YouTuber: 300 ಕಿಮೀ ವೇಗದಲ್ಲಿ ಬೈಕ್ ಸವಾರಿ, ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಚ್ಚಿ! ಪ್ರಖ್ಯಾತ ಯೂಟ್ಯೂಬರ್ ಸಾವು

ಗಂಟೆಗೆ 300 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದ ಅಗಸ್ತ್ಯರ ಬೈಕ್ ಉತ್ತರ ಪ್ರದೇಶದ ಉಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್ ಪ್ರೆಸ್ ಹೈವೇ ಬಳಿ ಬಂದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

YouTuber: 300 ಕಿಮೀ ವೇಗದಲ್ಲಿ ಬೈಕ್ ಸವಾರಿ, ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಚ್ಚಿ! ಪ್ರಖ್ಯಾತ ಯೂಟ್ಯೂಬರ್ ಸಾವು
ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಚ್ಚಿ! ಪ್ರಖ್ಯಾತ ಯೂಟ್ಯೂಬರ್ ಸಾವು
ಸಾಧು ಶ್ರೀನಾಥ್​

Updated on: May 04, 2023 | 9:49 AM

ಜನಪ್ರಿಯ ಯೂಟ್ಯೂಬರ್ (YouTuber) ಮತ್ತು ವೃತ್ತಿಪರ ಬೈಕರ್ ಅಗಸ್ತ್ಯ ಚೌಹಾಣ್ (Agastya Chauhan) ನಿನ್ನೆ (ಮೇ 3) ರಸ್ತೆ ಅಪಘಾತದಲ್ಲಿ (road accident) ಮೃತಪಟ್ಟಿದ್ದಾರೆ. ಉತ್ತರಾಖಂಡದ ಡೆಹ್ರಾಡೂನ್ (Dehradun, Uttarakhand) ನಿವಾಸಿ ಅಗಸ್ತ್ಯ ಚೌಹಾಣ್, ವೃತ್ತಿಯಲ್ಲಿ ಬೈಕ್ ಸವಾರ. ಅವರ YouTube ಚಾನಲ್ ‘PRO RIDER 1000’ 1.2 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಅಪಘಾತಕ್ಕೆ 16 ಗಂಟೆಗಳ ಮೊದಲು ಅವರು ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ. ವೇಗವಾಗಿ ಬೈಕ್ ಸ್ಟಂಟ್ ಮಾಡುವ ವಿಡಿಯೋಗಳನ್ನು ತನ್ನ ಚಾನೆಲ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ವೇಗದ ಚಾಲನೆ ಅಪಾಯಕಾರಿ ಎಂಬ ಎಚ್ಚರಿಕೆಯನ್ನೂ ತಮ್ಮ ಪ್ರತಿ ವಿಡಿಯೋದಲ್ಲಿ ನೀಡುತ್ತಿದ್ದರು. ಕೊನೆಗೆ ಅದೇ ವೇಗದಲ್ಲಿ ಪ್ರಾಣ ಕಳೆದುಕೊಂಡರು.

ಈ ಹಿನ್ನೆಲೆಯಲ್ಲಿ ಬುಧವಾರ ಆಗ್ರಾದಿಂದ ಜಾನ್ ಎಕ್ಸ್ 10ಆರ್ ನಿಂಜಾ ಸೂಪರ್ ಬೈಕ್ ನಲ್ಲಿ ದೆಹಲಿಯಲ್ಲಿ ಮೋಟಾರ್ ಬೈಕ್ ರೇಸಿಂಗ್ ನಲ್ಲಿ ಭಾಗವಹಿಸಲು ಹೊರಟಿದ್ದರು. ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ಅಗಸ್ತ್ಯರ ಬೈಕ್ ಉತ್ತರ ಪ್ರದೇಶದ ಉಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್ ಪ್ರೆಸ್ ಹೈವೇ (Yamuna Express Highway) ಬಳಿ ಬಂದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

Also Read: 

ಬೊಲೆರೊಗೆ ಲಾರಿ ಡಿಕ್ಕಿ, ಛತ್ತೀಸ್​ಗಢದಲ್ಲೊಂದು ಭೀಕರ ಅಪಘಾತ: ಒಂದೇ ಕುಟುಂಬದ 10 ಮಂದಿ ಸಾವು

ಈ ಅಪಘಾತದಲ್ಲಿ ಅಗಸ್ತ್ಯ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಅವರು ಧರಿಸಿದ್ದ ಹೆಲ್ಮೆಟ್ ತುಂಡಾಗಿದೆ. ಮೊನ್ನೆಯಷ್ಟೇ ಈ ಸಾಹಸಕ್ಕೆ ಕೈಹಾಕಿದ್ದ ಅಗಸ್ತ್ಯನ ಸಾವು ಅವರ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:43 am, Thu, 4 May 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us