AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಮೋಟ್​ ಕಾರಿನ ಬದಲು ಆನ್​ಲೈನ್​ನಲ್ಲಿ ಬಂತು ಬೇರೊಂದು ವಸ್ತು; ಈಗ ‘ಚಹ ಮಾಡೋದೇ ಬೆಸ್ಟ್’​ ಎಂದ ಗ್ರಾಹಕ

ಹೀಗೆ ಆನ್​ಲೈನ್​ ಶಾಪಿಂಗ್​ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್​​ಬುಕ್​​ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ರಿಮೋಟ್​ ಕಾರಿನ ಬದಲು ಆನ್​ಲೈನ್​ನಲ್ಲಿ ಬಂತು ಬೇರೊಂದು ವಸ್ತು; ಈಗ ‘ಚಹ ಮಾಡೋದೇ ಬೆಸ್ಟ್’​ ಎಂದ ಗ್ರಾಹಕ
ಆನ್​ಲೈನ್​ ಬಂದ ಪಾರ್ಲೆ ಜಿ
TV9 Web
| Updated By: Lakshmi Hegde|

Updated on: Jun 22, 2021 | 12:24 PM

Share

ದೆಹಲಿ: ಈಗಂತೂ ಆನ್​ಲೈನ್​ ಶಾಪಿಂಗ್​​ ತುಂಬ ಹೆಚ್ಚಾಗುತ್ತಿದೆ. ಹಾಗೇ, ಇದರಲ್ಲಿ ವಂಚನೆಯ ಪ್ರಕರಣಗಳೂ ವರದಿಯಾಗುತ್ತಿವೆ. ಆರ್ಡರ್​ ಮಾಡಿದ ವಸ್ತುವಿನ ಬದಲು, ಇನ್ನೊಂದು ಏನೋ ಕೈಸೇರಿದ ಘಟನೆಗಳೂ ನಡೆದಿವೆ. ಹಾಗೇ ದೆಹಲಿಯ ಭಗವಾನ್​ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕರೊಬ್ಬರಿಗೆ ಇಂಥ ಅನುಭವ ಆಗಿದೆ. ಇ-ಕಾಮರ್ಸ್​ ತಾಣದಲ್ಲಿ ರಿಮೋಟ್​ ಕಂಟ್ರೋಲ್​ ಕಾರ್​ ಆರ್ಡರ್​ ಮಾಡಿದ್ದ ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್​​ ಪ್ಯಾಕೆಟ್​.

ಹೀಗೆ ಆನ್​ಲೈನ್​ ಶಾಪಿಂಗ್​ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್​​ಬುಕ್​​ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು ಅಮೇಜಾನ್​​ನಲ್ಲಿ ನಾನು ರಿಮೋಟ್​ ಕಂಟ್ರೋಲ್​ ಕಾರು ಆರ್ಡರ್ ಮಾಡಿದ್ದೆ. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್​ ಬಂತು. ಈಗ ಚಹಾ ಮಾಡಲು ಹೋಗೋದೇ..ಎಂದು ವಿಕ್ರಮ್​ ಪೋಸ್ಟ್ ಹಾಕಿದ್ದಾರೆ.

ಈ ಪೋಸ್ಟ್​ಗೆ ವಿವಿಧ ಫನ್ನಿ ಕಾಮೆಂಟ್​ಗಳು ಬಂದಿವೆ. ನೀವು ರಿಮೋಟ್​ ಕಾರು ಆರ್ಡರ್​ ಮಾಡಿದ್ದು ನೋಡಿ ಮಕ್ಕಳಿರುವುದು ಅವರಿಗೆ ಗೊತ್ತಾಯಿತು. ಹಾಗಾಗಿ ಪಾರ್ಲೆ-ಜಿ ಕಳಿಸಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ. ಹಾಗೇ ಇನ್ನೊಬ್ಬರು ಕಾಮೆಂಟ್ ಮಾಡಿ, ನಿಮ್ಮದು ಪುಣ್ಯ, ಇಟ್ಟಿಗೆ ಕಳಿಸಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ದೂರು ನೀಡಿದ್ದೇನೆ. ಅದರಂತೆ ಕಂಪನಿ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದೆ. ಕ್ಷಮೆಯನ್ನೂ ಕೇಳಿದೆ ಎಂದು ವಿಕ್ರಮ್​ ತಿಳಿಸಿದ್ದಾರೆ. ಕಳೆದ ತಿಂಗಳು ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಹೀಗೇ ಅನುಭವ ಆಗಿತ್ತು. ಕೊಲ್ಗೇಟ್​ ಮೌತ್ ವಾಶ್​ ಆರ್ಡರ್ ಮಾಡಿದ್ದವರಿಗೆ ರೆಡ್​ಮಿ ನೋಟ್​ 10 ಫೋನ್​ ಬಂದಿತ್ತು.

ಇದನ್ನೂ ಓದಿ: ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್

(Delhi Man received Parle-G biscuit pakc in online instead of Remote control car)

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ