ಉಜ್ಜೈನ್ ದೇವಾಲಯದಲ್ಲಿ ಕೊವಿಡ್ ಮಾನದಂಡ ಉಲ್ಲಂಘನೆ; ಕಾಲ್ತುಳಿತದಲ್ಲಿ ಹಲವರಿಗೆ ಗಾಯ

Ujjain Temple: ಪವಿತ್ರ ಶ್ರಾವಣ ಮಾಸದಲ್ಲಿ ಮೊದಲ ಸೋಮವಾರದಂದು ಪ್ರಾರ್ಥನೆ ಸಲ್ಲಿಸಲು ಭಕ್ತರು ನೆರೆದಿದ್ದರು. “ಬೆಳಿಗ್ಗೆ 8: 30 ರ ಸುಮಾರಿಗೆ, ಹೆಚ್ಚಿನ ಸಂಖ್ಯೆಯ ಜನರು ದರ್ಶನಕ್ಕಾಗಿ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ದೇವಾಲಯದ ಸಂಕೀರ್ಣದ ನಾಲ್ಕನೇ ಗೇಟ್‌ನಲ್ಲಿರುವ ಬ್ಯಾರಿಕೇಡ್ ಅನ್ನು ಮುರಿದರು

ಉಜ್ಜೈನ್ ದೇವಾಲಯದಲ್ಲಿ ಕೊವಿಡ್ ಮಾನದಂಡ ಉಲ್ಲಂಘನೆ; ಕಾಲ್ತುಳಿತದಲ್ಲಿ ಹಲವರಿಗೆ ಗಾಯ
ಉಜ್ಜೈನ್ ದೇವಾಲಯದಲ್ಲಿ ಶ್ರಾವಣ ಸೋಮವಾರದಂದು ಕಂಡು ಬಂದ ಭಕ್ತರ ದಂಡು
Edited By: ರಶ್ಮಿ ಕಲ್ಲಕಟ್ಟ

Updated on: Jul 27, 2021 | 1:16 PM

ಉಜ್ಜೈನ್: ಮಧ್ಯಪ್ರದೇಶದ ಉಜ್ಜೈನ್ ಪ್ರಸಿದ್ಧ ಮಹಾಕಲೇಶ್ವರ ಶಿವ ದೇವಸ್ಥಾನದಲ್ಲಿ ಕಾಲ್ತುಳಿತ ರೀತಿಯ ಪರಿಸ್ಥಿತಿ ಉಂಟಾಗಿದ್ದು ಹಲವಾರು ಭಕ್ತರು ಗಾಯಗೊಂಡಿದ್ದಾರೆ. ಸೋಮವಾರ ನಡೆದ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ಭಕ್ತರು ದೇವಾಲಯದ ಒಳಗೆ ನುಗ್ಗಲು ಯತ್ನಿಸುತ್ತಿರುವುದನ್ನು ಕಾಣಬಹುದು.

ದೇವಾಲಯಕ್ಕೆ ಪ್ರವೇಶಿಸುವ ಪ್ರಯತ್ನದಲ್ಲಿ ಜನಸಮೂಹವು ಪರಸ್ಪರರ ವಿರುದ್ಧ ಎಳೆದಾಡುವುದು ಮತ್ತು ತಳ್ಳುವುದು ಕಂಡುಬಂತು. ಹಲವಾರು ಮಂದಿ ಕೆಳಗೆ ಬಿದ್ದರು. ಅವರ ಮೇಲೆ ಮತ್ತಷ್ಟು ಜನರು ಬಿದ್ದು ಬ್ಯಾರಿಕೇಡ್ ಗೇಟ್‌ಗಳಲ್ಲಿ ಒಂದು ಹಾನಿಗೊಳಗಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಪವಿತ್ರ ಶ್ರಾವಣ ಮಾಸದಲ್ಲಿ ಮೊದಲ ಸೋಮವಾರದಂದು ಪ್ರಾರ್ಥನೆ ಸಲ್ಲಿಸಲು ಭಕ್ತರು ನೆರೆದಿದ್ದರು.
“ಬೆಳಿಗ್ಗೆ 8: 30 ರ ಸುಮಾರಿಗೆ, ಹೆಚ್ಚಿನ ಸಂಖ್ಯೆಯ ಜನರು ದರ್ಶನಕ್ಕಾಗಿ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯಲ್ಲಿ ದೇವಾಲಯದ ಸಂಕೀರ್ಣದ ನಾಲ್ಕನೇ ಗೇಟ್‌ನಲ್ಲಿರುವ ಬ್ಯಾರಿಕೇಡ್ ಅನ್ನು ಮುರಿದರು.
ಬ್ಯಾರಿಕೇಡ್ ಮುರಿದ ನಂತರ, ಹಲವಾರು ಜನರು ಮುಖ್ಯ ದೇವರ ಕಡೆಗೆ ಓಡಲು ಪ್ರಯತ್ನಿಸಿದರು. ಅದೃಷ್ಟವಶಾತ್ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ”ಎಂದು ದೇವಾಲಯದ ಸಹಾಯಕ ಆಡಳಿತಾಧಿಕಾರಿ ಮೂಲ್‌ಚಂದ್ ಜೂನ್ವಾಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

“ಇದು ಪವಿತ್ರ ಶ್ರಾವಣ ತಿಂಗಳ ಮೊದಲ ಸೋಮವಾರವಾದ್ದರಿಂದ, ಪೂರ್ವ-ಬುಕಿಂಗ್ ಹೊರತುಪಡಿಸಿ ದರ್ಶನಕ್ಕಾಗಿ ಜನರಿಗೆ ಸರತಿ ಸಾಲಿನಲ್ಲಿ ನಿಲ್ಲಲು ಅವಕಾಶ ನೀಡಲಾಯಿತು. ಆದರೂ ಜನಸಮೂಹವು ನಾವು ನಿರೀಕ್ಷಿಸಿದ್ದಕ್ಕಿಂತ ದೊಡ್ಡದಾಗಿದೆ, “ಅವರು ಹೇಳಿದರು.

ದೇವಾಲಯದ ಹೊರಗೆ ಜನರು ಸಾಲುಗಟ್ಟಿ ನಿಂತಿದ್ದರಿಂದ ಸಾಮಾಜಿಕ ದೂರ ಮತ್ತು ಇತರ ಕೊವಿಡ್ -19 ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:  ‘ಅವರಿಗೆ ಬೇರೆ ಆಯ್ಕೆ ಇಲ್ಲ’; ಕೊವಿಡ್ ಸಾಂಕ್ರಾಮಿಕದ ನಡುವೆ ಭಿಕ್ಷಾಟನೆ ತಡೆಯುವ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಇದನ್ನೂ ಓದಿ:  Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?

(Covid rules flouted stampede-like situation at Ujjain’s famous Mahakaleshwar Siva Temple due to first Monday of the holy month of Shravan)

Web contact

TV9 Kannada

Read More
Follow Us