AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಮೋಟ್​ ಕಾರಿನ ಬದಲು ಆನ್​ಲೈನ್​ನಲ್ಲಿ ಬಂತು ಬೇರೊಂದು ವಸ್ತು; ಈಗ ‘ಚಹ ಮಾಡೋದೇ ಬೆಸ್ಟ್’​ ಎಂದ ಗ್ರಾಹಕ

ಹೀಗೆ ಆನ್​ಲೈನ್​ ಶಾಪಿಂಗ್​ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್​​ಬುಕ್​​ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.

ರಿಮೋಟ್​ ಕಾರಿನ ಬದಲು ಆನ್​ಲೈನ್​ನಲ್ಲಿ ಬಂತು ಬೇರೊಂದು ವಸ್ತು; ಈಗ ‘ಚಹ ಮಾಡೋದೇ ಬೆಸ್ಟ್’​ ಎಂದ ಗ್ರಾಹಕ
ಆನ್​ಲೈನ್​ ಬಂದ ಪಾರ್ಲೆ ಜಿ
TV9 Web
| Updated By: Lakshmi Hegde|

Updated on: Jun 22, 2021 | 12:24 PM

Share

ದೆಹಲಿ: ಈಗಂತೂ ಆನ್​ಲೈನ್​ ಶಾಪಿಂಗ್​​ ತುಂಬ ಹೆಚ್ಚಾಗುತ್ತಿದೆ. ಹಾಗೇ, ಇದರಲ್ಲಿ ವಂಚನೆಯ ಪ್ರಕರಣಗಳೂ ವರದಿಯಾಗುತ್ತಿವೆ. ಆರ್ಡರ್​ ಮಾಡಿದ ವಸ್ತುವಿನ ಬದಲು, ಇನ್ನೊಂದು ಏನೋ ಕೈಸೇರಿದ ಘಟನೆಗಳೂ ನಡೆದಿವೆ. ಹಾಗೇ ದೆಹಲಿಯ ಭಗವಾನ್​ ನಗರ ಆಶ್ರಮ ಏರಿಯಾದಲ್ಲಿ ಗ್ರಾಹಕರೊಬ್ಬರಿಗೆ ಇಂಥ ಅನುಭವ ಆಗಿದೆ. ಇ-ಕಾಮರ್ಸ್​ ತಾಣದಲ್ಲಿ ರಿಮೋಟ್​ ಕಂಟ್ರೋಲ್​ ಕಾರ್​ ಆರ್ಡರ್​ ಮಾಡಿದ್ದ ಇವರಿಗೆ ಬಂದಿದ್ದು ಮಾತ್ರ ಪಾರ್ಲೆ-ಜಿ ಬಿಸ್ಕತ್​​ ಪ್ಯಾಕೆಟ್​.

ಹೀಗೆ ಆನ್​ಲೈನ್​ ಶಾಪಿಂಗ್​ನಿಂದ ಕೆಟ್ಟ ಅನುಭವ ಆಗಿದ್ದು ವಿಕ್ರಮ್ ಬುರಗೋಹೈನ್ ಎಂಬುವರಿಗೆ. ಫೇಸ್​​ಬುಕ್​​ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗಾಗಿ ನಾನು ಅಮೇಜಾನ್​​ನಲ್ಲಿ ನಾನು ರಿಮೋಟ್​ ಕಂಟ್ರೋಲ್​ ಕಾರು ಆರ್ಡರ್ ಮಾಡಿದ್ದೆ. ಆದರೆ ಈ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೇಟ್​ ಬಂತು. ಈಗ ಚಹಾ ಮಾಡಲು ಹೋಗೋದೇ..ಎಂದು ವಿಕ್ರಮ್​ ಪೋಸ್ಟ್ ಹಾಕಿದ್ದಾರೆ.

ಈ ಪೋಸ್ಟ್​ಗೆ ವಿವಿಧ ಫನ್ನಿ ಕಾಮೆಂಟ್​ಗಳು ಬಂದಿವೆ. ನೀವು ರಿಮೋಟ್​ ಕಾರು ಆರ್ಡರ್​ ಮಾಡಿದ್ದು ನೋಡಿ ಮಕ್ಕಳಿರುವುದು ಅವರಿಗೆ ಗೊತ್ತಾಯಿತು. ಹಾಗಾಗಿ ಪಾರ್ಲೆ-ಜಿ ಕಳಿಸಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ. ಹಾಗೇ ಇನ್ನೊಬ್ಬರು ಕಾಮೆಂಟ್ ಮಾಡಿ, ನಿಮ್ಮದು ಪುಣ್ಯ, ಇಟ್ಟಿಗೆ ಕಳಿಸಲಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಈಗಾಗಲೇ ದೂರು ನೀಡಿದ್ದೇನೆ. ಅದರಂತೆ ಕಂಪನಿ ಹಣ ಹಿಂತಿರುಗಿಸುವ ಪ್ರಕ್ರಿಯೆ ನಡೆಸುತ್ತಿದೆ. ಕ್ಷಮೆಯನ್ನೂ ಕೇಳಿದೆ ಎಂದು ವಿಕ್ರಮ್​ ತಿಳಿಸಿದ್ದಾರೆ. ಕಳೆದ ತಿಂಗಳು ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಹೀಗೇ ಅನುಭವ ಆಗಿತ್ತು. ಕೊಲ್ಗೇಟ್​ ಮೌತ್ ವಾಶ್​ ಆರ್ಡರ್ ಮಾಡಿದ್ದವರಿಗೆ ರೆಡ್​ಮಿ ನೋಟ್​ 10 ಫೋನ್​ ಬಂದಿತ್ತು.

ಇದನ್ನೂ ಓದಿ: ಡಿಸಿಜಿಐಗೆ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗಗಳ ಮಾಹಿತಿ ಸಲ್ಲಿಸಿದ ಭಾರತ್ ಬಯೋಟೆಕ್

(Delhi Man received Parle-G biscuit pakc in online instead of Remote control car)

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ