರಂಭದಲ್ಲಿ ಪಂಚಗವ್ಯ ಥೆರಪಿ ನೀಡುತ್ತೇವೆ. ಗೋಮೂತ್ರದಿಂದ ಮಾಡಲಾದ ಗೋ ತೀರ್ಥವನ್ನು ಕೊಡುತ್ತೇವೆ. ಕೆಮ್ಮಿಗೆ ಗೋ ಮೂತ್ರದಿಂದ ತಯಾರಿಸಲಾದ ಮಾತ್ರೆಯಿಂದ ಚಿಕಿತ್ಸೆ ನೀಡಲಾಗುತ್ತದೆ. ಹಸುವಿನ ಹಾಲಿನಿಂದ ತಯಾರಿತವಾಗುವ ಚ್ಯವನಪ್ರಾಶ ನೀಡುವ ಮೂಲಕ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲಾಗುವುದು ಎಂದು ವಿವರಿಸಿದ್ದಾರೆ.

ಈ ಐಸೋಲೇಶನ್​ ಕೇಂದ್ರದಲ್ಲಿ ಇಬ್ಬರು ಆಯುರ್ವೇದಿಕ್​ ವೈದ್ಯರಿದ್ದು, ಅವರು ಔಷಧಗಳನ್ನು ಸೂಚಿಸುತ್ತಾರೆ. ಕೊರೊನಾ ಸೋಂಕಿನ ತೀವ್ರತೆ ನೋಡಿಕೊಂಡು ಕೆಲವರಿಗೆ ಅಲೋಪಥಿಕ್​ ಔಷಧವನ್ನೂ ನೀಡಲಾಗುವುದು. ಇದಕ್ಕಾಗಿ ಇಬ್ಬರು ಅದೇ ಕ್ಷೇತ್ರದ ವೈದ್ಯರನ್ನೂ ನೇಮಕ ಮಾಡಿಕೊಂಡಿದ್ದೇವೆ ಎಂದೂ ಜಾಧವ್​ ತಿಳಿಸಿದ್ದಾರೆ. ಹಾಗೇ, ಕೊವಿಡ್ ರೋಗಿಗಳಿಗೆ ಎಲ್ಲ ರೀತಿಯ ಚಿಕಿತ್ಸೆಯನ್ನೂ ಉಚಿತವಾಗಿಯೇ ನೀಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಹಳ್ಳಿಗಳಲ್ಲಿ ಕೊವಿಡ್​ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲು ಇತ್ತೀಚೆಗಷ್ಟೇ ಗುಜರಾತ್ ಸರ್ಕಾರ ಅನುಮತಿ ನೀಡಿದೆ. ಅದನ್ನು ಈ ಆಯುರ್ವೇದಿಕ್​ ಕೇಂದ್ರ ಸದುಪಯೋಗಪಡಿಸಿಕೊಂಡು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ.

ಇದನ್ನೂ ಓದಿ:  ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ಹೆಸರು ಬಹುತೇಕ ಖಚಿತ; ಇಂದು ಮಧ್ಯಾಹ್ನ ಘೋಷಣೆ ಸಾಧ್ಯತೆ

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ