AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಬಾರಿ MLA ಆದ್ರೂ ಪುಟ್ಟ ಮನೆಯಲ್ಲಿ ವಾಸ್ತವ್ಯ: ಶಾಸಕನ ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಏನು?

ಬಿಹಾರದ ಬಲ್ರಾಮ್​ಪುರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್ ಅವರ ಮಗ ಚಿಕ್ಕ ಮನೆಯಲ್ಲಿ ಶುಭಾಶಯ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಲ್ಲದೇ ಅಲನ್ ಸರಳ ಜೀವಿ, ಸ್ವಂತ ಮನೆಯೂ ಇಲ್ಲದ ಶಾಸಕ ಎಂಬ ವರದಿಗಳು ಆಂಗ್ಲ ಸುದ್ದಿತಾಣಗಳಲ್ಲಿ ಹರಿದಾಡುತ್ತಿವೆ. ಅಲನ್ ನಿಜಕ್ಕೂ ಬಡವರೇ? ಈ ಮಾಹಿತಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ ಟಿವಿ9 ಡಿಜಿಟಲ್ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿತು. ಈ ಬಾರಿ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ […]

4 ಬಾರಿ MLA ಆದ್ರೂ ಪುಟ್ಟ ಮನೆಯಲ್ಲಿ ವಾಸ್ತವ್ಯ: ಶಾಸಕನ ವೈರಲ್​ ಫೋಟೋ ಹಿಂದಿನ ಅಸಲಿಯತ್ತು ಏನು?
ಪೃಥ್ವಿಶಂಕರ
|

Updated on: Nov 14, 2020 | 7:16 PM

Share

ಬಿಹಾರದ ಬಲ್ರಾಮ್​ಪುರದಲ್ಲಿ ಐದನೇ ಬಾರಿ ಶಾಸಕರಾಗಿ ಆಯ್ಕೆಯಾದ ಸಿಪಿಐ(ಎಂ)(ಎಲ್) ಪಕ್ಷದ ಮೆಹಬೂಬ್ ಅಲಮ್ ಅವರ ಮಗ ಚಿಕ್ಕ ಮನೆಯಲ್ಲಿ ಶುಭಾಶಯ ಕೋರುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಲ್ಲದೇ ಅಲನ್ ಸರಳ ಜೀವಿ, ಸ್ವಂತ ಮನೆಯೂ ಇಲ್ಲದ ಶಾಸಕ ಎಂಬ ವರದಿಗಳು ಆಂಗ್ಲ ಸುದ್ದಿತಾಣಗಳಲ್ಲಿ ಹರಿದಾಡುತ್ತಿವೆ.

ಅಲನ್ ನಿಜಕ್ಕೂ ಬಡವರೇ? ಈ ಮಾಹಿತಿಯ ಸತ್ಯಾಸತ್ಯತೆಯನ್ನು ಬೆನ್ನತ್ತಿದ ಟಿವಿ9 ಡಿಜಿಟಲ್ ತಂಡಕ್ಕೆ ಹಲವು ಅಚ್ಚರಿಯ ಮಾಹಿತಿಗಳು ಲಭಿಸಿತು. ಈ ಬಾರಿ ಚುನಾವಣೆಯಲ್ಲಿ ಅವರು ಘೋಷಿಸಿದ ಆಸ್ತಿಯ ಮೌಲ್ಯ 31.8 ಲಕ್ಷ. 2015ರ ಬಿಹಾರ ವಿಧಾನಸಭೆ ಚುನಾವಣೆಗಿಂತ ಅವರ ಆಸ್ತಿ 8.84 ಲಕ್ಷ ಏರಿಕೆಯಾಗಿದೆ! ಸ್ವಂತ ಮನೆ ಇಲ್ಲದಿದ್ದರೂ ಅಲನ್ ಅವರು ಲಕ್ಷಾಧೀಶ್ವರರೇ.

ಅಬ್ಬಬ್ಬಾ..ಎಷ್ಟೆಲ್ಲಾ ಕೇಸ್! ಅಲನ್ ಅವರ ಕ್ರಿಮಿನಲ್ ಹಿನ್ನೆಲೆ ತಿಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ!. ಬಿಹಾರದಲ್ಲಿ ಆಯ್ಕೆಯಾದ ಶೇ.70 ಎಂಎಲ್​ಎಗಳಿಗೆ ಶುದ್ಧಾಂಗ ಅಪರಾಧ ಹಿನ್ನೆಲೆಯಿದೆ. ಅಲನ್ ಅವರೂ ಈ ಲೆಕ್ಕದಲ್ಲಿ ಹಿಂದೆಬಿದ್ದಿಲ್ಲ. 2015ರಲ್ಲಿ ಚುನಾವಣೆಗೆ ನಿಲ್ಲುವಾಗ 3 ಕೊಲೆ ಆರೋಪವೂ ಸೇರಿ 13 ಅಪರಾಧಗಳನ್ನು ಅಫಿಡವಿಟ್​ನಲ್ಲಿ ಘೋಷಿಸಿದ್ದರು. ಈಬಾರಿ ಈ ಸಂಖ್ಯೆಯಲ್ಲೂ ಪ್ರಗತಿ ಕಂಡಿದೆ. ಒಟ್ಟು 28 ಪ್ರಕರಣಗಳಲ್ಲಿ ಮೆಹಬೂಬ್ ಅಲನ್ ಆರೋಪಿಯಾಗಿದ್ದಾರೆ.

ಅಫಿಡವಿಟ್​ನಲ್ಲಿ ಕೃಷಿಕರೆಂದು ಅಲನ್ ಘೋಷಿಸಿಕೊಳ್ಳುತ್ತಾರೆ. ಅವರ ಮೇಲಿನ ಆರೋಪಗಳನ್ನು ಗಮನಿಸಿದರೆ ಕೊಲೆ, ದಂಗೆಗೆ ಪ್ರಚೋದನೆ, ಅಧಿಕಾರಿಗಳಿಗೆ ದೈಹಿಕ ಹಲ್ಲೆ ಪ್ರಕರಣಗಳು ಕಾಣಸಿಗುತ್ತವೆ. 2014ರ ಲೋಕಸಭೆ ಚುನಾವಣೆಗೆ ಕಾತಿಹಾರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವರನ್ನು ಕೊಲೆ ಪ್ರಕರಣದಲ್ಲಿ ನಾಮಿನೇಶನ್ ಫೈಲ್ ಮಾಡಿದ ನಂತರ ಪೋಲೀಸರು ಬಂಧಿಸಿದ್ದರು.

ಬಿಹಾರ ಸಿಪಿಐ(ಎಂ)(ಎಲ್) ನ ರಾಜ್ಯ ಶಾಖೆಯ ಸದಸ್ಯರೂ ಆದ ಅವರನ್ನು ಪಕ್ಷ ಸಮರ್ತಿಸಿಕೊಂಡಿದೆ. ಮೆಹಬೂಬ್ ಅಲನ್ ಅವರನ್ನು ವ್ಯವಸ್ಥಿತ ಸಂಚಿಗೆ ಗುರಿಪಡಿಸಲಾಗುತ್ತಿದೆ. ಹೀಗಾಗಿಯೇ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿಕೆ ನೀಡಿದೆ.

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ