AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ. ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. […]

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 17, 2019 | 11:14 AM

Share

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ.

ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಸದ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಮಹೇಶ್ವರರೆಡ್ಡಿ, ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೀತಿದ್ರೂ. ಆದ್ರೀಗ ತನ್ನ ಪತ್ನಿ ಕೊಟ್ಟಿರೋ ಬಿಗ್ ಶಾಕ್​ಗೆ ಐಪಿಎಸ್ ಹುದ್ದೆಗೇರೋದನ್ನೇ ಕಳೆದುಕೊಂಡಿದ್ದಾರೆ. ತನಿಖೆಗೆ ಕೂಡ ಆದೇಶಿಸಲಾಗಿದೆ.

ಆಂಧ್ರಪ್ರದೇಶದ ಮಹೇಶ್ವರರೆಡ್ಡಿ ಹಾಗೂ ಭಾವನಾ ಹೈದರಾಬಾದ್​​ನಲ್ಲಿ ಒಂದೇ ಕಾಲೇಜಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ರು. ಬಳಿಕ 2018 ರ ಫೆಬ್ರವರಿ 9 ರಂದು ರಿಜಿಸ್ಟ್ರಾರ್ ಮ್ಯಾರೇಜ್ ಸಹ ಆಗಿದ್ರು. ಇದಾದ್ಮೇಲೆ ಕಷ್ಟಪಟ್ಟು ಓದಿದ್ದ ಮಹೇಶ್ವರರೆಡ್ಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 126ನೇ ಱಂಕ್ ಪಡೆದಿದ್ರು. ಬಳಿಕ ತರಬೇತಿ​ ಕೂಡ ಪಡೀತಿದ್ರೂ. ಆದ್ರೆ, ಕೆಲ ದಿನಗಳ ಹಿಂದಷ್ಟೇ ಭಾವನಾ ತನ್ನ ಪತಿ ಮಹೇಶ್ವರ ರೆಡ್ಡಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಕಾಯ್ದೆ, SC-ST ಕಾಯ್ದೆಯಡಿ ಕೇಸ್ ದಾಖಲಿಸಿದ್ದಾಳೆ.

ಅಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ಕೂಡ ಮಾಡಿದ್ಲು. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಗೃಹ ಇಲಾಖೆಗೆ FIR ಪ್ರತಿ ವರದಿ ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಶ್ವರೆಡ್ಡಿಯನ್ನು ಗೃಹ ಇಲಾಖೆ ಅಮಾನತುಗೊಳಿಸಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ. ಒಟ್ನಲ್ಲಿ ಐಪಿಎಸ್​ ಖಡಕ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಯುವಕನ ಬಾಳಿಗೆ ಬರಸಿಡಿಲು ಅಪ್ಪಳಿಸಿದೆ. ಪೊಲೀಸ್ರು FIR ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Published On - 8:58 am, Tue, 17 December 19

Follow Us
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ