ಸತ್ಯ ಯಾವಾಗಲೂ ಗೆಲ್ಲುತ್ತದೆ; ರಾಮಾಯಣವನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

ನಾನು ಅವರಿಗೆ 1,000 ವರ್ಷಗಳ ಹಿಂದಿನ ಕಥೆ ಮತ್ತು ಅದರ ಕಥೆಯ ಸಂದೇಶ ನೆನಪಿಸಲು ಬಯಸುತ್ತೇನೆ. ರಾಮನು ಸತ್ಯಕ್ಕಾಗಿ ಹೋರಾಡಿದಾಗ ಅವನ ಬಳಿ ಶಕ್ತಿ, ಸಂಪನ್ಮೂಲಗಳು ಅಥವಾ ರಥವೂ ಇರಲಿಲ್ಲ. ರಾವಣನಿಗೆ ರಥಗಳು, ಸಂಪನ್ಮೂಲಗಳು, ಸೈನ್ಯ ಮತ್ತು ಚಿನ್ನವಿತ್ತು. ಆದರೆ ಭಗವಾನ್ ರಾಮನಿಗೆ ಸತ್ಯ, ಭರವಸೆ, ನಂಬಿಕೆ, ಪ್ರೀತಿ, ದಯೆ, ನಮ್ರತೆ, ತಾಳ್ಮೆ, ಧೈರ್ಯ ಮತ್ತು ಸತ್ಯ ಜತೆಗಿತ್ತು. ಅಧಿಕಾರ ಶಾಶ್ವತವಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಸತ್ಯ ಯಾವಾಗಲೂ ಗೆಲ್ಲುತ್ತದೆ; ರಾಮಾಯಣವನ್ನು ಉಲ್ಲೇಖಿಸಿ, ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಪ್ರಿಯಾಂಕಾ ಗಾಂಧಿ ವಾದ್ರಾ
ರಶ್ಮಿ ಕಲ್ಲಕಟ್ಟ

Updated on: Mar 31, 2024 | 7:21 PM

ದೆಹಲಿ ಮಾರ್ಚ್ 31: ಇಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ (Ramlila Maidan) ನಡೆದ ಪ್ರತಿಪಕ್ಷಗಳ ಬೃಹತ್ ರ‍್ಯಾಲಿಯಲ್ಲಿ ಬಿಜೆಪಿ (BJP) ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ರಾಮಾಯಣವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. “ನಾನು ಬಾಲ್ಯದಿಂದಲೂ ರಾಮಲೀಲಾ ಮೈದಾನಕ್ಕೆ ಬರುತ್ತಿದ್ದೇನೆ. ಪ್ರತಿ ವರ್ಷ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಲಾಗುತ್ತದೆ. ನಾನು ಚಿಕ್ಕವಳಿದ್ದಾಗ, ನಾನು (ಇಲ್ಲಿ) ನನ್ನ ಅಜ್ಜಿ ಇಂದಿರಾ ಜೀ ಅವರೊಂದಿಗೆ ಬರುತ್ತಿದ್ದೆ. ಅವರು ನನಗೆ ರಾಮಾಯಣವನ್ನು ಹೇಳುತ್ತಿದ್ದರು” ಎಂದಿದ್ದಾರೆ.

ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಇಂದು ಅಧಿಕಾರದಲ್ಲಿರುವವರು ತಮ್ಮನ್ನು ರಾಮಭಕ್ತರೆಂದು ಕರೆದುಕೊಳ್ಳುತ್ತಾರೆ. ನಾನು ಇಲ್ಲಿ ಕುಳಿತಾಗ ನಾನು ಅವರಿಗೆ ಒಂದು ವಿಷಯ ಹೇಳಬೇಕು ಎಂದು ಯೋಚಿಸಿದೆ. ನಾನು ಅವರಿಗೆ 1,000 ವರ್ಷಗಳ ಹಿಂದಿನ ಕಥೆ ಮತ್ತು ಅದರ ಕಥೆಯ ಸಂದೇಶ ನೆನಪಿಸಲು ಬಯಸುತ್ತೇನೆ. ರಾಮನು ಸತ್ಯಕ್ಕಾಗಿ ಹೋರಾಡಿದಾಗ ಅವನ ಬಳಿ ಶಕ್ತಿ, ಸಂಪನ್ಮೂಲಗಳು ಅಥವಾ ರಥವೂ ಇರಲಿಲ್ಲ. ರಾವಣನಿಗೆ ರಥಗಳು, ಸಂಪನ್ಮೂಲಗಳು, ಸೈನ್ಯ ಮತ್ತು ಚಿನ್ನವಿತ್ತು. ಆದರೆ ಭಗವಾನ್ ರಾಮನಿಗೆ ಸತ್ಯ, ಭರವಸೆ, ನಂಬಿಕೆ, ಪ್ರೀತಿ, ದಯೆ, ನಮ್ರತೆ, ತಾಳ್ಮೆ, ಧೈರ್ಯ ಮತ್ತು ಸತ್ಯ ಜತೆಗಿತ್ತು. ಅಧಿಕಾರ ಶಾಶ್ವತವಲ್ಲ. ದುರಹಂಕಾರವು ಛಿದ್ರಗೊಳ್ಳುತ್ತದೆ ಎಂಬುದು ಭಗವಾನ್ ರಾಮನ ಜೀವನದ ಸಂದೇಶ ಎಂದು ನಾನು ಅಧಿಕಾರದಲ್ಲಿರುವವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸಮಬಲ ಸಾಧಿಸುವಂತೆ ಚುನಾವಣಾ ಆಯೋಗವನ್ನು ಪ್ರತಿಪಕ್ಷ ಇಂಡಿಯಾ ಬಣ ಭಾನುವಾರ ಒತ್ತಾಯಿಸಿದೆ. ಬಿಜೆಪಿ “ಪ್ರಜಾಸತ್ತಾತ್ಮಕವಲ್ಲದ ಅಡೆತಡೆಗಳನ್ನು” ಸೃಷ್ಟಿಸುತ್ತಿದ್ದರೂ, ದೇಶದ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು, ಗೆಲ್ಲಲು ಮತ್ತು ಉಳಿಸಲು ಮೈತ್ರಿ ಬದ್ಧವಾಗಿದೆ ಎಂದು ಇಂಡಿಯಾ ಒಕ್ಕೂಟ ಹೇಳಿದೆ.

‘ಲೋಕತಂತ್ರ ಬಚಾವೋ ರ‍್ಯಾಲಿ’ಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಿರೋಧ ಪಕ್ಷದ ಒಕ್ಕೂಟದ ಬೇಡಿಕೆಗಳನ್ನು ಓದಿದರು.

ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಬಲದ ಕ್ಷೇತ್ರವನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳಬೇಕು. ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿರೋಧ ಪಕ್ಷಗಳ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಕ್ರಮಗಳನ್ನು ಚುನಾವಣಾ ಸಮಿತಿ ತಡೆಯಬೇಕು. ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕಿ  ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಸಿಎಂ ನಿಜವಾದ ದೇಶಭಕ್ತ; ಅವರನ್ನು ಜೈಲಿಗೆ ಹಾಕಿದ್ದು ಸರಿಯೇ?: ಸುನೀತಾ ಕೇಜ್ರಿವಾಲ್

ಚುನಾವಣೆಯ ಸಮಯದಲ್ಲಿ, ವಿರೋಧ ಪಕ್ಷಗಳ ಆರ್ಥಿಕತೆಯನ್ನು ಬಲವಂತವಾಗಿ ಹಾಳುಮಾಡುವ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು. ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಬಿಜೆಪಿಯ “ಸುಲಿಗೆ” ಕುರಿತು ಅವರು ಹೇಳಿದ್ದನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಎಸ್‌ಐಟಿ ತನಿಖೆಗೆ ಹೊಂದಿಸಬೇಕು ಎಂದು ಪ್ರತಿಪಕ್ಷದ ಮೈತ್ರಿ ಒತ್ತಾಯಿಸಿದೆ.

ಕಳೆದ ತಿಂಗಳು, ಸುಪ್ರೀಂ ಕೋರ್ಟ್ ರಾಜಕೀಯ ನಿಧಿಗಾಗಿ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದ್ದು, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sun, 31 March 24

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us