AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣೆ ವಿಳಂಬವಾಗಿದ್ದಕ್ಕೆ ‘ತಾರೀಖ್ ಪೆ ತಾರೀಖ್’ ಡೈಲಾಗ್ ಕಿರುಚಿ ನ್ಯಾಯಾಲಯದ ಕುರ್ಚಿ,ಕಂಪ್ಯೂಟರ್ ಕಿತ್ತೆಸೆದ ಭೂಪ

ಜುಲೈ 17 ರಂದು ದೆಹಲಿಯ ಕಾರ್ಕಾರ್ದೂಮ ಕೋರ್ಟ್ ಸಂಕೀರ್ಣದಲ್ಲಿ ಕೋರ್ಟ್ ರೂಂ ಸಂಖ್ಯೆ 66 ರಲ್ಲಿ ಈ ಘಟನೆ ನಡೆದಿದೆ.  ನ್ಯಾಯಾಲಯವು ವಿಚಾರಣೆಗೆ ದಿನಾಂಕಗಳನ್ನು ಮಾತ್ರ ನೀಡುತ್ತಿದೆ.  ನ್ಯಾಯದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಎಂಬುದು ಆ ವ್ಯಕ್ತಿಯ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಚಾರಣೆ ವಿಳಂಬವಾಗಿದ್ದಕ್ಕೆ ‘ತಾರೀಖ್ ಪೆ ತಾರೀಖ್’ ಡೈಲಾಗ್ ಕಿರುಚಿ ನ್ಯಾಯಾಲಯದ ಕುರ್ಚಿ,ಕಂಪ್ಯೂಟರ್ ಕಿತ್ತೆಸೆದ ಭೂಪ
ದಾಮಿನಿ ಚಿತ್ರದಲ್ಲಿ ಸನ್ನಿ ಡಿಯೋಲ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jul 22, 2021 | 5:41 PM

Share

ದೆಹಲಿ: ಇತ್ತೀಚೆಗೆ ಕಾರ್ಕಾರ್ದೂಮ ನ್ಯಾಯಾಲಯದಲ್ಲಿ ದೆಹಲಿಯ ವ್ಯಕ್ತಿಯೊಬ್ಬರು ದಾಮಿನಿ ಸಿನಿಮಾದಲ್ಲಿ ಸನ್ನಿ ಡಿಯೋಲ್ ಹೇಳಿದ ತಾರೀಖ್ ಪೆ ತಾರೀಖ್ ಡೈಲಾಗ್ ಕಿರುಚಿ ಅಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜುಲೈ 17 ರಂದು ದೆಹಲಿಯ ಕಾರ್ಕಾರ್ದೂಮ ಕೋರ್ಟ್ ಸಂಕೀರ್ಣದಲ್ಲಿ ಕೋರ್ಟ್ ರೂಂ ಸಂಖ್ಯೆ 66 ರಲ್ಲಿ ಈ ಘಟನೆ ನಡೆದಿದೆ.  ನ್ಯಾಯಾಲಯವು ವಿಚಾರಣೆಗೆ ದಿನಾಂಕಗಳನ್ನು ಮಾತ್ರ ನೀಡುತ್ತಿದೆ.  ನ್ಯಾಯದ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಎಂಬುದು ಆ ವ್ಯಕ್ತಿಯ ಆಕ್ರೋಶಕ್ಕೆ ಕಾರಣವಾಗಿತ್ತು.  ಈ ವ್ಯಕ್ತಿಯನ್ನು ದೆಹಲಿ ನಿವಾಸಿ ರಾಕೇಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಅವರ ಪ್ರಕರಣವು 2016 ರಿಂದ ಕಾರ್ಕಾರ್ದೂಮ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ವರದಿಯಾಗಿದೆ.

ಈ ಗದ್ದಲದ ನಂತರ ಕೋರ್ಟ್ ರೂಂ ಸಿಬ್ಬಂದಿ ಎಚ್ಚರಿಕೆ ನೀಡಿದ್ದು ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆಮೇಲೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು, ಅವರು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ಲೈವ್ ಲಾ ವರದಿ ಮಾಡಿದೆ.

ದೆಹಲಿ ಪೊಲೀಸರು ರಾಕೇಶ್ ವಿರುದ್ಧ ಸೆಕ್ಷನ್ 186 (ಯಾವುದೇ ಸಾರ್ವಜನಿಕ ಸೇವೆಯನ್ನು ತನ್ನ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ತಡೆ), ಸೆಕ್ಷನ್ 353 (ಸಾರ್ವಜನಿಕ ಸೇವಕನಾಗಿರುವ ಯಾವುದೇ ವ್ಯಕ್ತಿಗೆ ಹಲ್ಲೆ ಅಥವಾ ಅಪರಾಧ), ಸೆಕ್ಷನ್ 427 (ಕಿಡಿಗೇಡಿತನ) ಮತ್ತು ಸೆಕ್ಷನ್ 506 ( ಕ್ರಿಮಿನಲ್ ಬೆದರಿಕೆ).

ರಾಜ್‌ಕುಮಾರ್ ಸಂತೋಶಿ ನಿರ್ದೇಶನದ ದಾಮಿನಿ ಪ್ರಸಿದ್ಧ ಬಾಲಿವುಡ್ ಚಿತ್ರವಾಗಿದ್ದು, ಮೀನಾಕ್ಷಿ ಶೇಷಾದ್ರಿ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿದ್ದು ರಿಷಿ ಕಪೂರ್, ಅಮ್ರಿಶ್ ಪುರಿ, ಪರೇಶ್ ರಾವಲ್ ನಟಿಸಿದ್ದಾರೆ. ಸಿನಿಮಾದಲ್ಲಿ ನಿರಾಶೆಗೊಂಡ ವಕೀಲನ ಪಾತ್ರವನ್ನು ನಿರ್ವಹಿಸುತ್ತಿರುವ ಸನ್ನಿ ಡಿಯೋಲ್, ತಮ್ಮ ಎದುರಾಳಿ ವಕೀಲ ವಿಚಾರಣೆ ಮುಂದೂಡಲು ಕೋರುತ್ತಿದ್ದಂತೆ ತಾರೀಖ್ ಪೆ ತಾರೀಖ್ ಎಂದು ಕಿರುಚಿ ಆಕ್ರೋಶ ವ್ಯಕ್ತಪಡಿಸುವ ಡೈಲಾಗ್ ಬಾಲಿವುಡ್​​ನಲ್ಲಿ ಅಪ್ರತಿಮವಾಗಿದೆ.

ಚಲನಚಿತ್ರದಲ್ಲಿ ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶರು ಈ ವಿಷಯದಲ್ಲಿ ಮತ್ತೊಂದು ದಿನಾಂಕವನ್ನು ನೀಡಬೇಕೇ ಎಂದು ಕೇಳಿದಾಗ ಸನ್ನಿ ಡಿಯೋಲ್ ಈ ರೀತಿ ಹೇಳುತ್ತಾರೆ.

“… ಇಂದು, ನೀವು ಮತ್ತೆ ದಿನಾಂಕವನ್ನು ನೀಡುತ್ತಿದ್ದೀರಿ. ಆ ದಿನಾಂಕದ ಮೊದಲು, ಕೆಲವು ಟ್ರಕ್ಗಳು ಬಂದು ನನ್ನ ಮೇಲೆ ಓಡುತ್ತವೆ ಮತ್ತು ಪ್ರಕರಣವನ್ನು ರಸ್ತೆ ಅಪಘಾತವೆಂದು ಘೋಷಿಸಲಾಗುತ್ತದೆ. ತದನಂತರ ಏನು? ನೀವು ಮತ್ತೆ ದಿನಾಂಕವನ್ನು ನೀಡುತ್ತೀರಿ. ಆದರೆ. ಆ ದಿನಾಂಕದ ಮೊದಲು, ದಾಮಿನಿಯನ್ನು ಹುಚ್ಚರೆಂದು ಘೋಷಿಸಲಾಗುತ್ತದೆ ಮತ್ತು ಮಾನಸಿಕ ರೋಗಿಗಳ ಕೇಂದ್ರದಲ್ಲಿ ಎಸೆಯಲಾಗುತ್ತದೆ. ಈ ರೀತಿಯಾಗಿ, ಸತ್ಯಕ್ಕಾಗಿ ಹೋರಾಡಲು ಯಾರೂ ಇರುವುದಿಲ್ಲ, ಅಥವಾ ನ್ಯಾಯವನ್ನು ಕೇಳಲು ಯಾರೂ ಇರುವುದಿಲ್ಲ. ಉಳಿದಿರುವುದು ದಿನಾಂಕ ಮತ್ತು ಇದು ಎಂದೆಂದಿಗೂ ನಡೆಯುತ್ತಿದೆ. ಮೈ ಲಾರ್ಡ್, ವಕೀಲರು ಈ ದಿನಾಂಕಗಳನ್ನು ನ್ಯಾಯದ ವಿರುದ್ಧ ಆಯುಧವಾಗಿ ಬಳಸುತ್ತಿದ್ದಾರೆ”.

ಇದನ್ನೂ ಓದಿ: ಮಹಾರಾಷ್ಟ್ರ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ; ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಭಾರಿ ಪ್ರಮಾಣದ ಏರಿಕೆ

(Delhi Man Shouts Tareekh Par Tareekh in Karkardooma Court vandalizing dais furniture and computers)

Published On - 5:16 pm, Thu, 22 July 21