AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ. ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. […]

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!
ಸಾಧು ಶ್ರೀನಾಥ್​
|

Updated on:Dec 17, 2019 | 11:14 AM

Share

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ.

ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಸದ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಮಹೇಶ್ವರರೆಡ್ಡಿ, ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೀತಿದ್ರೂ. ಆದ್ರೀಗ ತನ್ನ ಪತ್ನಿ ಕೊಟ್ಟಿರೋ ಬಿಗ್ ಶಾಕ್​ಗೆ ಐಪಿಎಸ್ ಹುದ್ದೆಗೇರೋದನ್ನೇ ಕಳೆದುಕೊಂಡಿದ್ದಾರೆ. ತನಿಖೆಗೆ ಕೂಡ ಆದೇಶಿಸಲಾಗಿದೆ.

ಆಂಧ್ರಪ್ರದೇಶದ ಮಹೇಶ್ವರರೆಡ್ಡಿ ಹಾಗೂ ಭಾವನಾ ಹೈದರಾಬಾದ್​​ನಲ್ಲಿ ಒಂದೇ ಕಾಲೇಜಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ರು. ಬಳಿಕ 2018 ರ ಫೆಬ್ರವರಿ 9 ರಂದು ರಿಜಿಸ್ಟ್ರಾರ್ ಮ್ಯಾರೇಜ್ ಸಹ ಆಗಿದ್ರು. ಇದಾದ್ಮೇಲೆ ಕಷ್ಟಪಟ್ಟು ಓದಿದ್ದ ಮಹೇಶ್ವರರೆಡ್ಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 126ನೇ ಱಂಕ್ ಪಡೆದಿದ್ರು. ಬಳಿಕ ತರಬೇತಿ​ ಕೂಡ ಪಡೀತಿದ್ರೂ. ಆದ್ರೆ, ಕೆಲ ದಿನಗಳ ಹಿಂದಷ್ಟೇ ಭಾವನಾ ತನ್ನ ಪತಿ ಮಹೇಶ್ವರ ರೆಡ್ಡಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಕಾಯ್ದೆ, SC-ST ಕಾಯ್ದೆಯಡಿ ಕೇಸ್ ದಾಖಲಿಸಿದ್ದಾಳೆ.

ಅಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ಕೂಡ ಮಾಡಿದ್ಲು. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಗೃಹ ಇಲಾಖೆಗೆ FIR ಪ್ರತಿ ವರದಿ ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಶ್ವರೆಡ್ಡಿಯನ್ನು ಗೃಹ ಇಲಾಖೆ ಅಮಾನತುಗೊಳಿಸಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ. ಒಟ್ನಲ್ಲಿ ಐಪಿಎಸ್​ ಖಡಕ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಯುವಕನ ಬಾಳಿಗೆ ಬರಸಿಡಿಲು ಅಪ್ಪಳಿಸಿದೆ. ಪೊಲೀಸ್ರು FIR ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Published On - 8:58 am, Tue, 17 December 19

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?