AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, […]

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!
KUSHAL V
|

Updated on: Nov 14, 2020 | 6:32 PM

Share

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಿಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್​ ತಿಹಾರ್ ಎಂದು ಆಚರಸಿಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜ್ಯಗಳನ್ನು ನೀಡಲಾಗುತ್ತದೆ.

ಅಂತೆಯೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಕುಕ್ಕುರ್​ ತಿಹಾರ್ ಅಂಗವಾಗಿ ನಗರದ ಪ್ರಾಣಿ ದಯಾ ಸಂಘವೊಂದರಲ್ಲಿರುವ ಶ್ವಾನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅವುಗಳಿಗೆ ಹಲವು ಖಾದ್ಯಗಳನ್ನು ಸಹ ನೀಡಲಾಯಿತು. ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್​ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ.

Follow Us
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ