AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರ ಅಘೋರಿ ರೂಪ ಕಂಡು ಬೆಚ್ಚಿಬಿದ್ದ ಕುಟುಂಬ

27 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್​ ವ್ಯಕ್ತಿ ಅರಘೋರಿ ರೂಪದಲ್ಲಿ ಮಹಾಕುಂಭ ಮೇಳದಲ್ಲಿ ಪತ್ತೆಯಾಗಿದ್ದಾರೆ. ಗಂಗಾ ಸಾಗರ್ ಮೂಲತಃ ಜಾರ್ಖಂಡ್​ನವರು 65 ವರ್ಷ ವಯಸ್ಸಿನ ಅವರು ಈಗ ಬಾಬಾ ರಾಜ್​ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1998ರಲ್ಲಿ ಪಾಟ್ನಾಗೆ ಹೋಗಿದ್ದ ನಂತರ ನಾಪತ್ತೆಯಾಗಿದ್ದರು. ಬಳಿಕ ಒಮ್ಮೆಯೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರ ಪತ್ನಿ ಧನ್ವಾ ದೇವಿ ಅವರು ತಮ್ಮ ಇಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅವರನ್ನು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದರು.

27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವರ ಅಘೋರಿ ರೂಪ ಕಂಡು ಬೆಚ್ಚಿಬಿದ್ದ ಕುಟುಂಬ
ಅಘೋರಿಗಳು-ಸಾಂದರ್ಭಿಕ ಚಿತ್ರImage Credit source: Indian Express
ನಯನಾ ರಾಜೀವ್
|

Updated on: Jan 30, 2025 | 8:12 AM

Share

ಗಂಗಾಸಾಗರ್​ ಎಂಬ ವ್ಯಕ್ತಿ 27 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು, ಅವರ ಕುಟುಂಬದವರು ಹುಡುಕದ ಸ್ಥಳವಿಲ್ಲ, ಆದರೆ ಎಲ್ಲಯೂ ಇವರ ಕುರುಹು ದೊರೆತಿರಲಿಲ್ಲ. ಈಗ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಅವರನ್ನು ಅಘೋರಿ ರೂಪದಲ್ಲಿ ಕಂಡು ಕುಟುಂಬದವರು ಬೆಚ್ಚಿಬಿದ್ದಿದ್ದಾರೆ.

ಗಂಗಾ ಸಾಗರ್ ಮೂಲತಃ ಜಾರ್ಖಂಡ್​ನವರು 65 ವರ್ಷ ವಯಸ್ಸಿನ ಅವರು ಈಗ ಬಾಬಾ ರಾಜ್​ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1998ರಲ್ಲಿ ಪಾಟ್ನಾಗೆ ಹೋಗಿದ್ದ ನಂತರ ನಾಪತ್ತೆಯಾಗಿದ್ದರು. ಬಳಿಕ ಒಮ್ಮೆಯೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅವರ ಪತ್ನಿ ಧನ್ವಾ ದೇವಿ ಅವರು ತಮ್ಮ ಇಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅವರನ್ನು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದರು.

ಗಂಗಾಸಾಗರ್ ಅವರ ಕಿರಿಯ ಸಹೋದರ ಮುರಳಿ ಯಾದವ್ ಮಾತನಾಡಿ, ಕುಂಭ ಮೇಳದಲ್ಲಿ ನಮ್ಮ ಸಂಬಂಧಿಕರು ಗಂಗಾಸಾಗರ್ ಅವರನ್ನು ಹೋಲುವ ವ್ಯಕ್ತಿಯನ್ನು ಗಮನಿಸಿ ಅವರು ಫೋಟೊ ತೆಗೆದು ಕಳುಹಿಸಿದ್ದರು. ಧನ್ವಿ ದೇವಿ ಹಾಗೂ ಇಬ್ಬರು ಪುತ್ರರು ಅವರನ್ನು ವಾಪಸ್ ಕರೆತರಲೆಂದು ಕುಂಭ ಮೇಳಕ್ಕೆ ಹೋಗಿದ್ದರು. ಅವರು ಮೇಳದಲ್ಲಿ ಬಾಬಾ ರಾಜ್‌ಕುಮಾರ್ ಅವರನ್ನು ಭೇಟಿಯಾದಾಗ, ಅವರು ತಮ್ಮ ಹಿಂದಿನ ಗುರುತನ್ನು ಗಂಗಾಸಾಗರ್ ಯಾದವ್ ಎಂದು ಒಪ್ಪಿಕೊಳ್ಳಲು ನಿರಾಕರಿಸಿದರು.

ಮತ್ತಷ್ಟು ಓದಿ: ಅಘೋರಿಗಳ ನಿಗೂಢ ಲೋಕ; ಅವರೇಕೆ ಶವಗಳ ಜೊತೆ ಇರುತ್ತಾರೆ?

ಉದ್ದವಾದ ಹಲ್ಲುಗಳು, ಅವರ ಹಣೆಯ ಮೇಲೆ ಗಾಯ ಮತ್ತು ಮೊಣಕಾಲಿನ ಮೇಲೆ ಗಮನಾರ್ಹವಾದ ಗಾಯದಂತಹ ವಿವರಗಳನ್ನು ಗುರುತಿಸಿದರು. ಧನ್ವಾ ದೇವಿ ಮತ್ತು ಮುರಳಿ ಯಾದವ್ ಅವರು ವ್ಯಕ್ತಿಯ ನಿಜವಾದ ಗುರುತನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.

ನಾವು ಕುಂಭಮೇಳ ಮುಗಿಯುವವರೆಗೂ ಕಾಯುತ್ತೇವೆ ಮತ್ತು ಅಗತ್ಯವಿದ್ದರೆ, ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತೇವೆ. ಪರೀಕ್ಷೆಯು ಹೊಂದಾಣಿಕೆಯಾಗದಿದ್ದರೆ, ನಾವು ಬಾಬಾ ರಾಜ್‌ಕುಮಾರ್‌ಗೆ ಕ್ಷಮೆಯಾಚಿಸುತ್ತೇವೆ ಎಂದು ಮುರಳಿ ಯಾದವ್ ಹೇಳಿದ್ದಾರೆ. ಗಂಗಾಸಾಗರ್ ನಾಪತ್ತೆಯಾಗಿದ್ದು ಅವರ ಕುಟುಂಬದ ಮೇಲೆ ಅದರಲ್ಲೂ ಪುಟ್ಟ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿತ್ತು. ಹಿರಿಯ ಮಗನಿಗೆ ಆಗ ಕೇವಲ ಎರಡು ವರ್ಷ, ಕಿರಿಯ ಮಗ ಇನ್ನೂ ಪತ್ನಿಯ ಹೊಟ್ಟೆಯೊಳಗಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್