AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸಂಸತ್ ಭವನದ ಮಹಾದ್ವಾರದಲ್ಲಿ ಪ್ರಧಾನಿ ಮೋದಿಯವರ ಡಿಗ್ರಿ ಪ್ರದರ್ಶಿಸಿ: ಸಂಜಯ್ ರಾವುತ್

ಕೆಲವರು ಪ್ರಧಾನ ಮಂತ್ರಿಯವರ ಡಿಗ್ರಿಯನ್ನು ನಕಲಿ ಎಂದು ಕರೆಯುತ್ತಿದ್ದಾರೆ. ಸಂಪೂರ್ಣ ರಾಜಕೀಯ ವಿಜ್ಞಾನದ (Entire Political Science) ಪದವಿ ಎಂಬುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ ಅದನ್ನು ನಮ್ಮ ಹೊಸ ಸಂಸತ್ತಿನ ಮಹಾದ್ವಾರದಲ್ಲಿ ಪ್ರದರ್ಶಿಸಬೇಕು

ಹೊಸ ಸಂಸತ್ ಭವನದ ಮಹಾದ್ವಾರದಲ್ಲಿ ಪ್ರಧಾನಿ ಮೋದಿಯವರ ಡಿಗ್ರಿ ಪ್ರದರ್ಶಿಸಿ: ಸಂಜಯ್ ರಾವುತ್
ಸಂಜಯ್ ರಾವುತ್
ರಶ್ಮಿ ಕಲ್ಲಕಟ್ಟ
|

Updated on: Apr 03, 2023 | 5:08 PM

Share

ಹೊಸ ಸಂಸತ್ ಭವನದ  ಮಹಾದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಶೈಕ್ಷಣಿಕ ಪದವಿಯನ್ನು ಪ್ರದರ್ಶಿಸಬೇಕು ಎಂದು ಶಿವಸೇನಾ (UBT) ಹೇಳಿದೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನಾ (ಯುಬಿಟಿ) ಸಂಸದ ಮತ್ತು ಮುಖ್ಯ ವಕ್ತಾರ ಸಂಜಯ್ ರಾವುತ್ (Sanjay Raut), ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸುವ ಮೂಲಕ ಪ್ರಧಾನಿ ಪದವಿಯನ್ನು ‘ರಹಸ್ಯ’ ಎಂದು ಏಕೆ ಕಾಪಾಡಲಾಗುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಪ್ರಧಾನ ಮಂತ್ರಿಯವರ ಡಿಗ್ರಿಯನ್ನು ನಕಲಿ ಎಂದು ಕರೆಯುತ್ತಿದ್ದಾರೆ. ಸಂಪೂರ್ಣ ರಾಜಕೀಯ ವಿಜ್ಞಾನದ (Entire Political Science) ಪದವಿ ಎಂಬುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ. ಆದ್ದರಿಂದ ಅದನ್ನು ನಮ್ಮ ಹೊಸ ಸಂಸತ್ತಿನ ಮಹಾದ್ವಾರದಲ್ಲಿ ಪ್ರದರ್ಶಿಸಬೇಕು. ಇದರಿಂದ ಜನರು ಅದರ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವುದನ್ನು ನಿಲ್ಲಿಸಬೇಕು ಎಂದಿದ್ದಾರೆ ರಾವುತ್.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ಪದವಿಯ ಬಗ್ಗೆ ವಿವರಗಳನ್ನು ಕೇಳಿದಾಗ, ಅವರು ಅದನ್ನು ನಿರಾಕರಿಸಿದ್ದು ರೂ 25,000 ದಂಡವನ್ನು ಸಹ ವಿಧಿಸಿದರು ಎಂದು ಸೇನಾ (ಯುಬಿಟಿ) ನಾಯಕ ಹೇಳಿದರು.  ಪ್ರಧಾನಿಯವರ ಡಿಗ್ರಿ ಕೇಳುವಾಗ ಮುಚ್ಚಿಡಲು ಏನಿದೆ? ಈಗ ಮೋದಿ ಅವರೇ ಮುಂದೆ ಬಂದು ಅವರ ಶೈಕ್ಷಣಿಕ ಪದವಿಯ ಊಹಾಪೋಹಗಳನ್ನು ತೆರವುಗೊಳಿಸಬೇಕು ಎಂದಿದ್ದಾರೆ ರಾವುತ್. ಪ್ರಧಾನಿ ಡಿಗ್ರಿ ‘ನಕಲಿ’ ಎಂದು ಪ್ರತಿಪಾದಿಸಿರುವ ಪಕ್ಷದ ಪತ್ರಿಕೆಗಳು, ಸಾಮ್ನಾ ಮತ್ತು ದೋಪಹರ್ ಕಾ ಸಾಮ್ನಾ ಸಂಪಾದಕೀಯವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ವಲಯದಲ್ಲಿ ಡಿಗ್ರಿವಿಷಯ ಮತ್ತೊಮ್ಮೆ ಪ್ರಸ್ತಾಪವಾಗುತ್ತಿದೆ.

ಭಾನುವಾರ ರಾತ್ರಿ ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಛತ್ರಪತಿ ಸಂಭಾಜಿನಗರದ ಮಹಾ ವಿಕಾಸ್ ಅಘಾಡಿಯಲ್ಲಿ (ಎಂವಿಎ) ವಿರುದ್ಧ ಗುಡುಗಿದ್ದು ರಾಜ್ಯ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಇತ್ತೀಚೆಗೆ ನೀಡಲಾದ ಡಾಕ್ಟರೇಟ್‌ ವಿಚಾರವನ್ನೂ ಎತ್ತಿದ್ದಾರೆ.

ಇದನ್ನೂ ಓದಿRahul Gandhi: ಮೋದಿ ಉಪನಾಮ ಹೇಳಿಕೆ; ರಾಹುಲ್​ ಗಾಂಧಿ ಮೇಲ್ಮನವಿ ವಿಚಾರಣೆಗೆ ಸಮ್ಮತಿ, ಜಾಮೀನು ವಿಸ್ತರಣೆ

ಕೆಲವರು ಪದವಿಗಳನ್ನು ಪಡೆಯುತ್ತಾರೆ, ಇತರರು ಅದನ್ನು ಗಳಿಸುತ್ತಾರೆ. ಈಗ ಪಿಎಚ್‌ಡಿಗಳು ಸಹ ಮಾರಾಟಕ್ಕೆ ಬಂದಿವೆ ಎಂದು ತೋರುತ್ತದೆ.ಅದನ್ನು ಅಬ್ಬರಿಸುತ್ತಿರುವವರು ಮತ್ತು ಅದನ್ನು ಮರೆಮಾಡುವವರು ಇನ್ನೊಬ್ಬರು ಮರೆಮಾಚಲು ಏನಿದೆ, ಪದವಿಯನ್ನು ನೀಡುವ ಕಾಲೇಜು ತಮ್ಮ ಗೌರವಾನ್ವಿತ ಹಳೆಯ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಪಡಬೇಕು ಆದರೆ ಬದಲಿಗೆ, ಪ್ರಶ್ನಿಸುವವರಿಗೆ (ಪ್ರಧಾನಿ ಪದವಿ) ಮತ್ತು ಅದನ್ನು ನೋಡಲು ಕೇಳುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಠಾಕ್ರೆ ಹೇಳಿದರು. ಬಿಜೆಪಿಯ ಎಷ್ಟು ನಾಯಕರು ಸಹ ಇಂಥಾ ಸಂಶಯಾಸ್ಪದ ಪದವಿಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ ರಾವುತ್,ದೇಶಕ್ಕೆ ಗಂಭೀರ ಕಾಳಜಿಯ ವಿಷಯ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್