AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, […]

ದೀಪಾವಳಿ ಬಂದ್ರೆ ಸಾಕು.. ಈ ಊರಿನ ಶ್ವಾನಗಳಿಗೆ ಅದೇನು ಮರ್ಯಾದೆ, ಅದೇನು ಸನ್ಮಾನ.. ವಾಹ್​!
KUSHAL V
|

Updated on: Nov 14, 2020 | 6:32 PM

Share

ದೀಪಾವಳಿ ಬಂದರೆ ಸಾಕು ಮಕ್ಕಳಿಗೆ ಸಿಕ್ಕಾಪಟ್ಟೆ ಖುಷಿ. ಮೊದಲು ಹಿರಿಯರೊಟ್ಟಿಗೆ ಬೆಳ್ಳಂಬೆಳ್ಳಗೆ ಎಣ್ಣೆ ಸ್ನಾನ ಮಾಡೋದು. ಆಮೇಲೆ ಎಲ್ಲರೊಂದಿಗೆ ಸೇರಿ ಪೂಜೆಯಲ್ಲಿ ಭಾಗಿಯಾಗೋದು. ನಂತರ ಬಗೆಬಗೆಯ ರುಚಿರುಚಿಯಾದ ಖಾದ್ಯ ಮತ್ತು ಸ್ವೀಟ್​ಗಳನ್ನು ಸವಿಯುವುದು. ಆದರೆ, ಇದೆಲ್ಲದಕ್ಕಿಂತ ಮಕ್ಕಳಿಗೆ ತುಂಬಾನೇ ಇಷ್ಟವಾಗೋದು ಅಂದರೆ ಗೊತ್ತಲ್ಲ.. ಯೆಸ್​ ಸಾಯಂಕಾಲ ಏರಿಯಾದಲ್ಲಿರುವ ಸ್ನೇಹಿತರೊಡೆನೆ ಸೇರಿ ಪಟಾಕಿ ಹೊಡೆಯೋದು! ಆದರೆ, ನೆರೆಯ ರಾಷ್ಟ್ರವಾದ ನೇಪಾಳದಲ್ಲಿ ದೀಪಾವಳಿ ಎಂದರೆ ಸಾಕು ಕೇವಲ ಮಕ್ಕಳಿಗೆ ಮಾತ್ರವಲ್ಲ ಇಲ್ಲಿನ ಶ್ವಾನಗಳಿಗೂ ಒಂದು ರೀತಿಯ ಸಂಭ್ರಮ, ಸಡಗರ. ಹೌದು, ನೇಪಾಳದಲ್ಲಿ ದೀಪಾವಳಿ ಹಬ್ಬವನ್ನು 5 ದಿನಗಳ ಕಾಲ ಆಚರಿಸಿಲಾಗುತ್ತದೆ. ಹಬ್ಬದ ಎರಡನೇ ದಿನವನ್ನು ಕುಕ್ಕುರ್​ ತಿಹಾರ್ ಎಂದು ಆಚರಸಿಲಾಗುತ್ತದೆ. ಇದರ ಭಾಗವಾಗಿ, ಶ್ವಾನಗಳಿಗೆ ಅಂದು ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ, ಅವುಗಳಿಗೆ ರುಚಿರುಚಿಯಾದ ಭಕ್ಷ್ಯ ಭೋಜ್ಯಗಳನ್ನು ನೀಡಲಾಗುತ್ತದೆ.

ಅಂತೆಯೇ, ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಕುಕ್ಕುರ್​ ತಿಹಾರ್ ಅಂಗವಾಗಿ ನಗರದ ಪ್ರಾಣಿ ದಯಾ ಸಂಘವೊಂದರಲ್ಲಿರುವ ಶ್ವಾನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅವುಗಳಿಗೆ ಹಲವು ಖಾದ್ಯಗಳನ್ನು ಸಹ ನೀಡಲಾಯಿತು. ಮನುಷ್ಯರ ಹಾಗೂ ಶ್ವಾನಗಳ ನಡುವಿನ ಸಹಸ್ರಾರು ವರ್ಷಗಳ ಬಾಂಧವ್ಯದ ಪ್ರತೀಕವಾಗಿ ಈ ಕುಕ್ಕುರ್​ ತಿಹಾರ್ ಹಬ್ಬವನ್ನು ಆಚರಿಸಲಾಗುತ್ತದೆ.

Follow Us
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್