AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು

ಎಸ್​.ವಿ.ಆನಂದ್​ರಾವ್ ಜಾಹೀರಾತಿನ ಕೊನೆಯಲ್ಲಿ ತಮ್ಮ ಫೋನ್​ ನಂಬರ್​ ಕೂಡ ನಮೂದಿಸಿದ್ದು, ಆರೋಗ್ಯ, ಸಂಪತ್ತು, ಮದುವೆ ಸೇರಿ ಯಾವುದೇ ಸಮಸ್ಯೆಯಿದ್ದರೂ ಕರೆ ಮಾಡಬಹುದು ಎಂದೂ ಹೇಳಿಕೊಂಡಿದ್ದಾರೆ.

ಕೊರೊನಾ-ಕೊವಿಡ್​ 19 ಸ್ಪೆಲ್ಲಿಂಗ್ ಬದಲಿಸಿದರೆ ಸೋಂಕು ನಿರ್ಮೂಲನ ಖಚಿತ; ವೈರಲ್ ಆಗುತ್ತಿದೆ ಸಂಖ್ಯಾಶಾಸ್ತ್ರಜ್ಞನ ಜಾಹೀರಾತು
ಜಾಹೀರಾತಿನ ಬ್ಯಾನರ್​
Lakshmi Hegde
|

Updated on: May 09, 2021 | 12:07 PM

Share

ಎಂತೆಂಥಾ ಪ್ರಯತ್ನಗಳನ್ನು ಮಾಡಿದರೂ ಕೊರೊನಾ ನಿರ್ಮೂಲನ ಆಗುತ್ತಿಲ್ಲ. ನಿರ್ಮೂಲನ ಬಿಡಿ.. ನಿಯಂತ್ರಣವೂ ದೊಡ್ಡ ಕಷ್ಟವಾಗಿದೆ. ಔಷಧಿ, ಲಸಿಕೆ, ಕರ್ಫ್ಯೂ, ಲಾಕ್​ಡೌನ್​ ಏನೇ ಇದ್ದರೂ, ಏನೆಲ್ಲ ಪ್ರಯತ್ನ ಮಾಡಿದರೂ ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿದೆ. ಹೀಗಿರುವಾಗ ವ್ಯಕ್ತಿಯೊಬ್ಬ ಒಂದು ಬ್ಯಾನರ್​​ನಲ್ಲಿ ವಿಚಿತ್ರವಾದ ಸಂದೇಶ ಕೊಟ್ಟಿದ್ದಾರೆ. ಈ ಬ್ಯಾನರ್​ನ ಚಿತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದೊಂದು ಜಾಹೀರಾತು ಆಗಿದ್ದು, ಎಲ್ಲರೂ ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಇದರಲ್ಲಿ ನೀವು Corona ಮತ್ತು Covid 19 ಶಬ್ದದ ಸ್ಪೆಲ್ಲಿಂಗ್ ಬೇರೆ ಇರುವುದನ್ನು ಗಮನಿಸಬಹುದು.

ಈ ವ್ಯಕ್ತಿ ಹೇಳಲು ಹೊರಟಿದ್ದೂ ಅದನ್ನೇ ಆಗಿದೆ. ನೀವು Corona ಎಂದು ಬರೆಯುವ ಬದಲು CARONAA ಎಂದೂ, Covid 19 ಎಂದು ಬರೆಯುವ ಬದಲು COVVIYD-19 ಎಂದು ಒಂದು ಬ್ಯಾನರ್​​ ಮೇಲೆ ಬರೆಸಿ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿ. ಅಥವಾ ಮನೆ ಬಾಗಿಲು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಹೀಗೆ ಸ್ಪೆಲ್ಲಿಂಗ್​ (ಕಾಗುಣಿತ) ಬರೆಯಿರಿ. ನೋಡುತ್ತಿರಿ ವಿಶ್ವದಿಂದಲೇ ಕೊರೊನಾ ಮಾಯವಾಗುತ್ತದೆ ಎಂದು ಬರೆದಿದ್ದಾರೆ. ಇದು ಖಂಡಿತವಾಗಿಯೂ ಸತ್ಯ..ಸಂಖ್ಯಾಶಾಸ್ತ್ರಕ್ಕೆ ಅಷ್ಟು ಬಲವಿದೆ ಎಂದು ಹೇಳಿದ್ದಾರೆ.

ಈ ಜಾಹೀರಾತು ರಚಿಸಿದವರು ಸ್ಟೆನೋಗ್ರಾಫರ್​ ಎಸ್​.ವಿ.ಆನಂದ್​ರಾವ್. ಸಂಖ್ಯಾಶಾಸ್ತ್ರದಲ್ಲಿ ಸಿಕ್ಕಾಪಟೆ ನಂಬಿಕೆ ಹೊಂದಿರುವ ಇವರು, ತಮ್ಮ ಹೆಸರಿಗೆ ಹೆಚ್ಚುವರಿಯಾಗಿ ಎನ್​ಎಸ್​ ಮತ್ತು ಡಿಎಸ್​ ಸೇರಿಸಿಕೊಂಡಿದ್ದಾರೆ.   ಮೂಲತಃ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯವರು ಎಂಬುದು ಅವರು ಹಾಕಿದ ಜಾಹೀರಾತಿನಿಂದ ಗೊತ್ತಾಗುತ್ತದೆ. ಜಾಹೀರಾತಿನ ಕೊನೆಯಲ್ಲಿ ತಮ್ಮ ಫೋನ್​ ನಂಬರ್​ ಕೂಡ ನಮೂದಿಸಿದ್ದು, ಆರೋಗ್ಯ, ಸಂಪತ್ತು, ಮದುವೆ ಸೇರಿ ಯಾವುದೇ ಸಮಸ್ಯೆಯಿದ್ದರೂ ಕರೆ ಮಾಡಬಹುದು ಎಂದೂ ಹೇಳಿಕೊಂಡಿದ್ದಾರೆ.

ಇವರು ಟ್ವೀಟ್ ಮಾಡಿರುವ ಬ್ಯಾನರ್​ ಚಿತ್ರ ಸಿಕ್ಕಾಪಟೆ ವೈರಲ್ ಆಗಿದೆ. ಹಾಗೇ ಕಾಮೆಂಟ್​ಗಳನ್ನೂ ಮಾಡಿದ್ದಾರೆ. ನಾವು ಕೊರೊನಾ, ಕೊವಿಡ್​ 19 ಶಬ್ದಗಳ ಕಾಗುಣಿತ ಬದಲಿಸುವ ಬದಲು ದೇಶದ ಎಲ್ಲ ರಾಜಕಾರಣಿಗಳ ಹೆಸರಿನ ಸ್ಪೆಲ್ಲಿಂಗ್ ಬದಲಿಸೋಣ. ಇದು ದೇಶಕ್ಕೆ ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ಒಬ್ಬರು ಕಾಮೆಂಟ್​ ಮಾಡಿದ್ದರೆ, ಇನ್ನೊಬ್ಬರು, ಕೊರೊನಾ ವಿಶ್ವದಿಂದ ನಿರ್ಮೂಲನ ಆಗುತ್ತದೆ ಎಂದರೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ಹೆತ್ತವ್ವಳ ನೆನಪಿಗೊಂದು ದೇವಾಲಯ; ತಾಯಿಯ ಮೂರ್ತಿ ಇಟ್ಟು ಪೂಜೆ ಸಲ್ಲಿಸುತ್ತಿರುವ ಮಕ್ಕಳು

ಚಿಕಿತ್ಸೆ ಫಲಿಸದೇ ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾ ಸೋಂಕಿಗೆ ಬಲಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ