AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ. ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. […]

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!
ಸಾಧು ಶ್ರೀನಾಥ್​
|

Updated on:Dec 17, 2019 | 11:14 AM

Share

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ.

ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಸದ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಮಹೇಶ್ವರರೆಡ್ಡಿ, ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೀತಿದ್ರೂ. ಆದ್ರೀಗ ತನ್ನ ಪತ್ನಿ ಕೊಟ್ಟಿರೋ ಬಿಗ್ ಶಾಕ್​ಗೆ ಐಪಿಎಸ್ ಹುದ್ದೆಗೇರೋದನ್ನೇ ಕಳೆದುಕೊಂಡಿದ್ದಾರೆ. ತನಿಖೆಗೆ ಕೂಡ ಆದೇಶಿಸಲಾಗಿದೆ.

ಆಂಧ್ರಪ್ರದೇಶದ ಮಹೇಶ್ವರರೆಡ್ಡಿ ಹಾಗೂ ಭಾವನಾ ಹೈದರಾಬಾದ್​​ನಲ್ಲಿ ಒಂದೇ ಕಾಲೇಜಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ರು. ಬಳಿಕ 2018 ರ ಫೆಬ್ರವರಿ 9 ರಂದು ರಿಜಿಸ್ಟ್ರಾರ್ ಮ್ಯಾರೇಜ್ ಸಹ ಆಗಿದ್ರು. ಇದಾದ್ಮೇಲೆ ಕಷ್ಟಪಟ್ಟು ಓದಿದ್ದ ಮಹೇಶ್ವರರೆಡ್ಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 126ನೇ ಱಂಕ್ ಪಡೆದಿದ್ರು. ಬಳಿಕ ತರಬೇತಿ​ ಕೂಡ ಪಡೀತಿದ್ರೂ. ಆದ್ರೆ, ಕೆಲ ದಿನಗಳ ಹಿಂದಷ್ಟೇ ಭಾವನಾ ತನ್ನ ಪತಿ ಮಹೇಶ್ವರ ರೆಡ್ಡಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಕಾಯ್ದೆ, SC-ST ಕಾಯ್ದೆಯಡಿ ಕೇಸ್ ದಾಖಲಿಸಿದ್ದಾಳೆ.

ಅಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ಕೂಡ ಮಾಡಿದ್ಲು. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಗೃಹ ಇಲಾಖೆಗೆ FIR ಪ್ರತಿ ವರದಿ ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಶ್ವರೆಡ್ಡಿಯನ್ನು ಗೃಹ ಇಲಾಖೆ ಅಮಾನತುಗೊಳಿಸಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ. ಒಟ್ನಲ್ಲಿ ಐಪಿಎಸ್​ ಖಡಕ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಯುವಕನ ಬಾಳಿಗೆ ಬರಸಿಡಿಲು ಅಪ್ಪಳಿಸಿದೆ. ಪೊಲೀಸ್ರು FIR ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Published On - 8:58 am, Tue, 17 December 19

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್