AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಟು ಅಮಾನ್ಯೀಕರಣ ಬಳಿಕ ಮಾಜಿ ಸಿಎಂ ಮಾಡಿದ್ದೇನು?: ದೇವೇಂದ್ರ ಫಡ್ನವೀಸ್​ ವಿರುದ್ಧ ಗಂಭೀರ ಆರೋಪ ಮಾಡಿದ ನವಾಬ್​ ಮಲ್ಲಿಕ್

ದೇವೇಂದ್ರ ಫಡ್ನವೀಸ್​ ಕ್ರಿಮಿನಲ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನವಾಬ್​ ಮಲ್ಲಿಕ್​, ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣ ಕಾರ್ಮಿಕರ ಮಂಡಳಿಗೆ ಮುನ್ನಾ ಯಾದವ್​ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದರು ಎಂದು ಹೇಳಿದರು.

ನೋಟು ಅಮಾನ್ಯೀಕರಣ ಬಳಿಕ ಮಾಜಿ ಸಿಎಂ ಮಾಡಿದ್ದೇನು?: ದೇವೇಂದ್ರ ಫಡ್ನವೀಸ್​ ವಿರುದ್ಧ ಗಂಭೀರ ಆರೋಪ ಮಾಡಿದ ನವಾಬ್​ ಮಲ್ಲಿಕ್
ನವಾಬ್​ ಮಲ್ಲಿಕ್​​
TV9 Web
| Edited By: |

Updated on: Nov 10, 2021 | 1:52 PM

Share

ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್ (Nawab Malik) ​​ಗೆ ಭೂಗತ ಜಗತ್ತಿನೊಟ್ಟಿಗೆ ನಂಟಿದೆ. ಅವರು ಭೂಗತ ಪಾತಕಿಗಳೊಟ್ಟಿಗೆ ಆಸ್ತಿ ವ್ಯವಹಾರ ನಡೆಸಿದ್ದಾರೆ ಎಂದು ನಿನ್ನೆ ಸಾಕ್ಷಿ ಸಮೇತ ಬಹಿರಂಗ ಪಡಿಸಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ಗೆ ಇಂದು ನವಾಬ್​ ಮಲ್ಲಿಕ್​ ತಿರುಗೇಟು ನೀಡಿದ್ದಾರೆ. ನಿನ್ನೆ ಫಡ್ನವೀಸ್​ ಸುದ್ದಿಗೋಷ್ಠಿಯ ಬೆನ್ನಲ್ಲೇ ಮಾತನಾಡಿದ್ದ ನವಾಬ್​ ಮಲ್ಲಿಕ್​, ನಾನು ದೇವೇಂದ್ರ ಫಡ್ನವೀಸ್(Devendra Fadnavis)​ಗೆ ಸಂಬಂಧಪಟ್ಟಂತೆ ಒಂದು ಹೈಡ್ರೋಜನ್​ ಬಾಂಬ್​ ಸ್ಫೋಟಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಫಡ್ನವೀಸ್​​ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಆಪ್ತ ರಿಯಾಜ್​ ಭಾಟಿಯೊಂದಿಗೆ ಫಡ್ನವೀಸ್​ಗೆ ನಂಟಿದೆ ಎಂದು ಆರೋಪ ಮಾಡಿರುವ ನವಾಬ್​ ಮಲ್ಲಿಕ್​, ದಾವೂದ್​ ಜತೆಗೆ ನಂಟಿರುವ ರಿಯಾಜ್​ ಭಾಟಿ ನಕಲಿ ಪಾಸ್​ಪೋರ್ಟ್​ ಜತೆ 2015ರಲ್ಲಿ ಸಿಕ್ಕಿಬಿದ್ದಿದ್ದ. ಆದರೆ ಸಿಕ್ಕಿಬಿದ್ದ ಎರಡೇ ದಿನಕ್ಕೆ ಆತನನ್ನು ಬಿಡಲಾಯಿತು. ಅವನು ಅದಕ್ಕೂ ಮೊದಲು ಬಿಜೆಪಿಗೆ ಸಂಬಂಧಪಟ್ಟ ಹಲವು ಕಾರ್ಯಕ್ರಮದಲ್ಲಿ ಆತ ಕಾಣಿಸಿಕೊಂಡಿದ್ದ. ದೇವೇಂದ್ರ ಫಡ್ನವೀಸ್​ ಜತೆಗೂ ಆತ ಕಾಣಿಸಿಕೊಂಡಿದ್ದಾನೆ ಎಂದು ನವಾಬ್​ ಮಲ್ಲಿಕ್​ ಹೇಳಿದರು. ಇದೆಲ್ಲ ಆಗಿದ್ದು ಬಿಜೆಪಿ ಸರ್ಕಾರವಿದ್ದಾಗ ಎಂದೂ ಆರೋಪ ಮಾಡಿದರು. ನನಗೆ ಈಗ ನಾನು ಮಾಡುತ್ತಿರುವ ಆರೋಪದಲ್ಲಿ ಪ್ರಧಾನಿಯವರ ಹೆಸರನ್ನು ಎಳೆದು ತರಲು ಇಷ್ಟವಿಲ್ಲ. ಆದರೂ ಈ ರಿಯಾಜ್​ ಭಾಟಿ ಪ್ರಧಾನಿ ಮೋದಿ ಪಾಲ್ಗೊಂಡ ಸಮಾರಂಭದಲ್ಲೂ ಕಾಣಿಸಿಕೊಂಡಿದ್ದ. ಪ್ರಧಾನಿಯವರೊಂದಿಗೆ ಈತ ನಿಂತಿರುವ ಫೋಟೋಗಳು ಇವೆ ಎಂದೂ ನವಾಬ್​ ಮಲ್ಲಿಕ್​ ಹೇಳಿದರು. ಇನ್ನು ದೇವೇಂದ್ರ ಫಡ್ನವೀಸ್​ ಅವರು ಈ ರಿಯಾಜ್​ ಜತೆ ಇರುವ ಫೋಟೋಗಳನ್ನೂ ಕೂಡ ನವಾಬ್​ ಮಲ್ಲಿಕ್​ ಬಿಡುಗಡೆ ಮಾಡಿದ್ದಾರೆ.

ದೇವೇಂದ್ರ ಫಡ್ನವೀಸ್​ ಕ್ರಿಮಿನಲ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣ ಕಾರ್ಮಿಕರ ಮಂಡಳಿಗೆ ಮುನ್ನಾ ಯಾದವ್​ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಆತ ನಾಗಪುರದ ನಟೋರಿಯಸ್​ ಕ್ರಿಮಿನಲ್​ ಎಂಬುದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, ಬಾಂಗ್ಲಾದೇಶೀಯರ ಅಕ್ರಮ ವಲಸೆಯಲ್ಲಿ ಆರೋಪಿಯಾಗಿದ್ದ ಹೈದರ್​ ಆಜಮ್​​ನನ್ನು ಮೌಲಾನಾ ಆಜಾದ್​ ಫೈನಾನ್ಸ್​ ಕಾರ್ಪೋರೇಶನ್​ಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಖೋಟಾನೋಟು ಹಗರಣದ ಆರೋಪ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ಖೋಟಾನೋಟು ದಂಧೆ ವ್ಯಾಪಕವಾಗಿ ನಡೆಯುತ್ತಿತ್ತು. ಆ ನಕಲಿ ಕರೆನ್ಸಿ ದಂಧೆಕೋರರಿಗೆ ಫಡ್ನವೀಸ್​ ರಕ್ಷಣೆ ಒದಗಿಸಿದ್ದರು. 2016ರ ನವೆಂಬರ್​ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣವನ್ನು ಘೋಷಿಸಿದರು. ಅದಾದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಖೋಟಾನೋಟುಗಳನ್ನು ಜಪ್ತಿ ಮಾಡಲಾಯಿತು. ಆದರೆ ನೋಟು ಅಮಾನ್ಯೀಕರಣವಾಗಿ ಒಂದು ವರ್ಷದವರೆಗೂ ಮಹಾರಾಷ್ಟ್ರದಲ್ಲಿ ಒಂದೇ ಒಂದು ನಕಲಿ ಕರೆನ್ಸಿ ಪ್ರಕರಣ ದಾಖಲಾಗಲಿಲ್ಲ. 2017ರ ಅಕ್ಟೋಬರ್​ 8ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮಹಾರಾಷ್ಟ್ರದಲ್ಲಿ ದಾಳಿ ನಡೆಸಿ ಸುಮಾರು 14.56 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿತು. ಆದರೆ ಆ ಕೇಸ್​ ಕೂಡ ನಿಲ್ಲಲಿಲ್ಲ. ಅದನ್ನು ಇದೇ ಫಡ್ನವೀಸ್​ ಮರೆಮಾಚಿದರು. 14 ಕೋಟಿಯ ಬದಲು ಕೇವಲ 8.80 ಲಕ್ಷ ರೂಪಾಯಿ ಮಾತ್ರ ಜಪ್ತಿಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದರು. ಇದೊಂದು ದೊಡ್ಡ ಹಗರಣ ಎಂದು ನವಾಬ್​ ಮಲ್ಲಿಕ್​ ಆರೋಪಿಸಿದರು.

ಇದನ್ನೂ ಓದಿ: ‘ಪುನೀತ್​ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’; ಟೀಕಾಕಾರರಿಗೆ ರಾಧಿಕಾ ಪಂಡಿತ್​ ತಿರುಗೇಟು

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!