Video: ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ, ಸ್ನೇಹಿತನ ಕೊನೆಯ ಆಸೆಯಂತೆ ಅಂತ್ಯಕ್ರಿಯೆ ವೇಳೆ ಕುಣಿದ ವ್ಯಕ್ತಿ
ವ್ಯಕ್ತಿಯೊಬ್ಬ ಸ್ನೇಹಿತನ ಅಂತ್ಯಕ್ರಿಯೆ ವೇಳೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಇವರೆಂಥಾ ಸ್ನೇಹಿತ ಎಂದು ಕೇಳಬೇಡಿ, ಇವರಂಥಾ ಸ್ನೇಹಿತ ಇನ್ಯಾರೂ ಇರಲು ಸಾಧ್ಯವಿಲ್ಲ. ತನ್ನ ಸ್ನೇಹಿತನ ಕೊನೆಯ ಆಸೆಯಂತೆ ಮನಸ್ಸಿನಲ್ಲಿ ದುಃಖ ಬೆಟ್ಟದಷ್ಟಿದ್ದರೂ ಅದನ್ನು ತೋರಿಸಿಕೊಳ್ಳದೆ ನೃತ್ಯ ಮಾಡಿದ್ದಾರೆ. ಮೃತರ ಪುತ್ರ ಮುಖೇಶ್ ಜೈನ್, ತಮ್ಮ ತಂದೆ 2023 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಬ್ಬದಂತೆ ತಮ್ಮ ಸಾವನ್ನು ಆಚರಿಸಲು ಬಯಸಿದ್ದರು. ಜನರು ಡಿಜೆ ಜೊತೆ ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆನಂದಿಸಬೇಕೆಂದು ಅವರು ಬಯಸಿದ್ದರು

ಮಂದಸೌರ್, ಜುಲೈ 31: ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ ಉಮ್ಮಳಿಸಿ ಬರುತ್ತಿದ್ದರೂ ತೋರಿಸಿಕೊಳ್ಳದೆ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಅವರ ಕೊನೆಯ ಆಸೆಯಂತೆ ವ್ಯಕ್ತಿಯೊಬ್ಬರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಮಂದಸೌರ್ನಲ್ಲಿ ನಡೆದಿದೆ. ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಬುಧವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆ ವೇಳೆ ವ್ಯಕ್ತಿಯೊಬ್ಬ ಮೃತ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಲು ನೃತ್ಯಮಾಡಿ ಕಣ್ಣಂಚಲ್ಲಿ ನೀಡಿದ್ದರೂ ಮುಖದಲ್ಲಿ ನಗು ತಂದುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸೋಹಲ್ ಲಾಲ್ ಜೈನ್ ಎಂಬುವವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು, ತನ್ನ ಆತ್ಮೀಯ ಗೆಳೆಯ ಅಂಬಾಲಾಲ್ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ನೃತ್ಯ ಮಾಡಬೇಕೆಂದು ಬಯಸಿದ್ದರು.
ಮತ್ತಷ್ಟು ಓದಿ: Viral News: ತಾಯಿ ಬದುಕಿರುವಾಗಲೇ ಶವ ಪೆಟ್ಟಿಗೆ ತಂದು ಆಕೆಯನ್ನು ಕೂರಿಸಿ ಮೆರವಣಿಗೆ ಮಾಡಿದ ವ್ಯಕ್ತಿ
ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. ಇಂದಿನ ಕಾಲದಲ್ಲಿ ಇಂಥಾ ಸ್ನೇಹ ಅಪರೂಪ ಎಂದು ಜನರು ಕೊಂಡಾಡಿದರು.
ವಿಡಿಯೋ
अंतिम यात्रा में डांस करना कह कर गए थे सोहनलाल जैन
मन्दसौर :- जवासिया ग्राम में एक दोस्त ने दोस्त से किया वादा पूरा किया, उसकी अंतिम यात्रा में डांस करना कह कर गए थे सोहनलाल जैन, आज अंबालाल प्रजापत ने अपने दोस्त की शव यात्रा के सामने किया डांस। pic.twitter.com/Ki7IBUjnKJ
— 🇮🇳Jitendra pratap singh🇮🇳 (@jpsin1) July 31, 2025
ಮೃತರ ಪುತ್ರ ಮುಖೇಶ್ ಜೈನ್, ತಮ್ಮ ತಂದೆ 2023 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಬ್ಬದಂತೆ ತಮ್ಮ ಸಾವನ್ನು ಆಚರಿಸಲು ಬಯಸಿದ್ದರು. ಜನರು ಡಿಜೆ ಜೊತೆ ತಮ್ಮ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಆನಂದಿಸಬೇಕೆಂದು ಅವರು ಬಯಸಿದ್ದರು.ತಮ್ಮ ತಂದೆಯ ಕೊನೆಯ ಪ್ರಯಾಣ ಅವರ ಆಶಯದಂತೆ ನಡೆದಿದ್ದಕ್ಕೆ ಕುಟುಂಬವು ಸಂತೋಷವಾಗಿದೆ ಎಂದು ಮುಖೇಶ್ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Thu, 31 July 25




