AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, […]

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!
KUSHAL V
|

Updated on: Nov 14, 2020 | 6:32 PM

Share

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಿಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್​ ತಿಹಾರ್ ಎಂದು ಆಚರಸಿಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜ್ಯಗಳನ್ನು ನೀಡಲಾಗುತ್ತದೆ.

ಅಂತೆಯೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಕುಕ್ಕುರ್​ ತಿಹಾರ್ ಅಂಗವಾಗಿ ನಗರದ ಪ್ರಾಣಿ ದಯಾ ಸಂಘವೊಂದರಲ್ಲಿರುವ ಶ್ವಾನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅವುಗಳಿಗೆ ಹಲವು ಖಾದ್ಯಗಳನ್ನು ಸಹ ನೀಡಲಾಯಿತು. ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್​ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ.

40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ