AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ. ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. […]

ಐಪಿಎಸ್ ಅಧಿಕಾರಿ ಆಗಬೇಕಿದ್ದವ ಪತ್ನಿಯಿಂದಲೇ ಹುದ್ದೆ ಕಳೆದುಕೊಂಡ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Dec 17, 2019 | 11:14 AM

Share

ಹೈದರಾಬಾದ್: ಐಪಿಎಸ್.. ಇಂಡಿಯನ್ ಪೊಲೀಸ್ ಸರ್ವೀಸ್.. ಈ ಹೆಸರಲ್ಲೇ ಒಂದು ಖದರ್ ಇದೆ. ಒಂದು ಗತ್ತು.. ಗೈರತ್ತಿದೆ.. ಐಪಿಎಸ್​​​ಗೆ ಎಂಟ್ರಿ ಕೊಡೋಕೆ ತಪಸ್ಸೇ ಮಾಡ್ಬೇಕು.. ಆದ್ರೆ, ಇನ್ನೇನು ಐಪಿಎಸ್ ಹುದ್ದೆಗೇರ್ಬೇಕು ಈ ಹೊತ್ತಲ್ಲೇ ಅಧಿಕಾರಿಯೊಬ್ರು ಅಮಾನತಿನ ಶಿಕ್ಷೆಗೊಳಗಾಗಿದ್ದಾರೆ.

ಪತ್ನಿಗೆ ಕಿರುಕುಳ.. ತರಬೇತಿ ನಿರತ IPS​ ಅಧಿಕಾರಿ ಅಮಾನತು..! ಪ್ರತೀ ಪುರುಷನ ಸಕ್ಸಸ್ ಹಿಂದೆ ಒಂದು ಹೆಣ್ಣೀರ್ತಾಳೆ ಅನ್ನೋ ಮಾತಿದೆ. ಆದ್ರೆ, ಹೈದರಾಬಾದ್​ನಲ್ಲಾಗಿರೋ ಈ ಘಟನೆ ಪಕ್ಕಾ ಡಿಫರೆಂಟ್. 28 ವರ್ಷದ ಮಹೇಶ್ವರರೆಡ್ಡಿ. ಮೂಲತಃ ಆಂಧ್ರಪ್ರದೇಶದ ಕಡಪಾ ಜಿಲ್ಲೆಯವರು. ಸದ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ ಮಹೇಶ್ವರರೆಡ್ಡಿ, ಮಸ್ಸೂರಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಕಾಡೆಮಿಯಲ್ಲಿ ತರಬೇತಿ ಪಡೀತಿದ್ರೂ. ಆದ್ರೀಗ ತನ್ನ ಪತ್ನಿ ಕೊಟ್ಟಿರೋ ಬಿಗ್ ಶಾಕ್​ಗೆ ಐಪಿಎಸ್ ಹುದ್ದೆಗೇರೋದನ್ನೇ ಕಳೆದುಕೊಂಡಿದ್ದಾರೆ. ತನಿಖೆಗೆ ಕೂಡ ಆದೇಶಿಸಲಾಗಿದೆ.

ಆಂಧ್ರಪ್ರದೇಶದ ಮಹೇಶ್ವರರೆಡ್ಡಿ ಹಾಗೂ ಭಾವನಾ ಹೈದರಾಬಾದ್​​ನಲ್ಲಿ ಒಂದೇ ಕಾಲೇಜಲ್ಲಿ ಓದುತ್ತಿದ್ದಾಗ ಪರಸ್ಪರ ಪ್ರೀತಿಸಿದ್ರು. ಬಳಿಕ 2018 ರ ಫೆಬ್ರವರಿ 9 ರಂದು ರಿಜಿಸ್ಟ್ರಾರ್ ಮ್ಯಾರೇಜ್ ಸಹ ಆಗಿದ್ರು. ಇದಾದ್ಮೇಲೆ ಕಷ್ಟಪಟ್ಟು ಓದಿದ್ದ ಮಹೇಶ್ವರರೆಡ್ಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು 126ನೇ ಱಂಕ್ ಪಡೆದಿದ್ರು. ಬಳಿಕ ತರಬೇತಿ​ ಕೂಡ ಪಡೀತಿದ್ರೂ. ಆದ್ರೆ, ಕೆಲ ದಿನಗಳ ಹಿಂದಷ್ಟೇ ಭಾವನಾ ತನ್ನ ಪತಿ ಮಹೇಶ್ವರ ರೆಡ್ಡಿ ವಿರುದ್ಧ ವರದಕ್ಷಿಣೆ ಕಿರುಕುಳ, ಮಹಿಳಾ ದೌರ್ಜನ್ಯ ಕಾಯ್ದೆ, SC-ST ಕಾಯ್ದೆಯಡಿ ಕೇಸ್ ದಾಖಲಿಸಿದ್ದಾಳೆ.

ಅಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ಕೂಡ ಮಾಡಿದ್ಲು. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಗೃಹ ಇಲಾಖೆಗೆ FIR ಪ್ರತಿ ವರದಿ ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮಹೇಶ್ವರೆಡ್ಡಿಯನ್ನು ಗೃಹ ಇಲಾಖೆ ಅಮಾನತುಗೊಳಿಸಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ. ಒಟ್ನಲ್ಲಿ ಐಪಿಎಸ್​ ಖಡಕ್ ಅಧಿಕಾರಿ ಆಗ್ಬೇಕು ಅಂದ್ಕೊಂಡಿದ್ದ ಯುವಕನ ಬಾಳಿಗೆ ಬರಸಿಡಿಲು ಅಪ್ಪಳಿಸಿದೆ. ಪೊಲೀಸ್ರು FIR ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Published On - 8:58 am, Tue, 17 December 19

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!