AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಯ ಮಿದುಳಲ್ಲಿದ್ದ ಬ್ಲ್ಯಾಕ್ ಫಂಗಸ್​ ಹೊರತೆಗೆದ ವೈದ್ಯರು; ಅದರ ಅಳತೆ ನೋಡಿ ಕಂಗಾಲು

ರೋಗಿಯ ಹೆಸರು ಅನಿಲ್​ ಕುಮಾರ್​. ಜಮುಯಿಯ ನಿವಾಸಿಯಾಗಿದ್ದಾರೆ. ಇವರಿಗೆ ತಲೆ ಸುತ್ತುತ್ತಿತ್ತು.. ಹಾಗೂ ಪದೇಪದೆ ಎಚ್ಚರತಪ್ಪಿ ಬೀಳುತ್ತಿದ್ದರು. ದಿನದಿನಕ್ಕೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು.

ರೋಗಿಯ ಮಿದುಳಲ್ಲಿದ್ದ ಬ್ಲ್ಯಾಕ್ ಫಂಗಸ್​ ಹೊರತೆಗೆದ ವೈದ್ಯರು; ಅದರ ಅಳತೆ ನೋಡಿ ಕಂಗಾಲು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 13, 2021 | 9:17 AM

Share

ದೆಹಲಿ: ದೇಶದಲ್ಲಿ ಕೊವಿಡ್ 2ನೇ ಅಲೆಯ ಅಬ್ಬರವಿನ್ನೂ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಕೊರೊನಾದೊಟ್ಟಿಗೆ ಬ್ಲ್ಯಾಕ್​ಫಂಗಸ್ (ಕಪ್ಪುಶಿಲೀಂದ್ರ) ಕಾಟವೂ ಶುರುವಾಗಿದೆ. ದೇಶದ ಎಲ್ಲ ಭಾಗಗಳಲ್ಲೂ ಕೊರೊನಾದಿಂದ ಗುಣಮುಖರಾದ ಕೆಲವರು ಈ ಬ್ಲ್ಯಾಕ್​ ಫಂಗಸ್​​ಗೆ ಒಳಗಾಗುತ್ತಿದ್ದಾರೆ. ಅದರಲ್ಲೀಗ ಪಾಟ್ನಾದ ಇಂದಿರಾ ಗಾಂಧಿ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ (ಐಜಿಐಎಂಎಸ್​) ನ ವೈದ್ಯರು 60 ವರ್ಷದ ವ್ಯಕ್ತಿಯ ಮಿದುಳಿನಿಂದ ಕ್ರಿಕೆಟ್ ಚೆಂಡಿನ ಅಳತೆಯ ಬ್ಲ್ಯಾಕ್​ ಫಂಗಸ್​​​ ನ್ನು ಹೊರತೆಗೆದಿದ್ದಾರೆ.

ಕಪ್ಪುಶಿಲೀಂದ್ರದ  ಅಳತೆಯನ್ನು ನೋಡಿ ವೈದ್ಯರೇ ಶಾಕ್​ ಆಗಿದ್ದಾರೆ. ಸುಮಾರು 3 ತಾಸುಗಳ ಸರ್ಜರಿಯ ಬಳಿಕ ಈ ಗಡ್ಡೆ ಹೊರತೆಗೆಯಲಾಗಿದೆ. ಸದ್ಯ ರೋಗಿಯ ಸ್ಥಿತಿ ಸ್ಥಿರವಾಗಿದೆ. ಬಿಹಾರದ ಈ ಆಸ್ಪತ್ರೆಯಲ್ಲಿ ಹಲವರಿಗೆ ಬ್ಲ್ಯಾಕ್​ಫಂಗಸ್​​​ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಆದರೆ ಇದು ಮಾತ್ರ ತುಂಬ ಸವಾಲಿನಿಂದ ಕೂಡಿತ್ತು. ಮಿದುಳಿಗೆ ಹರಡಿದ್ದರಿಂದ ಸರ್ಜರಿ ಸಮಯದಲ್ಲಿ ರೋಗಿಯು ಕಣ್ಣು ಕಳೆದುಕೊಳ್ಳುವಂತೆ ನೋಡಿಕೊಳ್ಳುವುದು ಸಾಹಸವಾಗಿತ್ತು ಎಂದು ಇಲ್ಲಿನ ವೈದ್ಯರು ಹೇಳಿದ್ದಾರೆ.

ಈ ರೋಗಿಯ ಹೆಸರು ಅನಿಲ್​ ಕುಮಾರ್​. ಜಮುಯಿಯ ನಿವಾಸಿಯಾಗಿದ್ದಾರೆ. ಇವರಿಗೆ ತಲೆ ಸುತ್ತುತ್ತಿತ್ತು.. ಹಾಗೂ ಪದೇಪದೆ ಎಚ್ಚರತಪ್ಪಿ ಬೀಳುತ್ತಿದ್ದರು. ದಿನದಿನಕ್ಕೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿತ್ತು. ಮಿದುಳಿನಲ್ಲಿದ್ದ ಬ್ಲ್ಯಾಕ್​ ಫಂಗಸ್​ ಗಡ್ಡೆಯನ್ನು ಡಾ. ಬ್ರಜೇಶ್​ ಕುಮಾರ್​ ಮತ್ತು ಅವರ ತಂಡ ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮನೀಶ್​ ಮಂಡಲ್​ ತಿಳಿಸಿದ್ದಾರೆ.

ಇದನ್ನೂ ಓದಿ: karnataka unlock 60 ದಿನಗಳ ಲಾಕ್​ಡೌನ್ ಗ್ರಹಣಕ್ಕೆ ನಾಳೆಯಿಂದ ಅರ್ಧ ಮುಕ್ತಿ.. ಆದರೆ ಷರತ್ತುಗಳು ಅನ್ವಯ

Doctors Remove Cricket Ball Sized Black Fungus From Brain of 60 Year Old Man In Bihar

Follow Us
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್