ಕೇಂದ್ರ ಮತ್ತು ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧ: ದುಷ್ಯಂತ್ ಚೌಟಾಲಾ

| Updated By: Lakshmi Hegde

Updated on: Dec 25, 2020 | 12:37 PM

ರೈತರ ಚಳವಳಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧವಿರುವುದಾಗಿ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.

ಕೇಂದ್ರ ಮತ್ತು ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧ: ದುಷ್ಯಂತ್ ಚೌಟಾಲಾ
ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ
Follow us on

ದೆಹಲಿ: ರೈತರ ಚಳುವಳಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಪಂಜಾಬ್ ರೈತರ ನಡುವೆ ಸಂಧಾನ ಏರ್ಪಡಿಸಲು ಸಿದ್ಧವಿರುವುದಾಗಿ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಹೇಳಿದ್ದಾರೆ.

ಹರಿಯಾಣದಲ್ಲೂ ರೈತರ ಪ್ರತಿಭಟನೆಯ ಕಾವು ಏರುತ್ತಿದ್ದು, ನಿನ್ನೆ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ತಮ್ಮ ವಿಧಾನ ಸಭಾ ಕ್ಷೇತ್ರ ಉಚಾನಾಕ್ಕೆ ಭೇಟಿ ಕೊಡುವ ಸುದ್ದಿ ತಿಳಿದ ಸ್ಥಳೀಯ ಚಳುವಳಿ ನಿರತ ರೈತರು ಅವರು ಆಗಮಿಸಲಿದ್ದ ತಾತ್ಕಾಲಿಕ ಹೆಲಿಪ್ಯಾಡ್​ನಲ್ಲಿ ಹೊಂಡ ತೆಗೆದು ಹೆಲಿಕಾಪ್ಟರ್ ಇಳಿಯದಂತೆ ಮಾಡಿದರು.

ಆದರೆ, ಕೆಲ ಹೊತ್ತಿನ ನಂತರ ಜನನಾಯಕ್ ಜನತಾ ಪಾರ್ಟಿ ದುಷ್ಯಂತ್ ಚೌಟಾಲಾರನ್ನು ಭೇಟಿಯಾಗಲು ನಿರಾಕರಿಸಿತು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ, ಕೇಂದ್ರ ನೂತನ ಕೃಷಿ ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಬೇಕು. ಸರ್ಕಾರ ಮತ್ತು ರೈತ ಚಳುವಳಿಗಾರರ ನಡುವೆ ಸಂಧಾನಕ್ಕೆ ಸಿದ್ಧನಿದ್ದೇನೆ ಎಂದು ತಿಳಿಸಿದರು.

ಹೆಲಿಪಾಡ್​ನಲ್ಲಿ ಗುಂಡಿ ತೆಗೆದ ಪ್ರಕರಣದಲ್ಲಿ 13 ರೈತರ ಮೇಲೆ ಗಲಭೆ ಮತ್ತು ಕೊಲೆ ಯತ್ನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿಗಷ್ಟೇ, ದುಷ್ಯಂತ್ ಚೌಟಾಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲಾಗದಿದ್ದರೆ ರಾಜೀನಾಮೆ ನೀಡುವೆ ಎಂದಿದ್ದರು.

Delhi Chalo | 42 ರೈತ ಸಂಘಟನೆಗಳು ಈಗ ಸುಪ್ರೀಂಕೋರ್ಟ್​ನಲ್ಲಿ ಪ್ರತಿವಾದಿಗಳು: ಇಲ್ಲಿದೆ ಪಟ್ಟಿ..