AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ. ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ […]

ಚೀನಾ ಕಿರಿಕ್‌ ನಡುವೆಯೇ ಭಾರತದಿಂದ ಪಿನಾಕಾ ಮಲ್ಟಿ ರಾಕೆಟ್‌ ಲಾಂಚರ್ಸ್‌ಗೆ ಆರ್ಡರ್‌
Guru
|

Updated on:Sep 01, 2020 | 2:36 PM

Share

ನವದೆಹಲಿ: ಮೊದಲೇ ಪಾಕಿಸ್ತಾನದ ಭಯೋತ್ಪಾದನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದ ಭಾರತ ಈಗ ಚೀನಾದೊಂದಿಗಿನ ಗಡಿ ತಂಟೆಯಿಂದಾಗಿ ಎಚ್ಚೆತ್ತುಕೊಂಡಿದೆ. ಮುಂದಿನ ದಿನಗಳಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಮಾಡಿಕೊಡದಿರಲು ಪ್ಲಾನ್‌ ಮಾಡಿದ್ದು, ಇದರಂಗವಾಗಿ ಈಗ ಪಿನಾಕಾ ರಾಕೆಟ್‌ ಲಾಂಚರ್‌ನ್ನು ಸೇನೆಗೆ ಸೇರಿಸಲು ಸಜ್ಜಾಗಿದೆ.

ಸಂಪೂರ್ಣವಾಗಿ ದೇಸಿಯವಾಗಿಯೇ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್‌ ಏಕ ಕಾಲದಲ್ಲಿ ಹಲವಾರು ರಾಕೆಟ್‌ಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ BEL ಅಂದ್ರೆ ಭಾರತ್‌ ಅರ್ಥ್‌ ಮೂವರ್ಸ್‌, ಲಾರ್ಸನ್‌ ಌಂಡ್‌ ಟರ್ಬೋ ಮತ್ತು ಟಾಟಾ ಪವರ್‌ ಕಂಪನಿಗಳಿಗೆ ಗುತ್ತಿಗೆ ನೀಡಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ತಯಾರಾಗುತ್ತಿರುವ ಈ ಪಿನಾಕಾ ರಾಕೆಟ್‌ ಲಾಂಚರ್ಸ್‌ಗಳಿಗಾಗಿ ಭಾರತ 2,580 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಗತ್ಯ ಮಂಜೂರಾತಿ ನೀಡಿದ್ದಾರೆ.

ಎಲ್ಲವೂ ಅಂದು ಕೊಂಡಂತೆ ನಡೆದ್ರೆ 2024ಕ್ಕೆ ಈ ಪಿನಾಕಾ ಮಲ್ಟಿಪಲ್‌ ರಾಕೆಟ್‌ ಲಾಂಚರ್ಸ್‌ ಭಾರತೀಯ ಸೇನೆ ಸೇರಿಕೊಳ್ಳಲಿವೆ. ಶತೃಗಳ ಚಲನವಲನಗಳನ್ನು ಮತ್ತು ಅವರ ಸೈನ್ಯದ ಗತಿಯನ್ನು ಗುರಿಯಾಗಿಟ್ಟುಕೊಂಡು ರಾಕೆಟ್‌ ದಾಳಿ ನಡೆಸಲು ಈ ಪಿನಾಕಾ ಬಹು ಉಪಯೋಗಿಯಾಗಲಿದೆ.

ಹೀಗಾಗಿ ಇನ್ನು ಮುಂದೆ ಭಾರತದೊಂದಿಗೆ ತಗಾದೆ ತೆಗೆಯುವುದಕ್ಕಿಂತ ಮೊದಲು ಶತ್ರಗಳು ಹತ್ತು ಬಾರಿ ಯೋಚಿಸುವ ಕಾಲ ಸನ್ನಿಹಿತವಾಗುತ್ತಿದೆ.

Published On - 2:05 pm, Tue, 1 September 20

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್