AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದ ಆ್ಯಂಕರ್

ದೂರದರ್ಶನ ಆ್ಯಂಕರ್​ವೊಬ್ಬರು ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದಿರುವ ಘಟನೆ ನಡೆದಿದೆ. ದೂರದರ್ಶನದ ಕೋಲ್ಕತ್ತಾ ಶಾಖೆಯ ಆ್ಯಂಕರ್ ಲೋಪಮುದ್ರಾ ಅವರು ರಕ್ತದೊತ್ತಡ ಹೆಚ್ಚಾಗಿ ಕುಸಿದುಬಿದ್ದಿದ್ದರು, ಇದರ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಹೀಟ್​ವೇವ್​ ಬಗ್ಗೆ ಸುದ್ದಿ ಓದುತ್ತಲೇ ತಲೆತಿರುಗಿ ಬಿದ್ದ ಆ್ಯಂಕರ್
ನಿರೂಪಕಿ ಲೋಪಮುದ್ರಾ
ನಯನಾ ರಾಜೀವ್
|

Updated on: Apr 22, 2024 | 10:41 AM

Share

ಹೀಟ್​ ವೇವ್(Heat Wave)​ ಕುರಿತ ವರದಿ ಓದುತ್ತಲೇ ದೂರದರ್ಶನದ ಆ್ಯಂಕರ್(Anchor)​ ತಲೆ ತಿರುಗಿ ಬಿದ್ದಿರುವ ಘಟನೆ ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳು ವಿಪರೀತ ಬಿಸಿಲಿನ ಝಳಕ್ಕೆ ಸಿಲುಕಿ ನಲುಗುತ್ತಿವೆ. ಟಿವಿ ಆ್ಯಂಕರ್​ ಒಬ್ಬರು ಇತ್ತೀಚೆಗೆ ಹೀಟ್​ವೇವ್​ನ ಲೈವ್​ ಅಪ್​ಡೇಟ್​ಗಳನ್ನು ಓದುವಾಗಲೇ ಎಚ್ಚರತಪ್ಪಿ ಬಿದ್ದಿದ್ದಾರೆ.

ದೂರದರ್ಶನದ ಕೋಲ್ಕತ್ತಾ ಶಾಖೆಯ ಆ್ಯಂಕರ್ ಲೋಪಮುದ್ರಾ ಅವರು ರಕ್ತದೊತ್ತಡ ಹೆಚ್ಚಾಗಿ ಕುಸಿದುಬಿದ್ದಿದ್ದರು, ಇದರ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಕೂಡ ಹಂಚಿಕೊಂಡಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಬಂದಾಗಲೇ ಬಾಯಿ ಒಣಗುತ್ತಿತ್ತು, ಸುಸ್ತಾಗುತ್ತಿತ್ತು, ಹೊರಗೆ ಅತಿಯಾದ ಶಾಖ ಒಳಗೆ ತಂಪಾದ ವಾತಾವರಣವು ರಕ್ತದೊತ್ತಡದಲ್ಲಿ ಏರುಪೇರಾಗಲು ಕಾರಣವಾಯಿತು ಎಂದಿದ್ದಾರೆ.

ನಾನು ಎಂದಿಗೂ ನನ್ನ ಬಳಿ ನೀರಿನ ಬಾಟಲಿಯನ್ನು ಇಟ್ಟುಕೊಂಡಿದ್ದೇ ಇಲ್ಲ, ಹದಿನೈದು ನಿಮಿಷಗಳು ಅಥವಾ ಅರ್ಧಗಂಟೆ ಇರಲಿ, ಇದುವರೆಗೂ ನೀರನ್ನು ಇಟ್ಟುಕೊಂಡಿದ್ದೇ ನೆನಪಿಲ್ಲ, ಆದರೆ ವಾತೆ್ ಮುಗಿಯುವ 15 ನಿಮಿಷಗಳ ಮೊದಲೇ ಬಾಯಿ ಒಣಗಲು ಶುರುವಾಗಿತ್ತು.

ಮತ್ತಷ್ಟು ಓದಿ: ಮಹಿಳಾ ರಿಪೋರ್ಟರ್​​ಗೆ ಬಲವಂತವಾಗಿ ಹಿಜಾಬ್​​ ಹಾಕಿದ ಮುಸ್ಲಿಂ ಯುವಕ, ಆಕೆಯ ಪ್ರತ್ಯುತ್ತರಕ್ಕೆ ನೆಟ್ಟಿಗರು ಫಿದಾ

ಫ್ಲೋರ್​ ಮ್ಯಾನೇಜರ್​ ಬಳಿ ನೀರು ಕೊಡುವಂತೆ ಕೇಳಿದೆ, ಬ್ರೇಕ್​ ತೆಗೆದುಕೊಂಡು ನೀರು ಕುಡಿದೆ, ಅದಾದ ಬಳಿಕ ಸುಧಾರಿಸಿಕೊಂಡು ಹೇಗೋ ಎರಡು ಸುದ್ದಿಗಳನ್ನು ಓದಿದ್ದಷ್ಟೇ ತಲೆ ತಿರುಗಿ ಬಿದ್ದೆ ಎಂದು ಬರೆದುಕೊಂಡಿದ್ದಾರೆ.

ಬಿಸಿಲ ಝಳ, ಹೀಟ್​ ವೇವ್​ ಸುದ್ದಿ ಓದುವಾಗ ನನ್ನ ಧ್ವನಿ ಕಂಪಿಸಿತು, ಅದೃಷ್ಟವಶಾತ್ ಇದು ದೂರದರ್ಶನದಲ್ಲಿ 30 ರಿಂದ 40 ಸೆಕೆಂಡುಗಳ ಅನಿಮೇಷನ್ ಪ್ಲೇ ಆಗುತ್ತಿರುವಾಗ ಸಂಭವಿಸಿತು. ಆ ಸಮಯದಲ್ಲಿ ನಾನು ನನ್ನ ಕುರ್ಚಿಯ ಮೇಲೆ ಬಿದ್ದೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ