AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇನ್ಮುಂದೆ ರೋಗಿಗಳು, ಸಹೋದ್ಯೋಗಿಗಳ ಜತೆ ಮಲಯಾಳಂನಲ್ಲಿ ಮಾತಾಡಬೇಡಿ..’ -ನರ್ಸ್​ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದ ಸರ್ಕಾರಿ ಆಸ್ಪತ್ರೆ

ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗೋವಿಂದ್​ ಬಲ್ಲಬ್​ ಪಂತ್​ ಇನ್​​ಸ್ಟಿಟ್ಯೂಟ್​ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಆಸ್ಪತ್ರೆ(GIPMER)ಯಲ್ಲಿ ಹೀಗೆ ನರ್ಸ್​​ಗಳಿಗೆ ಸುತ್ತೋಲೆ ಹೊರಡಿಸಿ, ಮಲಯಾಳಂ ಮಾತನಾಡದಂತೆ ಸೂಚಿಸಿದೆ.

‘ಇನ್ಮುಂದೆ ರೋಗಿಗಳು, ಸಹೋದ್ಯೋಗಿಗಳ ಜತೆ ಮಲಯಾಳಂನಲ್ಲಿ ಮಾತಾಡಬೇಡಿ..’ -ನರ್ಸ್​ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದ ಸರ್ಕಾರಿ ಆಸ್ಪತ್ರೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 06, 2021 | 10:48 AM

Share

ಮಲಯಾಳಂನಲ್ಲಿ ಮಾತನಾಡಬೇಡಿ..ಹಿಂದಿ ಅಥವಾ ಇಂಗ್ಲಿಷ್​​ನಲ್ಲೇ ಮಾತನಾಡಿ..ನಮ್ಮಲ್ಲಿ ಅದೆಷ್ಟೋ ಸಹೋದ್ಯೋಗಿಗಳಿಗೆ, ರೋಗಿಗಳಿಗೆ ಮಲಯಾಳಂ ಅರ್ಥ ಆಗೋದಿಲ್ಲ..ಮಾತನಾಡಲೂ ಬರುವುದಿಲ್ಲ ಎಂದು ದೆಹಲಿ ಸರ್ಕಾರಿ ಆಸ್ಪತ್ರೆಯೊಂದು ನರ್ಸಿಂಗ್​ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದೆ. ನೀವು ಮಲಯಾಳಂನಲ್ಲಿ ವ್ಯವಹರಿಸುವುದರಿಂದ ಹಲವು ತರಹದ ಅನನುಕೂಲಗಳು ಆಗುತ್ತಿವೆ. ಇನ್ನು ಮುಂದೆ ಆ ಭಾಷೆಯಲ್ಲಿ ಮಾತನಾಡಿದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗೋವಿಂದ್​ ಬಲ್ಲಬ್​ ಪಂತ್​ ಇನ್​​ಸ್ಟಿಟ್ಯೂಟ್​ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಆಸ್ಪತ್ರೆ(GIPMER)ಯಲ್ಲಿ ಹೀಗೆ ನರ್ಸ್​​ಗಳಿಗೆ ಸುತ್ತೋಲೆ ಹೊರಡಿಸಿ, ಮಲಯಾಳಂ ಮಾತನಾಡದಂತೆ ಸೂಚಿಸಿದೆ. ವೈದ್ಯಕೀಯ ಸಿಬ್ಬಂದಿ ಅಥವಾ ರೋಗಿಗಳೊಟ್ಟಿಗೆ ಇಂಗ್ಲಿಷ್​ ಅಥವಾ ಹಿಂದಿಯಲ್ಲೇ ಮಾತನಾಡಬೇಕು. ಅದಾಗದಿದ್ದರೆ ಕಠಿಣ ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ.ಬಿ.ಪಂತ್​​​ ನರ್ಸ್​​​ ಸಂಘಟನೆಯ ಅಧ್ಯಕ್ಷ ಲೀಲಾಧರ್​ ರಾಮಚಂದಾನಿ, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರಿಗೆ ನೀಡಿದ ದೂರಿನ ಅನ್ವಯ ಪ್ರಸ್ತುತ ಸೂಚನೆ ಹೊರಡಿಸಲಾಗಿದೆ. ಆದರೆ ಸುತ್ತೋಲೆಯಲ್ಲಿ ಬಳಸಿದ ಪದಗಳ ಬಗ್ಗೆ ನಮ್ಮ ಒಕ್ಕೂಟದ ವಿರೋಧವಿದೆ ಎಂದೂ ಹೇಳಿದ್ದಾರೆ. ದೆಹಲಿ ನರ್ಸಸ್​ ಫೆಡರೇಶನ್​ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಮ್​ಚಂದಾನಿ, ಈ ಸುತ್ತೋಲೆಯಲ್ಲಿ ಮಲಯಾಳಂ ಹೆಸರನ್ನು ಸೇರಿಸಲಾಗಿದೆ. ಅನೇಕರು ಇದನ್ನು ಅಪರಾಧವೆಂಬಂತೆ ಭಾವಿಸುತ್ತಾರೆ. ಒಬ್ಬ ರೋಗಿಯ ದೂರಿನಿಂದ ಹೀಗಾಗಿದೆ. ಅದನ್ನು ಹೊರತುಪಡಿಸಿದರೆ ನರ್ಸ್​​​ಗಳು ಮತ್ತು ಆಡಳಿತದ ಮಧ್ಯೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಅನೇಕರು ಕೇರಳದ ನರ್ಸ್​​ಗಳೇ ಇದ್ದು, ಅವರ ಭಾಷೆ ಮಲಯಾಳಂ ಆಗಿದೆ. ಹೀಗಾಗಿ ಅವರು ಅದೇ ಭಾಷೆಯಲ್ಲಿ ಮಾತನಾಡುತ್ತಾರೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ವರ್ಕ್​ ಫ್ರಂ ಹೋಮ್​ ನಡುವೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕೆಲವು ಸಲಹೆಗಳು

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ