ಗಾಜಾದಿಂದ ಭಾರತೀಯರನ್ನು ಸ್ಥಳಾಂತರಿಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ

|

Updated on: Oct 19, 2023 | 8:26 PM

ಸುಮಾರು 470 ಜೀವಗಳನ್ನು ಬಲಿತೆಗೆದುಕೊಂಡ ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ವಕ್ತಾರರು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದರು. ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಗೆ ಮಹತ್ವದ ಕೊಡುಗೆ ನೀಡುವ ಮೂಲಕ ಭಾರತವು ಪ್ಯಾಲೆಸ್ತೀನ್ ಮತ್ತು ಅದರ ನಿರಾಶ್ರಿತರನ್ನು ಬೆಂಬಲಿಸುತ್ತಿದೆ ಎಂದು ಬಾಗ್ಚಿ ಹೇಳಿದ್ದಾರೆ.

ಗಾಜಾದಿಂದ ಭಾರತೀಯರನ್ನು ಸ್ಥಳಾಂತರಿಸಲು ಪರಿಸ್ಥಿತಿ ಅನುಕೂಲಕರವಾಗಿಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಅರಿಂದಮ್ ಬಾಗ್ಚಿ
Follow us on

ದೆಹಲಿ ಅಕ್ಟೋಬರ್ 19: ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ನಾಲ್ವರು ಭಾರತೀಯರನ್ನು ಸ್ಥಳಾಂತರಿಸಲು ಗಾಜಾ ಪಟ್ಟಿಯಲ್ಲಿರುವ (Gaza Strip) ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ಹೇಳಿದೆ. ಅಂದ ಹಾಗೆ ಸರ್ಕಾರವು ಮೊದಲ ಅವಕಾಶದಲ್ಲಿ ಅವರನ್ನು ಮರಳಿ ಕರೆತರಲಿದೆ. ಒಬ್ಬ ಭಾರತೀಯ ಪ್ರಜೆಯು ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿದ್ದಾರೆ ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ(Arindam Bagchi) ಹೇಳಿದ್ದಾರೆ. ಗಾಜಾದಲ್ಲಿನ ಪರಿಸ್ಥಿತಿ ನೋಡಿದರೆ ಯಾವುದೇ ಸ್ಥಳಾಂತರಿಸುವಿಕೆಗೆ ಕಷ್ಟ. ಆದರೆ ನಮಗೆ ಅವಕಾಶ ಸಿಕ್ಕರೆ ನಾವು ಅವರನ್ನು ಕರೆದು ತರುತ್ತೇವೆ ಎಂದು ಎಂಇಎ ವಕ್ತಾರರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ಯಾಲೆಸ್ತೀನ್  ಸಂಘರ್ಷದ ನಡುವೆ ಉಭಯ ರಾಷ್ಟ್ರಗಳ ಪರಿಹಾರದ ಪರವಾಗಿ ತನ್ನ ನಿಲುವಿನಲ್ಲಿ ದೃಢವಾಗಿದೆ ಎಂದು ಎಂಇಎ ಹೇಳಿದೆ. ಪೂರ್ವದಲ್ಲಿ ನೆಲೆಗೊಂಡಿರುವ ಗಾಜಾ ಪಟ್ಟಿಯನ್ನು ನಿರ್ವಹಿಸುವ ಘೋಷಿತ ಉಗ್ರಗಾಮಿ ಸಂಘಟನೆಯಾದ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಯನ್ನು ಖಂಡಿಸಿದೆ. ಈಗ ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಭಾರತವು ನಾಗರಿಕ ಸಾವುನೋವುಗಳು ಮತ್ತು ಮಾನವೀಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಬಾಗ್ಚಿ ಹೇಳಿದ್ದು, ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಎದುರಿಸಲು ಅಂತರರಾಷ್ಟ್ರೀಯ ಸಮುದಾಯವನ್ನು ಒಟ್ಟಾಗಿ ನಿಲ್ಲುವಂತೆ ಕರೆ ನೀಡಿದ್ದಾರೆ.


ಸುಮಾರು 470 ಜೀವಗಳನ್ನು ಬಲಿತೆಗೆದುಕೊಂಡ ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ವಕ್ತಾರರು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದರು. ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆಗೆ ಮಹತ್ವದ ಕೊಡುಗೆ ನೀಡುವ ಮೂಲಕ ಭಾರತವು ಪ್ಯಾಲೆಸ್ತೀನ್ ಮತ್ತು ಅದರ ನಿರಾಶ್ರಿತರನ್ನು ಬೆಂಬಲಿಸುತ್ತಿದೆ ಎಂದು ಬಾಗ್ಚಿ ಹೇಳಿದ್ದಾರೆ. “2002-2023 ರ ನಡುವೆ ಒಟ್ಟು $29.53 ಮಿಲಿಯನ್ ಕೊಡುಗೆ ನೀಡಲಾಗಿದೆ. ಭಾರತೀಯ ವಾರ್ಷಿಕ ಕೊಡುಗೆಯು 2018 ರಲ್ಲಿ $1.25 ಮಿಲಿಯನ್‌ನಿಂದ $5 ಮಿಲಿಯನ್‌ಗೆ ಏರಿಕೆಯಾಗಿದೆ. ಮುಂದಿನ ಎರಡು ವರ್ಷಗಳವರೆಗೆ ಈ ವಾರ್ಷಿಕ $5 ಮಿಲಿಯನ್ ಕೊಡುಗೆಯನ್ನು ನಾವು ವಾಗ್ದಾನ ಮಾಡಿದ್ದೇವೆ.

ಗಾಜಾ ಆಸ್ಪತ್ರೆ ಮೇಲಿನ ದಾಳಿಯಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಆಘಾತ ವ್ಯಕ್ತಪಡಿಸಿದ್ದರು.  ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳಲ್ಲಿ ಭಾಗಿಯಾಗಿರುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

“ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಜೀವಹಾನಿಯ ಬಗ್ಗೆ ತೀವ್ರ ಆಘಾತವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥನೆಗಳು” ಎಂದು ಮೋದಿ ಎಕ್ಸ್‌ನಲ್ಲಿ ಹೇಳಿದ್ದಾರೆ. “ನಾಗರಿಕ ಸಾವುನೋವುಗಳಲ್ಲಿ ನಡೆಯುತ್ತಿರುವ ಸಂಘರ್ಷವು ಗಂಭೀರ ಮತ್ತು ನಿರಂತರ ಕಾಳಜಿಯ ವಿಷಯವಾಗಿದೆ ಎಂದಿದ್ದಾರೆ ಮೋದಿ.

ಯುದ್ಧ ಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರುವ ಸರ್ಕಾರದ ಉಪಕ್ರಮವಾದ ‘ಆಪರೇಷನ್ ಅಜಯ್’ ಕುರಿತು ಅಪ್ಡೇಟ್ ನೀಡಿದ ಬಾಗ್ಚಿ, 18 ನೇಪಾಳಿಗಳು ಸೇರಿದಂತೆ ಕನಿಷ್ಠ 1,200 ಜನರನ್ನು ಐದು ವಿಮಾನಗಳಲ್ಲಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ