AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ. ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ […]

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌
Guru
Guru|

Updated on:Sep 01, 2020 | 2:36 PM

Share

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ.

ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್ಸ್‌ಗಳಿಗಾಗಿ ಭಾರತ 2,580 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಗತ್ಯ ಮಂಜೂರಾತಿ ನೀಡಿದ್ದಾರೆ.

ಎಲ್ಲವೂ ಅಂದು ಕೊಂಡಂತೆ ನಡೆದ್ರೆ 2024ಕ್ಕೆ ಈ ಪಿನಾಕಾ ಮಲ್ಟಿಪಲ್‌ ರಾಕೆಟ್‌ ಲಾಂಚರ್ಸ್‌ ಭಾರತೀಯ ಸೇನೆ ಸೇರಿಕೊಳ್ಳಲಿವೆ. ಶತೃಗಳ ಚಲನವಲನಗಳನ್ನು ಮತ್ತು ಅವರ ಸೈನ್ಯದ ಗತಿಯನ್ನು ಗುರಿಯಾಗಿಟ್ಟುಕೊಂಡು ರಾಕೆಟ್‌ ದಾಳಿ ನಡೆಸಲು ಈ ಪಿನಾಕಾ ಬಹು ಉಪಯೋಗಿಯಾಗಲಿದೆ.

ಹೀಗಾಗಿ ಇನ್ನು ಮುಂದೆ ಭಾರತದೊಂದಿಗೆ ತಗಾದೆ ತೆಗೆಯುವುದಕ್ಕಿಂತ ಮೊದಲು ಶತ್ರಗಳು ಹತ್ತು ಬಾರಿ ಯೋಚಿಸುವ ಕಾಲ ಸನ್ನಿಹಿತವಾಗುತ್ತಿದೆ.

Published On - 2:05 pm, Tue, 1 September 20

Follow Us
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ