AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಡ್ರೋಜನ್​ ತುಂಬಿದ ಬಲೂನುಗಳಿಗೆ ಸಾಕಿದ ನಾಯಿಮರಿ ಕಟ್ಟಿ ಗಾಳಿಯಲ್ಲಿ ಹಾರಿಸಿಬಿಟ್ಟ ಯೂಟ್ಯೂಬರ್​ನ ಬಂಧನ

ಯೂಟ್ಯೂಬರ್ ಗೌರವ್​, ಹೈಡ್ರೋಜನ್​ ತುಂಬಿದ ಬಲೂನುಗಳನ್ನು ಸಾಕಿದ ನಾಯಿಮರಿಗಳ ಹಿಂಭಾಗಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುವ ದೃಶ್ಯವನ್ನು ವಿಡಿಯೋ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ.

ಹೈಡ್ರೋಜನ್​ ತುಂಬಿದ ಬಲೂನುಗಳಿಗೆ ಸಾಕಿದ ನಾಯಿಮರಿ ಕಟ್ಟಿ ಗಾಳಿಯಲ್ಲಿ ಹಾರಿಸಿಬಿಟ್ಟ ಯೂಟ್ಯೂಬರ್​ನ ಬಂಧನ
ಹೈಡ್ರೋಜನ್​ ತುಂಬಿದ ಬಲೂನುಗಳಿಗೆ ಸಾಕಿದ ನಾಯಿಮರಿ ಕಟ್ಟಿ ಗಾಳಿಯಲ್ಲಿ ಹಾರಿಸಿಬಿಟ್ಟ ಯೂಟ್ಯೂಬರ್
shruti hegde
|

Updated on: May 27, 2021 | 11:32 AM

Share

ದೆಹಲಿ: ದೆಹಲಿ ಮೂಲದ ಗೌರವ್​ ಜಾನ್​ ಎಂಬ ಹೆಸರಿನ ಯುಟ್ಯೂಬರ್,​ ಸಾಕಿದ ನಾಯಿ ಮರಿಗಳ ಹಿಂಭಾಗಕ್ಕೆ ಹೈಡ್ರೋಜನ್​ ತುಂಬಿದ ಬಲೂನುಗಳನ್ನು ಕಟ್ಟಿ ಗಾಳಿಯಲ್ಲಿ ತೇಲುವಂತೆ ಮಾಡಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ‘ಫ್ಲಾಯಿಂಗ್ ಡಾಗ್​’ ಎಂಬ ಶೀರ್ಷಿಕೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್​ ಮಾಡಲಾಗಿತ್ತು. ಆನ್​ಲೈನಲ್ಲಿ ಬಾರೀ ಆಕ್ರೋಶಕ್ಕೆ ಒಳಗಾಗುತ್ತಿದ್ದಂತೆಯೇ ಯುಟ್ಯೂಬರ್​ ಗೌರವ್​ ಜಾನ್​ನ್ನು ಬಂಧಿಸಲಾಗಿದೆ.

ಯೂಟ್ಯೂಬರ್ ಗೌರವ್​, ಹೈಡ್ರೋಜನ್​ ತುಂಬಿದ ಬಲೂನುಗಳನ್ನು ಸಾಕಿದ ನಾಯಿಮರಿಗಳ ಹಿಂಭಾಗಗಕ್ಕೆ ಕಟ್ಟಿ ಗಾಳಿಯಲ್ಲಿ ತೇಲಿ ಬಿಡುವ ದೃಶ್ಯವನ್ನು ವಿಡಿಯೋ ಮಾಡಿದ್ದ. ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಗಿದೆ.

ವಿಡಿಯೋದಲ್ಲಿ ಗಮನಿಸಿದಂತೆ, ಯೂಟ್ಯೂಬರ್​ ರಸ್ತೆಯಲ್ಲಿ ನಿಲ್ಲಿಸಲಾದ ವಾಹನದ ಮೇಲೆ ಕುಳಿತು ಆಕಾಶಬುಟ್ಟಿಗೆ ಕಟ್ಟಿದ ನಾಯಿ ಮರಿಯನ್ನು ಗಾಳಿಯಲ್ಲಿ ತೇಲಿಸಿ ಬಿಡುತ್ತಾನೆ. ನಾಯಿಯು ಕಟ್ಟಡ ಎರಡನೇ ಮಹಡಿಯ ಮೇಲೆ ಹಾರುತ್ತಿದ್ದಂತೆ ದೃಶ್ಯದಲ್ಲಿ ನೋಡಬಹುದು.

ಯೂಟ್ಯೂಬ್​ನಲ್ಲಿ 4 ಮಿಲಿಯನ್​ಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಗೌರವ್​ ಮತ್ತು ಅವರ ತಾಯಿಯ ವಿರುದ್ಧ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ದಕ್ಷಿಣ ದೆಹಲಿಯ ಮಾಲ್ವಿಯಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೂರು ದಿನಗಳ ಹಿಂದೆ ಗೌರವ್​, ‘ಫ್ಲಾಯಿಂಗ್ ಡಾಗ್​’ ಎಂದು ಶೀರ್ಷಿಕೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಏಕೆ ಡಿಲಿಟ್​ ಮಾಡಿದ್ದಾರೆ ಎಂಬುದನ್ನು ವಿವರಿಸುವ ಮೂಲಕ ಎಲ್ಲರಲ್ಲಿ ಕ್ಷಮೆಯಾಚಿಸಿದ್ದರು. ಆಕಾಶಬುಟ್ಟಿಯನ್ನು ಹಾರಿಸುವ ಮೊದಲು ಎಲ್ಲಾ ಸುರಕ್ಷತಾ ಕ್ರಮವನ್ನು ಕೈಗೊಂಡಿದ್ದೆ. ವಿಡಿಯೋ ಮಾಡುವಾಗಲೂ ಈ ಕುರಿತಂತೆ ಹೇಳಿದ್ದೆ. ಆದರೆ ವಿಡಿಯೋ ಅತ್ಯಂತ ಉದ್ದವಾಗಿದ್ದರಿಂದ ಅಪ್​ಲೋಡ್​ ಮಾಡಲು ಸಾಧ್ಯವಾಗಲಿಲ್ಲಎಂದು ಹೆಳಿದ್ದರು.

ತನ್ನ ಚಂದಾದಾರರಿಗೆ ಮತ್ತು ಪ್ರಾಣಿ ಪ್ರಿಯರಿಗೆ ಕ್ಷಮೆಯಾಚಿಸಿದ ಅವರು, ನಾನು ಸಾಕಿದ ಪ್ರಾಣಿಗಳನ್ನು ನಾನು ಮಗುವಂತೆ ನೋಡಿಕೊಳ್ಳುತ್ತೇನೆ. ವಿಡಿಯೋ ನೋಡಿದ ನಿಮಗೆ ಇದು ತಪ್ಪಾಗಿ ಅನಿಸಿದರೆ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ಈ ಘಟನೆಯು ಮತ್ತೆ ನಡೆಯದಂತೆ ಎಚ್ಚರವಹಿಸುತ್ತೇನೆ. ವಿಡಿಯೋ ನೋಡಿ ಪ್ರಭಾವಕ್ಕೊಳಗಾಗಬೇಡಿ. ನಿಮ್ಮ ಭಾವನೆಗೆ ಧಕ್ಕೆ ಉಂಟಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: 

WhatsApp: ದೆಹಲಿ ಕೋರ್ಟ್​ನಲ್ಲಿ ಸರ್ಕಾರದ ಕಾನೂನಿನ ವಿರುದ್ಧ ವಾಟ್ಸಾಪ್ ದಾವೆ ಹೂಡಿತೆ?

ಟೂಲ್​ಕಿಟ್ ತನಿಖೆ: ಕಾಂಗ್ರೆಸ್​ನ ಇಬ್ಬರು ನಾಯಕರಿಗೆ ನೋಟೀಸನ್ನು ಜಾರಿಮಾಡಿದ ದೆಹಲಿ ಪೊಲೀಸ್

Follow Us
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!