ಹೈದರಾಬಾದ್: ಸ್ಪೆಷಲ್ ಬ್ರಾಂಚ್ನ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನ ಅಪ್ಪುಗರ್ ಪ್ರದೇಶದಲ್ಲಿ ನಡೆದಿದೆ. ತನ್ನ ಮನೆಯಲ್ಲಿಯೇ ನೇಣು ಹಾಕಿಕೊಂಡು ಡಿವೈಎಸ್ಪಿ ಕೃಷ್ಣ ವರ್ಮ ಆತ್ಮಹತ್ಯಗೆ ಶರಣಾಗಿದ್ದಾರೆ.
ಶ್ರೀಕಾಕುಳಂನ ಸ್ಪೆಷಲ್ ಬ್ರಾಂಚ್ನ DySPಯಾಗಿ ಕೃಷ್ಣ ವರ್ಮ ಕರ್ತವ್ಯ ನಿರ್ವಹಿಸಿಸುತ್ತಿದ್ದರು. ಅಲ್ಲದೆ ಕೆಲ ದಿನಗಳಿಂದ ಲಂಗ್ ಕ್ಯಾನ್ಸರ್ನಿಂದ ಇವರು ಬಳಲುತ್ತಿದ್ದರು. ಇದೇ ಕಾರಣಕ್ಕೆ DySP ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.